/newsfirstlive-kannada/media/media_files/2025/09/03/rahul-dravid-2-2025-09-03-18-54-44.jpg)
ಮುಂಬರುವ ಐಪಿಎಲ್​ ಟೂರ್ನಿಗೂ ಮುನ್ನ ರಾಜಸ್ಥಾನ್​ ರಾಯಲ್ಸ್​ ತಂಡದಲ್ಲಿ ಅಲ್ಲೋಲ ಕಲ್ಲೋಲವೇ ಸೃಷ್ಟಿಯಾಗಿದೆ. ಸಂಜು ಸ್ಯಾಮ್ಸನ್​, ರಾಹುಲ್​ ದ್ರಾವಿಡ್​. ಕ್ಯಾಪ್ಟನ್​​-ಕೋಚ್​ ಇಬ್ಬರೂ ತಂಡದಿಂದ ಹೊರ ಬರುವ ನಿರ್ಧಾರ ಮಾಡಿ ಫ್ಯಾನ್ಸ್​​ಗೆ ಶಾಕ್​ ಕೊಟ್ಟಿದ್ದಾರೆ.
ದ್ರಾವಿಡ್​​​ ತಲೆದಂಡಕ್ಕೆ ಕಾರಣ ಏನು?
ರಾಜಸ್ಥಾನ್​ ರಾಯಲ್ಸ್​ ತಂಡದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿರೋದಕ್ಕೆ ಮುಖ್ಯ ಕಾರಣವೇ ರಿಯಾನ್​ ಪರಾಗ್​. ಪರಾಗ್​​ ಮೇಲೆ ಫ್ರಾಂಚೈಸಿ ಮಾಲೀಕರಿಗೆ ವಿಪರೀತ ವ್ಯಾಮೋಹ. 2019ರಿಂದ ತಂಡದಲ್ಲಿರೋ ಪರಾಗ್​ನ ರಾಜಸ್ಥಾನದ ನೂತನ ರಾಜನನ್ನಾಗಿ ಮಾಡೋಕೆ ಫ್ರಾಂಚೈಸಿ ಹೊರಟಿದೆ. ಈ ನಿರ್ಧಾರವೇ ಅಲ್ಲೋಲ ಕಲ್ಲೋಲಕ್ಕೆ ಕಾರಣ.
ರಾಹುಲ್​ ದ್ರಾವಿಡ್​​ರ​ ಮುಂದಿನ ನಡೆ ಏನು?
ರಾಜಸ್ಥಾನ್​ ರಾಯಲ್ಸ್​​ಗೆ ಗುಡ್​​ ಬೈ ಹೇಳಿದ ರಾಹುಲ್​ ದ್ರಾವಿಡ್​​​ರ ಮುಂದಿನ ನಡೆ ಏನು ಅನ್ನೋದು ಕ್ರಿಕೆಟ್​​ ವಲಯದ ಕುತೂಹಲದ ಪ್ರಶ್ನೆ. ಹೊಸ ಕೋಚ್​ ಹುಡುಕಾಟದಲ್ಲಿರೋ 2 ಬಾರಿಯ ಚಾಂಪಿಯನ್​ ತಂಡ ಕೊಲ್ಕತ್ತಾ ನೈಟ್​ ರೈಡರ್ಸ್​​​ ದ್ರಾವಿಡ್​​ನ ಅಪ್ರೋಚ್​ ಮಾಡಿದೆ.
ದ್ರಾವಿಡ್​ ಫೈನಲ್​ ನಿರ್ಧಾರ ತಿಳಿಸಿಲ್ಲ. ಇದ್ರ ನಡುವೆ ಸಂಜು ಸ್ಯಾಮ್ಸನ್​ಗೂ ಕೆಕೆಆರ್​ ಗಾಳ ಹಾಕ್ತಿದೆ. ಎಲ್ಲಾ ಅಂದುಕೊಂಡಂತೆಯಾದರೆ ಕೆಕೆಆರ್​ ತಂಡದಲ್ಲಿ ಮತ್ತೊಮ್ಮೆ ಗುರು-ಶಿಷ್ಯರ ಸಮಾಗಮವಾಗಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ