/newsfirstlive-kannada/media/media_files/2025/09/15/team_india-7-2025-09-15-23-12-28.jpg)
ವಿಶ್ವದ ಶ್ರೀಮಂತ ಕ್ರಿಕೆಟ್​​ ಸಂಸ್ಥೆ ಬಿಸಿಸಿಐನ ನೂತನ ಬಾಸ್​​​​ ನೇಮಕಕ್ಕೆ ಕೌಂಟ್​​ಡೌನ್​ ಆರಂಭವಾಗಿದೆ. ರೋಜರ್​ ಬಿನ್ನಿಯಿಂದ ತೆರವಾಗಿರೋ ಅಧ್ಯಕ್ಷ ಸ್ಥಾನಕ್ಕೆ ಹೊಸಬರ ನೇಮಕಕ್ಕೆ ಕಸರತ್ತು ಆರಂಭವಾಗಿದೆ. ಬಿಸಿಸಿಐ ಬಾಸ್​ ಪಟ್ಟವೇರೋ​ ರೇಸ್​ಗೆ​ ಇದೀಗ ದಿಗ್ಗಜ ಕ್ರಿಕೆಟರ್ಸ್​ ಇಳಿದಿದ್ದಾರೆ. ದಿಗ್ಗಜರ ಎಂಟ್ರಿಯಿಂದ ಬಿಸಿಸಿಐ ಅಧ್ಯಕ್ಷಗಾದಿಯ ಚುನಾವಣಾ ಕಣ ಫುಲ್​ ರಂಗೇರಿದೆ.
ವಿಶ್ವದ ಶ್ರೀಮಂತ ಕ್ರಿಕೆಟ್​ ಸಂಸ್ಥೆ ಬಿಸಿಸಿಐ ವಲಯದಲ್ಲಿ ಬದಲಾವಣೆಯ ಬಿರುಗಾಳಿ ಜೋರಾಗಿ ಬೀಸ್ತಾಯಿದೆ. ಇತ್ತೀಚೆಗಷ್ಟೇ 70ನೇ ವರ್ಷಕ್ಕೆ ಕಾಲಿಟ್ಟ ರೋಜರ್​ ಬಿನ್ನಿ ಬಿಸಿಸಿಐ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದಿದ್ದಾರೆ. ಇದೀಗ ಭಾರತೀಯ ಕ್ರಿಕೆಟ್​​ನ ಮುಂದಿನ ಬಿಗ್​ಬಾಸ್​ ಯಾರಾಗ್ತಾರೆ.? ಅನ್ನೋ ಕುತೂಹಲ ಕ್ರಿಕೆಟ್​ ವಲಯದಲ್ಲಿ ಮನೆ ಮಾಡಿದೆ. ರೋಜರ್​ ಬಿನ್ನಿಯಿಂದ ತೆರವಾದ ಬಿಸಿಸಿಐ ಅಧ್ಯಕ್ಷ ಹುದ್ದೆಯ ರೇಸ್​​ಗೀಗ ದಿಗ್ಗಜ ಕ್ರಿಕೆಟಗರು ಇಳಿದಿದ್ದಾರೆ.
/filters:format(webp)/newsfirstlive-kannada/media/media_files/2025/09/15/bcci-3-2025-09-15-23-12-44.jpg)
‘ಬಿಗ್​ಬಾಸ್​’ ಹುದ್ದೆಯ ಮೇಲೆ ಬೆಂಗಾಲ್​ ಟೈಗರ್​ ಕಣ್ಣು.!
ರೋಜರ್​​ ಬಿನ್ನಿ ಪಟ್ಟದಿಂದ ಕೆಳಗಿಳಿದ ಬಳಿಕ ನಡೆದ ಹಂಗಾಮಿ ಅಧ್ಯಕ್ಷರಾಗಿ ರಾಜೀವ್​ ಶುಕ್ಲಾ ಸದ್ಯ ಕಾರ್ಯ ನಿರ್ವಹಿಸ್ತಾ ಇದ್ದಾರೆ. ಎಜಿಎಮ್​ ಮೀಟಿಂಗ್​ನಲ್ಲಿ ನೂತನ ಅಧ್ಯಕ್ಷರ ನೇಮಕವಾಗಲಿದೆ. ಈ ಸಭೆಗೆ ಬೆಂಗಾಲ್​ ಕ್ರಿಕೆಟ್​ ಅಸೋಷಿಯನ್​​ ಸೌರವ್​ ಗಂಗೂಲಿಯನ್ನ ಪ್ರತಿನಿಧಿಯಾಗಿ ನಾಮಿನೇಟ್​ ಮಾಡಿದೆ. ಇದರೊಂದಿಗೆ ಅಧಿಕೃತವಾಗಿ ಸೌರವ್​ ಗಂಗೂಲಿ ಅಧ್ಯಕ್ಷ ಹುದ್ದೆಯ ರೇಸ್​​ಗೆ ಎಂಟ್ರಿಕೊಟ್ಟಿದ್ದಾರೆ.
ಪಂಜಾಬ್​ ಕ್ರಿಕೆಟ್​ ಅಸೋಸಿಯೇಷನ್​ನಿಂದ ಅಚ್ಚರಿಯ ಎಂಟ್ರಿ.!
ಆರಂಭದಲ್ಲಿ ರಾಜೀವ್​ ಶುಕ್ಲಾ, ಆ ಬಳಿಕ ಸೌರವ್​ ಗಂಗೂಲಿ, ನಂತರದಲ್ಲಿ ಸಚಿನ್​ ತೆಂಡುಲ್ಕರ್​ ಹೆಸರು ಬಿಸಿಸಿಐ ಬಾಸ್​ ಹುದ್ದೆಗೆ ಕೇಳಿ ಬಂದಿದ್ವು. ಸಚಿನ್​ ಸಾರಾಸಗಟಾಗಿ ಈ ಸುದ್ದಿಯನ್ನ ತಳ್ಳಿ ಹಾಕಿದ್ದಾರೆ. ರಾಜೀವ್​ ಶುಕ್ಲಾ ಹೆಚ್ಚೆನು ಆಸಕ್ತಿ ತೋರಿಸಿಲ್ಲ. ಹೀಗಾಗಿ ಗಂಗೂಲಿ ಮತ್ತೆ ಬಿಸಿಸಿಐ ಅಧ್ಯಕ್ಷರಾಗೋದು ಪಕ್ಕಾ ಎಂಬ ಟಾಕ್​ ಬಿಸಿಸಿಐ ವಲಯದಲ್ಲಿತ್ತು. ಆದ್ರೀಗ ಗಂಗೂಲಿಗೆ ಟಫ್​ ಫೈಟ್​ ಎದುರಾಗಿದೆ. ಟೀಮ್​ ಇಂಡಿಯಾ ಮಾಜಿ ಕ್ರಿಕೆಟಿಗ ಹರ್ಭಜನ್​ ಸಿಂಗ್​ ರೇಸ್​​ಗೆ ಎಂಟ್ರಿಕೊಟ್ಟಿದ್ದಾರೆ.
ಎಜಿಎಮ್​ ಮೀಟಿಂಗ್​ಗೂ ಮುನ್ನ ಪಂಜಾಬ್​ ಕ್ರಿಕೆಟ್​ ಅಸೋಸಿಯೇಷನ್​ ಅಚ್ಚರಿಯ ನಿರ್ಧಾರ ತಳೆದಿದೆ. ಮಾಜಿ ಕ್ರಿಕೆಟಿಗ ಹರ್ಭಜನ್​ ಸಿಂಗ್​ನ PCA ಪ್ರತಿನಿಧಿಯಾಗಿ ಸಭೆಗೆ ಕಳುಹಿಸಲು ತೀರ್ಮಾನಿಸಿದೆ. ಇದ್ರಿಂದಿಗೆ ಹರ್ಭಜನ್​ ಸಿಂಗ್ ಕೂಡ ಅಧಿಕೃತವಾಗಿ ಚುನಾವಣಾ ಕಣಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಆಫ್​​ಸ್ಪಿನ್ನರ್​ ಕಣ್ಣು ಅಧ್ಯಕ್ಷಗಾದಿಯ ಮೇಲಿದೆ ಅನ್ನೋದು ಪಂಜಾಬ್​ ಕ್ರಿಕೆಟ್​ ಅಸೋಸಿಯೇಷನ್​ ಮೂಲದ ಮಾಹಿತಿಯಾಗಿದೆ.
ಇದನ್ನೂ ಓದಿ: ಟೀಮ್ ಇಂಡಿಯಾದಿಂದ ಕಣ್ಮರೆಯಾದ ಕೊಹ್ಲಿ, ರೋಹಿತ್ ಸೇರಿ ಈ ಆಟಗಾರರು ಏನ್ ಮಾಡ್ತಿದ್ದಾರೆ?
/filters:format(webp)/newsfirstlive-kannada/media/media_files/2025/09/15/sourav_ganguly_bhajji-2025-09-15-23-12-58.jpg)
ಕ್ರಿಕೆಟಿಗರಿಗೆ ಮಣೆ ಹಾಕಲು ಬಿಸಿಸಿಐನಲ್ಲಿ ಒಲವು.!
ಬಿಸಿಸಿಐ, ಕ್ರಿಕೆಟ್​​ ನಿಯಂತ್ರಣ ಮಂಡಳಿಯಾಗಿರೋದ್ರಿಂದ ಕ್ರಿಕೆಟಿಗರೇ ಮತ್ತೆ ಅಧ್ಯಕ್ಷರಾಗಬೇಕು ಎಂಬ ನಿಲುವು ಬಿಸಿಸಿಐನಲ್ಲಿದೆ. 2019ರಿಂದ ಅದೇ ಪರಿಪಾಠ ಪಾಲಿಸಿಕೊಂಡು ಬರಲಾಗಿದೆ. ಗಂಗೂಲಿ ಆ ಬಳಿಕ ಬಿನ್ನಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಈಗಲೂ ಮತ್ತೆ ಮಾಜಿ ಕ್ರಿಕೆಟಿಗರಿಗೇ ಪಟ್ಟ ಕಟ್ಟ ಬೇಕು ಅನ್ನೋ ಕೂಗು ಬಿಸಿಸಿಐ ವಲಯದಲ್ಲಿ ಬಲವಾಗಿದೆ. ಇದೀಗ ಗಂಗೂಲಿ ಹಾಗೂ ಹರ್ಭಜನ್​ ಅಧಿಕೃತವಾಗಿ ರೇಸ್​​ಗೆ ಎಂಟ್ರಿಕೊಟ್ಟಿದ್ದಾರೆ. ಹೀಗಾಗಿ ಇವರಿಬ್ಬರಲ್ಲೇ ಒಬ್ಬರು ಅಧ್ಯಕ್ಷರಾಗೋದು ಪಕ್ಕಾ.!
KSCAನಿಂದ ಅಧ್ಯಕ್ಷ ರಘುರಾಮ್​ ಭಟ್​ ಬಿಸಿಸಿಐಗೆ.?
ಕರ್ನಾಟಕ ಕ್ರಿಕೆಟ್​ ಅಸೋಸಿಯೇಷನ್​ನಿಂದ ರಘುರಾಮ್​ ಭಟ್​ ಎಜಿಎಮ್​ಗೆ ಪ್ರತಿನಿಧಿಯಾಗಿ ತೆರಳಲಿದ್ದಾರೆ. ಬಿಸಿಸಿಐ ಅಧ್ಯಕ್ಷ ಪಟ್ಟ ಸೇರಿದಂತೆ ಒಟ್ಟು 4 ಸ್ಥಾನಗಳಿಗೆ ಹೊಸ ಪದಾಧಿಕಾರಿಗಳ ನೇಮಕ ನಡೆಯಲಿದೆ. ಇವುಗಳ ಪೈಕಿ ರಘುರಾಮ್​ ಭಟ್​​ಗೂ ಒಂದು ಸ್ಥಾನ ಸಿಗಲಿದೆ ಅನ್ನೋದು ಮೂಲಗಳ ಮಾಹಿತಿಯಾಗಿದೆ. ಸಪ್ಟೆಂಬರ್​ 28ರಂದು ಬಿಸಿಸಿಐ ವಾರ್ಷಿಕ ಸಾಮಾನ್ಯ ಸಭೆ ನಡೆಯಲಿದ್ದು, ನೂತನ ಅಧ್ಯಕ್ಷ ಹಾಗೂ ನೂತನ ಪದಾಧಿಕಾರಿಗಳು ಯಾರಾಗಲಿದ್ದಾರೆ ಎಂಬ ಕುತೂಹಲದ ಪ್ರಶ್ನೆಗೆ ಉತ್ತರ ಸಿಗಲಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us