/newsfirstlive-kannada/media/media_files/2025/09/03/rahul-dravid-2-2025-09-03-18-54-44.jpg)
ಮುಂಬರುವ ಐಪಿಎಲ್ ಟೂರ್ನಿಗೂ ಮುನ್ನ ರಾಜಸ್ಥಾನ್ ರಾಯಲ್ಸ್ ತಂಡದಲ್ಲಿ ಅಲ್ಲೋಲ ಕಲ್ಲೋಲವೇ ಸೃಷ್ಟಿಯಾಗಿದೆ. ಸಂಜು ಸ್ಯಾಮ್ಸನ್, ರಾಹುಲ್ ದ್ರಾವಿಡ್. ಕ್ಯಾಪ್ಟನ್-ಕೋಚ್ ಇಬ್ಬರೂ ತಂಡದಿಂದ ಹೊರ ಬರುವ ನಿರ್ಧಾರ ಮಾಡಿ ಫ್ಯಾನ್ಸ್ಗೆ ಶಾಕ್ ಕೊಟ್ಟಿದ್ದಾರೆ.
ದ್ರಾವಿಡ್ ತಲೆದಂಡಕ್ಕೆ ಕಾರಣ ಏನು?
ರಾಜಸ್ಥಾನ್ ರಾಯಲ್ಸ್ ತಂಡದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿರೋದಕ್ಕೆ ಮುಖ್ಯ ಕಾರಣವೇ ರಿಯಾನ್ ಪರಾಗ್. ಪರಾಗ್ ಮೇಲೆ ಫ್ರಾಂಚೈಸಿ ಮಾಲೀಕರಿಗೆ ವಿಪರೀತ ವ್ಯಾಮೋಹ. 2019ರಿಂದ ತಂಡದಲ್ಲಿರೋ ಪರಾಗ್ನ ರಾಜಸ್ಥಾನದ ನೂತನ ರಾಜನನ್ನಾಗಿ ಮಾಡೋಕೆ ಫ್ರಾಂಚೈಸಿ ಹೊರಟಿದೆ. ಈ ನಿರ್ಧಾರವೇ ಅಲ್ಲೋಲ ಕಲ್ಲೋಲಕ್ಕೆ ಕಾರಣ.
ರಾಹುಲ್ ದ್ರಾವಿಡ್ರ ಮುಂದಿನ ನಡೆ ಏನು?
ರಾಜಸ್ಥಾನ್ ರಾಯಲ್ಸ್ಗೆ ಗುಡ್ ಬೈ ಹೇಳಿದ ರಾಹುಲ್ ದ್ರಾವಿಡ್ರ ಮುಂದಿನ ನಡೆ ಏನು ಅನ್ನೋದು ಕ್ರಿಕೆಟ್ ವಲಯದ ಕುತೂಹಲದ ಪ್ರಶ್ನೆ. ಹೊಸ ಕೋಚ್ ಹುಡುಕಾಟದಲ್ಲಿರೋ 2 ಬಾರಿಯ ಚಾಂಪಿಯನ್ ತಂಡ ಕೊಲ್ಕತ್ತಾ ನೈಟ್ ರೈಡರ್ಸ್ ದ್ರಾವಿಡ್ನ ಅಪ್ರೋಚ್ ಮಾಡಿದೆ.
ದ್ರಾವಿಡ್ ಫೈನಲ್ ನಿರ್ಧಾರ ತಿಳಿಸಿಲ್ಲ. ಇದ್ರ ನಡುವೆ ಸಂಜು ಸ್ಯಾಮ್ಸನ್ಗೂ ಕೆಕೆಆರ್ ಗಾಳ ಹಾಕ್ತಿದೆ. ಎಲ್ಲಾ ಅಂದುಕೊಂಡಂತೆಯಾದರೆ ಕೆಕೆಆರ್ ತಂಡದಲ್ಲಿ ಮತ್ತೊಮ್ಮೆ ಗುರು-ಶಿಷ್ಯರ ಸಮಾಗಮವಾಗಲಿದೆ.
ಇದನ್ನೂ ಓದಿ:‘ನಾವು ರವಿ ಬೆಳಗೆರೆ ಕಡೆಯವರು ಸ್ವಾಮಿ..’ ದರ್ಶನ್ ಕೇಸ್ ವಿಚಾರಣೆ ವೇಳೆ ಕೋರ್ಟ್ನಲ್ಲಿ ಅನಾಮಿಕ ಟ್ವಿಸ್ಟ್..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ