ಏಷ್ಯಾ ಕಪ್​ ಆಯ್ಕೆಯಲ್ಲಿ ಕನ್ನಡಿಗ ಪ್ರಸಿದ್ಧ್ ಕೃಷ್ಣಗೆ ಅನ್ಯಾಯ.. ಗಂಭೀರ್ ಸರ್ವಾಧಿಕಾರತ್ವ ಹೇಗಿದೆ?

ಟೀಮ್​ ಸೆಲೆಕ್ಷನ್​ ವಿಚಾರದಲ್ಲಂತೂ ಕೋಚ್ ಗಂಭೀರ್​​ ಹೇಳಿದ್ದ ಮಾತೇ ಫೈನಲ್​​. ಏಷ್ಯಾಕಪ್​ಗೆ ಟೀಮ್​ ಅನೌನ್ಸ್​ಮೆಂಟ್​ನೊಂದಿಗೆ ಗಂಭೀರ್​ ರಾಜಕೀಯ ಯಾವ ಮಟ್ಟಕ್ಕಿದೆ ಅನ್ನೋದು ಮತ್ತೊಮ್ಮೆ ಜಗತ್ತಿಗೆ ಗೊತ್ತಾಗಿದೆ.

author-image
Bhimappa
gautam_gambhir (2)
Advertisment

ಟೀಮ್​ ಇಂಡಿಯಾದಲ್ಲಿ ರಾಜಕೀಯ ಇದೆ ಅನ್ನೋದು ಬಹಳ ಹಿಂದಿನಿಂದಿಲೂ ಇರೋ ಆರೋಪ. ಆಟಗಾರರ ಆಯ್ಕೆಯಿಂದ ಹಿಡಿದು ಸಪೋರ್ಟ್​ ಸ್ಟಾಫ್​ ನೇಮಕದವರೆಗೆ ಫೇವರಿಸಮ್​​ ನಡೆಯುತ್ತೆ ಅನ್ನೋ ಆರೋಪ ಪದೇ ಪದೇ ಕೇಳಿ ಬರುತ್ತಿದೆ. ಇದೀಗ ಏಷ್ಯಾಕಪ್​ ಟೂರ್ನಿಗೆ ಟೀಮ್​ ಇಂಡಿಯಾ ಪ್ರಕಟವಾದ ಬಳಿಕ ಕೂಡ ಈ ಆರೋಪ ಜೋರಾಗಿ ಸದ್ದು ಮಾಡ್ತಿದೆ. ಹೆಡ್​ಕೋಚ್​ ಗೌತಮ್​ ಗಂಭೀರ್​​ ಆಡಿಸಿದಂತೆ ಸೆಲೆಕ್ಟರ್ಸ್​ ಆಡ್ತಿದ್ದಾರೆ ಅನ್ನೋದು ಬಟಾ ಬಯಲಾಗಿದೆ. 

ಭಾರತೀಯ ಕ್ರಿಕೆಟ್​ನಲ್ಲೀಗ ಗಂಭೀರ್​ ‘ಪವರ್​ಫುಲ್​’.!

ಗೌತಮ್​ ಗಂಭೀರ್​ ಟೀಮ್​ ಇಂಡಿಯಾದ ಹೆಡ್​ ಕೋಚ್​ ಆದಾಗಿನಿಂದ ರಾಜಕೀಯದ ಚರ್ಚೆ ಜೋರಾಗಿ ನಡೆದಿದೆ. ಗಂಭೀರ್​ಗೆ ಬಾಸ್​​ಗಳು ಫುಲ್​​ ಪವರ್​ ನೀಡಿರೋದು ಓಪನ್​ ಸೀಕ್ರೆಟ್​. ಸದ್ಯ ಟೀಮ್​ ಇಂಡಿಯಾದಲ್ಲಿ ಪವರ್​​ ಫುಲ್ ಪರ್ಸನ್​ ಗಂಭೀರ್ ಆಡಿದ್ದೇ ಆಟ. ಟೀಮ್​ ಸೆಲೆಕ್ಷನ್​ ವಿಚಾರದಲ್ಲಂತೂ ಗಂಭೀರ್​​ ಹೇಳಿದೆ ಮಾತೇ ಫೈನಲ್​​. ಏಷ್ಯಾಕಪ್​ಗೆ ಟೀಮ್​ ಅನೌನ್ಸ್​ಮೆಂಟ್​ನೊಂದಿಗೆ ಗಂಭೀರ್​ ರಾಜಕೀಯ ಯಾವ ಮಟ್ಟಕ್ಕಿದೆ ಅನ್ನೋದು ಮತ್ತೊಮ್ಮೆ ಜಗತ್ತಿಗೆ ಗೊತ್ತಾಗಿದೆ.

KL ರಾಹುಲ್ ಬಗ್ಗೆ ಖುಷಿ ಪಡುವ ವಿಚಾರ ಹಂಚಿಕೊಂಡ ಕೋಚ್ ಗಂಭೀರ್..!

ಕನ್ನಡಿಗ ಪ್ರಸಿದ್ಧ್​ ಕೃಷ್ಣಗೆ ಆಯ್ಕೆ ಸಮಿತಿ ಅನ್ಯಾಯ.!

ಏಷ್ಯಾಕಪ್​ ಟೀಮ್​ನಲ್ಲಿ ಕನ್ನಡಿಗ ಪ್ರಸಿದ್ಧ ಕೃಷ್ಣಗೆ ಸ್ಥಾನ ಸಿಗುತ್ತೆ ಅನ್ನೋದು ಟಾಕ್​ ಜೋರಾಗಿತ್ತು. ಕಳೆದ ಐಪಿಎಲ್​ನ ಪರ್ಪಲ್​ ಕ್ಯಾಪ್​ ಹೋಲ್ಡರ್​ ಆಗಿ ಪ್ರಸಿದ್ಧ್​ ಕೃಷ್ಣ ಹೊರಹೊಮ್ಮಿದ್ರು. 15 ಪಂದ್ಯಗಳಲ್ಲಿ 25 ವಿಕೆಟ್​ ಬೇಟೆಯಾಡಿದ್ರು. ಹೀಗಾಗಿ ಪ್ರಸಿದ್ಧ್​​ಗೆ ಏಷ್ಯಾಕಪ್​​ ಟಿಕೆಟ್​ ಫಿಕ್ಸ್​ ಎನ್ನಲಾಗಿತ್ತು. ಸೆಲೆಕ್ಷನ್​​ ಮೀಟಿಂಗ್​​ ಪ್ರಸಿದ್ಧ ಆಯ್ಕೆ ಜೋರು ಚರ್ಚೆಯೂ ನಡೆದಿತ್ತು. ಆದ್ರೆ, ಫೈನಲ್​ ಟೀಮ್​ ಅನೌನ್ಸ್​ ಆದಾಗ ಆಗಿದ್ದು ನಿರಾಸೆ.

ಶಿಷ್ಯನ ಪರ ಗಂಭೀರ್​​ ಬ್ಯಾಟಿಂಗ್​, ರಾಣಾಗೆ ಸ್ಥಾನ.!

ಐಪಿಎಲ್​ನ ಪರ್ಪಲ್​ ಕ್ಯಾಪ್​ ಹೋಲ್ಡರ್​​ಗೆ ಕೊಕ್​ ಕೊಟ್ಟ ಸೆಲೆಕ್ಷನ್​ ಕಮಿಟಿ 3ನೇ ವೇಗಿಯಾಗಿ ಮಣೆ ಹಾಕಿರೋದು ಗಂಭೀರ್​​ ಶಿಷ್ಯ ಹರ್ಷಿತ್​ ರಾಣಾಗೆ. ಐಪಿಎಲ್​​ 2025ನಲ್ಲಿ 14 ಪಂದ್ಯಗಳನ್ನಾಡಿದ ಈತ ಕೇವಲ 15 ವಿಕೆಟ್​ ಕಬಳಿಸಿದ್ದ. ಇಷ್ಟೆ ಅಲ್ಲ, 10.18ರ ಎಕಾನಮಿಯಲ್ಲಿ ರನ್​ ಬಿಟ್ಟು ಕೊಟ್ಟು ದುಬಾರಿಯಾಗಿದ್ದ. ಇನ್ನು, ಟೀಮ್​ ಇಂಡಿಯಾ ಪರ ಆಡಿರೋ ಏಕೈಕ ಟಿ20ಯಲ್ಲೂ 9ರ ಎಕಾನಮಿಯಲ್ಲಿ ರನ್​ಬಿಟ್ಟು ಕೊಟ್ಟಿದ್ದಾನೆ. ಇಂತಾ ವೇಗಿಗೆ ಸೆಲೆಕ್ಷನ್​ ಕಮಿಟಿ ಮಣೆ ಹಾಕಿದೆ. ರಾಣಾ ಸ್ಥಾನ ನೀಡೋ ಭರದಲ್ಲಿ 2024 ಟಿ20 ವಿಶ್ವಕಪ್​ ಗೆದ್ದ ತಂಡದ ಸದಸ್ಯ ಅನುಭವಿ ಮೊಹಮ್ಮದ್​ ಸಿರಾಜ್​ಗೂ ಕೊಕ್​ ನೀಡಲಾಗಿದೆ. 

13 ಫಸ್ಟ್​​ ಕ್ಲಾಸ್​ ಪಂದ್ಯದ ಅನುಭವಕ್ಕೆ ಟೆಸ್ಟ್​ ಕ್ಯಾಪ್​.!

ಗಂಭೀರ್​ ಕೋಚ್​ ಆದಾಗಿನಿಂದಲೂ ಹರ್ಷಿತ್​ ರಾಣಾ ಪರ ಜೋರಾಗೆ ಬ್ಯಾಟಿಂಗ್​ ನಡೆಸಿದ್ದಾರೆ. ಕಳೆದ ವರ್ಷದ ಅಂತ್ಯದಲ್ಲಿ ನಡೆದ ಬಾರ್ಡರ್​​-ಗವಾಸ್ಕರ್​ ಟೆಸ್ಟ್​ ಸರಣಿಯ ತಂಡದಲ್ಲಿ ಕೇವಲ 13 ಫಸ್ಟ್​ ಕ್ಲಾಸ್​ ಪಂದ್ಯಗಳನ್ನಾಡಿದ್ದ ಅನಾನುಭವಿ ರಾಣಾಗೆ ಸ್ಥಾನ ನೀಡಲಾಗಿತ್ತು. ಇಷ್ಟೇ ಅಲ್ಲ, ಪ್ಲೇಯಿಂಗ್​ ಇಲೆವೆನ್​ನಲ್ಲಿ ಚಾನ್ಸ್​ ನೀಡಿ ಆಡಿಸಲಾಯ್ತು. ರೆಡ್​ಬಾಲ್​ ಕ್ರಿಕೆಟ್​​ನಲ್ಲಿ ಅತಿ ಕಡಿಮೆ ಅನುಭವ ಹೊಂದಿದ್ರೂ ರಾಣಾನ ಸೆಲೆಕ್ಟ್​​ ಮಾಡಿದ್ದು, ಡೆಬ್ಯೂ ಮಾಡಿಸಿದ್ದು ಇದೆರಡರ ಹಿಂದಿದ್ದಿದ್ದು ಗಂಭೀರ್​.

ಇದನ್ನೂ ಓದಿ: ಮಿನಿ ಆಕ್ಷನ್​ ಆರಂಭಿಸಿದ RCB.. ಸ್ಟಾರ್ ಆಲ್​ರೌಂಡರ್​ ಮೇಲೆ ಕಣ್ಣಿಟ್ಟ ಬೆಂಗಳೂರು ಟೀಮ್!

PRASIDDH_KRISHNA (1)

ಆರ್ಷ್​​ದೀಪ್​ಗೂ ಮುನ್ನ ಏಕದಿನದಲ್ಲಿ ಚಾನ್ಸ್​​.!

ಆರ್ಷ್​​ದೀಪ್​ ಸಿಂಗ್​ ಕಳೆದ 2 ವರ್ಷದಿಂದ ಟೀಮ್​ ಇಂಡಿಯಾದ ಭಾಗವಾಗಿದ್ದಾರೆ. ಆದ್ರೆ, ಈ ಆರ್ಷ್​​​ದೀಪ್​ಗೂ ಮುನ್ನ ಏಕದಿನ ಫಾರ್ಮೆಟ್​​ಗೆ ಡೆಬ್ಯೂ ಮಾಡಿದ್ದು ಹರ್ಷಿತ್​ ರಾಣಾ. ಅದೂ ಮಹತ್ವದ ಚಾಂಪಿಯನ್ಸ್​ ಟ್ರೋಫಿ ಟೂರ್ನಿಯಲ್ಲಿ. ಕಳೆದ ತಿಂಗಳು ನಡೆದ ಇಂಗ್ಲೆಂಡ್​ ಪ್ರವಾಸದ ವೇಳೆ ಹರ್ಷಿತ್​​ ರಾಣಾನ ತಂಡದಲ್ಲಿ ಉಳಿಸಿಕೊಳ್ಳೋಕೆ ಗೌತಮ್​ ಗಂಭೀರ್​​ ಶತ ಪ್ರಯತ್ನ ಪಟ್ಟಿದ್ರು. ಅಂದುಕೊಂಡಂತೆ ಒಂದು ಪಂದ್ಯದ ವೇಳೆ ತಂಡದಲ್ಲಿ ಉಳಿಸಿಕೊಂಡಿದ್ರು ಕೂಡ. ಆದ್ರೆ, ತೀವ್ರ ಟೀಕೆ ಎದುರಾದ ಬಳಿಕ ತಂಡದಿಂದ ರಿಲೀಸ್​ ಮಾಡಲಾಗಿತ್ತು. 

ಗೌತಮ್​ ಗಂಭೀರ್​ ಭಾರತೀಯ ಕ್ರಿಕೆಟ್​​ನಲ್ಲಿ ಎಷ್ಟು ಪವರ್​ಫುಲ್​ ಆಗಿದ್ದಾರೆ ಅನ್ನೋದಕ್ಕೆ ಹರ್ಷಿತ್​ ರಾಣಾ ಕಥೆ ಬೆಸ್ಟ್​ ಎಕ್ಸಾಂಪಲ್​ ಆಗಿದೆ. 6 ತಿಂಗಳ ಅವಧಿಯಲ್ಲಿ ಶಿಷ್ಯನನ್ನ ಆಲ್​​ಫಾರ್ಮೆಟ್​ ಪ್ಲೇಯರ್​ ಮಾಡಿದ್ದಾರೆ. ಆದ್ರೆ, ಗುರು ಗಂಭೀರ್​ ಬ್ಯಾಟಿಂಗ್​ ಮಾಡಿದ್ದಕ್ಕೆ ತಕ್ಕಂತೆ ಹರ್ಷಿತ್​ ರಾಣಾ ಪರ್ಫಾಮ್​ ಮಾಡಿಲ್ಲ. ಏಷ್ಯಾಕಪ್​ನಲ್ಲಾದ್ರೂ ನ್ಯಾಯ ಒದಗಿಸ್ತಾರಾ?.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ 

Cricket news in Kannada Virat Kohli cricket players Asia Cup 2025
Advertisment