ಬ್ಯಾಟ್ಸ್​ಮನ್ಸ್​​ ವಿಷ್ಯದಲ್ಲಿ ಕಾಂಪ್ರಮೈಸ್ ಇಲ್ಲ.. Asia Cup ಟೂರ್ನಿಗೆ ಪವರ್ ಹಿಟ್ಟರ್ಸ್​​ಗೆ ಮಣೆ..!

ಏಷ್ಯಾಕಪ್​​ ಟಿಕೆಟ್ ಯಾರಿಗೆ ಸಿಗುತ್ತೆ, ಯಾರಿಗೆ ಸಿಗಲ್ಲ ಎಂಬ ಕ್ಯೂರಿಯಾಸಿಟಿಗೆ ಕೊನೆಗೂ ಬ್ರೇಕ್​ ಬಿದ್ದಿದೆ. 15 ಜನರ ಬಲಿಷ್ಠ ತಂಡವನ್ನು ಬಿಸಿಸಿಐ ಚೀಫ್ ಸೆಲೆಕ್ಟರ್ ಪ್ರಕಟ ಮಾಡಿದ್ದಾರೆ. ಏಷ್ಯಾ ಕಪ್​ನಲ್ಲಿ ಯಾರಿಗೆ ಲಕ್ ಸಿಕ್ಕಿದೆ ಎನ್ನುವುದಾದರೆ..

author-image
Bhimappa
ABHISHEK_SHARMA
Advertisment

ಏಷ್ಯಾಕಪ್​​​​​​​​​​​ ಟೂರ್ನಿಗೆ ಟೀಮ್ ಇಂಡಿಯಾ ಪ್ರಕಟವಾಗಿದೆ. ಏಷ್ಯಾಕಪ್​​ ಟಿಕೆಟ್ ಯಾರಿಗೆ ಸಿಗುತ್ತೆ, ಯಾರಿಗೆ ಸಿಗಲ್ಲ ಎಂಬ ಕ್ಯೂರಿಯಾಸಿಟಿಗೆ ಕೊನೆಗೂ ಬ್ರೇಕ್​ ಬಿದ್ದಿದೆ. 15 ಜನರ ಬಲಿಷ್ಠ ತಂಡವನ್ನು ಚೀಫ್ ಸೆಲೆಕ್ಟರ್ ಅಜಿತ್ ಅಗರ್ಕರ್​ ಪ್ರಕಟಿಸಿದ್ದಾರೆ. ಹಾಗಾದ್ರೆ, ಈ ಏಷ್ಯಾಕಪ್​​ನಲ್ಲಿ ಯಾರೆಲ್ಲಾ ಇದ್ದಾರೆ. 

ಬಹು ನಿರೀಕ್ಷಿತ ಏಷ್ಯಾಕಪ್​ ಟೀಮ್​ ಸೆಲೆಕ್ಷನ್​​ ಕೌತುಕತೆಗೆ ಬ್ರೇಕ್ ಬಿದ್ದಿದೆ. ಸೆಪ್ಟೆಂಬರ್​​ 9ರಿಂದ ಆರಂಭವಾಗಲಿರುವ ಏಷ್ಯನ್ ಸಮರಕ್ಕೆ ಬಲಿಷ್ಠ ತಂಡವನ್ನ ಚೀಫ್ ಸೆಲೆಕ್ಟರ್​ ಅಜಿತ್ ಅಗರ್ಕರ್ ಪ್ರಕಟಿಸಿದ್ದಾರೆ. ದುಬೈ ಕಂಡೀಷನ್ಸ್​ಗೆ ಅನುಗುಣವಾಗಿಯೇ 15 ಜನರ ತಂಡವನ್ನ ಆಯ್ಕೆ ಮಾಡಿದ್ದಾರೆ. 

ಸೂರ್ಯನೇ ನಾಯಕ... ಶುಭ್​​ಮನ್​​​​​​​​​​​ ಉಪನಾಯಕ..!

ಏಷ್ಯಾಕಪ್​​ನಲ್ಲಿ ಸೂರ್ಯಕುಮಾರ್ ನಾಯಕತ್ವದಲ್ಲೇ ಟೀಮ್ ಇಂಡಿಯಾ ಮುನ್ನಡೆಯಲಿದೆ. ಹಾಲಿ ಚಾಂಪಿಯನ್ಸ್​ ಟೀಮ್ ಇಂಡಿಯಾವನ್ನು ಮತ್ತೆ ಚಾಂಪಿಯನ್ ಪಟ್ಟಕ್ಕೇರಿಸುವ ಬಿಗ್ ಚಾಲೆಂಜ್ ಸೂರ್ಯ ಮುಂದಿದೆ. ಆದ್ರೆ, ಟಿ20 ತಂಡಕ್ಕೆ ಕಮ್​ಬ್ಯಾಕ್ ಮಾಡ್ತಾರಾ ಇಲ್ವಾ ಎಂಬ ಚಿಂತೆಯಲ್ಲಿದ್ದ ಶುಭ್​ಮನ್​​ಗೆ ಬಿಸಿಸಿಐ ಡಬಲ್ ಗುಡ್​ನ್ಯೂಸ್ ನೀಡಿದೆ. ಒಂದ್ಕಡೆ ತಂಡದಲ್ಲಿ ಸ್ಥಾನ ನೀಡಿರುವ ಸೆಲೆಕ್ಷನ್ ಕಮಿಟಿ, ಉಪ ನಾಯಕತ್ವವನ್ನೂ ನೀಡಿದೆ.

ಟೀಂ ಇಂಡಿಯಾ ಅಭಿಮಾನಿಗಳಿಗೆ ಗುಡ್​ ನ್ಯೂಸ್; ಬಲಿಷ್ಠ ತಂಡದಲ್ಲಿ ಯಾರಿಗೆ ಒಲಿಯಿತು ಅದೃಷ್ಟ?

‘ಪವರ್​ ಹಿಟ್ಟರ್ಸ್​​’ಗೆ​ ಮಣೆ ಹಾಕಿದ ಸೆಲೆಕ್ಷನ್ ಕಮಿಟಿ..!

ಬ್ಯಾಟ್ಸ್​ಮನ್​​ಗಳ ವಿಚಾರದಲ್ಲಿ ಕಾಂಪ್ರಮೈಸ್ ಆಗದ ಸೆಲೆಕ್ಷನ್ ಕಮಿಟಿ, ಪವರ್ ಹಿಟ್ಟರ್​ಗಳಿಗೆ ಆದ್ಯತೆ ನೀಡಿದೆ. ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್, ತಿಲಕ್ ವರ್ಮ, ರಿಂಕು ಸಿಂಗ್​ರಂಥ ಸ್ಪೋಟಕ ಬ್ಯಾಟರ್​​ಗಳಿಗೆ ಮಣೆಹಾಕಿರುವ ಚೀಫ್ ಸೆಲೆಕ್ಟರ್ ಅಜಿತ್ ಅಗರ್ಕರ್​, ಲೋವರ್ ಆರ್ಡರ್​ನಲ್ಲಿ ಜಿತೇಶ್​ ಶರ್ಮಾರಂಥ ಡೈನಾಮಿಕ್​​​ ಬ್ಯಾಟರ್​​ಗೆ ಚಾನ್ಸ್​ ನೀಡಿದೆ. ಪವರ್ ಫುಲ್​ ಬ್ಯಾಟಿಂಗ್ ಲೈನ್ ಆಪ್ ಹೊಂದಿರುವ ಟೀಮ್ ಇಂಡಿಯಾ, ಆನ್​ಫೀಲ್ಡ್​ನಲ್ಲಿ ಸಿಕ್ಸರ್​ಗಳ ಮಳೆ ಸುರಿಸೋದು ಖಾಯಂ.

ಮೂವರು ಆಲ್​​ರೌಂಡರ್ಸ್​.. ಇವ್ರೇ ಗೇಮ್​ ಚೇಂಜರ್ಸ್​!

ಆಲ್​​ರೌಂಡರ್​​​​​​​​ ಕೋಟಾದಲ್ಲಿ ವಾಷಿಂಗ್ಟನ್ ಸುಂದರ್​ ಮಿಸ್ ಆಗಿದ್ದಾರೆ. ಆದ್ರೆ, ಹಾರ್ದಿಕ್ ಪಾಂಡ್ಯ, ಶಿವಂ ದುಬೆಯಂಥ ಸಿಕ್ಸ್​ ಹಿಟ್ಟಿಂಗ್ ಮಷಿನ್ಸ್​​ ತಂಡದಲ್ಲಿದ್ದಾರೆ. ಸಿಂಗಲ್ ಹ್ಯಾಂಡ್​ ಆಗಿ ಮ್ಯಾಚ್ ಗೆಲ್ಲಿಸುವ ಇವರು, ಸ್ಪಿನ್ ಫ್ರೆಂಡ್ಲಿ ಪಿಚ್​ಗಳಲ್ಲಿ ಚೆಂಡನ್ನು ಔಟ್ ಆಫ್ ದಿ ಪಾರ್ಕ್​ ಸಿಡಿಸೋದ್ರಲ್ಲಿ ಪಂಟರ್ಸ್​.

ಹಾರ್ದಿಕ್ ಪಾಂಡ್ಯ, ಶಿವಂ ದುಬೆ ಮಾತ್ರವಲ್ಲ, ಬ್ಯಾಟಿಂಗ್​ನಲ್ಲಿ ಕಾಣಿಕೆ ನೀಡಬಲ್ಲ ಅಕ್ಷರ್​, ಬೌಲಿಂಗ್​ನಲ್ಲೂ ಚಮತ್ಕಾರ ಮಾಡ್ತಾರೆ. ಯುಎಇ ಕಂಡೀಷನ್ಸ್​ಗೆ ಪರ್ಫೆಕ್ಟ್​ ಚಾಯ್ಸ್ ಆಗಿರುವ ಅಕ್ಷರ್ ಪಟೇಲ್, ಏಷ್ಯಾಕಪ್​ನಲ್ಲಿ​ ಗೇಮ್​​ ಚೇಂಜರ್ ಪ್ಲೇಯರ್ ಆಗ್ತಾರೆ ಅನ್ನೋ ನಿರೀಕ್ಷೆಯಿದೆ. 

ಸ್ಪಿನ್ನರ್​​​​​​​ಗಳಾಗಿ ವರುಣ್ ಚಕ್ರವರ್ತಿ, ಕುಲ್​ದೀಪ್​..!

ಯುಎಇನಲ್ಲಿ ಏಷ್ಯಾಕಪ್​​ ಕಾರಣಕ್ಕೆ ವಾಷ್ಟಿಂಗ್ಟನ್ ಸುಂದರ್​​ಗೆ ಸ್ಥಾನ ಫಿಕ್ಸ್ ಅಂತಾನೇ ಊಹಿಸಲಾಗಿತ್ತು. ಆದ್ರೆ, ಸುಂದರ್​​​ನ ಡ್ರಾಪ್ ಮಾಡಿರುವ ಸೆಲೆಕ್ಷನ್ ಕಮಿಟಿ ಮಿಸ್ಟರಿ ಸ್ಪಿನ್ನರ್ ವರುಣ್​ ಚಕ್ರವರ್ತಿ, ಚೈನಾಮನ್​ ಕುಲ್​ದೀಪ್ ಯಾದವ್​ಗೆ ಮಣೆಹಾಕಿದೆ. ಈ ಟ್ರ್ಯಾಕ್​​ಗಳಲ್ಲಿ ಆಡಿರುವ ಅನುಭವ ಹೊಂದಿರುವ ಇವರಿಬ್ಬರು, ಏಷ್ಯಾಕಪ್​​ನಲ್ಲಿ ಜಾದೂ ಮಾಡೋದು ಬಹುತೇಕ ಫಿಕ್ಸು.

ಇನ್ನು 2024ರ ಟಿ20 ವಿಶ್ವಕಪ್​ ಬಳಿಕ ಟಿ20 ತಂಡಕ್ಕೆ ವಾಪಸ್ ಆಗಿರುವ ಜಸ್​​ಪ್ರೀಪ್​ ಬೂಮ್ರಾ ಮೇಲೆ ಏಷ್ಯಾಕಪ್ ಗೆಲ್ಲಿಸುವ ಭಾರ ಇದೆ. ಬೂಮ್ರಾಗೆ ಆರ್ಷ್​ದೀಪ್ ಸಿಂಗ್​ ಸಾಥ್ ನೀಡಲಿದ್ದಾರೆ. ಪರ್ಫೆಕ್ಟ್​ ಆಟಗಾರರನ್ನ ಹೊಂದಿರೋ ಸ್ಪಿನ್ ಹಾಗೂ ಪೇಸ್ ಅಟ್ಯಾಕ್ ಸಖತ್ ಸ್ಟ್ರಾಂಗ್ ಆಗಿದೆ.​ 

ಇದನ್ನೂ ಓದಿ: KL ರಾಹುಲ್ ಅದ್ಭುತ ಬ್ಯಾಟಿಂಗ್​.. ಆದರೂ ಏಷ್ಯಾ ಕಪ್​ನಲ್ಲಿ ಕನ್ನಡಿಗನಿಗೆ ಅವಕಾಶವಿಲ್ಲ..!

Inv vs Eng; ಸೈಲೆಂಟ್ ಆದ ಸಂಜು, ಸೂರ್ಯ, ಜುರೇಲ್.. ಯುವ ಪ್ಲೇಯರ್​ಗೆ ಸಿಗುತ್ತಾ ಚಾನ್ಸ್?

ಶಿವಂ ದುಬೆ, ರಿಂಕು ಸಿಂಗ್, ಹರ್ಷಿತ್ ಸರ್​​ಪ್ರೈಸ್​ ಎಂಟ್ರಿ..!

ಏಷ್ಯಾಕಪ್​ನ ಟೀಮ್ ಇಂಡಿಯಾದಲ್ಲಿ ಸರ್​ಪ್ರೈಸ್ ಎಂಟ್ರಿ, ರಿಂಕು ಸಿಂಗ್, ಶಿವಂ ದುವೆ ಹಾಗೂ ಹರ್ಷಿತ್ ರಾಣಾ. ಯಾಕಂದ್ರೆ, ಜಿತೇಶ್ ಶರ್ಮಾ ಎಂಟ್ರಿಯಿಂದ ರಿಂಕು ಸಿಂಗ್​​ಗೆ ಸ್ಥಾನ ಸಿಗೋದು ಅನುಮಾನವಾಗಿತ್ತು. ಆದ್ರೆ, ಫಿನಿಷರ್ ಆಗಿ ರಿಂಕು ಸಿಂಗ್​​ ಸ್ಥಾನ ಉಳಿಸಿಕೊಂಡರೆ, ವಾಷಿಗ್ಟಂನ್​​ ಸುಂದರ್​ನ ಓವರ್ ಟೇಕ್ ಮಾಡಿರುವ ಶಿವಂ ದುಬೆ ಸರ್​​ಪ್ರೈಸ್​ ಎಂಟ್ರಿ ನೀಡಿದ್ದಾರೆ. ಇವರ ನಡುವೆ ಗಂಭೀರ್ ಶಿಷ್ಯ ಹರ್ಷಿತ್ ರಾಣಾ ಏಷ್ಯಾಕಪ್​​ನಲ್ಲಿ ಕಾಣಿಸಿಕೊಂಡಿರುವುದು ಅಚ್ಚರಿ ತರಿಸಿದೆ.

ಇಂಡಿಯನ್​​ ಟೈಗರ್ಸ್​ ಆನ್​ಫೀಲ್ಡ್​ನಲ್ಲಿ ಘರ್ಜಿಸ್ತಾರಾ..?

ಏಷ್ಯಾಕಪ್​​ನ ಟೀಮ್ ಇಂಡಿಯಾ ಸಖತ್ ಸ್ಟ್ರಾಂಗ್ ಇದೆ. ಬ್ಯಾಟಿಂಗ್, ಬೌಲಿಂಗ್​ನಲ್ಲಿ ಸಮತೋಲನ ಕಾಯ್ದುಕೊಂಡಿದೆ. ಇದಕ್ಕಿಂತ ಮಿಗಿಲಾಗಿ ಟಿ20 ಸ್ಪೆಷಲಿಸ್ಟ್​ಗಳ ದಂಡೇ ಸೂರ್ಯಕುಮಾರ್ ಸೇನೆಯಲ್ಲಿದೆ. ಪೇಪರ್ ಮೇಲೆ ಬಲಿಷ್ಠವಾಗಿ ಕಾಣ್ತಿರುವ ಇಂಡಿಯನ್ ಟೈಗರ್ಸ್​, ಆನ್​ಫೀಲ್ಡ್​ನಲ್ಲಿ ಘರ್ಜಿಸಿದ್ರೆ, ಏಷ್ಯಾಕಪ್​ ಚಾಂಪಿಯನ್ ಆಗಿ ಮತ್ತೆ ಮರೆದಾಡುವುದ್ರಲ್ಲಿ ಅನುಮಾನ ಇಲ್ಲ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ 

Suryakumar Yadav profile Asia Cup 2025 Surya kumar Yadav Vaibhav Suryavanshi
Advertisment