ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮತ್ತೆ ಕ್ರಿಕೆಟ್ ಪಂದ್ಯಗಳ ನಡೆಸಲು ಗ್ರೀನ್ ಸಿಗ್ನಲ್..!

ಹೊಸ ಷರತ್ತುಗಳೊಂದಿಗೆ ಅನ್ವಯ ಈ ಬಗ್ಗೆ ಅಂತಿಮ‌ ತಿರ್ಮಾನ ಕೈಗೊಳ್ಳಲು ಗೃಹ ಇಲಾಖೆಗೆ ಅಧಿಕಾರ ನೀಡಲಾಗಿದೆ. ಕುನ್ಹಾ ವರದಿಯಲ್ಲಿ ಸ್ಟೇಡಿಯಂ ಬಗ್ಗೆ ನೀಡಿರುವ ಸಲಹೆಗಳನ್ನ ಇಂಪ್ಲಿಮೆಂಟ್ ಮಾಡಬೇಕು ಎಂಬ ಷರತ್ತು ಆಧರಿಸಿ ಮ್ಯಾಚ್ ಆಡಿಸಲು ಸಹಮತ ಸಿಕ್ಕಿದೆ.

author-image
Ganesh Kerekuli
Chinnaswamy
Advertisment

ಬೆಂಗಳೂರು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮತ್ತೆ ಕ್ರಿಕೆಟ್ ಪಂದ್ಯಗಳನ್ನು ನಡೆಸಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಗೃಹ ಇಲಾಖೆಯ ಮೂಲಕ, ಕುನ್ಹಾ ವರದಿ ಶಿಫಾರಸು ಪ್ರಕಾರ ಅನುಮತಿ ನೀಡಲು ಸಂಪುಟ ಸಭೆಯಲ್ಲಿ ತಿರ್ಮಾನ ಮಾಡಲಾಗಿದೆ. 

ಹೊಸ ಷರತ್ತುಗಳೊಂದಿಗೆ ಅನ್ವಯ ಈ ಬಗ್ಗೆ ಅಂತಿಮ‌ ತಿರ್ಮಾನ ಕೈಗೊಳ್ಳಲು ಗೃಹ ಇಲಾಖೆಗೆ ಅಧಿಕಾರ ನೀಡಲಾಗಿದೆ. ಕುನ್ಹಾ ವರದಿಯಲ್ಲಿ ಸ್ಟೇಡಿಯಂ ಬಗ್ಗೆ ನೀಡಿರುವ ಸಲಹೆಗಳನ್ನ ಇಂಪ್ಲಿಮೆಂಟ್ ಮಾಡಬೇಕು ಎಂಬ ಷರತ್ತು ಆಧರಿಸಿ ಮ್ಯಾಚ್ ಆಡಿಸಲು ಸಹಮತ ಸಿಕ್ಕಿದೆ. 

ಆರ್​ಸಿಬಿ ವಿಜಯೋತ್ಸವದ ವೇಳೆ ಸಂಭವಿಸಿದ್ದ ಕಾಲ್ತುಳಿತದ ಬಳಿಕ ಕ್ರೀಡಾಂಗಣದಲ್ಲಿ ಮ್ಯಾಚ್​ಗಳನ್ನು ಸ್ಥಗಿತ ಮಾಡಲಾಗಿತ್ತು. ಇದೀಗ ಮತ್ತೇ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಗಳನ್ನು ನಡೆಸಲು ಅನುಮತಿ ಸಿಕ್ಕಿದ್ದು ಐಪಿಎಲ್ ಅಭಿಮಾನಿಗಳಿಗೆ ಸರ್ಕಾರ ಗುಡ್​ನ್ಯೂಸ್​ ಕೊಟ್ಟಿದೆ.

ಇದನ್ನೂ ಓದಿ: ಜಿತೇಶ್ ಏಕಾಂಗಿ ಹೋರಾಟಕ್ಕೆ ಮಣಿಯಲಿಲ್ಲ ಗೆಲುವು.. ಮುಗ್ಗರಿಸಿದ ಭಾರತ ತಂಡ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Chinnaswamy Stadium Chennayya in Bangalore IPL 2026
Advertisment