/newsfirstlive-kannada/media/media_files/2025/10/14/surya_kumar_bat-2025-10-14-18-32-05.jpg)
ಟೀಮ್​ ಇಂಡಿಯಾ ಟಿ20 ನಾಯಕ ಸೂರ್ಯಕುಮಾರ್​ ಯಾದವ್ ಕರಿಯರ್​ ಸಂಕಷ್ಟಕ್ಕೆ ಸುಲುಕಿದೆ. ಬ್ಯಾಟ್​ ಹಿಡಿದು ಘರ್ಜಿಸ್ತಾ ಇದ್ದ ಸೂರ್ಯ ಸೈಲೆಂಟ್​ ಆಗಿದ್ದಾರೆ. ಮುಂಬರುವ ಆಸ್ಟ್ರೇಲಿಯಾ ಪ್ರವಾಸಕ್ಕೆ ನಾಯಕನಾಗಿ ಆಯ್ಕೆಯಾಗಿದರೂ ಸೂರ್ಯನ ಸೇಫ್​ ಇಲ್ಲ. ಹೀನಾಯ ಪ್ರದರ್ಶನ ನೀಡ್ತಿರೋ ಸೂರ್ಯ ಕಾಪಾಡಪ್ಪಾ ಎಂದು ಮಹಾಕಾಳೇಶ್ವರನ ಮೊರೆ ಹೋಗಿದ್ದಾರೆ.
ಸೂರ್ಯಕುಮಾರ್ ಯಾದವ್.. ಟಿ20 ಕ್ರಿಕೆಟ್​​ನ ಬ್ರ್ಯಾಂಡ್ ಅಂಬಾಸಿಡರ್. ಚುಟುಕು ಕ್ರಿಕೆಟ್​ನ ಈ ಬ್ರ್ಯಾಂಡ್​​ ಒಮ್ಮೆ ಸಿಡಿದು ನಿಂತ್ರೆ ಸ್ಫೋಟ ಫಿಕ್ಸ್​. ಬಾಲ್​ ಡಾಟ್ ಅನ್ನೋ ಪದವನ್ನೇ ಇಷ್ಟ ಪಡದ ಡೆಡ್ಲಿಯೆಸ್ಟ್ ಬ್ಯಾಟರ್. ಫಸ್ಟ್​ ಬಾಲ್ ಟು ಲಾಸ್ಟ್​ ಬಾಲ್​​​​​​​​​​​​​​​​​​​​​​​​ ತನಕ ರನ್​​​​ ಸುನಾಮಿ ಸೃಷ್ಟಿಸ್ತಾ ಇದ್ರು. ಮೈದಾನದ ಅಷ್ಟ ದಿಕ್ಕುಗಳಿಗೂ ಚೆಂಡನ್ನ ಬಡಿದಟ್ತಾ ಇದ್ದ ಸೂರ್ಯನ ಶಾಖಕ್ಕೆ ಎದುರಾಳಿಗಳು ವಿಲವಿಲ ಒದ್ದಾಡ್ತಿದ್ರು. ಇಂಥಾ ಸೂರ್ಯನಿಗೆ ಇದೀಗ ಗ್ರಹಣ ಹಿಡಿದಂತಿದೆ. ಪ್ರಜ್ವಲಿಸ್ತಿದ್ದ ಸೂರ್ಯ ಮಂಕಾಗಿದ್ದಾನೆ.
ಸತತ ವೈಫಲ್ಯದಿಂದ ಸಂಕಷ್ಟಕ್ಕೆ ಸಿಲುಕಿದ ಕರಿಯರ್​.!
ಸತತ ವೈಫಲ್ಯ ಅನುಭವಿಸಿರೋ ಸೂರ್ಯಕುಮಾರ್​ ಯಾದವ್​ ಸ್ಥಾನ ಕರಿಯರ್​​ ಸಂಕಷ್ಟಕ್ಕೆ ಸಿಲುಕಿದೆ. ಈ ವರ್ಷವಂತೂ ಸೂರ್ಯನ ಆಟ ಅತ್ಯಂತ ಹೀನಾಯ ಸ್ಥಿತಿ ತಲುಪಿದೆ. ಟಿ20ಯ ನಂಬರ್​ 1 ಬ್ಯಾಟರ್​ ಆಗಿ ಆಗಿ ಮೆರೆದಾಡಿದ್ದ ಸೂರ್ಯ ಈಗ ಪಾತಾಳಕ್ಕೆ ಕುಸಿದಿದ್ದಾರೆ. ಹೀನಾಯ ಪ್ರದರ್ಶನದಿಂದ ಕಂಗೆಟ್ಟಿರೋ ಸೂರ್ಯ ಕಾಪಾಡಪ್ಪಾ ಎಂದು ಮಹಾಕಾಳೇಶ್ವರನ ಮೊರೆ ಹೋಗಿದ್ದಾರೆ.
ಪತ್ನಿ ದೇವಿಶಾ ಶೆಟ್ಟಿ ಜೊತೆಗೆ ಉಜ್ಜಯಿನಿಗೆ ತೆರಳಿರೋ ಸೂರ್ಯಕುಮಾರ್​​ ಮಹಾಕಾಳೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಭಸ್ಮಾರತಿಯಲ್ಲಿ ಭಾಗಿಯಾಗಿ ಶಿವನ ಆಶೀರ್ವಾದ ಪಡೆದಿದ್ದಾರೆ. ಆ ಬಳಿಕ ನಂದಿಯ ಬಳಿ ಕುಳಿತು ಧ್ಯಾನ ಮಾಡಿದ್ದಾರೆ. ಪೂಜೆಯ ವೇಳೆ ಭಜನೆ ಮಾಡುತ್ತಾ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದ್ದಾರೆ.
ಕಾಂಗರೂ ನಾಡಲ್ಲಿ ಸೂರ್ಯನಿಗೆ ಅಗ್ನಿಪರೀಕ್ಷೆ.!
ಈಗಾಗಲೇ ಟೆಸ್ಟ್​ ತಂಡದಿಂದ ಡ್ರಾಪ್​ ಆಗಿರೋ ಸೂರ್ಯನಿಗೆ ಒನ್​ ಡೇ ತಂಡದಲ್ಲೂ ಸ್ಥಾನವಿಲ್ಲದಂತಾಗಿದೆ. ಸದ್ಯ ಟೀಮ್​ ಇಂಡಿಯಾ ನಾಯಕನಾಗಿರೋ ಕಾರಣಕ್ಕೆ ಟಿ20 ತಂಡದಲ್ಲಿ ಮಾತ್ರ ಸ್ಥಾನ ಉಳಿಸಿಕೊಂಡಿದ್ದಾರೆ. ಅದ್ರಲ್ಲೂ ಮುಂಬರೋ ಆಸ್ಟ್ರೇಲಿಯಾ ಪ್ರವಾಸ ಸೂರ್ಯನ ಪಾಲಿಗೆ ಅಗ್ನಿಪರೀಕ್ಷೆಯ ಕಣವಾಗಿದೆ. ಇದೇ ವೈಫಲ್ಯ ಮುಂದುವರೆದ್ರೆ ಎಲ್ಲಾ ಫಾರ್ಮೆಟ್​ನಲ್ಲೂ ಸೂರ್ಯನಿಗೆ ಡೋರ್​​ ಕ್ಲೋಸ್​ ಆಗೋದು ಕನ್​ಫರ್ಮ್​​. ಏಷ್ಯಾಕಪ್​ನಲ್ಲಿ ನೀಡಿದ ಹೀನಾಯ ಪರ್ಫಾಮೆನ್ಸ್​​ ಸೆಲೆಕ್ಟರ್ಸ್​ ಹಾಗೂ ಮ್ಯಾನೇಜ್​ಮೆಂಟ್​ಗೆ ನಿರಾಸೆ ಮೂಡಿಸಿದೆ.
ಏಷ್ಯಾಕಪ್​ ಟೂರ್ನಿಯಲ್ಲಿ ಸೂರ್ಯ ಅಟ್ಟರ್​ಫ್ಲಾಪ್​.!
ಯಾರು ಬ್ಯಾಟಿಂಗ್​ಗೆ ಬಂದ್ರೆ ಬೌಲರ್​​ಗಳು ನಡುಗಿ ಹೋಗ್ತಿದ್ರೋ, ಎದುರಾಳಿ ಪಡೆ ಬೆಚ್ಚಿ ಬೀಳ್ತಿತ್ತೋ ಆ ಸೂರ್ಯಕುಮಾರ್​ ಯಾದವ್​ ಕಂಡ್ರೆ ಈಗ ಯಾರಿಗೂ ಭಯವಿಲ್ಲದಂತಾಗಿದೆ. ಇದಕ್ಕೆ ರಿಸೆಂಟ್​ ಆಗಿ ಅಂತ್ಯವಾದ ಏಷ್ಯಾಕಪ್​​​ ಟೂರ್ನಿ ಬೆಸ್ಟ್​ ಎಕ್ಸಾಂಪಲ್​. ನಾಯಕನಾಗಿ ಕಪ್​ ಗೆಲ್ಲಿಸಿದ್ರು, ಆದ್ರೆ, ಆಟಗಾರನಾಗಿ ಅಟ್ಟರ್​​ಫ್ಲಾಪ್​ ಶೋ ನೀಡಿದ್ರು.
ಏಷ್ಯಾಕಪ್​ನಲ್ಲಿ ಸೂರ್ಯಕುಮಾರ್​
ಏಷ್ಯಾಕಪ್​ ಟೂರ್ನಿಯಲ್ಲಿ 7 ಪಂದ್ಯಗಳನ್ನಾಡಿದ ಸೂರ್ಯಕುಮಾರ್​​ ಯಾದವ್ ಕೇವಲ 72 ರನ್​ಗಳಿಸಿದ್ದಾರೆ. ಕೇವಲ 18.00ರ ಸರಾಸರಿ ಹೊಂದಿದ್ದು, ಕೇವಲ 6 ಬೌಂಡರಿ, 2 ಸಿಕ್ಸರ್​​ ಸಿಡಿಸಿದ್ದಾರೆ.
2025ರಲ್ಲಿ ಸೂರ್ಯಕುಮಾರ್​​ ಬ್ಯಾಟ್​ ಸೈಲೆಂಟ್​.!
ಏಷ್ಯಾಕಪ್​ ಟೂರ್ನಿ ಮಾತ್ರವಲ್ಲ, ಈ ವರ್ಷದ ಆರಂಭದಿಂದಲೂ ಸೂರ್ಯಕುಮಾರ್​​ ಬ್ಯಾಟ್​​​ ಸೈಲೆಂಟ್​ ಮೂಡ್​ಗೆ ಜಾರಿದೆ. 2025ರಲ್ಲಿ 12 ಟಿ20 ಪಂದ್ಯಗಳನ್ನಾಡಿರುವ ಸೂರ್ಯಕುಮಾರ್ ಯಾದವ್​ ಕೇವಲ 100 ರನ್​ಗಳಿಸಿದ್ದಾರೆ. 11.11ರ ಹೀನಾಯ ಸರಾಸರಿ ಹೊಂದಿದ್ದು, ಅರ್ಧಶತಕದ ಗಡಿ ದಾಟಲೂ ಪರದಾಡಿದ್ದಾರೆ. 12 ಪಂದ್ಯಗಳ ಪೈಕಿ 3 ಪಂದ್ಯಗಳಲ್ಲಿ ಡಕೌಟ್​ ಕೂಡ ಆಗಿದ್ದಾರೆ.
ಇದನ್ನೂ ಓದಿ:ಕಾಂತಾರ ಚೆಲುವೆ ಸಪ್ತಮಿ ಗೌಡ ಹೋಗಿದ್ದು ಎಲ್ಲಿಗೆ.. ಬ್ಯೂಟಿಯ ನ್ಯೂ ಕ್ಲಾಸಿಕ್ ಫೋಟೋಸ್​!
ಮುಂಬೈಕರ್​ ನಾಯಕತ್ವಕ್ಕೆ ಬಂದಿದೆ ಕುತ್ತು​.!
2026ರಲ್ಲಿ ಟಿ20 ವಿಶ್ವಕಪ್​ ಟೂರ್ನಿ ನಡೆಯಲಿದ್ದು, ಇದಕ್ಕೆ ಸಿದ್ಧತೆ ಟೀಮ್​ ಇಂಡಿಯಾದಲ್ಲಿ ಜೋರಾಗಿ ನಡೀತಿದೆ. ಇದ್ರ ನಡುವೆ ಸೂರ್ಯಕುಮಾರ್​ ಯಾದವ್​ ಸತತ ವೈಫಲ್ಯ ಅನುಭವಿಸ್ತಿದ್ದಾರೆ. ಆಸ್ಟ್ರೇಲಿಯಾ ಪ್ರವಾಸದಲ್ಲೂ ಫೇಲ್​ ಆದ್ರೆ, ಸೂರ್ಯನಿಗೆ ಗೇಟ್​ಪಾಸ್​ ಗ್ಯಾರಂಟಿ. ಈಗಾಗಲೇ ಸೂರ್ಯನಿಗೆ ಪರ್ಯಾಯವಾಗಿ​ ಗಿಲ್​ ನಾಯಕತ್ವದ ಜವಾಬ್ದಾರಿ ಹೊರಲು ರೆಡಿಯಾಗಿದ್ದಾರೆ. ಚಾಂಪಿಯನ್ಸ್​ ಟ್ರೋಫಿ ಗೆಲ್ಲಿಸಿದ್ದನ್ನೂ ಲೆಕ್ಕಿಸದೇ ಏಕದಿನದಲ್ಲಿ ರೋಹಿತ್​ ಶರ್ಮಾನ ಕೆಳಗಿಳಿಸಿ ಗಿಲ್​ ಪಟ್ಟ ಕಟ್ಟಲಾಗಿದೆ. ಇನ್ನು, ಸತತ ವೈಫಲ್ಯ ಅನುಭವಿಸ್ತಿರೋ ಸೂರ್ಯಕುಮಾರ್​​ ಯಾವ ಲೆಕ್ಕ.? ಹೀಗಾಗಿ ಕಾಂಗರೂ ನಾಡಲ್ಲಿ ಫೇಲ್​ ಆದ್ರೆ, ಸೂರ್ಯನಿಗೆ ಸಂಕಷ್ಟ ತಪ್ಪಿದ್ದಲ್ಲ.
ಉಜ್ಜಯಿನಿಯ ಶ್ರೀ ಮಹಾಕಾಳೇಶ್ವರ ದೇಶದಲ್ಲಿರೋ ಪವಿತ್ರ ಸ್ಥಳಗಳಲ್ಲಿ ಒಂದು. 12 ಜ್ಯೋತಿರ್ಲಿಂಗಗಳಲ್ಲಿ ಒಂದಾಗಿರುವ ಈ ಪವಿತ್ರ ಸ್ಥಳ ಶಿವನ ವಾಸಸ್ಥಾನ. ಶ್ರೀ ಮಹಾಕಾಳೇಶ್ವರ ದರ್ಶನದಿಂದ ಅಕಾಲ ಮೃತ್ಯು, ಕಷ್ಟ ಕಾರ್ಪಣ್ಯ, ಇಷ್ಟಾರ್ಥ ಸಿದ್ಧಿಯಾಗುತ್ತೆ ಅನ್ನೋದು ಭಕ್ತರ ನಂಬುಗೆ. ಈ ಹಿಂದೆ ಈ ಪುಣ್ಯಕ್ಷೇತ್ರಕ್ಕೆ ಭೇಟಿ ನೀಡಿದ ಬಳಿಕ ಸೂರ್ಯನಿಗೆ ಸರ್​​ಪ್ರೈಸಿಂಗ್​ ರೀತಿಯಲ್ಲಿ ಟಿ20 ತಂಡದ ನಾಯಕತ್ವ ಒಲಿದಿತ್ತು. ಈ ಬಾರಿಯ ಭೇಟಿಯ ಬಳಿಕ ಕಳೆದುಕೊಂಡಿರೋ ಫಾರ್ಮ್​ ವಾಪಾಸ್​​ ಕಂಡುಕೊಳ್ತಾರಾ.? ಆ ಶಿವನ ಆಶೀರ್ವಾದ ಸಿಗುತ್ತಾ?.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ