ಮಿಡಿದ RCB.. ಸ್ಥಳೀಯರಿಗೆ ಉದ್ಯೋಗ, ಸ್ಮಾರಕ ಸೇರಿ ಕೆಲ ಯೋಜನೆಗೆ ಬಿಗ್ ಪ್ಲಾನ್!

ಚಿನ್ನಸ್ವಾಮಿ ಸ್ಟೇಡಿಯಂ ಸುತ್ತ ಆದ ಘಟನೆ ಇದೀಗ ಫ್ರಾಂಚೈಸಿಯನ್ನ ಎಚ್ಚರಿಸಿದಂತಿದೆ. ಮುಂದೆ ಇಂತಾ ಘಟನೆಗಳು ಆಗದಂತೆ ತಡೆಯೋಕೆ ಈಗಿನಿಂದಲೇ ಪ್ಲಾನ್​ ರೂಪಿಸೋ ಕೆಲಸಕ್ಕೂ ಕೈ ಹಾಕಿದೆ.

author-image
Bhimappa
RCB_WIN (1)
Advertisment

ಚೊಚ್ಚಲ ಕಪ್​ ಗೆದ್ದ ಸಂಭ್ರಮ ತಂದ ಸೂತಕದಿಂದ ರಾಯಲ್​​ ಚಾಲೆಂಜರ್ಸ್​​ ಬೆಂಗಳೂರು ಫ್ರಾಂಚೈಸಿ ನಿಧಾನವಾಗಿ ಹೊರಬರುತ್ತಿದೆ. ಕಾಲ್ತುಳಿತದ ಕಪ್​ಚುಕ್ಕೆಯನ್ನ ತೊಡೆದು ಹಾಕಲು ಹೊರಟಿರುವ ಫ್ರಾಂಚೈಸಿ ಇದೀಗ ದಿಟ್ಟ ಹೆಜ್ಜೆಯನ್ನಿಟ್ಟಿದೆ. ಮಾಡಿದ ತಪ್ಪಿಗೆ ಪಶ್ಚಾತಾಪ ಪಡುತ್ತಿರುವ ಫ್ರಾಂಚೈಸಿ ಅಭಿಮಾನಿಗಳಿಗಾಗಿ 6 ವಿಶೇಷ ಕಾರ್ಯಕ್ರಮ ರೂಪಿಸಿದೆ. 

ಜೂನ್​ 4ರಂದು ನಡೆದ ದುರ್ಘಟನೆಯ ಬಳಿಕ ಸುದೀರ್ಘ ಮೌನಕ್ಕೆ ಜಾರಿದ್ದ ಆರ್​​​ಸಿಬಿ ಅಗಸ್ಟ್​​ 28ರಂದು ಫ್ಯಾನ್ಸ್​ಗೆ ಭಾವನಾತ್ಮಕ ಪತ್ರ ಬರೆದಿತ್ತು. 3 ತಿಂಗಳ ಮೌನ ಮುರಿದು ಆರ್​​ಸಿಬಿ ಕೇರ್ಸ್​ ಅನ್ನೋ ಯೋಜನೆಯನ್ನ ರೂಪಿಸಿರೋದಾಗಿ ತಿಳಿಸಿತ್ತು. ಇಷ್ಟೇ ಅಲ್ಲ.. 2 ದಿನಗಳ ಹಿಂದೆ ಕಾಲ್ತುಳಿತ ದುರಂತದಲ್ಲಿ ಅಸುನೀಗಿದ ಕುಟುಂಬದವರಿಗೆ 10 ಲಕ್ಷದ ಬದಲಾಗಿ 25 ಲಕ್ಷ ಪರಿಹಾರ ನೀಡೋದಾಗಿ ಘೋಷಿಸಿತ್ತು. ಅದ್ರ ಜೊತೆಗೆ ಇದೀಗ ಮತ್ತೆ 6 ಯೋಜನೆಗಳನ್ನ ಅಭಿಮಾನಿಗಳಿಗಾಗಿ ಪರಿಚಯಿಸಿದೆ. 

RCB (37)

ಯೋಜನೆ 1- ಹಣಕಾಸು ನೆರವಿನ ಹೊರತಾಗಿ ಸಹಾಯಹಸ್ತ

ದುರಂತದಲ್ಲಿ ಮಡಿದವರಿಗೆ ಹಣಕಾಸಿನ ನೆರವು ಮಾತ್ರವಲ್ಲ, ಅದ್ರ ಹೊರತಾಗಿ ಸಹಾಯಹಸ್ತ ಚಾಚಲು ಆರ್​​ಸಿಬಿ ಮುಂದಾಗಿದೆ. ಅಂದು ಆದ ದುರಂತದಿಂದ ಯಾರಿಗೆಲ್ಲ ತೊಂದೆರೆ ಆಗಿದೆಯೋ ಅವರಿಗೆಲ್ಲ ವೇಗವಾಗಿ, ಪಾರದರ್ಶಕವಾಗಿ ನೆರವಿಗೆ ನಿಲ್ಲೋ ವಾಗ್ಧಾನ ಮಾಡಿದೆ. ಮುಖ್ಯವಾಗಿ ಹ್ಯೂಮನ್​​​​ ಸಪೋರ್ಟ್​ ಕೂಡ ನೀಡೋದಾಗಿ ತಿಳಿಸಿದೆ. 

ಯೋಜನೆ 2- ಕ್ರೌಡ್​ ಮ್ಯಾನೇಜ್​ಮೆಂಟ್​ಗೆ ಹೊಸ ನಿಯಮ

ಚಿನ್ನಸ್ವಾಮಿ ಸ್ಟೇಡಿಯಂ ಸುತ್ತ ಆದ ಘಟನೆ ಇದೀಗ ಫ್ರಾಂಚೈಸಿಯನ್ನ ಎಚ್ಚರಿಸಿದಂತಿದೆ. ಮುಂದೆ ಇಂತಾ ಘಟನೆಗಳು ಆಗದಂತೆ ತಡೆಯೋಕೆ ಈಗಿನಿಂದಲೇ ಪ್ಲಾನ್​ ರೂಪಿಸೋ ಕೆಲಸಕ್ಕೂ ಕೈ ಹಾಕಿದೆ. ಕೆಎಸ್​​ಸಿಎ, ಬಿಸಿಸಿಐ ಜೊತೆಗೂಡಿ ಕ್ರೌಡ್​​ ಮ್ಯಾನೇಜ್​ಮೆಂಟ್​​ಗೆ ಇನ್ನಷ್ಟು ಸುರಕ್ಷತಾ ಕ್ರಮಗಳನ್ನ ರೂಪಿಸೋದಾಗಿ ಹೇಳಿಕೊಂಡಿದೆ. 

ಯೋಜನೆ 3- ಮ್ಯಾನೇಜ್​ಮೆಂಟ್​ ಕಂಪನಿಗೆ ವಿಶೇಷ ತರಬೇತಿ

ಇವೆಂಟ್​ ಮ್ಯಾನೇಜ್​​ಮೆಂಟ್​ ಕಂಪನಿ ಜೊತೆಗೂ ಕ್ರೌಡ್​ ಮ್ಯಾನೇಜ್​ಮೆಂಟ್​​ಗೆ ಹೊಸ ಪ್ಲಾನ್​ಗಳನ್ನ ಆರ್​​ಸಿಬಿ ರೂಪಿಸಲಿದ್ಯಂತೆ. ಅದ್ರ ಜೊತೆಗೆ ಪ್ರತಿ ವರ್ಷ ಕ್ರೌಡ್​ನ ಹೇಗೆ ಮ್ಯಾನೇಜ್​ ಮಾಡಬೇಕು. ಎಮರ್ಜೆನ್ಸಿ ಸಂದರ್ಭಗಳಲ್ಲಿ ಹೇಗೆ ರೆಸ್ಪಾಂಡ್​ ಮಾಡಬೇಕು ಅನ್ನೋದರ ವಿಶೇಷವಾದ ತರಬೇತಿಯನ್ನ ನೀಡಲು ಆರ್​​ಸಿಬಿ ಮುಂದಾಗಿದೆ. 

ಯೋಜನೆ 4- ಸಮುದಾಯಗಳ ಸಬಲೀಕರಣಕ್ಕೆ ನೆರವು

ಕರ್ನಾಟಕದ ವಿವಿಧ ಭಾಗಗಳಲ್ಲಿರೋ ಹಲವು ಕಮ್ಯುನಿಟಿಗಳಿಗೂ ಸಹಾಯ ಹಸ್ತ ಚಾಚುವುದಾಗಿ ಆರ್​​ಸಿಬಿ ಫ್ರಾಂಚೈಸಿ ತಿಳಿಸಿದೆ. ಸಮಸ್ಯೆಗಳನ್ನ ಎದುರಿಸ್ತಿರೋ ಜನಾಂಗಗಳ ಶಿಕ್ಷಣ, ಆರೋಗ್ಯ ಸೇರಿದಂತೆ ಮೂಲಭೂತ ಅಗತ್ಯಗಳಿಗೆ ನೆರವಾಗಲು ಆರ್​​ಸಿಬಿ ಮುಂದಾಗಿದೆ. ಸಿದ್ಧಿ ಜನಾಂಗಕ್ಕೆ ಸಹಾಯ ಮಾಡುವುದರೊಂದಿಗೆ ಈ ಕೆಲಸ ಆರಂಭವಾಗಲಿದೆ ಎಂದು ಫ್ರಾಂಚೈಸಿ ತಿಳಿಸಿದೆ.  

ಯೋಜನೆ 5- ಬೆಂಗಳೂರಿನಲ್ಲಿ ವಿಶೇಷ ಸ್ಮಾರಕ ನಿರ್ಮಾಣ

ಅಭಿಮಾನಿಗಳಿಗಾಗಿಯೇ ಬೆಂಗಳೂರಿನಲ್ಲಿ ಸ್ಮಾರಕವೊಂದನ್ನ ನಿರ್ಮಿಸಲು ಕೂಡ ಆರ್​​ಸಿಬಿ ಪ್ಲಾನ್​ ರೂಪಿಸಿದೆ. ಕಾಲ್ತುಳಿತದ ದುರಂತದಲ್ಲಿ ಮಡಿದವರು ಸೇರಿದಂತೆ ವಿಶ್ವಾದ್ಯಂತ ಇರೋ ಆರ್​​ಸಿಬಿಯ ಅಭಿಮಾನಿಗಳ ಕತೆಗಳನ್ನ, ಹೆಸರುಗಳನ್ನ ವಿಶೇಷ ರೀತಿಯಲ್ಲಿ ಗೌರವಿಸೋದು ಈ ಸ್ಮಾರಕ ನಿರ್ಮಾಣದ ಹಿಂದಿರೋ ಉದ್ದೇಶ. 

ಇದನ್ನೂ ಓದಿ:S ಶ್ರೀಶಾಂತ್​ಗೆ ಇಂಜುರಿ ಆದ್ರೆ.. ಈ IPL ಫ್ರಾಂಚೈಸಿನ ಸುಪ್ರೀಂ ಕೋರ್ಟ್​ಗೆ ಎಳೆದ ಇನ್ಶುರೆನ್ಸ್ ಕಂಪನಿ

rcb cares

ಯೋಜನೆ 6- ಸ್ಥಳೀಯ ಪ್ರತಿಭೆಗಳಿಗೆ ಉದ್ಯೋಗವಕಾಶ ಸೃಷ್ಟಿ

ಅಭಿಮಾನಿಗಳು ಹಾಗೂ ಫ್ರಾಂಚೈಸಿಯ ಸಂಬಂಧ ಮೈದಾನ ಹಾಗೂ ಆಟಕ್ಕೆ ಮಾತ್ರ ಸೀಮಿತವಾಗಿರಬಾರದು ಅನ್ನೋ ಉದ್ದೇಶ ಆರ್​​​ಸಿಬಿ ಕೇರ್ಸ್​ದ್ದಾಗಿದೆ. ಹೀಗಾಗಿ ಕೆಲವು ಉದ್ಯೋಗಗಳನ್ನ ಸೃಷ್ಟಿಸಲು ಆರ್​​ಸಿಬಿ ಮುಂದಾಗಿದೆ. ಪ್ರಮುಖವಾಗಿ ಕರ್ನಾಟಕ ಲೋಕಲ್​ ಟ್ಯಾಲೆಂಟ್​​ಗಳನ್ನ ಗುರುತಿಸಿ ಕೆಲಸಗಳನ್ನ ನೀಡೋ ಯೋಜನೆ ಆರ್​​ಸಿಬಿ ಹಾಕಿಕೊಂಡಿದೆ. ಜೊತೆಗೆ ಮುಂದಿನ ಪೀಳಿಗೆಯ ಕ್ರೀಡಾಪಟುಗಳಿಗೂ ನೆರವು ನೀಡೋದಾಗಿ ತಿಳಿಸಿದೆ. 

ಆರ್​​ಸಿಬಿಯ ಈ ಹೊಸ ಯೋಜನೆಗಳನ್ನ ಸದ್ಯ ಫ್ಯಾನ್ಸ್​​ ತುಂಬು ಹೃದಯದಿಂದ ಸ್ವಾಗತ ಮಾಡಿದ್ದಾರೆ. ಈ ಯೋಜನೆಗಳನ್ನ ಫ್ರಾಂಚೈಸಿ ಹೇಗೆ ಅನುಷ್ಠಾನಕ್ಕೆ ತರುತ್ತೆ ಅನ್ನೋದು ಸದ್ಯದ ಪ್ರಶ್ನೆಯಾಗಿದೆ. ಸರಿಯಾದ ರೀತಿಯಲ್ಲಿ ಯೋಜನೆಗಳು ಜಾರಿಗೆ ಬಂದ್ರೆ ಮಾತ್ರ ಇದಕ್ಕೊಂದು ಸಾರ್ಥಕತೆ ಸಿಗಲಿದೆ. 

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ 

Tilak Varma RCB cricketers love cricket players Phil Salt RCB RCB CARES
Advertisment