Advertisment

ಕೊನೆ T20 ಮ್ಯಾಚ್.. ಸೂರ್ಯಕುಮಾರ್​ಗೆ ಸಿಗದ ಟಾಸ್​.. ಟೀಮ್ ಇಂಡಿಯಾ ಪ್ಲೇಯಿಂಗ್​- 11 ಇಲ್ಲಿದೆ..!

ಸೂರ್ಯ, ಗಿಲ್ ಬ್ಯಾಟಿಂಗ್ ಸತತ ವಿಫಲವಾಗುತ್ತಿದೆ. ಇಂದಿನ ಕೊನೆ ಪಂದ್ಯದಲ್ಲಾದರೂ ಸಿಡಿದೇಳುತ್ತಾರಾ ಇಲ್ಲ, ಅದೇ ವೈಫಲ್ಯ ಅನುಭವಿಸ್ತಾರಾ ಎನ್ನುವುದು ಕಾದು ನೋಡಬೇಕಿದೆ. ಈ ಪಂದ್ಯ ಗೆದ್ದರೇ ಟೀಮ್ ಇಂಡಿಯಾಗೆ ಸರಣಿ ಕೈವಶ ಆದಂತೆ. ಆಸಿಸ್​ಗೆ ಜಯವಾದರೆ ಸರಣಿ ಸಮಬಲ ಆಗುತ್ತದೆ.

author-image
Bhimappa
Suryakumar yadav abhishek sharma
Advertisment

ಐದು ಪಂದ್ಯಗಳ ಟೆಸ್ಟ್ ಸರಣಿಯ ಕೊನೆ ಮ್ಯಾಚ್​ನಲ್ಲಿ ಆಸ್ಟ್ರೇಲಿಯಾ ಕ್ಯಾಪ್ಟನ್​ ಮಿಚೆಲ್ ಮಾರ್ಷ್​ ಟಾಸ್ ಗೆದ್ದು, ಫೀಲ್ಡಿಂಗ್ ಆಯ್ಕೆ ಮಾಡಿದ್ದಾರೆ. ಇದರಿಂದ ಭಾರತ ತಂಡ ಮೊದಲ ಬ್ಯಾಟಿಂಗ್ ಮಾಡಲಿದೆ.

Advertisment

ಬ್ರಿಸ್ಬೇನ್​​ನ ದಿ ಗಬ್ಬಾ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಅಂತಿಮ ಟಿ20 ಪಂದ್ಯದಲ್ಲಿ ಮಿಚೆಲ್ ಮಾರ್ಷ್​ ಟಾಸ್​ ಗೆದ್ದು ಬೌಲಿಂಗ್ ಆಯ್ಕೆ ಮಾಡಿದ್ದಾರೆ. ಹೀಗಾಗಿ ಸೂರ್ಯಕುಮಾರ್ ಪಡೆ ಮೊದಲ ಬ್ಯಾಟಿಂಗ್ ಮಾಡಲಿದೆ. ಸೂರ್ಯಕುಮಾರ್ ಹಾಗೂ ಶುಭ್​ಮನ್ ಗಿಲ್ ಬ್ಯಾಟಿಂಗ್​ನಲ್ಲಿ ಸತತ ವಿಫಲವಾಗುತ್ತಿದ್ದಾರೆ. ಇಂದಿನ ಕೊನೆಯ ಪಂದ್ಯದಲ್ಲಾದರೂ ಸಿಡಿದೇಳುತ್ತಾರಾ ಇಲ್ಲ, ಅದೇ ವೈಫಲ್ಯ ಅನುಭವಿಸ್ತಾರಾ ಎನ್ನುವುದು ಕಾದು ನೋಡಬೇಕಿದೆ. ಈ ಪಂದ್ಯ ಗೆದ್ದರೇ ಟೀಮ್ ಇಂಡಿಯಾಗೆ ಸರಣಿ ಕೈವಶ ಆಗಲಿದೆ. 

ಒಂದು ವೇಳೆ ಆಸಿಸ್​ಗೆ ಜಯವಾದರೆ ಸರಣಿ ಸಮಬಲವಾಗುತ್ತದೆ. ಹೀಗಾಗಿ ಸೂರ್ಯಕುಮಾರ್ ಸೇನೆ ಪಂದ್ಯ ಗೆಲ್ಲಲೇಬೇಕಾದ ಅನಿವಾರ್ಯಕ್ಕೆ ಸಿಲುಕಿದೆ. ಅಭಿಷೇಕ್ ಶರ್ಮಾ, ಶುಭ್​ಮನ್ ಗಿಲ್ ಓಪನರ್ ಆಗಿ ಕ್ರೀಸ್​ಗೆ ಆಗಮಿಸಲಿದ್ದಾರೆ. ಗಿಲ್ ಬ್ಯಾಟಿಂಗ್ ಕಳಪೆಯಾಗಿದ್ದು ಟಿ20ಯಲ್ಲಿ ಬಲಿಷ್ಠವಾಗಿಲ್ಲ. ವಿಕೆಟ್​ ಕೀಪರ್ ಜಿತೇಶ್​ ಶರ್ಮಾಗೆ ಮತ್ತೊಮ್ಮೆ ಅವಕಾಶ ನೀಡಲಾಗಿದೆ. ಇದನ್ನು ಜಿತೇಶ್ ಸದುಪಯೋಗ ಮಾಡಿಕೊಳ್ಳಬೇಕಿದೆ. ಸರಣಿಯಲ್ಲಿ ತಿಲಕ್ ವರ್ಮಾ ಬದಲಿಗೆ ರಿಂಕು ಸಿಂಗ್​ಗೆ ಅವಕಾಶ ನೀಡಲಾಗಿದೆ. 

ಇದನ್ನೂ ಓದಿ:T20 ಟೀಮ್​​ಗೆ ಬೆಸ್ಟ್ ಓಪನರ್ ಯಾರು.. ಅಭಿಷೇಕ್​ ಜೊತೆಗೆ ಜೈಸ್ವಾಲ್​, ಸಂಜು ಸ್ಯಾಮ್ಸನ್​..?

Advertisment

Suryakumar_Gill_IndvsAus

ಆಲ್​ರೌಂಡರ್ಸ್​ ಆಗಿ ತಂಡದಲ್ಲಿ ಶಿವಂ ದುಬೆ, ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್ ಮುಂದುವರೆದಿದ್ದಾರೆ. ಬುಮ್ರಾ ಬೌಲಿಂಗ್ ಪಡೆಯ ಮುಖ್ಯ ಬೆನ್ನೆಲುಬು ಆಗಿದ್ದು ಹರ್ಷಿತ್ ರಾಣಾ ಬದಲಿಗೆ ಅರ್ಷ್​ದೀಪ್ ಸಿಂಗ್ ತಂಡದಲ್ಲಿ ಮತ್ತೆ ಸ್ಥಾನ ನೀಡಲಾಗಿದೆ. ಸ್ಪಿನ್ ಬೌಲಿಂಗ್​ನಲ್ಲಿ ವರುಣ್ ಚಕ್ರವರ್ತಿ ಒಬ್ಬರೇ ಇದ್ದಾರೆ. ಇವರಿಗೆ ಆಲ್​​ರೌಂಡರ್ಸ್​ ಸಾಥ್ ಕೊಡಲಿದ್ದಾರೆ.   

ಟೀಮ್ ಇಂಡಿಯಾದ ಪ್ಲೇಯಿಂಗ್- 11

ಸೂರ್ಯಕುಮಾರ್ ಯಾದವ್ (ನಾಯಕ), ಅಭಿಷೇಕ್ ಶರ್ಮಾ, ಶುಭ್​​ಮನ್ ಗಿಲ್, ರಿಂಕು ಸಿಂಗ್​, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಶಿವಂ ದುಬೆ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಅರ್ಷ್​ದೀಪ್ ಸಿಂಗ್, ವರುಣ್ ಚಕ್ರವರ್ತಿ, ಜಸ್ಪ್ರೀತ್ ಬುಮ್ರಾ

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ 

Advertisment
Surya kumar Yadav IND vs AUS
Advertisment
Advertisment
Advertisment