/newsfirstlive-kannada/media/media_files/2025/09/10/team_india-6-2025-09-10-17-09-59.jpg)
ಏಷ್ಯಾಕಪ್ಗೆ ಟೀಮ್ ಇಂಡಿಯಾ ಬಲಿಷ್ಠ ತಂಡವನ್ನೇ ಕಟ್ಟಿದೆ. ಏಷ್ಯಾಕಪ್ ಗೆಲ್ಲುವ ಹಾಟ್ ಫೇವರಿಟ್ ಆಗಿಯೂ ಕಣಕ್ಕಿಳಿಯುತ್ತಿದೆ. ಆದ್ರೆ, ಇದೇ ಟೀಮ್ ಇಂಡಿಯಾ ಗೆಲುವಿಗೆ ಆಲ್ರೌಂಡರ್ಗಳೇ ಮುಪ್ಪಾಗ್ತಾರಾ ಎಂಬ ಅನುಮಾನ ಹುಟ್ಟಿಕೊಂಡಿದೆ. ಅಷ್ಟಕ್ಕೂ ಆಲ್ರೌಂಡರ್ಗಳಿಗೂ, ಏಷ್ಯಾಕಪ್ಗೂ ಏನ್ ಸಂಬಂಧ?.
ಆಲ್ರೌಂಡರ್ಸ್.. ಇವರು ಟೀಮ್ಗಳ ಎಕ್ಸ್ ಫ್ಯಾಕ್ಟರ್ ಪ್ಲೇಯರ್ಸ್, ಒಂದು ತಂಡದ ಗೆಲುವು ಸೋಲು ನಿರ್ಧರಿಸುವುದೇ ಈ ಆಲ್ರೌಂಡರ್ಗಳು. ಆದ್ರೆ, ಬ್ಯಾಟ್ ಹಿಡಿದು ಘರ್ಜಿಸುವ ಆಲ್ರೌಂಡರ್ಗಳು, ಬೌಲಿಂಗ್ನಲ್ಲೂ ಕಮಾಲ್ ಮಾಡ್ತಾರೆ. ಇದೇ ಕಾರಣಕ್ಕೆ ಹೇಳುವುದು ಆಲ್ರೌಂಡರ್ಗಳೇ ಗೇಮ್ ಚೇಂಜರ್ಸ್ & ಮ್ಯಾಚ್ ವಿನ್ನರ್ಸ್. ಆದ್ರೀಗ ಏಷ್ಯಾಕಪ್ನಲ್ಲಿ ಟೀಮ್ ಇಂಡಿಯಾ ಆಲ್ರೌಂಡರ್ಗಳನ್ನೇ ಮಿಸ್ ಆಗ್ತಿದೆಯಾ ಎಂಬ ಅನುಮಾನ ಹುಟ್ಟುಹಾಕಿದೆ. ಇದಕ್ಕೆ ಕಾರಣ ಟೀಮ್ ಇಂಡಿಯಾದಲ್ಲಿರುವ ಆಲ್ರೌಂಡರ್ಗಳ ಸಂಖ್ಯೆ.
ಏಷ್ಯಾಕಪ್ ಸಮರಕ್ಕೆ ಟೀಮ್ ಇಂಡಿಯಾ ಸಜ್ಜಾಗಿದೆ. ಟೀಮ್ ಇಂಡಿಯಾದಲ್ಲಿ ಒಂದಲ್ಲ, ಎರಡಲ್ಲ, ನಾಲ್ವರು ಆಲ್ರೌಂಡರ್ಗಳು ಇದ್ದಾರೆ. ಆದ್ರೆ, ಈ ನಾಲ್ವರಲ್ಲಿ GENUINE ಆಲ್ರೌಂಡರ್ಗಳ ಸಂಖ್ಯೆ ಮಾತ್ರವೇ ಹೊಸ ಟೆನ್ಶನ್ ಕ್ರಿಯೇಟ್ ಹಿಂದಿನ ರೀಸನ್.
2024ರ ಟಿ20 ವಿಶ್ವಕಪ್ ಗೆಲುವಿನ ಹಿಂದಿತ್ತು ಆಲ್ರೌಂಡರ್ಸ್ ಶಕ್ತಿ..!
2024ರ ಟಿ20 ವಿಶ್ವಕಪ್.. ಈ ವಿಶ್ವಕಪ್ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ್ದೆ ರವೀಂದ್ರ ಜಡೇಜಾ, ಆಕ್ಷರ್ ಪಟೇಲ್ & ಹಾರ್ದಿಕ್ ಪಾಂಡ್ಯ ಬ್ಯಾಟ್ ಹಿಡಿದು ರನ್ ಕೊಳ್ಳೆ ಹೊಡೆಯುತ್ತಿದ್ದ ಇವರು, ಬೌಲಿಂಗ್ನಲ್ಲೂ ಕಮಾಲ್ ಮಾಡಿದ್ದರು. ಫಿಲ್ಡಿಂಗ್ನಲ್ಲೂ ವಾವ್ ಎನಿಸಿದ್ದರು. ಟೀಮ್ ಇಂಡಿಯಾದ ಶಕ್ತಿಯಾಗಿ, ಆಪದ್ಬಾಂಧವರಾಗಿ ನಿಂತಿದ್ದೇ ಈ ತ್ರಿವಳಿ ಆಲ್ರೌಂಡರ್ಗಳು ಅನ್ನೋದ್ರಲ್ಲಿ ಡೌಟೇ ಇಲ್ಲ. ಆದ್ರೀಗ ಇದೇ ಆಲ್ರೌಂಡರ್ಗಳ ಶಕ್ತಿ ಟೀಮ್ ಇಂಡಿಯಾಗೆ ಏಷ್ಯಾಕಪ್ನಲ್ಲಿ ಕಾಡಲಿದೆ.
ನಾಲ್ವರು ಆಲ್ರೌಂಡರ್ಸ್.. ಇಬ್ಬರು ಆಟಕ್ಕುಂಟು ಲೆಕ್ಕಕ್ಕಿಲ್ಲ..!
ಏಷ್ಯಾಕಪ್ನಲ್ಲಿ ನಾಲ್ವರು ಆಲ್ರೌಂಡರ್ಗಳಿಗೆ ಸ್ಥಾನ ಸಿಕ್ಕಿದೆ. ಈ ಪೈಕಿ ಸ್ಪಿನ್ ಆಲ್ರೌಂಡರ್ ಆಗಿ ಆಕ್ಷರ್ ಪಟೇಲ್, ಅಭಿಷೇಕ್ ಶರ್ಮಾ ಸ್ಥಾನ ಪಡೆದುಕೊಂಡಿದ್ರೆ. ಪೇಸ್ ಆಲ್ರೌಂಡರ್ಗಳಾಗಿ ಹಾರ್ದಿಕ್ ಪಾಂಡ್ಯ, ಶಿವಂ ದುಬೆ ಕಾಣಿಸಿಕೊಂಡಿದ್ದಾರೆ. ಆದ್ರೆ, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್ ಬಿಟ್ರೆ, ಇನ್ನಿಬ್ಬರು ಆಟಕ್ಕುಂಟು ಲೆಕ್ಕಕ್ಕಿಲ್ಲ. ಹೀಗಾಗಿ ಟೀಮ್ ಇಂಡಿಯಾ ಏಷ್ಯಾಕಪ್ನಲ್ಲಿ ಹಾರ್ದಿಕ್ ಪಾಂಡ್ಯ ಹಾಗೂ ಆಕ್ಷರ್ ಪಟೇಲ್ರನ್ನೇ ಹೆಚ್ಚು ನಂಬಿಕೊಳ್ಳಬೇಕಾಗಿದ್ದು, ಒಬ್ಬ ನೈಜ ಆಲ್ರೌಂಡರ್ನ ಕೊರತೆ ಟೀಮ್ ಇಂಡಿಯಾಗೆ ಕಾಡೋದ್ರಲ್ಲಿ ಡೌಟೇ ಇಲ್ಲ.
ಶಿವಂ ದುಬೆ, ಅಭಿಷೇಕ್ ಪರ್ಫೆಕ್ಟ್ ಆಲ್ರೌಂಡರ್ಗಳಾ..?
ಇಂಥದ್ದೊಂದು ಪ್ರಶ್ನೆ ಹುಟ್ಟದಿರಲ್ಲ. ಯಾಕಂದ್ರೆ, ಅಭಿಷೇಕ್ ಶರ್ಮಾ & ಶಿವಂ ದುಬೆ ಬ್ಯಾಟಿಂಗ್ಗಷ್ಟೇ ಸೀಮಿತ. ಬೌಲಿಂಗ್ ಮಾಡಿದರು. ಒಂದೆರೆಡು ಓವರ್, ಪಾರ್ಟ್ ಟೈಮ್ ಬೌಲರ್ಗಳಾಗಿ ಕಾಣಿಸಿಕೊಳ್ಳುವ ಇವರು, ಬೌಲಿಂಗ್ನಲ್ಲಿ ಹೇಳಿಕೊಳ್ಳುವಷ್ಟು ಎಫೆಕ್ಟ್ ಅಲ್ಲ. ಹೀಗಾಗಿ ಇಬ್ಬರು ನೈಜ ಆಲ್ರೌಂಡರ್ಗಳೊಂದಿಗೆ ಟೀಮ್ ಇಂಡಿಯಾ ಏಷ್ಯಾಕಪ್ ಗೆಲ್ಲೋಕೆ ಸಾಧ್ಯನಾ ಎಂಬ ಪ್ರಶ್ನೆ ಸಹಜವಾಗೇ ಹುಟ್ಟುಕೊಳ್ಳುತ್ತೆ.
ಟೀಮ್ ಇಂಡಿಯಾಗೆ ಬೇಕಿತ್ತು ಸುಂದರ್ರಂಥ ಆಲ್ರೌಂಡರ್..!
ಖಂಡಿತ ಟೀಮ್ ಇಂಡಿಯಾ, ವಾಷ್ಟಿಂಗ್ಟನ್ ಸುಂದರ್ರಂಥ ಎಕ್ಸ್_ಫ್ಯಾಕ್ಟರ್ ಆಲ್ರೌಂಡರ್ನ ಮಿಸ್ ಆಗುತ್ತೆ ಅನ್ನೋದ್ರಲ್ಲಿ ಡೌಟೇ ಇಲ್ಲ. ಯಾಕಂದ್ರೆ, ಮಿಡಲ್ ಆರ್ಡರ್ & ಲೋವರ್ ಆರ್ಡರ್ನಲ್ಲಿ ಬ್ಯಾಟ್ ಬೀಸಬಲ್ಲ ಸುಂದರ್, ಯುಎಇಯಂಥ ಸ್ಪಿನ್ ಫ್ರೆಂಡ್ಲಿ ಟ್ರ್ಯಾಕ್ನಲ್ಲಿ ಎದುರಾಳಿಯನ್ನು ಗಿರಗಿಳ್ಲೆ ಹೊಡಿಸಬಲ್ಲರು. ರವೀಂದ್ರ ಜಡೇಜಾ ಅಲಭ್ಯತೆ ತುಂಬಬಲ್ಲ ಸುಂದರ್, ಏಷ್ಯಾಕಪ್ನಲ್ಲಿ ಎಕ್ಸ್ ಫ್ಯಾಕ್ಟರ್ ಪ್ಲೇಯರ್ ಆಗ್ತಿದ್ದರು. ಆದ್ರೀಗ ಇದೇ ಟೀಮ್ ಇಂಡಿಯಾಗೆ ಮುಳ್ಳಾದರು ಅಚ್ಚರಿ ಪಡಬೇಕಿಲ್ಲ. ಇದೇ ವಿಚಾರವನ್ನೇ ಟೀಮ್ ಇಂಡಿಯಾದ ಮಾಜಿ ಕ್ರಿಕೆಟರ್ ಮೊಹಮ್ಮದ್ ಕೈಫ್ ಉಲ್ಲೇಖಿಸಿದ್ದಾರೆ.
ಸುಂದರ್ನ ಮಿಸ್ ಮಾಡಿಕೊಳ್ಳುತ್ತೆ..!
ರೋಹಿತ್ ನೇತೃತ್ವದ ಟೀಮ್ ಇಂಡಿಯಾ ಅಕ್ಷರ್, ಜಡೇಜಾ, ಹಾರ್ದಿಕ್ ಎಂಬ ತ್ರಿವಳಿ ಆಲ್ರೌಂಡರ್ಗಳೊಂದಿಗೆ ಟಿ20 ವಿಶ್ವಕಪ್ ಗೆದ್ದಿತ್ತು. ಇದರರ್ಥ 6 ಬೌಲಿಂಗ್ ಆಯ್ಕೆ, 8ರವರೆಗೆ ಬ್ಯಾಟಿಂಗ್ ಮಾಡುವ ತಂಡ ಇತ್ತು. ಏಷ್ಯಾಕಪ್ನಲ್ಲಿ ಹಾರ್ದಿಕ್, ಅಕ್ಷರ್ ಮಾತ್ರವೇ ನೈಜ ಆಲ್ರೌಂಡರ್ಗಳಾಗಿದ್ದಾರೆ. ಹೀಗಾಗಿ ಟೀಮ್ ಇಂಡಿಯಾ ಹೊಸ ವಿನ್ನಿಂಗ್ ಕಾಂಬಿನೇಷನ್ ಕಂಡುಕೊಳ್ಳಬೇಕಿದೆ. ಖಂಡಿತ ಟೀಮ್ ಇಂಡಿಯಾ ವಾಷಿಂಗ್ಟನ್ ಸುಂದರ್ನ ಮಿಸ್ ಮಾಡಿಕೊಳ್ಳುತ್ತೆ.
ಮೊಹಮ್ಮದ್ ಕೈಫ್, ಮಾಜಿ ಕ್ರಿಕೆಟರ್
ಇದನ್ನೂ ಓದಿ: Asia Cup; ಪ್ರತಿ ಮ್ಯಾಚ್ ಟೀಮ್ ಇಂಡಿಯಾ ಆಟಗಾರರಿಗೆ ಅತ್ಯಂತ ಮುಖ್ಯ.. ಯಾಕೆ ಗೊತ್ತಾ?
ಮೊಹಮ್ಮದ್ ಕೈಫ್ ಹೇಳಿದಂತೆ, ರೋಹಿತ್ & ದ್ರಾವಿಡ್ ವಿಭಿನ್ನ ಸ್ಟ್ರಾಟರ್ಜಿಯೊಂದಿಗೆ ವಿಶ್ವಕಪ್ನಲ್ಲಿ ಕಣಕ್ಕಿಳಿದಿತ್ತು. ಅದಕ್ಕೆ ತಕ್ಕಂತೆ ವಿಶ್ವಕಪ್ ಕೂಡ ಗೆದ್ದಿತ್ತು. ದ್ರಾವಿಡ್ & ರೋಹಿತ್ ಶರ್ಮಾಗೆ ಹೋಲಿಕೆ ಮಾಡಿದ್ರೆ, ಗಂಭೀರ್ & ಸೂರ್ಯ ಡಿಫರೆಂಟ್ ಸ್ಟ್ರಾಟರ್ಜಿಯೊಂದಿಗೆ ಕಣಕ್ಕಿಳಿಯುತ್ತಿದ್ದಾರೆ. ಸದ್ಯಕ್ಕೆ ಏಷ್ಯಾಕಪ್ನಲ್ಲಿ ವರ್ಕೌಟ್ ಆದರು, ಮುಂದಿನ ಟಿ20 ವಿಶ್ವಕಪ್ ಎಂಬ ಪ್ರತಿಷ್ಠೆಯ ಟೂರ್ನಿಯಲ್ಲಿ ಮುಳ್ಳಾಗಲಿದೆ. ಯಾಕಂದ್ರೆ, 2026ರ ಟಿ20 ವಿಶ್ವಕಪ್ ನಡೀತಿರುವುದು ಭಾರತ ಹಾಗೂ ಶ್ರೀಲಂಕಾದಲ್ಲಿ ಸ್ಪಿನ್ನರ್ಗಳದ್ದೇ ಪ್ರಾಬಲ್ಯ. ಹೀಗಾಗಿ ಸ್ಪಿನ್ ಆಲ್ರೌಂಡರ್ಗಳ ಪ್ರಾಬಲ್ಯ ಹೆಚ್ಚು ಅನ್ನೋದು ಮರೆಯಬಾರದು.
ಟಿ20 ಎಂಬ ಫಾಸ್ಟ್ ಗೇಮ್ನಲ್ಲಿ ಆಲ್ರೌಂಡರ್ಗಳ ಪಾತ್ರವೇ ಕ್ರೂಶಿಯಲ್. ಅಂಥದ್ರಲ್ಲಿ ನೈಜ ಆಲ್ರೌಂಡರ್ಗಳನ್ನೇ ಪಕ್ಕಕ್ಕಿಟ್ಟು ಏಷ್ಯಾನ್ ಸಮರಕ್ಕಿಳಿಯುತ್ತಿರುವ ಟೀಮ್ ಇಂಡಿಯಾ, ಆನ್ಫೀಲ್ಡ್ನಲ್ಲಿ ಯಾವ ರೀತಿಯ ಜಾದೂ ಮಾಡುತ್ತೆ ಅನ್ನೋದಕ್ಕೆ ಕಾಲವೇ ಉತ್ತರಿಸಬೇಕು.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ