/newsfirstlive-kannada/media/media_files/2025/08/21/kl_rahul_shreyas_iyer-1-2025-08-21-10-38-56.jpg)
ಟೀಮ್ ಇಂಡಿಯಾ ಪರವೂ ಮಿಂಚಿದ್ರೂ, ಐಪಿಎಲ್ನಲ್ಲಿ ಅಬ್ಬರಿಸಿದ್ರು. 2026ರ ಟಿ20 ವಿಶ್ವಕಪ್ ಆಡಬೇಕು ಅನ್ನೋ ಕನಸು ಕಂಡಿದ್ದರು. ಆದ್ರೆ, ಆ ಕನಸು ನುಚ್ಚು ನೂರಾಗಿದೆ. ಶ್ರೇಯಸ್ ಅಯ್ಯರ್, ಯಶಸ್ವಿ ಜೈಸ್ವಾಲ್, ಕೆ.ಎಲ್ ರಾಹುಲ್.. ಈ ಘಟಾನುಘಟಿಗಳು ಇನ್ಮುಂದೆ ಟಿ20 ಫಾರ್ಮೆಟ್ನಲ್ಲಿ ಕಾಣಿಸಿಕೊಳ್ಳೋದೆ ಡೌಟ್.
ಏಷ್ಯಾಕಪ್ ಟೂರ್ನಿಗೆ ಕೊನೆಗೂ ಟೀಮ್ ಇಂಡಿಯಾ ಅನೌನ್ಸ್ ಆಗಿದೆ. ಒಂದು ಗಂಟೆಗೂ ಅಧಿಕ ಕಾಲ ಹೈವೋಲ್ಟೆಜ್ ಸಭೆ ನಡೆಸಿ ಸೆಲೆಕ್ಷನ್ ಕಮಿಟಿ 15 ಆಟಗಾರರಿಗೆ ಮಣೆ ಹಾಕಿದೆ. ಸರ್ಪ್ರೈಸ್ ರೀತಿಯಲ್ಲಿ ಕೆಲ ಆಟಗಾರರಿಗೆ ಚಾನ್ಸ್ ಸಿಕ್ಕಿದ್ರೆ, ಇನ್ನು ಕೆಲವರಿಗೆ ಶಾಕ್ ನೀಡಲಾಗಿದೆ. ಟಿ20 ಫಾರ್ಮೆಟ್ನಿಂದ ನೀವು ಔಟ್ ಅನ್ನೋ ಪರೋಕ್ಷ ಸಂದೇಶವನ್ನೂ ರವಾನಿಸಲಾಗಿದೆ. ಇಷ್ಟೇ ಅಲ್ಲ.. ಬಿಗ್ ಸ್ಟೇಜ್ಗಳಲ್ಲಿ ಸಾಮರ್ಥ್ಯ ನಿರೂಪಿಸಿರೋ ಆಟಗಾರರ 2026ರ ವಿಶ್ವಕಪ್ ಆಡೋ ಕನಸು ನುಚ್ಚು ನೂರಾಗಿದೆ.
ಶ್ರೇಯಸ್ ಅಯ್ಯರ್ಗೆ ಶಾಕ್ ಕೊಟ್ಟ ಸೆಲೆಕ್ಟರ್ಸ್.!
ಏಷ್ಯಾಕಪ್ ಟೀಮ್ ಸೆಲೆಕ್ಷನ್ ವಿಚಾರದಲ್ಲಿ ಶ್ರೇಯಸ್ ಅಯ್ಯರ್ ಹೆಸರು ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಚಾಂಪಿಯನ್ಸ್ ಟ್ರೋಫಿಯಲ್ಲಿ ಶ್ರೇಯಸ್ ಅಯ್ಯರ್ ಅದ್ಭುತ ಪ್ರದರ್ಶನ ನೀಡಿದ್ರು. ಐಪಿಎಲ್ ಟೂರ್ನಿಯಲ್ಲಿ 175ರ ಸ್ಟ್ರೈಕ್ರೇಟ್ನಲ್ಲಿ ಶ್ರೇಯಸ್ ಬ್ಯಾಟ್ ಸೌಂಡ್ ಮಾಡಿತ್ತು. ಹೀಗಾಗಿ ಏಷ್ಯಾಕಪ್ನೊಂದಿಗೆ ಶ್ರೇಯಸ್ ಅಯ್ಯರ್ ಟಿ20 ಫಾರ್ಮೆಟ್ಗೆ ಕಮ್ಬ್ಯಾಕ್ ಮಾಡ್ತಾರೆ ಅನ್ನೋದು ಎಲ್ಲರ ನಿರೀಕ್ಷೆಯಾಗಿತ್ತು. ಆದ್ರೆ, ಶ್ರೇಯಸ್ ಅಯ್ಯರ್ಗೆ ಸೆಲೆಕ್ಟರ್ಸ್ ಶಾಕ್ ಕೊಟ್ಟಿದ್ದಾರೆ.
ವಿಶ್ವಕಪ್ ತಂಡದಲ್ಲಿದ್ದ ಯಶಸ್ವಿ ಜೈಸ್ವಾಲ್ಗೆ ಕೊಕ್.!
ಏಷ್ಯಾಕಪ್ ಟೀಮ್ ಅನೌನ್ಸ್ಮೆಂಟ್ಗೂ ಮುನ್ನ ಯಾರೊಬ್ಬರೂ ಕೂಡ ಜೈಸ್ವಾಲ್ಗೆ ಗೇಟ್ಪಾಸ್ ನೀಡಲಾಗುತ್ತೆ ಅನ್ನೋದನ್ನ ಕನಿಷ್ಠ ಊಹೆ ಕೂಡ ಮಾಡಿರಲಿಲ್ಲ. ಆದ್ರೆ, ಟಿ20 ತಂಡದ ಖಾಯಂ ಓಪನರ್ ಎನಿಸಿಕೊಂಡಿದ್ದ ಯಶಸ್ವಿ ಜೈಸ್ವಾಲ್ಗೆ ಶಾಕ್ ಎದುರಾಗಿದೆ. ಟೀಮ್ ಇಂಡಿಯಾ ಪರ ಟಿ20 ಫಾರ್ಮೆಟ್ನಲ್ಲಿ 164ರ ಸ್ಟ್ರೈಕ್ನಲ್ಲಿ ರನ್ಗಳಿಸಿದ್ರ ಹೊರತಾಗಿಯೂ ಜೈಸ್ವಾಲ್ನ ಡ್ರಾಪ್ ಮಾಡಲಾಗಿದೆ. 2024ರ ವಿಶ್ವಕಪ್ ಗೆದ್ದ ತಂಡದಲ್ಲಿದ್ದ ಯಶಸ್ವಿ ಜೈಸ್ವಾಲ್ನ ಸ್ಟ್ಯಾಂಡ್ ಬೈ ಪ್ಲೇಯರ್ ಮಾಡಿ, ಅದೇ ವಿಶ್ವಕಪ್ ತಂಡದಲ್ಲಿ ಬ್ಯಾಕ್ ಅಪ್ ಪ್ಲೇಯರ್ ಆಗಿದ್ದ ಗಿಲ್ಗೆ ಮಣೆ ಹಾಕಲಾಗಿದೆ.
ಸ್ಥಾನದ ನಿರೀಕ್ಷೆಯಲ್ಲಿದ್ದ ಸಾಯಿ ಸುದರ್ಶನ್ಗೆ ನಿರಾಸೆ.!
ಯುವ ಆಟಗಾರ ಸಾಯಿ ಸುದರ್ಶನ್ ಕೂಡ ಏಷ್ಯಾಕಪ್ ಟೂರ್ನಿಯ ತಂಡದಲ್ಲಿ ಸ್ಥಾನದ ನಿರೀಕ್ಷೆಯಲ್ಲಿದ್ರು. ಐಪಿಎಲ್ ಸೀಸನ್ 18ರಲ್ಲಿ ಹೈಯೆಸ್ಟ್ ರನ್ ಗೆಟರ್ ಆಗಿ ಹೊರಹೊಮ್ಮಿದ್ದ ಸಾಯಿ ಸುದರ್ಶನ್ನ ಸೆಲೆಕ್ಟರ್ಸ್ ಆಯ್ಕೆಗೆ ಪರಿಗಣಿಸ್ತಾರೆ ಎಂಬ ಚರ್ಚೆಗಳು ನಡೆದಿದ್ವು. ಸಾಯಿ ಸುದರ್ಶನ್ ಸೆಲೆಕ್ಷನ್ ಬಗ್ಗೆ ಚರ್ಚೆಗಳು ನಡೆದಿದ್ದು ನಿಜ. ಆದ್ರೆ, ಸ್ಥಾನ ಸಿಕ್ಕಿಲ್ಲ. ಅವಕಾಶದ ನಿರೀಕ್ಷೆಯಲ್ಲಿದ್ದ ಸುದರ್ಶನ್ಗೆ ನಿರಾಸೆ ಎದುರಾಗಿದೆ.
ಕನ್ನಡಿಗ KL ರಾಹುಲ್ ಕನಸು ನುಚ್ಚು ನೂರು.!
2026ರ ಟಿ20 ವಿಶ್ವಕಪ್ ಆಡೋದು ನನ್ನ ಟಾರ್ಗೆಟ್ ಎಂದಿದ್ದ ಕನ್ನಡಿಗ ಕೆ.ಎಲ್ ರಾಹುಲ್ ಕನಸು ಕಮರಿದೆ. ಐಪಿಎಲ್ಗೂ ಮುನ್ನ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೀಬೇಕು ಎಂದಿದ್ದ ರಾಹುಲ್ ಸಿಕ್ಕಾಪಟ್ಟೆ ಸಿದ್ಧತೆ ನಡೆಸಿದ್ರು. ಭರ್ಜರಿ ತಯಾರಿ ನಡೆಸಿ ಅಖಾಡಕ್ಕಿಳಿದಿದ್ದ ರಾಹುಲ್, ಅದಕ್ಕೆ ತಕ್ಕಂತೆ ಪರ್ಫಾಮೆನ್ಸ್ ಕೂಡ ನೀಡಿದ್ರು. 150ರ ಸ್ಟ್ರೈಕ್ರೇಟ್ನಲ್ಲಿ ಬ್ಯಾಟ್ ಬೀಸಿದ್ದ ರಾಹುಲ್, 540 ರನ್ಗಳಿಸಿ ಟಿ20 ತಂಡಕ್ಕೆ ಕಮ್ಬ್ಯಾಕ್ ಮಾಡೋದನ್ನ ಎದುರು ನೋಡ್ತಿದ್ರು. ಆದ್ರೆ, ಏಷ್ಯಾಕಪ್ ತಂಡದಲ್ಲಿ ರಾಹುಲ್ನ ಸೈಡ್ಲೈನ್ ಮಾಡಲಾಗಿದೆ. ಇದ್ರೊಂದಿಗೆ ವಿಶ್ವಕಪ್ ಆಡೋ ಕನಸು ಕೂಡ ಕಮರಿದೆ.
ಇದನ್ನೂ ಓದಿ:ಯಶ್ ಜತೆ ಹೆಜ್ಜೆ ಹಾಕ್ತಿದ್ದಾರೆ ಈ ಬ್ಯೂಟಿ ಹೀರೋಯಿನ್ಸ್.. ‘ಟಾಕ್ಸಿಕ್’ನಲ್ಲಿ ಎಷ್ಟು ನಾಯಕಿಯರು ಇದ್ದಾರೆ..?
/filters:format(webp)/newsfirstlive-kannada/media/media_files/2025/08/18/yashaswi-jaiswal-shreyas-iyer-2025-08-18-09-19-49.jpg)
ಆಲ್ರೌಂಡರ್ ಸುಂದರ್ಗೂ ಸಿಗದ ಸ್ಥಾನ.!
ಬ್ಯಾಟಿಂಗ್, ಬೌಲಿಂಗ್ ಎರಡರಲ್ಲೂ ಕಾಂಟ್ರಿಬ್ಯೂಟ್ ಮಾಡ್ತಿದ್ದ ವಾಷಿಂಗ್ಟನ್ ಸುಂದರ್ ಟಿ20 ಈ ಹಿಂದೆ ಟಿ20 ಸೆಟಪ್ನ ಭಾಗವಾಗಿದ್ರು. ಸುಂದರ್ ಇದ್ರೆ ಲೋವರ್ ಆರ್ಡರ್ ಬ್ಯಾಟಿಂಗ್ಗೆ ಬಲ ಬರುತ್ತೆ. ಜೊತೆಗೆ ಬೌಲಿಂಗ್ಗೂ ವೆರೈಟಿ ಸಿಗುತ್ತೆ. ಇದ್ರಿಂದ ಟೀಮ್ಗೆ ಬ್ಯಾಲೆನ್ಸ್ ಬರುತ್ತೆ ಅಂತಾ ಟೀಮ್ ಮ್ಯಾನೇಜ್ಮೆಂಟ್ ಈ ಹಿಂದೆ ಹೇಳಿತ್ತು. ಆದ್ರೆ, ತಂಡಕ್ಕೆ ಬ್ಯಾಲೆನ್ಸ್ ತರ್ತಾ ಇದ್ದ ಸುಂದರ್ನ ಮೇನ್ ಟೀಮ್ನಿಂದ ಡ್ರಾಪ್ ಮಾಡಲಾಗಿದೆ.
ಸೆಲೆಕ್ಷನ್ಗೂ ಮುನ್ನ ಪ್ರಸಿದ್ಧ ಕೃಷ್ಣ, ಮೊಹಮ್ಮದ್ ಸಿರಾಜ್ ಹೆಸರೂ ಚರ್ಚೆಯಾಗಿದ್ವು. ಯುವ ಆಟಗಾರರಾದ ವೈಭವ್ ಸೂರ್ಯವಂಶಿ, ಪ್ರಿಯಾಂಶ್ ಆರ್ಯಗೆ ಚಾನ್ಸ್ ನೀಡಬೇಕು ಎಂದು ಮಾಜಿ ಕ್ರಿಕೆಟರ್ಸ್ ಒತ್ತಾಯಿಸಿದ್ರು. ಆದ್ರೆ, ಸೆಲೆಕ್ಷನ್ ಕಮಿಟಿ ಇವರ್ಯಾರಿಗೂ ಚಾನ್ಸ್ ನೀಡಿಲ್ಲ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ