/newsfirstlive-kannada/media/media_files/2025/08/07/yash_dayal-3-2025-08-07-07-33-18.jpg)
ನವದೆಹಲಿ: ಅಪ್ರಾಪ್ತ ಬಾಲಕಿಯ ಪ್ರಕರಣದಲ್ಲಿ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡದ ಆಟಗಾರ ಯಶ್​ ದಯಾಳ್​ ವಿರುದ್ಧ ಹೈಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ. ಇದರಿಂದ ಆರ್​ಸಿಬಿ ಬೌಲರ್​ ಯಶ್​ ದಯಾಳ್ ಸದ್ಯದಲ್ಲೇ ಅರೆಸ್ಟ್ ಆಗಬಹುದು ಎಂದು ಹೇಳಲಾಗುತ್ತಿದೆ.
ಅಪ್ರಾಪ್ತ ಬಾಲಕಿ ಕೇಸ್​ನಲ್ಲಿ ಆರ್​ಸಿಬಿ ಬೌಲರ್​ ಯಶ್​ ದಯಾಳ್ ಅವರ ಬಂಧನಕ್ಕೆ ವಿಧಿಸಲಾಗಿದ್ದ ತಡೆಯಾಜ್ಞೆಯನ್ನು ರಾಜಸ್ತಾನ ಹೈಕೋರ್ಟ್​ ವಜಾಗೊಳಿಸಿದೆ. ಬಾಲಕಿ ಆಗಿರುವುದರಿಂದ ಕ್ರಿಕೆಟಿಗನಿಗೆ ಬಂಧನದಿಂದ ಯಾವುದೇ ಮಧ್ಯಂತರ ಪರಿಹಾರ ನೀಡಲು ಸಾಧ್ಯವಿಲ್ಲ. ನ್ಯಾಯಮೂರ್ತಿ ಸುದೇಶ್​ ಬನ್ಸಾಲ್ ಅವರು ವಿಚಾರಣೆ ನಡೆಸಿ ಪ್ರಕರಣದ ಡೈರಿಯನ್ನು ಪ್ರಕಟಿಸಲು ಆದೇಶಿಸಿ, ಈ ಆದೇಶವನ್ನು ಹೊರಡಿಸಿದ್ದಾರೆ.
ಇದನ್ನೂ ಓದಿ: ಇಂಗ್ಲೆಂಡ್ ಪ್ರವಾಸದ ಯಶಸ್ಸಿನ ಹಿಂದೆ ಕನ್ನಡಿಗರು.. KL ರಾಹುಲ್ ಮಾಡಿದ ತ್ಯಾಗ
ನ್ಯಾಯಾಲಯದಲ್ಲಿ ಯಶ್​ ದಯಾಳ್ ಪರ ವಾದ ಮಂಡಿಸಿದ ವಕೀಲ ಕುನಾಲ್ ಜೈಮನ್ ಅವರು, ಯಶ್​ ದಯಾಳ್ ಅವರು ಕ್ರಿಕೆಟಿಗರು ಆಗಿದ್ದರಿಂದ ಅವರ ಇಮೇಜ್​ ಕೆಡಿಸಲು ಈ ರೀತಿ ಮಾಡುತ್ತಿದ್ದಾರೆ. ಇವರ ಮೇಲೆ ಇದೇ ಮೊದಲು ಈ ರೀತಿ ಆರೋಪಗಳನ್ನು ಮಾಡುತ್ತಿಲ್ಲ. ಈ ಹಿಂದೆಯೂ ಗಾಜಿಯಾಬಾದ್​ನಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಅದನ್ನು ಅಲಹಾಬಾದ್ ಹೈಕೋರ್ಟ್​ ತಡೆ ಹಿಡಿದಿದೆ ಎಂದು ನ್ಯಾಯಾಲಯಕ್ಕೆ ಹೇಳಿದರು. ಇನ್ನು ಮುಂದಿನ ವಿಚಾರಣೆಯು ಆಗಸ್ಟ್​ 22 ರಂದು ನಡೆಯಲಿದೆ ಎಂದು ನ್ಯಾಯಾಯಲ ತಿಳಿಸಿದೆ.
​
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ