/newsfirstlive-kannada/media/media_files/2025/08/15/suryakumar_yadav-2025-08-15-14-39-25.jpg)
2025ರ ಟಿ20 ಏಷ್ಯಾ ಕಪ್​ ಟೂರ್ನಿಗೆ ಟೀಮ್ ಇಂಡಿಯಾದ ಆಟಗಾರರ ಹೆಸರು ಘೋಷಣೆ ಮಾಡಬೇಕಿದೆ. ಆಗಸ್ಟ್​ 19 ರಂದು ಬಲಿಷ್ಠ ತಂಡವನ್ನು ಬಿಸಿಸಿಐ ಪ್ರಕಟ ಮಾಡಲಿದೆ. ಈ ಸಂಬಂಧ ಭಾರತದ ಟಿ20 ತಂಡದ ನಾಯಕ ಸೂರ್ಯಕುಮಾರ್ ಯಾದವ್ ಅವರು ಬೆಂಗಳೂರಿನಿಂದ ಮುಂಬೈಗೆ ಪ್ರಯಾಣ ಬೆಳಸಲಿದ್ದಾರೆ ಎಂದು ಹೇಳಲಾಗುತ್ತಿದೆ.
ಸೂರ್ಯಕುಮಾರ್ ಯಾದವ್ ಅವರು ಬಿಸಿಸಿಐನ ಸೆಂಟರ್​ ಆಫ್ ಎಕ್ಸ್​ಲೆನ್ಸ್​ನಲ್ಲಿ ಕ್ರೀಡಾ ಹರ್ನಿಯಾ ಶಸ್ತ್ರಚಿಕಿತ್ಸೆಯ ನಂತರ ರಿಹ್ಯಾಬ್​ಗೆ ಒಳಗಾಗುತ್ತಿದ್ದಾರೆ. ಸೂರ್ಯಕುಮಾರ್ ಈಗಾಗಲೇ ನೆಟ್ಸ್ನಲ್ಲಿ ಬ್ಯಾಟಿಂಗ್, ಫೀಲ್ಡಿಂಗ್​ ಅಭ್ಯಾಸ ಮಾಡಿದ್ದಾರೆ. ಹೀಗಾಗಿ ಏಷ್ಯಾ ಕಪ್​ನಲ್ಲಿ ಸೂರ್ಯಕುಮಾರ್​ ಅವರೇ ನಾಯಕನಾಗಿ ಮುಂದುವರೆಯಲಿದ್ದಾರೆ ಎನ್ನುವುದು ಇದು ಖಚಿತ ಪಡಿಸುತ್ತದೆ.
ಇದನ್ನೂ ಓದಿ:ಸ್ವಾತಂತ್ರ್ಯ ದಿನಾಚರಣೆಗೆ ಮಕ್ಕಳು, ಗಂಡ PSI ಅಧಿಕಾರಿನ ಕಳುಹಿಸಿ ಮನೆಯಲ್ಲಿ ಜೀವ ಬಿಟ್ಟ ಗೃಹಿಣಿ
/filters:format(webp)/newsfirstlive-kannada/media/media_files/2025/08/12/shubman-gill-captain-2025-08-12-17-22-12.jpg)
ಬೆಂಗಳೂರಿನಿಂದ ಮುಂಬೈಗೆ ತೆರಳುವ ಸೂರ್ಯಕುಮಾರ್ ಯಾದವ್ ಅವರು ಬಿಸಿಸಿಐನ ಸೆಲೆಕ್ಷನ್​ ಕಮಿಟಿಯಲ್ಲಿ ಪಾಲ್ಗೊಳ್ಳಲ್ಲಿದ್ದಾರೆ. ಆಗಸ್ಟ್​ 19 ರಂದು ಆಟಗಾರರ ಆಯ್ಕೆಯಲ್ಲಿ ತಮ್ಮ ಅನಿಸಿಕೆ ಹಾಗೂ ಯಾವ ಯಾವ ಆಟಗಾರರು ಉತ್ತಮ ಎನ್ನುವ ಅಭಿಪ್ರಾಯ ತಿಳಿಸಲಿದ್ದಾರೆ. ಸಭೆಯಲ್ಲಿ ಆಟಗಾರರನ್ನು ಆಯ್ಕೆ ಮಾಡಿದ ಮೇಲೆ ಬಿಸಿಸಿಐ ಚೀಫ್ ಸೆಲೆಕ್ಟರ್, ಭಾರತದ ಮಾಜಿ ಪೇಸರ್​ ಅಜಿತ್ ಅಗರ್ಕರ್ ಅವರ ಜೊತೆ ಮಾಧ್ಯಮಗೋಷ್ಠಿಯಲ್ಲಿ ಸೂರ್ಯಕುಮಾರ್ ಭಾಗಿಯಾಗಲಿದ್ದಾರೆ ಎಂದು ಹೇಳಲಾಗಿದೆ.
​
ಭಾರತದ ಟೆಸ್ಟ್​ ತಂಡದ ನಾಯಕ ಶುಭ್​ಮನ್ ಗಿಲ್ ಅವರಿಗೆ ಉಪನಾಯಕನ ಸ್ಥಾನ ಪಕ್ಕಾ ಎನ್ನಲಾಗಿದ್ದು ಅವರನ್ನು ಹೊರಗಿಡುವುದು ಅಸಾಧ್ಯದ ಮಾತಾಗಿದೆ. ಇನ್ನು ಈ ಟೂರ್ನಿಯಿಂದ ಶ್ರೇಯಸ್ ಅಯ್ಯರ್, ಯಶಸ್ವಿ ಜೈಸ್ವಾಲ್ ಅವರನ್ನು ಹೊರಗಿಡಲಾಗುತ್ತಿದೆ. ಯುವ ಆಟಗಾರರಿಗೆ ಟೆಸ್ಟ್​ ಕಡೆಗೆ ಹೆಚ್ಚಿನ ಗಮನ ಹರಿಸಲು ತಿಳಿಸಲಾಗಿದ್ದರಿಂದ ಅಯ್ಯರ್, ಜೈಸ್ವಾಲ್​ಗೆ ಅವಕಾಶ ಇಲ್ಲ ಎಂದು ಬಿಸಿಸಿಐ ಮೂಲಗಳು ಹೇಳುತ್ತವೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ