Asia Cup; ಪ್ಲೇಯಿಂಗ್​​-11 ಆಯ್ಕೆ, ಹೆಡ್​ ಕೋಚ್​ ರಾಜಕೀಯ.. ಈ​ ಪ್ಲೇಯರ್ಸ್​ ಅಂದ್ರೆ ಗಂಭೀರ್​ ಗರಂ!

ಸೂಪರ್​ ಸಂಡೆ ನಡೆಯೋ ಬದ್ಧವೈರಿಗಳ ಎದುರಿನ ಪ್ರತಿಷ್ಟೆಯ ಕದನಕ್ಕೆ ಟೀಮ್​ ಇಂಡಿಯಾದ ಪ್ಲೇಯಿಂಗ್​ ಇಲೆವೆನ್​ ಆಯ್ಕೆ ಕೆಲಸ ಈಗಲೇ ಮುಗಿದಿದೆ. ಯುಎಇ ವಿರುದ್ಧ ಕಣಕ್ಕಿಳಿದಿದ್ದ ವಿನ್ನಿಂಗ್​​ ಕಾಂಬಿನೇಶನ್​ ಅನ್ನೇ ಮುಂದುವರೆಸಲು ಕೋಚ್​ ಗಂಭೀರ್​-ಕ್ಯಾಪ್ಟನ್​ ಸೂರ್ಯ ನಿರ್ಧರಿಸಿದ್ದಾರೆ.

author-image
Bhimappa
gautam_gambhir_surya
Advertisment

ಇಂಡೋ-ಪಾಕ್​ ಬ್ಯಾಟಲ್​ನ ಫೀವರ್​ ಕ್ರಿಕೆಟ್​ ಲೋಕವನ್ನ ಆವರಿಸಿದೆ. ಸೂಪರ್​ ಸಂಡೆ ನಡೆಯೋ ಮಹತ್ವದ ಕದನದ ಮೇಲೆ ವಿಶ್ವ ಕ್ರಿಕೆಟ್​ ಲೋಕದ ಕಣ್ಣಿದೆ. ಪ್ರತಿಷ್ಟೆಯ ಕದನದಲ್ಲಿ ಗೆಲುವನ್ನೇ ಗುರಿಯಾಗಿಸಿಕೊಂಡಿರುವ ಉಭಯ ತಂಡಗಳು ಭರ್ಜರಿ ತಯಾರಿ ಆರಂಭಿಸಿವೆ. strategy & game plan ರೂಪಿಸುವಲ್ಲಿ ಉಭಯ ತಂಡಗಳ ಥಿಂಕ್​ಟ್ಯಾಂಕ್​ಗಳು ಬ್ಯುಸಿಯಾಗಿದ್ದಾರೆ. ಇದ್ರ ನಡುವೆ ಟೀಮ್​ ಇಂಡಿಯಾದಿಂದ ಶಾಕಿಂಗ್​ ಸುದ್ದಿ ಹೊರಬಿದ್ದಿದೆ. 

ಬದ್ಧವೈರಿಗಳ ವಿರುದ್ಧದ ಕದನದಿಂದಲೂ ಆರ್ಷ್​​ದೀಪ್​​ ಔಟ್​.!

ಸೂಪರ್​ ಸಂಡೆ ನಡೆಯೋ ಬದ್ಧವೈರಿಗಳ ಎದುರಿನ ಪ್ರತಿಷ್ಟೆಯ ಕದನಕ್ಕೆ ಟೀಮ್​ ಇಂಡಿಯಾದ ಪ್ಲೇಯಿಂಗ್​ ಇಲೆವೆನ್​ ಆಯ್ಕೆ ಕೆಲಸ ಈಗಲೇ ಮುಗಿದಿದೆ. ಯುಎಇ ವಿರುದ್ಧ ಕಣಕ್ಕಿಳಿದಿದ್ದ ವಿನ್ನಿಂಗ್​​ ಕಾಂಬಿನೇಶನ್​ ಅನ್ನೇ ಮುಂದುವರೆಸಲು ಕೋಚ್​ ಗಂಭೀರ್​-ಕ್ಯಾಪ್ಟನ್​ ಸೂರ್ಯ ನಿರ್ಧರಿಸಿದ್ದಾರೆ. ಅಚ್ಚರಿ ಎಂಬಂತೆ ಎಡಗೈ ವೇಗಿ ಆರ್ಷ್​​ದೀಪ್​ ಸಿಂಗ್​ ಮತ್ತೆ ಬೆಂಚ್​ಗೆ ಸೀಮಿತವಾಗ್ತಿದ್ದಾರೆ. ಟಿ20 ಫಾರ್ಮೆಟ್​ನ​​ ಮ್ಯಾಚ್​ ವಿನ್ನರ್​ ಬೌಲರ್​ನ ಮತ್ತೆ ಕಡೆಗಣಿಸ್ತಿರೋ ಹಲವು ಪ್ರಶ್ನೆಗಳನ್ನ ಹುಟ್ಟಿಸಿದೆ. 

shreyas_iyer (2)

ಬೂಮ್ರಾಗಿಂತ ಬೆಸ್ಟ್​ ಎಡಗೈ ವೇಗಿ ಆರ್ಷ್​​ದೀಪ್​ ಸಿಂಗ್​.!

ಏಷ್ಯಾಕಪ್​ ಟೂರ್ನಿಯ ಟೀಮ್​ ಇಂಡಿಯಾದ ಪ್ಲೇಯಿಂಗ್​ ಇಲೆವೆನ್​ನಲ್ಲಿ ಬೂಮ್ರಾ ಜೊತೆಗೆ ಆರ್ಷ್​​ದೀಪ್​ ಸಿಂಗ್​ ಕಣಕ್ಕಿಳಿಯೋದು ಫಿಕ್ಸ್​ ಎಂದೇ ಎಲ್ಲರ ಲೆಕ್ಕಾಚಾರವಾಗಿತ್ತು. ಆದ್ರೆ, ಮೊದಲ ಪಂದ್ಯದಲ್ಲಿ ಇದನ್ನ ಸುಳ್ಳಾಗಿಸಿದ ಟೀಮ್​ ಮ್ಯಾನೇಜ್​ಮೆಂಟ್​ ಏಕೈಕ ಸ್ಪೆಷಲಿಸ್ಟ್​ ವೇಗಿ ಬೂಮ್ರಾ ಜೊತೆಗೆ ಕಣಕ್ಕಿಳಿಯಿತು. ಇದೀಗ 2ನೇ ಪಂದ್ಯಕ್ಕೂ ಅದೇ ತಂಡ ಮುಂದುವರೆಸಲು ಮ್ಯಾನೇಜ್​ಮೆಂಟ್​ ನಿರ್ಧರಿಸಿದೆ. ಅಸಲಿಗೆ ಟಿ20 ಫಾರ್ಮೆಟ್​ನಲ್ಲಿ ಬೂಮ್ರಾಗೆ ಹೋಲಿಸಿದ್ರೆ, ಆರ್ಷ್​​ದೀಪ್​ ಸಿಂಗ್​ ಸಾಲಿಡ್​ ರೆಕಾರ್ಡ್​ ಹೊಂದಿದ್ದಾರೆ. 

T20 ಫಾರ್ಮೆಟ್​ಗೆ ಬೂಮ್ರಾ 2016ರಲ್ಲಿ ಡೆಬ್ಯೂ ಮಾಡಿದ್ರೆ, ಆರ್ಷ್​​ದೀಪ್​ 2022ರಲ್ಲಿ ಪದಾರ್ಪಣೆ ಮಾಡಿದರು. ಆದ್ರೆ, ಬೂಮ್ರಾಗಿಂತ ಹೆಚ್ಚಿನ ವಿಕೆಟ್ಸ್​​ ಆರ್ಷ್​​ದೀಪ್​ ಅಕೌಂಟ್​ನಲ್ಲಿದೆ. ಬೂಮ್ರಾ 71 ಪಂದ್ಯ ಆಡಿ 90 ವಿಕೆಟ್​ ಬೇಟೆಯಾಡಿದ್ರೆ, ಆರ್ಷ್​​ದೀಪ್​ ಸಿಂಗ್​ 63 ಪಂದ್ಯಗಳಿಂದಲೇ 99 ವಿಕೆಟ್ಸ್​ ಉರುಳಿಸಿದ್ದಾರೆ. ಇನ್​ಫ್ಯಾಕ್ಟ್​, ಆರ್ಷ್​​ದೀಪ್​ ಟೀಮ್​ ಇಂಡಿಯಾ ಪರ ಟಿ20 ಫಾರ್ಮೆಟ್​ನಲ್ಲಿ ಅತಿ ಹೆಚ್ಚು ವಿಕೆಟ್​ ಉರುಳಿಸಿದ ಬೌಲರ್​ ಕೂಡ ಹೌದು. ಇಂತಾ ಆಟಗಾರನನ್ನ ಬೆಂಚ್​ಗೆ ಸೀಮಿತಗೊಳಿಸೋದು ಯಾವ ನ್ಯಾಯ.?

ಗಂಭೀರ್​ ರಾಜಕೀಯದಾಟ.. ಆರ್ಷ್​​ದೀಪ್​ಗೆ ಅನ್ಯಾಯ.?

ಆರ್ಷ್​ದೀಪ್​ ಸಿಂಗ್​ನ ಬೆಂಚ್​ಗೆ ಸೀಮಿತ ಮಾಡ್ತಿರೋದು ಹೆಡ್​ಕೋಚ್​​ ಗೌತಮ್​ ಗಂಬೀರ್​ ಕಾರ್ಯವೈಖರಿಯ ಬಗ್ಗೆ ಇದೀಗ ಪ್ರಶ್ನೆ ಹುಟ್ಟುವಂತೆ ಮಾಡಿದೆ. ಯಾಕಂದ್ರೆ, ಗಂಭೀರ್​ ಯಾವಾಗ ಹೆಡ್​ಕೋಚ್​ ಹುದ್ದೆಯನ್ನೇರಿದ್ರೋ ಆಗಿಂದ ಆರ್ಷ್​​ದೀಪ್​ಗೆ ಸಿಕ್ಕಿರೋದು ಕೆಲವೇ ಕೆಲವು ಅವಕಾಶ ಮಾತ್ರ. ಈ ಹಿಂದೆ ಚಾಂಪಿಯನ್ಸ್​ ಟ್ರೋಫಿಯಲ್ಲೂ ಆರ್ಷ್​​ದೀಪ್​ ಬೆಂಚ್​ ಬಿಸಿ ಮಾಡಿದ್ದರು. ಆದ್ರೆ, ಗಂಭೀರ್​ ಶಿಷ್ಯ ಹರ್ಷಿತ್​ ರಾಣಾ ಅನಾನುಭವಿಯಾಗಿದ್ರೂ ಡೆಬ್ಯೂ ಮಾಡಿದರು. ಇಂಗ್ಲೆಂಡ್​​ ಪ್ರವಾಸದಲ್ಲೂ ಆರ್ಷ್​​ದೀಪ್​ಗೆ ಅವಕಾಶ ಸಿಗಲಿಲ್ಲ. ಇದೀಗ ಏಷ್ಯಾಕಪ್​ನಲ್ಲೂ ಚಾನ್ಸ್​ ನೀಡ್ತಿಲ್ಲ. ಈ ನಡೆ ಹಲವು ಪ್ರಶ್ನೆಗಳನ್ನ ಹುಟ್ಟಿಸಿದೆ. ಫ್ಯಾನ್ಸ್​ಗೆ ಮಾತ್ರವಲ್ಲ, ಮಾಜಿ ಕ್ರಿಕೆಟಿಗ ಆರ್​. ಅಶ್ವಿನ್​ಗೂ ಈ ವಿಚಾರದಲ್ಲೂ ಅನುಮಾನ ಹುಟ್ಟಿದೆ. 

‘ಗಂಭೀರ್​ ಕೋಚ್​ ಆದ ನಂತರ ಹೀಗೆ ಆಗ್ತಿದೆ’

ಆರ್ಷ್​​ದೀಪ್​ ಸಿಂಗ್​ನ ಡ್ರಾಪ್​ ಮಾಡಿದ್ದು ನನಗೆ ಆಶ್ಚರ್ಯ ಉಂಟುಮಾಡಿತು. ಆದ್ರೆ, ಇದೇನು ಹೊಸ ವಿಚಾರವಲ್ಲ. ಗೌತಮ್​ ಗಂಭೀರ್​ ಕೋಚ್​ ಆದಾಗಿನಿಂದ ಹೀಗೆ ಆಗ್ತಿದೆ. ಆರ್ಷ್​​ದೀಪ್​ ಸಿಂಗ್​ಗೆ ಚಾಂಪಿಯನ್ಸ್​ ಟ್ರೋಫಿಯಲ್ಲೂ ಕೂಡ ಅವಕಾಶ ನೀಡಲಿಲ್ಲ. 

ಆರ್​.ಅಶ್ವಿನ್​, ಮಾಜಿ ಕ್ರಿಕೆಟಿಗ

ಇದನ್ನೂ ಓದಿ:ಭಾರತ- ಪಾಕ್​ ಮಧ್ಯೆ ನಡೆದ ಏಷ್ಯಾಕಪ್​ನ ಟಾಪ್​- 5 ಮ್ಯಾಚ್​ಗಳು.. ಫುಲ್ ಥ್ರಿಲ್ಲಿಂಗ್..!

INDvsAUS: ಸಿರಾಜ್​ ಮೇಲೆ ಬೇಸರ, ಅಶ್ವಿನ್​ಗಾಗಿ ಕಾತುರ! ನಾಳೆ ತಂಡದಲ್ಲಿ ಬದಲಾವಣೆ ಇದೆಯಾ? ಸಂಭಾವ್ಯ ಪಟ್ಟಿ ಇಲ್ಲಿದೆ

ಪಂಜಾಬ್​ ಕಿಂಗ್ಸ್​​ ಆಟಗಾರರು ಅಂದ್ರೆ ಗಂಭೀರ್​ಗೆ ಆಗಲ್ವಾ.?

ಹೀಗೊಂದು ಪ್ರಶ್ನೆಯೂ ಸದ್ಯ ಚರ್ಚೆಯಲ್ಲಿದೆ. 2024ರ ಐಪಿಎಲ್​ ಗೆದ್ದ ಕ್ರೆಡಿಟ್​ ನನಗೆ ಸಿಗಲಿಲ್ಲ ಎಂದು ಕೆಕೆಆರ್​ ತೊರೆದಿದ್ದು ನಿಮಗೆ ಗೊತ್ತೆಯಿದೆ. ಆಗ ಟ್ರೋಫಿ ಗೆದ್ದ ಕ್ರೆಡಿಟ್​ ಗೌತಮ್​ ಗಂಭೀರ್​ ಪಾಲಾಗಿತ್ತು. ಆ ಬಳಿಕ ಪಂಜಾಬ್​ ಕಿಂಗ್ಸ್​ ಸೇರಿದ ಶ್ರೇಯಸ್​ ಅಯ್ಯರ್​ ತಂಡವನ್ನ ರನ್ನರ್​ ಅಪ್​ವರೆಗೆ ತೆಗೆದುಕೊಂಡು ಹೋದರು. ಐಪಿಎಲ್​ನಲ್ಲಿ ಅದ್ಭುತ ಪ್ರದರ್ಶನ ನೀಡಿದರೂ ಶ್ರೇಯಸ್​ ಅಯ್ಯರ್​ನ ಟಿ20 ತಂಡಕ್ಕೆ ಸೆಲೆಕ್ಟ್​ ಮಾಡಿಲ್ಲ. ಅದೇ ಪಂಜಾಬ್​ ತಂಡದಲ್ಲಿದ್ದ ಆರ್ಷ್​​ದೀಪ್​​ ಸಿಂಗ್​ನೂ ಆಡಿಸ್ತಿಲ್ಲ. ಆದ್ರೆ, ಕೆಕೆಆರ್​ನಲ್ಲಿದ್ದ ನಿತೀಶ್​​ ರಾಣಾಗೆ ಕೋಚ್​ ಆದಾಗಿಂದ ಗಂಭೀರ್​ ಹೆಚ್ಚಿನ ಪ್ರಾಶಸ್ತ್ಯ ಸಿಗ್ತಿದೆ. ಇದ್ರಿಂದಾಗಿ ಗಂಭೀರ್​ ಪಂಜಾಬ್​ ಆಟಗಾರರನ್ನ ಬೇಕಂತಲೇ ಟಾರ್ಗೆಟ್​ ಮಾಡ್ತಿದ್ದಾರೆ ಎಂಬ ಚರ್ಚೆ ನಡೀತಿದೆ. 

ಅದೆನೇ ಇರಲಿ.. ಏಷ್ಯಾಕಪ್​ನ ಮೊದಲ ಪಂದ್ಯದಲ್ಲಿ ಯುಎಇ ವಿರುದ್ಧ ಟೀಮ್​ ಇಂಡಿಯಾ ಭರ್ಜರಿ ಗೆಲುವು ಸಾಧಿಸಿರಬಹುದು. ಆದ್ರೆ, ಪಾಕಿಸ್ತಾನ ವಿರುದ್ಧ ಸುಲಭದ ಜಯವನ್ನ ನಿರೀಕ್ಷೆ ಮಾಡೋಕೆ ಆಗಲ್ಲ. ಪಾಕ್​​ ಪಡೆ ಟಫ್​ ಫೈಟ್​ ನೀಡಲಿದೆ. ಹೀಗಾಗಿ ಬೂಮ್ರಾ ಜೊತೆ ಮ್ಯಾಚ್​ ವಿನ್ನರ್​ ಆರ್ಷ್​​ದೀಪ್ ​ಸಿಂಗ್​ನ ಕಣಕ್ಕಿಳಿಸಿದ್ರೇನೆ ಟೀಮ್​ ಇಂಡಿಯಾ ಅಡ್ವಾಂಟೇಜ್​. ಇದನ್ನ ಗಂಭೀರ್​​ ಅರ್ಥ ಮಾಡಿಕೊಳ್ಳಬೇಕಿದೆ. 

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ 

Asia Cup 2025 india vs pakistan asia cup Gautam Gambhir
Advertisment