ಅದೃಷ್ಟವಂತ RCB ಕ್ಯಾಪ್ಟನ್​.. ಒಂದೇ ವರ್ಷ, ಎರಡು ಟ್ರೋಫಿಗೆ ಮುತ್ತಿಕ್ಕಿದ ರಜತ್ ಪಾಟಿದಾರ್

ಸೌತ್ ಝೋನ್ ಎದುರಿನ ಫೈನಲ್​​​ ಪಂದ್ಯದಲ್ಲಿ ಗೆದ್ದು ಬೀಗಿದ ಸೆಂಟ್ರಲ್ ಝೋನ್​, 11 ವರ್ಷಗಳ ಬಳಿಕ ದುಲೀಪ್ ಟ್ರೋಫಿಗೆ ಮುತ್ತಿಟ್ಟಿದೆ. ಆದ್ರೆ, ಸೆಂಟ್ರಲ್ ಝೋನ್ ಗೆಲುವಿನೊಂದಿಗೆ ರಜತ್ ಪಾಟಿದಾರ್ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದಾರೆ.

author-image
Bhimappa
RAJAT_KOHLI
Advertisment

ರಜತ್ ಪಾಟಿದಾರ್​ ಆರ್​ಸಿಬಿ ಕ್ಯಾಪ್ಟನ್ ಆದಾಗ ಮೂಗು ಮುರಿದವರೇ ಹೆಚ್ಚು. ಅನಾನುಭವಿ ನಾಯಕನ ತಂದು ಕಪ್ ಗೆಲ್ಲೋಕೆ ಆಗುತ್ತಾ ಎಂದು ಹೇಳ್ದವರಲ್ಲಿ ಆರ್​ಸಿಬಿ ಫ್ಯಾನ್ಸ್​ ಇದ್ದಾರೆ. ಆದ್ರೆ. ಕಳೆದ 9 ತಿಂಗಳ ಅಂತರದಲ್ಲಿ ಎಲ್ಲವನ್ನು ಬದಲಿಸಿದ್ದಾರೆ. ಬೆಸ್ಟ್ & ಗ್ರೇಟ್ ಕ್ಯಾಪ್ಟನ್ ಆಗುವತ್ತ ಹೆಜ್ಜೆ ಇಟ್ಟಿದ್ದಾರೆ. 

2025ರ  ದುಲೀಪ್ ಟ್ರೋಫಿ ಅಂತ್ಯಗೊಂಡಿದೆ. ಸೌತ್ ಝೋನ್ ಎದುರಿನ ಫೈನಲ್​​​ ಪಂದ್ಯದಲ್ಲಿ ಗೆದ್ದು ಬೀಗಿದ ಸೆಂಟ್ರಲ್ ಝೋನ್​, 11 ವರ್ಷಗಳ ಬಳಿಕ ದುಲೀಪ್ ಟ್ರೋಫಿಗೆ ಮುತ್ತಿಟ್ಟಿದೆ. ಆದ್ರೆ, ಸೆಂಟ್ರಲ್ ಝೋನ್ ಗೆಲುವಿನೊಂದಿಗೆ ರಜತ್ ಪಾಟಿದಾರ್ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದಾರೆ. ಸೋಲಿಲ್ಲದ ಸರದಾರನಾಗಿ ಅಭಿಮಾನಿಗಳ ಮನ ಗೆದ್ದಿರುವ ರಜತ್ ಪಾಟಿದಾರ್, ಶ್ರೇಷ್ಠ ನಾಯಕನಾಗುವತ್ತ ಹೆಜ್ಜೆ ಹಾಕಿದ್ದಾರೆ. 

RAJATH_KOHLI

9 ತಿಂಗಳು.. 3 ಟೂರ್ನಿ.. 2 ಚಾಂಪಿಯನ್ ಪಟ್ಟ..!

ರಜತ್​ ಪಾಟಿದಾರ್.. ಸದ್ಯ ಭಾರತೀಯ ಕ್ರಿಕೆಟ್​ನ ಸೋಲಿಲ್ಲದ ಸರದಾರ. 2024ರ ಡಿಸೆಂಬರ್​​ನಲ್ಲಷ್ಟೇ ನಾಯಕನ ಜರ್ನಿ ಶುರುಮಾಡಿದ ರಜತ್ ಪಾಟಿದಾರ್, ದುಲೀಪ್ ಟ್ರೋಫಿಯೊಂದಿಗೆ ಗೆದ್ದಿದ್ದು, ಎರಡು ಚಾಂಪಿಯನ್​ ಪಟ್ಟಗಳನ್ನ. 9 ತಿಂಗಳ ಅಂತರದಲ್ಲಿ ನಡೆದ 3 ಟೂರ್ನಿಗಳ ಪೈಕಿ 2 ಟೂರ್ನಿಗಳಲ್ಲಿ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದಾರೆ. ಭಾರತೀಯ ಕ್ರಿಕೆಟ್ ಲೋಕದಲ್ಲಿ ನಾಯಕನಾಗಿ ಯಶಸ್ಸಿನ ಹಾದಿಯಲ್ಲಿ ಸಾಗಿದ್ದಾರೆ. 

ಮೊದಲ ಅಗ್ನಿಪರೀಕ್ಷೆಯಲ್ಲಿ ಮಧ್ಯಪ್ರದೇಶ  ರನ್ನರ್ಸ್​..!

ಪವರ್ ಹಿಟ್ಟರ್​ ಆಗಿದ್ದ ರಜತ್ ಪಾಟಿದಾರ್, 2024ರ ಸೈಯದ್ ಮುಷ್ತಾಕ್ ಆಲಿ ಟೂರ್ನಿಯಲ್ಲಿ ಮಧ್ಯ ಪ್ರದೇಶ ನಾಯಕರಾಗಿ ನೇಮಕವಾಗಿದ್ದರು. ಆದ್ರೆ, ಮೊದಲ ನಾಯಕತ್ವದ ಅಗ್ನಿಪರೀಕ್ಷೆಯಲ್ಲೇ ರಜತ್​ ಪಾಟಿದಾರ್​ ಕಂಡಿದ್ದು ಸಕ್ಸಸ್​. 

ನಾಯಕನಾಗಿ ಸೈಯದ್ ಮುಷ್ತಾಕ್ ಅಲಿಯಲ್ಲಿ ಮಧ್ಯಪ್ರದೇಶವನ್ನ ಯಶಸ್ವಿಯಾಗಿ ಮುನ್ನಡೆಸಿದ ಪಾಟಿದಾರ್​, ಆಡಿದ 10 ಪಂದ್ಯಗಳ ಪೈಕಿ 8ರಲ್ಲಿ ಗೆಲುವಿನ ದಡ ಸೇರಿಸಿದ್ದರು. ಒತ್ತಡದ ಸನ್ನಿವೇಶಗಳಲ್ಲೇ ಬ್ಯಾಟಿಂಗ್ ಮಾಡಿದ್ದ ರಜತ್​,  61.14 ಸರಾಸರಿಯಲ್ಲಿ ಬರೋಬ್ಬರಿ 428 ರನ್ ಕಲೆಹಾಕಿದ್ದರು. 186.04 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿದ್ದ ರಜತ್​, ನಾಯಕನಾಗಿಯೂ ಸಕ್ಸಸ್​ ಕಂಡಿದ್ರು. ಮೊದಲ ಅವಕಾಶದಲ್ಲೇ ತಂಡವನ್ನ ಫೈನಲ್​ಗೆ ಕೊಂಡೊಯ್ದಿದ್ರು.ಇದೇ ಆರ್​ಸಿಬಿ ನಾಯಕತ್ವದ ಪಟ್ಟಕ್ಕೇರುವಂತೆ ಮಾಡಿತ್ತು.

ಐಪಿಎಲ್​​ನಲ್ಲಿ ರಜತ್ ‘ಚಾಂಪಿಯನ್’ ಕ್ಯಾಪ್ಟನ್..!

ದೇಶಿ ಕ್ರಿಕೆಟ್​ನಲ್ಲಿ ಟಿ20ನಲ್ಲಿ ಗೆದ್ದಿದ್ದ ರಜತ್, ಐಪಿಎಲ್​ನಲ್ಲಿ ಗೆಲ್ಲೋದು ನಿಜಕ್ಕೂ ಅಷ್ಟು ಸುಲಭದಿರಲಿಲ್ಲ. ದಿ ಬೆಸ್ಟ್ ಟೀಮ್ಸ್​, 18 ವರ್ಷ ಕಪ್ ಗೆಲ್ಲದ ಒತ್ತಡ. ಗ್ರೇಟ್ ಪ್ಲೇಯರ್ಸ್​ನ ಮ್ಯಾನೇಜ್​ ಮಾಡೋದು ಚಾಲೆಂಜ್ ಎಲ್ಲವೂ ಇತ್ತು. ಆದ್ರೆ, ಇದನ್ನೇ ಛಲವಾಗಿ ಸ್ವೀಕರಿಸಿದ್ದ ರಜತ್​​, ನಾಯಕನಾಗಿ ಆನ್​ಫೀಲ್ಡ್​ನಲ್ಲಿ ಅದ್ಬುತ ಮೆಚ್ಯುರಿಟಿ ತೋರಿದರು. ಆಟಗಾರರ ಜೊತೆಗಿನ ಕಮ್ಯುನಿಕೇಷನ್ ಹಾಗೂ ನಿರ್ಧಾರಗಳಿಂದ ಎಲ್ಲರ ಮನ ಗೆದ್ದಿದ್ದ ರಜತ್ ಪಾಟಿದಾರ್, ಆನ್​ಫೀಲ್ಡ್​ನಲ್ಲಿ ಬ್ಯಾಟ್​ನಿಂದಲೇ ಅಲ್ಲ. ನಾಯಕನಾಗಿಯೂ ಆರ್​ಸಿಬಿ ಯಶಸ್ಸಿನ ಹಾದಿಯಲ್ಲಿ ಮುನ್ನಡೆಸಿದರು. ತಂಡವನ್ನ ಚಾಂಪಿಯನ್ ಪಟ್ಟಕ್ಕೇರಿಸಿದ್ದರು.

ಇದನ್ನೂ ಓದಿ:ಹೊಸ ಗರ್ಲ್​ಫ್ರೆಂಡ್​ ಜೊತೆ ಸ್ಟಾರ್ ಆಲ್​​ರೌಂಡರ್​ ಹಾರ್ದಿಕ್ ಪಾಂಡ್ಯ.. ಯಾರು ಈ ಬ್ಯೂಟಿ?

Rajat_Patidar_IPL

ವೆಸ್ಟ್ ಇಂಡೀಸ್ ಎದುರು ಕಮ್​ಬ್ಯಾಕ್ ಮಾಡ್ತಾರಾ ರಜತ್?

ಐಪಿಎಲ್ ಮುಕ್ತಾಯದ ಬಳಿಕ ರಜತ್ ಕಾಣಿಸಿಕೊಂಡಿದ್ದೆ ದುಲೀಪ್ ಟ್ರೋಫಿಯಲ್ಲಿ ನಾಯಕನಾಗಿ ತಂಡವನ್ನು ಮುನ್ನಡೆಸಿದ್ದಾರೆ. ಒಬ್ಬ ಬ್ಯಾಟ್ಸ್​ಮನ್ ಆಗಿಯೂ ರನ್ ಕೊಳ್ಳೆ ಹೊಡೆದರು. 3 ಪಂದ್ಯಗಳಿಂದ 76.40ರ ಬ್ಯಾಟಿಂಗ್ ಅವರೇಜ್​​ನಲ್ಲಿ 382 ರನ್ ಗಳಿಸಿದ ರಜತ್, ಸೆಂಟ್ರಲ್ ಝೋನ್​ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದರು. 

ಇದೇ ಪ್ರದರ್ಶನ ಭಾರತ ಎ ತಂಡದ ನಾಯಕ ಪಟ್ಟ ಸಿಗುವಂತೆ ಮಾಡಿದೆ. ಅಷ್ಟೇ ಅಲ್ಲ, ರಜತ್ ಪಾಟಿದಾರ್​​ ಕಮ್​ಬ್ಯಾಕ್ ಕನಸಿಗೆ ನೀರೆರೆದಿದೆ. ಸಿಕ್ಕ ಅವಕಾಶದಲ್ಲಿ ಮಿಂಚಿದ್ರೆ, ಟೀಮ್​ ಇಂಡಿಯಾಗೆ ಕಮ್​ಬ್ಯಾಕ್​ ಮಾಡೋ ದಿನ ದೂರವಿಲ್ಲ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ 

Phil Salt RCB RCB CARES Rajat Patidar SIM card story Rajat Patidar
Advertisment