/newsfirstlive-kannada/media/media_files/2025/08/07/siraj_kl_rahul-2025-08-07-12-56-33.jpg)
ಇಂಗ್ಲೆಂಡ್​ ವಿರುದ್ಧದ ಕೊನೆಯ ಟೆಸ್ಟ್​ ಪಂದ್ಯದಲ್ಲಿ ಮೊನ್ನೆ ಜಯಭೇರಿ ಬಾರಿಸಿದ್ದ ಟೀಮ್ ಇಂಡಿಯಾ ಸರಣಿ ಸಮಬಲ ಸಾಧಿಸಿತ್ತು. ಅಂತಿಮ ಪಂದ್ಯವನ್ನು ಗೆಲ್ಲಲು ಮುಖ್ಯ ಪಾತ್ರ ವಹಿಸಿದ್ದ ಮೊಹಮ್ಮದ್​ ಸಿರಾಜ್​ಗೆ ಎಲ್ಲೆಡೆಯಿಂದ ಪ್ರಶಂಸೆಗಳು ಹರಿದು ಬರುತ್ತಿವೆ. ಇದೀಗ ಹೈದರಾಬಾದ್​ನ ಸಂಸದ ಎಐಎಂಐಎಂ ಮುಖ್ಯಸ್ಥ ಅಸಾಸುದ್ದೀನ್​ ಓವೈಸಿ ಅವರು, ಸಿರಾಜ್​ಗೆ ಎಲ್ಲ ಮುಗಿಸಿದ್ದೀಯಾ ಪಾಷಾ ಎಂದು ಹೇಳಿದ್ದಾರೆ.
ಪಂದ್ಯ ಗೆದ್ದ ದಿನವೇ ಮೊಹಮ್ಮದ್ ಸಿರಾಜ್​ ಮಾರಕ ಬೌಲಿಂಗ್​ ಬಗ್ಗೆ ಕಿಂಗ್ ಕೊಹ್ಲಿ ಎಕ್ಸ್​ ಪೋಸ್ಟ್​ ಶೇರ್ ಮಾಡಿದ್ದರು. ಇದರಲ್ಲಿ ಟೀಮ್ ಇಂಡಿಯಾವನ್ನ ಗೆಲ್ಲಿಸಿದ್ದಕ್ಕಾಗಿ ಮೊಹಮ್ಮದ್ ಸಿರಾಜ್ ಹಾಗೂ ಪ್ರಸಿದ್ಧ್ ಕೃಷ್ಣಗೆ ಫುಲ್ ಕ್ರೆಡಿಟ್ ಕೊಟ್ಟಿದ್ದರು. ಇದರ ಬೆನ್ನಲ್ಲೇ ಸಚಿನ್ ಕೂಡ ಭಾರತ ಗೆಲುವಿನ ಕುರಿತು ಟ್ವೀಟ್ ಮಾಡಿದ್ದರು. ಇದೀಗ ಸಿರಾಜ್​ ಬೌಲಿಂಗ್​ ಪ್ರದರ್ಶನದ ಬಗ್ಗೆ ಸಂಸದ ಅಸಾಸುದ್ದೀನ್​ ಓವೈಸಿ ಹಾಡಿ ಹೊಗಳಿದ್ದಾರೆ.
ಹೈದರಾಬಾದ್​ನ ಸಂಸದ ಎಐಎಂಐಎಂ ಮುಖ್ಯಸ್ಥ ಅಸಾಸುದ್ದೀನ್​ ಓವೈಸಿ ಅವರು, ಈ ಬಗ್ಗೆ ತಮ್ಮ ಎಕ್ಸ್​ ಖಾತೆಯಲ್ಲಿ ಪೋಸ್ಟ್ ಶೇರ್ ಮಾಡಿದ್ದಾರೆ. ಮೊಹಮ್ಮದ್ ಸಿರಾಜ್ ಯಾವಾಗಲೂ ವಿನ್ನರ್​. ಪಂದ್ಯದಲ್ಲಿ ಎಲ್ಲ ನೀನೇ ಮುಗಿಸಿದ್ದೀಯಾ ಪಾಶಾ!. (As we say in Hyderabadi, poora khol diye Pasha!) ಎಂದು ಬರೆದು ಪೋಸ್ಟ್ ಹಂಚಿಕೊಂಡಿದ್ದಾರೆ. ಇನ್ನು ಇದಕ್ಕೆ ಪ್ರತಿಕ್ರಿಯಿಸಿರುವ ಸಿರಾಜ್,​ ಥ್ಯಾಂಕ್ಸ್ ಸರ್, ಯಾವಾಗಲೂ ಬೆಂಬಲ ಹೀಗೆ ಇರಲಿ ಎಂದು ಹೇಳಿದ್ದಾರೆ.
ಅಂತಿಮ ಟೆಸ್ಟ್​ನ 5ನೇ ದಿನದಲ್ಲಿ ಇಂಗ್ಲೆಂಡ್​ ಗೆಲ್ಲಲು ಕೇವಲ 6 ರನ್​ಗಳು ಬೇಕಿದ್ದವು. ಈ ವೇಳೆ ಟೀಮ್ ಇಂಡಿಯಾ ಗೆಲ್ಲಲು ಒಂದು ವಿಕೆಟ್ ಬೇಕಿತ್ತು. ಇದೇ ವೇಳೆ ನಾಯಕ ಗಿಲ್ ಅವರು ಚೆಂಡನ್ನು ಸಿರಾಜ್​ ಕೈಗೆ ನೀಡಿದರು. ಆಗ ಕೊನೆ ವಿಕೆಟ್ ಉರುಳಿಸಿದ ಸಿರಾಜ್, 2ನೇ ಇನ್ನಿಂಗ್ಸ್​ನಲ್ಲಿ ಭರ್ಜರಿಯಾಗಿ 5 ವಿಕೆಟ್​ ಪಡೆಯುವ ಮೂಲಕ ಗೆಲುವಿಗೆ ಮಹತ್ತದ ಪಾತ್ರ ವಹಿಸಿದ್ದರು. ಇದು ಅಲ್ಲದೇ ಇಂಗ್ಲೆಂಡ್​ ವಿರುದ್ಧದ 5 ಪಂದ್ಯಗಳ ಟೆಸ್ಟ್​​ ಸರಣಿಯಲ್ಲಿ ಒಟ್ಟು 23 ವಿಕೆಟ್ ಪಡೆದು ಹೆಚ್ಚು ವಿಕೆಟ್ ಪಡೆದವರು ಎನಿಸಿಕೊಂಡರು.
Always a winner @mdsirajofficial! As we say in Hyderabadi, poora khol diye Pasha! pic.twitter.com/BJFqkBzIl7
— Asaduddin Owaisi (@asadowaisi) August 4, 2025
ಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್​​ನಲ್ಲಿ ‘ರನ್ ಮಿ’ ವೀಕ್ಷಿಸಿ