/newsfirstlive-kannada/media/media_files/2025/09/15/rajat_patidar-1-2025-09-15-16-31-27.jpg)
ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡದ ಕ್ಯಾಪ್ಟನ್​ ರಜತ್ ಪಾಟೀದಾರ್​ ಅವರ ಮಡಿಲಿಗೆ ಮತ್ತೊಂದು ಟ್ರೋಫಿ ಒಲಿದು ಬಂದಿದೆ. ರಜತ್ ಪಾಟೀದಾರ್ ನೇತೃತ್ವದ ಕೇಂದ್ರ ವಲಯ ತಂಡ (Central Zone) 2025-26ನೇ ಸಾಲಿನ ದುಲೀಪ್ ಟ್ರೋಫಿಗೆ ಮುತ್ತಿಕ್ಕಿದೆ. ಈ ಮೂಲಕ ಒಂದೇ ವರ್ಷದಲ್ಲಿ ಆರ್​ಸಿಬಿ ನಾಯಕ ಎರಡು ಕಪ್​ಗಳನ್ನು ಗೆದ್ದುಕೊಂಡಂತೆ ಆಗಿದೆ.
ಬೆಂಗಳೂರಿನಲ್ಲಿ ನಡೆದ ದುಲೀಪ್ ಟ್ರೋಫಿಯ ಫೈನಲ್​ ಪಂದ್ಯದಲ್ಲಿ ಕೇಂದ್ರ ವಲಯದ ಕ್ಯಾಪ್ಟನ್ ರಜತ್ ಪಾಟೀದಾರ್ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿದರು. ಎದುರಾಳಿ ದಕ್ಷಿಣ ವಲಯವನ್ನು ಮೊದಲ ಬ್ಯಾಟಿಂಗ್​ಗೆ ಆಹ್ವಾನ ಮಾಡಿದರು. ಅದರಂತೆ ಮೊದಲ ಇನ್ನಿಂಗ್ಸ್​ನಲ್ಲಿ ದಕ್ಷಿಣ ವಲಯ ವಿಫಲ ಬ್ಯಾಟಿಂಗ್​ ಪರ್ಫಾಮೆನ್ಸ್​ ನೀಡಿ ಕೇವಲ 149ಗೆ ಆಲೌಟ್​ ಆಯಿತು.
ಇದನ್ನೂ ಓದಿ:ಪಾಕಿಸ್ತಾನಕ್ಕೆ ಗುಮ್ಮಿದ ಟೀಮ್ ಇಂಡಿಯಾ.. ಜಯಭೇರಿ ಬಾರಿಸಿದ ಸೂರ್ಯಕುಮಾರ್ ಸೇನೆ
/filters:format(webp)/newsfirstlive-kannada/media/media_files/2025/09/15/rajat_patidar_ipl-2025-09-15-16-31-38.jpg)
ಇದರ ನಂತರ ಮೊದಲ ಇನ್ನಿಂಗ್ಸ್​ನಲ್ಲಿ ಬ್ಯಾಟಿಂಗ್ ಮಾಡಿದ ಕೇಂದ್ರ ವಲಯ, ಕ್ಯಾಪ್ಟನ್​ ರಜತ್ ಪಾಟೀದಾರ್ ಸೆಂಚುರಿ ಹಾಗೂ ಯಶ್​ ರಾಥೋಡ್​ ಅವರ 194 ರನ್​ ಸಿಡಿಸಿದರು. ಹಾಗೂ ಡ್ಯಾನಿಶ್ ಮಾಲೆವಾರ್, ಸರನಶ್ ಜೈನ್ ಅವರ ಅರ್ಧ ಶತಕ ಬಾರಿಸಿದರು. ಇದರಿಂದ ಕೇಂದ್ರ ವಲಯ 511 ರನ್​ಗಳ ಬೃಹತ್​​ ರನ್​ಗಳನ್ನ ಕಲೆ ಹಾಕಿತು.
362 ರನ್​ಗಳ ಲೀಡ್​ ಪಡೆದ ದಕ್ಷಿಣ ವಲಯ ಬ್ಯಾಟಿಂಗ್ ಆರಂಭಿಸಿತು. 2ನೇ ಇನ್ನಿಂಗ್ಸ್​ನಲ್ಲಿ ಭರ್ಜರಿಯಾಗಿ ಬ್ಯಾಟ್ ಬೀಸಿದ ದಕ್ಷಿಣ ವಲಯ 426 ರನ್​ಗಳಿಗೆ ಆಲೌಟ್ ಆಯಿತು. ಇದರಿಂದ ಕೇವಲ 65 ರನ್​ಗಳ ಟಾರ್ಗೆಟ್​ ನೀಡಿದಂತೆ ಆಯಿತು. ಕೊನೆ ದಿನ ಅಂದರೆ ಪಂದ್ಯದ 5ನೇ ದಿನ ಈ ಸಣ್ಣ ಟಾರ್ಗೆಟ್​ ಬೆನ್ನು ಬಿದ್ದ ರಜತ್​ ಪಾಟೀದಾರ್ ನೇತೃತ್ವದ ಕೇಂದ್ರ ವಲಯ 4 ವಿಕೆಟ್​ ಕಳೆದುಕೊಂಡು ಗುರಿ ತಲುಪಿತು. 2025-26ನೇ ಸಾಲಿನ ದುಲೀಫ್​ ಟ್ರೋಫಿಯನ್ನು ರಜತ್ ನೇತೃತ್ವದ ಟೀಮ್ ಗೆದ್ದು ಸಂಭ್ರಮಿಸಿದರು.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us