/newsfirstlive-kannada/media/media_files/2025/08/16/rohit_sharma-2025-08-16-18-35-12.jpg)
ರಾಹುಲ್ ದ್ರಾವಿಡ್, ರವಿ ಶಾಸ್ತ್ರಿ, ಟೀಮ್ ಇಂಡಿಯಾದ ಹಾಲಿ ಹೆಡ್ಕೋಚ್ ಗೌತಮ್ ಗಂಭೀರ್. ಭಾರತೀಯ ಕ್ರಿಕೆಟ್ ಲೋಕದ ಸಕ್ಸಸ್ಫುಲ್ ಕೋಚ್ಗಳು ಅಂದ್ರೆ ಇವರ ಹೆಸರು ನೆನಪಾಗುತ್ತೆ. ಆದ್ರೆ, ಇವ್ರ ಹೊರತಾಗಿ ಯಶಸ್ಸು ಕಂಡ ಹಲವು ಕೋಚ್ಗಳಿದ್ದಾರೆ. ಆದ್ರೆ, ಸಕ್ಸಸ್ಗೆ ತಕ್ಕಂತೆ ಹೆಸರು ಬಂದಿಲ್ಲ. ಇವರ ಪೈಕಿ ಒಬ್ಬರು ಅಭಿಷೇಕ್ ನಾಯರ್. ಆಟಗಾರರ ಪಾಲಿನ ಲಕ್ಕಿ ಹ್ಯಾಂಡ್ ಅಂದರೆ ಅದು ಅಭಿಷೇಕ್ ನಾಯರ್.
ಆಟಗಾರರ ಪಾಲಿನ ‘ಲಕ್ಕಿ ಹ್ಯಾಂಡ್’ ಅಭಿಷೇಕ್ ನಾಯರ್.!
ಟೀಮ್ ಇಂಡಿಯಾದ ಮಾಜಿ ಅಸಿಸ್ಟೆಂಟ್ ಕೋಚ್ ಅಭಿಷೇಕ್ ನಾಯರ್, ಕ್ರಿಕೆಟಿಗರ ಪಾಲಿನ ಲಕ್ಕಿ ಹ್ಯಾಂಡ್. ಹೀಗಾಗಿಯೇ ಏಕದಿನ ಭವಿಷ್ಯದ ಬಗ್ಗೆ ಚರ್ಚೆ ನಡೀತಾ ಇರೋ ಸಂದರ್ಭದಲ್ಲಿ ಟೀಮ್ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾ ಮತ್ತೆ ಅಭಿಷೇಕ್ ನಾಯರ್ ಮೊರೆ ಹೋಗಿದ್ದಾರೆ. ರಿಲ್ಯಾಕ್ಸ್ ಮೂಡ್ನಿಂದ ಹೊರಬಂದಿರೋ ರೋಹಿತ್, ಅಭಿಷೇಕ್ ಮಾರ್ಗದರ್ಶನದಲ್ಲಿ ಅಭ್ಯಾಸ ಆರಂಭಿಸಿದ್ದಾರೆ.
ಸಂಕಷ್ಟಕ್ಕೆ ಸಿಲುಕಿದ್ದ ರೋಹಿತ್ ಕರಿಯರ್ಗೆ ಮರುಜೀವ.!
ಫಿಟ್ನೆಸ್ ಹಾಗೂ ಫಾರ್ಮ್ ಕಾರಣದಿಂದಾಗಿ 2011ರ ಏಕದಿನ ವಿಶ್ವಕಪ್ನಿಂದಲೇ ರೋಹಿತ್ ಶರ್ಮಾಗೆ ಕೊಕ್ ನೀಡಿದ್ದು ಕಥೆ ನಿಮಗೆ ಗೊತ್ತೆಯಿದೆ. ಆಗ ರೋಹಿತ್ ಕರಿಯರ್ ಸಂಕಷ್ಟಕ್ಕೆ ಸಿಲುಕಿತ್ತು. ಆ ಸಮಯದಲ್ಲಿ ರೋಹಿತ್ ಶರ್ಮಾ ನೆರವಿಗೆ ಬಂದಿದ್ದು ಇದೇ ಅಭಿಷೇಕ್ ನಾಯರ್. ರೋಹಿತ್ ಫಿಟ್ನೆಸ್, ಮೆಂಟಲ್ ಸ್ಟ್ರೆಂಥ್, ಬ್ಯಾಟಿಂಗ್ ಟೆಕ್ನಿಕ್ ಮೇಲೆ ಅಭಿಷೇಕ್ ನಾಯರ್ ವರ್ಕೌಟ್ ಮಾಡಿದ್ರು. ಕಠಿಣ ಅಭ್ಯಾಸದ ಬಳಿಕ ಕಮ್ಬ್ಯಾಕ್ ಮಾಡಿದ ರೋಹಿತ್, ಹಿಟ್ಮ್ಯಾನ್ ಆಗಿ ಕ್ರಿಕೆಟ್ ಲೋಕವನ್ನೇ ಆಳಿದ್ರು.
ಈ ಸೀಸನ್ನ ಐಪಿಎಲ್ನಲ್ಲೂ ಅಷ್ಟೇ.. ಆರಂಭಿಕ 6 ಪಂದ್ಯದಿಂದ ರೋಹಿತ್ ಕೇವಲ 82 ರನ್ಗಳಿಸಿದ್ದರು. ಸತತ ವೈಫಲ್ಯ ಕಂಡ ರೋಹಿತ್ ಐಪಿಎಲ್ ಮಧ್ಯೆ ನಾಯರ್ ಸಹಾಯ ಕೋರಿದ್ದರು. ರೋಹಿತ್ ಶರ್ಮಾರ ವೀಕ್ನೆಸ್ ಮೇಲೆ ಅಭಿಷೇಕ್ ನಾಯರ್ ವರ್ಕೌಟ್ ಮಾಡಿದರು. ಬ್ಯಾಟಿಂಗ್ನಲ್ಲಿ ಕೆಲ ಬದಲಾವಣೆ ಮಾಡಿಕೊಂಡ ರೋಹಿತ್ ಸೆಕೆಂಡ್ ಹಾಫ್ನಲ್ಲಿ ಅಬ್ಬರಿಸಿದ್ದರು.
ಕೆ.ಎಲ್ ರಾಹುಲ್ ಸಕ್ಸಸ್ ಹಿಂದೆ ಅಭಿಷೇಕ್ ನಾಯರ್
ಟಿ20 ಫಾರ್ಮೆಟ್ನಲ್ಲಿ ಸ್ಟ್ರಗಲ್ ಮಾಡ್ತಿದ್ದ ಕೆ.ಎಲ್ ರಾಹುಲ್ ಈ ಬಾರಿಯ ಐಪಿಎಲ್ನಲ್ಲಿ ಬೊಂಬಾಟ್ ಆಟವಾಡಿದ್ರು. ಇದ್ರ ಹಿಂದಿನ ರೀಸನ್ ಕೂಡ ನಾಯರ್. ಐಪಿಎಲ್ನ ಆರಂಭಿಕ ಪಂದ್ಯಗಳಿಂದ ದೂರ ಉಳಿದಿದ್ದ ರಾಹುಲ್, ಮುಂಬೈನಲ್ಲಿ ಅಭಿಷೇಕ್ ನಾಯರ್ ಮಾರ್ಗದರ್ಶನದಲ್ಲಿ ಅಭ್ಯಾಸ ನಡೆಸಿದ್ದರು. ಭರ್ಜರಿ ಸಿದ್ಧತೆಯೊಂದಿಗೆ ಕಣಕ್ಕಿಳಿದ ರಾಹುಲ್ ಅದ್ಭುತ ಆಟವಾಡಿದ್ರು.
ಫಿನಿಶ್ ಆಗಿದ್ದ ಕಾರ್ತಿಕ್ನ ಫಿನಿಶರ್ ಮಾಡಿದ ನಾಯರ್.!
ರನ್ಗಳಿಕೆಗೆ ಪರದಾಟ ನಡೆಸಿದ್ದ ದಿನೇಶ್ ಕಾರ್ತಿಕ್ ಕರಿಯರ್ ಯಾವಾಗ್ಲೋ ಫಿನಿಷ್ ಆಗಿತ್ತು. ಆದ್ರೆ, ಫಿನಿಷರ್ ಅವತಾರ ಎತ್ತಿ ಡಿಕೆ ಬಾಸ್ 2.0 ದರ್ಶನ ನೀಡಿದ್ರು. ಫಾರ್ಮ್ ಸಮಸ್ಯೆ ಎದುರಿಸಿದ್ದ ಕಾರ್ತಿಕ್, ಅಭಿಷೇಕ್ ನಾಯರ್ ಮಾರ್ಗದರ್ಶನದಲ್ಲಿ ಅಭ್ಯಾಸ ನಡೆಸಿದ ಬಳಿಕ ಹೊಸ ಅವತಾರದಲ್ಲಿ ಮಿಂಚಿದರು. ಕೊನೆಯ 2 ಐಪಿಎಲ್ ಸೀಸನ್ಗಳಲ್ಲಿ ಆರ್ಸಿಬಿ ಪರ ಮ್ಯಾಜಿಕ್ ಮಾಡಿದರು.
ರೋಹಿತ್ ಶರ್ಮಾ, ಕೆ.ಎಲ್ ರಾಹುಲ್, ದಿನೇಶ್ ಕಾರ್ತಿಕ್ ಮಾತ್ರವಲ್ಲ, ಅಭಿಷೇಕ್ ನಾಯರ್ ಗರಡಿಯಲ್ಲಿ ಪಳಗಿದ ಮೇಲೆ ಹಲವು ಆಟಗಾರರ ಕರಿಯರ್ ಬದಲಾಗಿದೆ. ಶ್ರೇಯಸ್ ಅಯ್ಯರ್, ಶುಭ್ಮನ್ ಗಿಲ್, ರಿಂಕು ಸಿಂಗ್, ವಾಷಿಂಗ್ಟನ್ ಸುಂದರ್, ವರುಣ್ ಚಕ್ರವರ್ತಿ ಇವರೆಲ್ಲರೂ ಅಭಿಶೇಕ್ ನಾಯರ್ ಮಾರ್ಗದರ್ಶನ ಪಡೆದ ಬಳಿಕ ಬಿಗ್ ಸಕ್ಸಸ್ ಕಂಡವರು.
ಇದನ್ನೂ ಓದಿ: ಪಾಕ್ ಜೊತೆ ಭಾರತ ಕ್ರಿಕೆಟ್ ಆಡಬಾರದು.. ರಕ್ತ, ನೀರು ಒಟ್ಟಿಗೆ ಹರಿಯಲ್ಲ, ದೇಶ ಮೊದಲು- ಮಾಜಿ ಆಟಗಾರ!
ಚಾಂಪಿಯನ್ಸ್ ಟ್ರೋಫಿ ಬೆನ್ನಲ್ಲೇ ಹೊರಬಿದ್ದ ನಾಯರ್
ಅಭಿಷೇಕ್ ನಾಯರ್ ಕೋಚಿಂಗ್ ಜರ್ನಿ ಶುರುವಾಗಿದ್ದು ಕೊಲ್ಕತ್ತಾ ನೈಟ್ ರೈಡರ್ಸ್ನೊಂದಿಗೆ. ಅಸಿಸ್ಟೆಂಟ್ ಕೋಚ್ ಆಗಿ ಕೆಕೆಆರ್ ತಂಡ ಸೇರಿದ ಅಭಿಷೇಕ್ ನಾಯರ್, ಗೌತಮ್ ಗಂಭೀರ್ ಟೀಮ್ ಇಂಡಿಯಾ ಕೋಚ್ ಆದ ಬಳಿಕ ಭಾರತ ತಂಡದ ಅಸಿಸ್ಟೆಂಟ್ ಕೋಚ್ ಆದ್ರು. ಆದ್ರೆ, ಚಾಂಪಿಯನ್ಸ್ ಟ್ರೋಫಿ ಅಂತ್ಯದ ಬೆನ್ನಲ್ಲೇ ಟೀಮ್ ಇಂಡಿಯಾದಿಂದ ಹೊರ ಬಿದ್ದ ಅಭಿಷೇಕ್ ನಾಯರ್, ಮತ್ತೆ ಕೆಕೆಆರ್ ಸೇರಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ಅಭಿಷೇಕ್ ನಾಯರ್ ಯುಪಿ ವಾರಿಯರ್ಸ್ ಮಹಿಳಾ ತಂಡ ಹೆಡ್ಕೋಚ್ ಆಗಿ ನೇಮಕವಾಗಿದ್ದಾರೆ. ಸಂಕಷ್ಟಕ್ಕೆ ಸಿಲುಕಿದ ಆಟಗಾರರ ಕರಿಯರ್ಗೆ ಪುನರ್ಜನ್ಮ ನೀಡಿದಂತೆ, ಮುಂಬೈ ಮಾಸ್ಟರ್ WPLನ ಆರಂಭಿಕ ಸೀಸನ್ನಿಂದ ಪರದಾಡ್ತಿರೋ ಯುಪಿ ವಾರಿಯರ್ಸ್ಗೆ ಸಕ್ಸಸ್ ತಂದುಕೊಡ್ತಾರಾ? ಎಂದು ಕಾದು ನೋಡಬೇಕು.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ