/newsfirstlive-kannada/media/media_files/2025/08/26/kl_rahul_siraj-2025-08-26-14-57-54.jpg)
ಬಿಸಿಸಿಐ VS ಪ್ಲೇಯರ್ಸ್ ಆಯ್ತು, ಈಗ ಬಿಸಿಸಿಐ VS ಸೆಲೆಕ್ಟರ್ಸ್ ಸಂಘರ್ಷ ಶುರುವಾಗಿದೆ. ಬಿಸಿಸಿಐ ನಿಯಮಗಳನ್ನ ಸೌತ್ಝೋನ್ ಸೆಲೆಕ್ಟರ್ಸ್ ಗಾಳಿಗೆ ತೂರಿದ್ದಾರೆ. ಈ ಗುದ್ದಾಟದಲ್ಲಿ ಕೆ.ಎಲ್ ರಾಹುಲ್, ಪ್ರಸಿದ್ಧ್ ಕೃಷ್ಣ, ಮೊಹಮ್ಮದ್ ಸಿರಾಜ್ಗೆ ಲಾಟರಿ ಹೊಡೆದಿದೆ. ಬರೋಬ್ಬರಿ 2 ತಿಂಗಳ ಸುದೀರ್ಘ ರೆಸ್ಟ್ ಸಿಗುವಂತಾಗಿದೆ.
ಡೊಮೆಸ್ಟಿಕ್ ಕ್ರಿಕೆಟ್ನ ಪ್ರತಿಷ್ಠಿತ ಟೂರ್ನಿ ದುಲೀಪ್ ಟ್ರೋಫಿ ಆರಂಭಕ್ಕೆ ಕೌಂಟ್ಡೌನ್ ಶುರುವಾಗಿದೆ. ಅಗಸ್ಟ್ 28ರಿಂದ ಟೂರ್ನಿ ಆರಂಭವಾಗಲಿದ್ದು, ಟೀಮ್ ಅನೌನ್ಸ್ ಆದ ಬೆನ್ನಲ್ಲೇ ತಂಡಗಳಲ್ಲಿ ಸಿದ್ಧತೆಯೂ ಆರಂಭವಾಗಿದೆ. ಟೀಮ್ ಇಂಡಿಯಾ ಟೆಸ್ಟ್ ಕ್ಯಾಪ್ಟನ್ ಶುಭ್ಮನ್ ಗಿಲ್, ಆರ್ಷ್ದೀಪ್ ಸಿಂಗ್, ಹರ್ಷಿತ್ ರಾಣಾ, ಮೊಹಮ್ಮದ್ ಶಮಿ, ಯಶಸ್ವಿ ಜೈಸ್ವಾಲ್, ಶ್ರೇಯಸ್ ಅಯ್ಯರ್, ದೃವ್ ಜುರೇಲ್ ಸೇರಿದಂತೆ ಟೆಸ್ಟ್ ತಂಡದ ಪ್ರಮುಖ ಆಟಗಾರರೆಲ್ಲಾ ದೇಶಿ ಕ್ರಿಕೆಟ್ ಕಣಕ್ಕೆ ಇಳಿಯಲು ಸಜ್ಜಾಗಿದ್ದಾರೆ.
BCCI ಬಾಸ್ಗಳ ಸೂಚನೆಗೆ ಡೋಂಟ್ಕೇರ್.!
ಕಳೆದ ವರ್ಷವೇ ಟೀಮ್ ಇಂಡಿಯಾ ಆಟಗಾರರು ಯಾವುದೇ ಸರಣಿ ಇಲ್ಲದೇ ಇರೋ ಸಮಯದಲ್ಲಿ ಡೊಮೆಸ್ಟಿಕ್ ಕ್ರಿಕೆಟ್ ಆಡೋದು ಕಡ್ಡಾಯ ಎಂಬ ನಿಯಮ ಜಾರಿಗೊಳಿಸಿದೆ. ಹೀಗಾಗಿಯೇ ಕ್ಯಾಪ್ಟನ್ ಶುಭ್ಮನ್ ಗಿಲ್ ಸೇರಿದಂತೆ ಹಲ ಆಟಗಾರರು ದುಲೀಪ್ ಟ್ರೋಫಿ ಆಡ್ತಿದ್ದಾರೆ. ಸೆಂಟ್ರಲ್ ಝೋನ್, ವೆಸ್ಟ್ ಝೋನ್, ಈಸ್ಟ್ ಝೋನ್, ನಾರ್ಥ್ ಝೋನ್ ತಂಡಗಳಲ್ಲಿ ಸ್ಟಾರ್ಗಳಿಗೆ ಸ್ಥಾನ ನೀಡಲಾಗಿದೆ. ಆದ್ರೆ, ಸೌತ್ ಝೋನ್ ತಂಡದ ಮಾತ್ರ ಬಾಸ್ಗಳ ಸೂಚನೆಗೆ ಡೋಂಟ್ಕೇರ್ ಎಂದಿದೆ.
ನಿಯಮ ಗಾಳಿಗೆ ತೂರಿದ ಸೌತ್ ಝೋನ್.!
ಉಳಿದೆಲ್ಲಾ ತಂಡಗಳು ಟೀಮ್ ಇಂಡಿಯಾದ ಟೆಸ್ಟ್ ಪ್ಲೇಯರ್ಗಳಿಗೆ ಆದ್ಯತೆಯ ಮೇಲೆ ತಂಡದಲ್ಲಿ ಸ್ಥಾನ ನೀಡಿವೆ. ಆದ್ರೆ, ಸೌತ್ ಝೋನ್ ಮಾತ್ರ ಸ್ಟಾರ್ಗಳನ್ನ ಬಿಟ್ಟು ಟೀಮ್ ಸೆಲೆಕ್ಟ್ ಮಾಡಿದೆ. ನಿಜ ಹೇಳಬೇಕಂದ್ರೆ ಟೆಸ್ಟ್ ತಂಡದ ಭಾಗವಾಗಿರೋ ಒಬ್ಬೇ ಒಬ್ಬ ಆಟಗಾರನನ್ನ ತಂಡಕ್ಕೆ ಆಯ್ಕೆ ಮಾಡಿಲ್ಲ. ಇಂಗ್ಲೆಂಡ್ ಪ್ರವಾಸ ಮುಗಿಸಿ ಬಂದವರಿಗೆ ಮತ್ತಷ್ಟು ರೆಸ್ಟ್ ನೀಡಲಾಗ್ತಿದೆ.
ರಾಹುಲ್, ಸಿರಾಜ್, ಪ್ರಸಿದ್ಧ್ಗೆ ಫುಲ್ ರೆಸ್ಟ್.!
ಟೀಮ್ ಇಂಡಿಯಾ ಟೆಸ್ಟ್ ತಂಡದ ಭಾಗವಾಗಿರೋ ಕೆ.ಎಲ್ ರಾಹುಲ್, ಮೊಹಮ್ಮದ್ ಸಿರಾಜ್, ಪ್ರಸಿದ್ಧ ಕೃಷ್ಣ, ವಾಷಿಂಗ್ಟನ್ ಸುಂದರ್ ಇಂಗ್ಲೆಂಡ್ ಪ್ರವಾಸ ಮುಗಿಸಿ ಬಂದು 2 ವಾರಗಳೇ ಉರುಳಿವೆ. ಸತತ ಕ್ರಿಕೆಟ್ ಆಡಿ ದಣಿದಿದ್ದ ಆಟಗಾರರು ವಿಶ್ರಾಂತಿ ಪಡೆದು ರೆಡಿಯಾಗಿದ್ದಾರೆ. ಮುಂಬರೋ ಏಷ್ಯಾಕಪ್ ತಂಡದಲ್ಲೂ ಇವರ್ಯಾರೂ ಇಲ್ಲ. ಆದ್ರೂ ಇವರನ್ನ ಸೌತ್ ಝೋನ್ ಟೀಮ್ ಸೆಲೆಕ್ಷನ್ಗೆ ಪರಿಗಣಿಸಿಲ್ಲ. ಮುಂದೆ ಇವ್ರು ಕಣಕ್ಕಿಳಿಯೋದು ಅಕ್ಟೋಬರ್ನಲ್ಲಿ ನಡೆಯೋ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ. ಅಂದ್ರೆ ಸುದೀರ್ಘ 2 ತಿಂಗಳ ವಿಶ್ರಾಂತಿ ಇವ್ರಿಗೆ ಸಿಗಲಿದೆ.
ಇದನ್ನೂ ಓದಿ:ಏಷ್ಯಾ ಕಪ್ ಆಯ್ಕೆಯಲ್ಲಿ ಕನ್ನಡಿಗ ಪ್ರಸಿದ್ಧ್ ಕೃಷ್ಣಗೆ ಅನ್ಯಾಯ.. ಗಂಭೀರ್ ಸರ್ವಾಧಿಕಾರತ್ವ ಹೇಗಿದೆ?
ಸ್ಟಾರ್ಗಳಿಗೆ ಚಾನ್ಸ್ ಕೊಡಲ್ಲ ಅಂದಿದ್ಯಾಕೆ.?
ಬಿಸಿಸಿಐ ನಿಯಮವನ್ನ ಸೌತ್ಝೋನ್ ಗಾಳಿಗೆ ತೂರಿರೋದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಬಿಸಿಸಿಐ vs ಸೌತ್ಝೋನ್ ಸೆಲೆಕ್ಟರ್ಸ್ ಸಂಘರ್ಷ ಶುರುವಾಗಿದೆ. ಆದ್ರೆ, ಇದಕ್ಕೆ ಸೌತ್ಝೋನ್ ತನ್ನದೆ ಆದ ಸಮರ್ಥನೆ ಕೊಡ್ತಿದೆ. ನಾವು ನಮ್ಮ ಕೋರ್ ಟೀಮ್ ಅನ್ನೇ ಆಡಿಸೋದು ಅನ್ನೋದು ಸೌತ್ ಝೋನ್ನ ಸೆಲೆಕ್ಟರ್ಸ್ ವಾದವಾಗಿದೆ. ಟೀಮ್ ಇಂಡಿಯಾ ಸ್ಟಾರ್ಗಳಿಗಿಂತ ಯುವ ಆಟಗಾರರಿಗೆ ನಾವು ಹೆಚ್ಚಿನ ಆದ್ಯತೆ ನೀಡ್ತಿವಿ ಎಂದು ಸೌತ್ಝೋನ್ ಹೇಳ್ತಿದೆ.
ಕಳೆದ ವರ್ಷವೇ ಬಿಸಿಸಿಐ ಸೆಂಟ್ರಲ್ ಕಾಂಟ್ರ್ಯಾಕ್ಟ್ನಲ್ಲಿರೋ ಆಟಗಾರರು ಟೀಮ್ ಇಂಡಿಯಾದ ಯಾವುದೇ ಸರಣಿಗಳಿಲ್ಲದೆ ಇದ್ರೆ ಡೊಮೆಸ್ಟಿಕ್ ಕ್ರಿಕೆಟ್ ಆಡೋದು ಕಡ್ಡಾಯ ಎಂಬ ರೂಲ್ಸ್ ಮಾಡಿದೆ. ಇದನ್ನ ಉಲ್ಲಂಘಿಸಿದ ಶ್ರೇಯಸ್ ಅಯ್ಯರ್ ನಿಷೇಧ ಶಿಕ್ಷೆ ಅನುಭವಿಸಿ ವಾಪಾಸ್ಸಾಗಿದ್ರೆ, ಇಶನ್ ಕಿಶನ್ ಇನ್ನೂ ವನವಾಸದಲ್ಲೇ ಇದ್ದಾರೆ. ಆದ್ರೆ, ಈ ವರ್ಷ ಆಟಗಾರರು ಬದಲು ಸೆಲೆಕ್ಟರ್ಸ್ ಆಟಗಾರರನ್ನ ಹೊರಗಿಟ್ಟಿದ್ದಾರೆ. ಇದಕ್ಕೆ ಬಿಸಿಸಿಐ ಬಾಸ್ಗಳು ಹೇಗೆ ರಿಯಾಕ್ಟ್ ಮಾಡ್ತಾರೆ ಅನ್ನೋದು ಸದ್ಯದ ಕುತೂಹಲ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ