ರಿಷಭ್ ಪಂತ್​ ಸ್ಥಾನಕ್ಕಾಗಿ ಕನ್ನಡಿಗ ಸೇರಿ 5 ಆಟಗಾರರ ಮಧ್ಯೆ ರೇಸ್​.. ವಿಕೆಟ್ ಕೀಪರ್ ಸ್ಥಾನ ಯಾರಿಗೆ ಒಲಿಯುತ್ತೆ?

ತಂಡದ ಖಾಯಂ ವಿಕೆಟ್​ ಕೀಪರ್ ಆಗಿದ್ದ ರಿಷಭ್ ಪಂತ್​​​ ಮಹತ್ವದ ಟೂರ್ನಿಯಿಂದ ಹೊರಬಿದ್ದಿರೋದು ತಂಡಕ್ಕೆ ದೊಡ್ಡ ಹಿನ್ನಡೆ ತಂದಿದೆ. ಪಂತ್​ ಸ್ಥಾನದಲ್ಲಿ ಬೇರೆ ಯಾರನ್ನ ಸೆಲೆಕ್ಟ್​ ಮಾಡೋದು ಅನ್ನೋ ಟೆನ್ಶನ್​​ ಸೆಲೆಕ್ಷನ್​ ಕಮಿಟಿಗೆ​ ಶುರುವಾಗಿದೆ.

author-image
Bhimappa
RISHABH_PANT (5)
Advertisment

ಏಷ್ಯಾಕಪ್​ ಟೂರ್ನಿಗೆ ಬಿಸಿಸಿಐ ವಲಯದಲ್ಲಿ ಸಿದ್ಧತೆ ಆರಂಭವಾದ ಬೆನ್ನಲ್ಲೇ ಆಘಾತ ಎದುರಾಗಿದೆ. ವಿಕೆಟ್​ ಕೀಪರ್​​ ರಿಷಭ್​ ಪಂತ್​ ಟೂರ್ನಿಯಿಂದ ಹೊರ ಬಿದ್ದಿದ್ದಾರೆ. ಪಂತ್​ ಸ್ಥಾನಕ್ಕೆ ಬದಲಿ ಆಟಗಾರನ ಆಯ್ಕೆ ಸೆಲೆಕ್ಷನ್​ ಕಮಿಟಿಗೆ ತಲೆ ನೋವಾಗಿದೆ. ಐವರು ಆಟಗಾರರು ಸ್ಥಾನಕ್ಕಾಗಿ ಪೈಪೋಟಿ ನಡೆಸ್ತಿದ್ದಾರೆ. 

ಇಂಗ್ಲೆಂಡ್​ ಪ್ರವಾಸ ಅಂತ್ಯದ ಬಳಿಕ ಇದೀಗ ಬಿಸಿಸಿಐ ವಲಯದಲ್ಲಿ ಏಷ್ಯಾಕಪ್​ ಟೂರ್ನಿಗೆ ಸಿದ್ಧತೆ ಆರಂಭವಾಗಿದೆ. ಸಪ್ಟೆಂಬರ್​​ನಲ್ಲಿ ನಡೆಯೋ ಮಹತ್ವದ ಟೂರ್ನಿಗೆ ಅಫ್ಘಾನಿಸ್ತಾನ, ಬಾಂಗ್ಲಾದೇಶ ತಂಡಗಳು ಟೀಮ್​ ಸೆಲೆಕ್ಷನ್​ ಮಾಡಿ ಯುದ್ಧಕ್ಕೆ ಸಜ್ಜಾಗಿವೆ. ಬಿಸಿಸಿಐ ವಲಯದಲ್ಲೂ ಟೀಮ್​ ಸೆಲೆಕ್ಷನ್​ನದ್ದೇ ಚರ್ಚೆ ಜೋರಾಗಿದೆ. ಸೆಲೆಕ್ಷನ್​ ಕಮಿಟಿ, ಟೀಮ್​ ಮ್ಯಾನೇಜ್​​ಮೆಂಟ್​​ ತಂಡದ ಆಯ್ಕೆಯ ಸಿದ್ಧತೆ ನಡೆಸ್ತಿರೋವಾಗಲೇ ಶಾಕ್​ ಎದುರಾಗಿದೆ. 

KL_RAHUL (5)

ಮಹತ್ವದ ಪಂದ್ಯದಿಂದ ರಿಷಭ್​ ಪಂತ್​ ರೂಲ್ಡ್​ ಔಟ್​.!

ಇಂಗ್ಲೆಂಡ್​ ಪ್ರವಾಸದ ಟೆಸ್ಟ್​​ ಸರಣಿ ವೇಳೆ ಪಾದದ ಇಂಜುರಿಗೆ ತುತ್ತಾದ ರಿಷಭ್​ ಪಂತ್​ ಏಷ್ಯಾಕಪ್ ಟೂರ್ನಿಯಿಂದ ರೂಲ್ಡ್​ ಔಟ್​​ ಆಗಿದ್ದಾರೆ. ಪಂತ್​ ಟೂರ್ನಿ ವೇಳೆ ಫುಲ್​​ ಫಿಟ್​ ಆಗಲ್ಲ ಎಂಬ ರಿಪೋರ್ಟ್​ ಅನ್ನ ಮೆಡಿಕಲ್​ ಟೀಮ್ ನೀಡಿದೆ. ತಂಡದ ಖಾಯಂ ವಿಕೆಟ್​ ಕೀಪರ್​ ಬ್ಯಾಟರ್​​ ಮಹತ್ವದ ಟೂರ್ನಿಯಿಂದ ಹೊರಬಿದ್ದಿರೋದು ತಂಡಕ್ಕೆ ದೊಡ್ಡ ಹಿನ್ನಡೆ ತಂದಿದೆ. ಪಂತ್​ ಸ್ಥಾನದಲ್ಲಿ ಬೇರೆ ಯಾರನ್ನ ಸೆಲೆಕ್ಟ್​ ಮಾಡೋದು ಅನ್ನೋ ಟೆನ್ಶನ್​​ ಸೆಲೆಕ್ಷನ್​ ಕಮಿಟಿಗೆ​ ಶುರುವಾಗಿದೆ. 

ಪಂತ್​ಗೆ ಗಾಯ.. ಸಂಜು ಸ್ಯಾಮ್ಸನ್​ಗೆ ಅದೃಷ್ಠ.?

ರಿಷಭ್​ ಪಂತ್​ ಇಂಜುರಿಗೆ ತುತ್ತಾಗಿರೋದ್ರಿಂದ ಸಂಜು ಸ್ಯಾಮ್ಸನ್​ಗೆ ಅದೃಷ್ಟ ಖುಲಾಯಿಸೋ ಸಾಧ್ಯತೆ ದಟ್ಟವಾಗಿದೆ. ಪಂತ್​ ಅಲಭ್ಯತೆಯಲ್ಲಿ ಸಂಜು ಸ್ಯಾಮ್ಸನ್​ ಸೆಲೆಕ್ಷನ್​ ಕಮಿಟಿಯ ಫಸ್ಟ್​ ಚಾಯ್ಸ್​ ವಿಕೆಟ್​ ಕೀಪರ್​ ಬ್ಯಾಟರ್​ ಎನಿಸಿದ್ದಾರೆ. 2024ರ ಟಿ20 ವಿಶ್ವಕಪ್​ ಸೇರಿದಂತೆ ಕಳೆದ ಕೆಲ ಸರಣಿಗಳಿಂದ ಪಂತ್​ಗೆ ಬ್ಯಾಕ್​​ ಅಪ್​ ವಿಕೆಟ್​ ಕೀಪರ್​ ಆಗಿ ತಂಡದಲ್ಲಿರೋದ್ರಿಂದ ಸಂಜುಗೆ ಸ್ಥಾನ ಸಿಗೋ ಸಾಧ್ಯತೆಯಿದೆ. ಕನ್​​​ಫರ್ಮ್​ ಇಲ್ಲ, ಯಾಕಂದ್ರೆ, ಸ್ಥಾನಕ್ಕೆ ಇನ್ನೂ ಹಲವು ಆಟಗಾರರ ಪೈಪೋಟಿಯಿದೆ. 

ಇಶಾನ್​ ಕಿಶನ್​ ಮೇಲೆ ಕೃಪೆ ತೋರ್ತಾರಾ ಸೆಲೆಕ್ಟರ್ಸ್​.?

ಯುವ ವಿಕೆಟ್​ ಕೀಪರ್​ ಬ್ಯಾಟ್ಸ್​ಮನ್​ ಇಶಾನ್​ ಕಿಶನ್​ ಟೀಮ್​ ಇಂಡಿಯಾದಿಂದ ಕಳೆದೇ ಹೋಗಿದ್ದಾರೆ. ಡೊಮೆಸ್ಟಿಕ್​​ ಕ್ರಿಕೆಟ್​ನಲ್ಲಿ ಪರ್ಫಾಮ್​ ಮಾಡ್ತಾ ಇದ್ರೂ ಪೈಪೋಟಿಯ ಕಾರಣದಿಂದ ಟೀಮ್​ ಇಂಡಿಯಾ ಡೋರ್​ ಮಾತ್ರ ಓಪನ್​ ಆಗಿಲ್ಲ. ಇದೀಗ ಪಂತ್​ ಅಲಭ್ಯ ಆಗಿರೋದ್ರಿಂದ ಸೆಲೆಕ್ಟರ್ಸ್​​ ಇಶಾನ್​ ಕಿಶನ್​ ಮೇಲೆ ಕೃಪೆ ತೋರೋ ಸಾಧ್ಯತೆ ತಳ್ಳಿ ಹಾಕುವಂತಿಲ್ಲ. 

T20 ಫಾರ್ಮೆಟ್​​ಗೆ ಕೆ.ಎಲ್​ ರಾಹುಲ್​​ ಕಮ್​ಬ್ಯಾಕ್​.?

ಕನ್ನಡಿಗ ಕೆ.ಎಲ್​ ರಾಹುಲ್​ 2025ರಲ್ಲಿ ಸಾಲಿಡ್​ ಪರ್ಫಾಮೆನ್ಸ್​ ನೀಡ್ತಿದ್ದಾರೆ. ಟೆಸ್ಟ್, ಏಕದಿನ, ಐಪಿಎಲ್​ ಎಲ್ಲಾ ಮಾದರಿಯಲ್ಲೂ ಅದ್ಬುತ ಆಟದಿಂದ ಗಮನ ಸೆಳೆದಿದ್ದಾರೆ. ಬ್ಯಾಟಿಂಗ್​ ಜೊತೆಗೆ ವಿಕೆಟ್​ ಕೀಪರ್​ ಆಗಿಯೂ ಶೈನ್​ ಆಗಿದ್ದಾರೆ. ಮಿಡಲ್​ ಆರ್ಡರ್​ನಲ್ಲಿ ಬ್ಯಾಟಿಂಗ್​ ಮಾಡೋ ಸಾಮರ್ಥ್ಯ ಹೊಂದಿರೋ ರಾಹುಲ್​ ಕೂಡ ಪಂತ್​ ಸ್ಥಾನಕ್ಕೆ ಸಮರ್ಥ ಆಟಗಾರನೇ. ಆದ್ರೆ, 2022ರ ಬಳಿಕ ಟಿ20 ಸೆಟಪ್​ನಿಂದ ರಾಹುಲ್​ನ ಹೊರಗಿಡಲಾಗಿದೆ. ಹೀಗಾಗಿ ಸೆಲೆಕ್ಟರ್ಸ್​ ಮತ್ತೆ ರಾಹುಲ್​​ಗೆ ಮಣೆ ಹಾಕ್ತಾರಾ.? ಅನ್ನೋದು ಪ್ರಶ್ನೆಯಾಗಿದೆ.  ​​

ಇದನ್ನೂ ಓದಿ: ರಿಷಭ್ ಶೆಟ್ಟಿಗೆ ಜೊತೆಯಾದ ಕನಕವತಿ.. ಕಾಂತಾರ- 1 ರಲ್ಲಿ ರುಕ್ಮಿಣಿ ವಸಂತ್ ಪೋಸ್ಟರ್ ಲುಕ್..!

SANJU_SAMSON

RCB ವಿಕೆಟ್​ ಕೀಪರ್​​​ಗೆ ಸಿಗುತ್ತಾ ಅವಕಾಶ.?

ಈ ಸೀಸನ್​ನ ಐಪಿಎಲ್​​ನಲ್ಲಿ ಬೊಂಬಾಟ್​​ ಪ್ರದರ್ಶನ ನೀಡಿದ ಆರ್​​ಸಿಬಿ ವಿಕೆಟ್​ ಕೀಪರ್​​ ಜಿತೇಶ್​ ಶರ್ಮಾ ಕೂಡ ಈ ರೇಸ್​​ನಲ್ಲಿದ್ದಾರೆ. ವಿಕೆಟ್​​ ಕೀಪಿಂಗ್​ ಜೊತೆಗೆ ಫಿನಿಷಿಂಗ್​ ರೋಲ್​ನ ಕೂಡ ಜಿತೇಶ್​ ಶರ್ಮಾ ಸಮರ್ಥವಾಗಿ ನಿಭಾಯಿಸಿದ್ದಾರೆ. ಟೀಮ್​ ಇಂಡಿಯಾಗೂ ಫಿನಿಷರ್​ ಅವಶ್ಯಕತೆ ಇದೆ. ಹೀಗಾಗಿ ಜಿತೇಶ್​​ ಶರ್ಮಾಗೆ ಚಾನ್ಸ್​​ ಅಚ್ಚರಿಪಡಬೇಕಿಲ್ಲ. 

ಇಂಗ್ಲೆಂಡ್​ ಪ್ರವಾಸದಲ್ಲಿ ಪಂತ್​ ಇಂಜುರಿಗೆ ತುತ್ತಾದ ಬಳಿಕ ವಿಕೆಟ್​​ ಕೀಪಿಂಗ್​ ಜವಾಬ್ಧಾರಿ ನಿಭಾಯಿಸಿದ ಧೃವ್​ ಜುರೇಲ್​ ಕೂಡ ಸ್ಥಾನದ ಆಕಾಂಕ್ಷಿ. ಆದ್ರೆ, ಜುರೇಲ್​ ಈ ಹಿಂದೆ ಸಿಕ್ಕ ಅವಕಾಶಗಳಲ್ಲಿ ಇಂಪ್ರೆಸ್ಸಿವ್​ ಪ್ರದರ್ಶನ ನೀಡಿಲ್ಲ. ಸೆಲೆಕ್ಷನ್​ಗೆ ಇದೇ ಅಡ್ಡ ಆಗೋ ಸಾಧ್ಯತೆಯಿದೆ. ಒಂದು ಸ್ಥಾನಕ್ಕಾಗಿ ಹಲವು ಆಟಗಾರರ ನಡುವೆ ಪೈಪೋಟಿ ಏರ್ಪಟ್ಟಿದ್ದು, ಯಾರಿಗೆ ಅದೃಷ್ಟ ಒಲಿಯುತ್ತೆ ಅನ್ನೋದನ್ನ ಕಾದು ನೋಡಬೇಕಿದೆ. 

ಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಮಿ’ ವೀಕ್ಷಿಸಿ 

Virat Kohli KL Rahul Rishabh Pant Rohit Sharma-Virat Kohli
Advertisment