/newsfirstlive-kannada/media/post_attachments/wp-content/uploads/2023/08/rashi-bhavishya-25.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ
ಇದನ್ನೂ ಓದಿ:ನ್ಯಾಯಾಂಗ ಭ್ರಷ್ಟಾಚಾರ ವಿವಾದ: ತಲೆಗಳು ಉರುಳಬೇಕು ಎಂದ ಸುಪ್ರೀಂಕೋರ್ಟ್, ನ್ಯಾಯಾಂಗ ನಿಂದನೆ ನೋಟೀಸ್ ನೀಡಿಕೆ
ಮೇಷ
- ನಿಮ್ಮ ಮನೆಯವರಿಗೆ ನಿಮ್ಮ ಬಗ್ಗೆ ಋಣಾತ್ಮಕ ಅಭಿಪ್ರಾಯಗಳು ಹೆಚ್ಚು
- ನಿಮಗಿರುವ ಅನುಕೂಲವನ್ನು ಸರಿಯಾಗಿ ಉಪಯೋಗ ಮಾಡಿಕೊಳ್ಳಿ
- ಅವಕಾಶ ಮಾಡಿಕೊಂಡು ಧ್ಯಾನ-ಯೋಗ ಮಾಡಿ ಆಲಸ್ಯ ಬೇಡ
- ಕೆಲಸದ ಒತ್ತಡದಿಂದ ನಿಮಗೆ ನಿರಾಶೆಯಾಗಬಹುದು
- ಎಣ್ಣೆಯಿಂದ ಕರಿದ ಪದಾರ್ಥಗಳನ್ನು ಸಿದ್ಧ ಆಹಾರಗಳನ್ನು ತ್ಯಜಿಸುವುದು ಒಳಿತು
- ನಿಮ್ಮ ಕುಲದೇವರನ್ನು ಆರಾಧನೆ ಮಾಡಿ
ವೃಷಭ
- ಸಣ್ಣ ಸಣ್ಣ ವಿಚಾರಗಳಿಗೆ ಜಗಳವಾಗಬಹುದು ತಾಳ್ಮೆಯಿರಲಿ
- ಮನೆಯ ವಾತಾವರಣ ಚೆನ್ನಾಗಿರುವುದಿಲ್ಲ
- ನಿಮ್ಮ ಮನಸ್ಸಿನ ಚಂಚಲತೆ ನಿಗ್ರಹಮಾಡಿ
- ಕಾರ್ಯಕ್ಷೇತ್ರ, ಸಾರ್ವಜನಿಕ ಸ್ಥಳಗಳಲ್ಲಿ ನಿಮ್ಮನ್ನು ಅಲ್ಪರನ್ನಾಗಿ ಕಾಣಬಹುದು
- ನಿಮ್ಮ ಕುಲದೇವತೆ ಹಾಗೂ ಗುರುವನ್ನು ಪ್ರಾರ್ಥನೆ ಮಾಡಿ
ಮಿಥುನ
- ಮುಖ್ಯ ಕೆಲಸಗಳ ಬಗ್ಗೆ ನಿರ್ಲಕ್ಷ್ಯ ತೋರುವ ಸಾಧ್ಯತೆ
- ನಿಮ್ಮಿಂದ ಬೇರೆಯವರಿಗೆ ಸಹಾಯವಾಗುತ್ತದೆ
- ಇಂದು ಅವಕಾಶ, ಅನುಕೂಲ ಕೈ ತಪ್ಪುವ ಸಾಧ್ಯತೆ ಹೆಚ್ಚು
- ಮಕ್ಕಳಿಂದ, ಚಿಕ್ಕವರಿಂದ ಬೆಂಬಲ ಪ್ರೋತ್ಸಾಹ ಸಿಗುತ್ತದೆ
- ‘ಆದರೆ ಅವರು ನಿಮ್ಮನ್ನ ಮರೆಯುವ ಸಾಧ್ಯತೆ ಹೆಚ್ಚು
- ‘ಶ್ರೀ ಲಕ್ಷ್ಮೀ ದೇವಿಯನ್ನು ಪ್ರಾರ್ಥನೆ ಮಾಡಿ
ಕಟಕ
- ಪಿತ್ರಾರ್ಜಿತ ಆಸ್ತಿಯಿಂದ ಹಣ ಬರುವ ಸಾಧ್ಯತೆ
- ನಿಮ್ಮ ಜೀವನದಲ್ಲಿ ಅಳವಡಿಸಿಕೊಂಡ ಶಿಸ್ತನ್ನು ಬೇರೆಯವರ ಮೇಲೆ ಹೇರಬೇಡಿ
- ಇಂದು ನಿಮ್ಮ ಮಾತು, ನಡೆನುಡಿ ಬಹಳ ವಿನಯದಿಂದ ಇರಲಿ
- ವ್ಯಾಪಾರದಾರರಿಗೆ ಇಂದು ಹೆಚ್ಚು ಲಾಭ
- ಸ್ಥಿರಾಸ್ತಿಯನ್ನು ಖರೀದಿಸುವ ಯೋಚನೆ ಬರುತ್ತದೆ
- ಸಾಮಾಜಿಕ ಕಾರ್ಯಗಳಲ್ಲಿ ಭಾಗವಹಿಸುವ ಸಂದರ್ಭ ಬರುತ್ತದೆ
- ವರಾಹ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ಸಿಂಹ:
- ಆರೋಗ್ಯದ ಬಗ್ಗೆ ಹೆಚ್ಚು ಗಮನವಿರಲಿ
- ಶರೀರ ಭಾಗದಲ್ಲಿ ಇದಕ್ಕಿದ್ದಂತೆ ನೋವು ಕಾಣಿಸಬಹುದು
- ಇವತ್ತು ದೂರದ ಪ್ರಯಾಣ ಮುಂದೂಡುವುದು ಒಳ್ಳೆಯದು
- ಹಳೆಯ ಸಾಲ ಅಥವಾ ಬಾಕಿಯಿಂದ ತೊಂದರೆ ಅವಮಾನ ಸಾಧ್ಯತೆ
- ಇಂದು ಯಾರಿಗೂ ಯಾವುದೇ ಭರವಸೆ ನೀಡಬೇಡಿ
- ಇಂದು ತುಂಬಾ ಆಲಸ್ಯ ಕಾಡುವ ದಿನ
- ಧನ್ವಂತರಿಯನ್ನ ಪ್ರಾರ್ಥನೆ ಮಾಡಿ
ಕನ್ಯಾ
- ಧಾರ್ಮಿಕ ಚಟುವಟಿಕೆಗಳಲ್ಲಿ ಆಸಕ್ತಿ ಹೆಚ್ಚಾಗುತ್ತದೆ
- ಸಮಾಜದಲ್ಲಿ ಗೌರವ, ಪ್ರಶಸ್ತಿಗಳು ದೊರೆಯುವ ದಿನ
- ಹೊಸ ಕೆಲಸಗಳನ್ನು ಆರಂಭಿಸಲು ಬಹಳ ಉತ್ತಮ ದಿನ
- ವ್ಯಾಪಾರ-ವ್ಯವಹಾರಗಳಲ್ಲಿ ತುಂಬಾ ಅನುಕೂಲವಾಗುವ ದಿನ
- ಹಳೆಯ ಆಸೆಗಳು ಇಂದು ಈಡೇರುತ್ತವೆ
- ನಿಮ್ಮ ಕುಲದೇವತೆ ಆರಾಧನೆ ಮಾಡಿ
ತುಲಾ
- ಧಾರ್ಮಿಕ ಕಾರ್ಯಗಳ ಬಗ್ಗೆ ಸಂಕಲ್ಪ ಮಾಡುವ ಮುನ್ನ ಹೆಚ್ಚು ಎಚ್ಚರವಹಿಸಿ
- ಸಂಕಲ್ಪ, ಹರಕೆ ತೀರಿಸುವುದಕ್ಕೆ ಆಗದೆ ತೊಂದರೆ ಆಗುವ ಸಾಧ್ಯತೆ
- ಬಹಳ ಯೋಚನೆ ಮಾಡಿ ಕೊಡಿ ಅನಾನುಕೂಲವಾಗುವ ಸಾಧ್ಯತೆ ಇದೆ
- ಜನರು ನಿಮ್ಮ ಮಾತನ್ನು ತಪ್ಪಾಗಿ ತಿಳಿಯುವ ಸಾಧ್ಯತೆ ಇದ್ದು ಮಿತವಾಗಿ ಮಾತನಾಡಿ
- ಸಂಬಂಧಿಕರು-ಸ್ನೇಹಿತರು ಹಣವನ್ನು ಅಥವಾ ವಸ್ತುವನ್ನು ಸಾಲವಾಗಿ ಕೇಳಬಹುದು
- ಕಾರ್ತವೀರಾರ್ಜುನನ್ನು ಪ್ರಾರ್ಥನೆ ಮಾಡಿ
ವೃಶ್ಚಿಕ
- ಶಿಕ್ಷಣ ಕ್ಷೇತ್ರದಲ್ಲಿರುವವರಿಗೆ ಉತ್ತಮ ಸಾಧನೆಗೆ ಅವಕಾಶವಿದೆ
- ತುಂಬಾ ಅಗತ್ಯವಿದ್ದರೆ ರಾಹುಕಾಲದ ನಂತರ ಪ್ರಯಾಣ ಮಾಡಬಹುದು
- ವ್ಯಾಪಾರ-ವ್ಯವಹಾರದಾರರಿಗೆ ಲಾಭದ ದಿನ
- ಹಣಕಾಸಿನ ವ್ಯವಹಾರವಿದ್ದರೆ ಮಧ್ಯಾಹ್ನದ ನಂತರ ಮಾಡಬಹುದು
- ಸಂಗಾತಿಯೊಂದಿಗಿನ ಭಿನ್ನಾಭಿಪ್ರಾಯಗಳು ಸ್ವಲ್ಪ ಮಟ್ಟಿಗೆ ಕಡಿಮೆ
- ಹೊಸ ಸ್ನೇಹಿತರು ಸಿಗಬಹುದು
- ಪ್ರಯಾಣವನ್ನು ನಾಳೆಗೆ ಮುಂದೂಡುವುದು ಒಳ್ಳೆಯದು
- ಶ್ರೀ ಲಕ್ಷ್ಮಿನಾರಯಣನನ್ನು ಪ್ರಾರ್ಥನೆ ಮಾಡಿ
ಧನುಸ್ಸು
- ಇವತ್ತು ವಾಹನ ಚಾಲನೆ ಮಾಡದೆ ಇದ್ದರೆ ಒಳ್ಳೆಯದು
- ವ್ಯವಹಾರದ ದೃಷ್ಟಿಯಿಂದ ಈ ದಿನ ಚೆನ್ನಾಗಿಲ್ಲ
- ಮಾನಸಿಕ ಬೇಸರ, ಅಸಮಾಧಾನ ಸಾಧ್ಯತೆ
- ಪ್ರಮುಖ ಉಪಕರಣ ಅಥವಾ ವಾಹನಕ್ಕೆ ಹಾನಿ ಸಂಭವ
- ದುರ್ಗಾದೇವಿಯ ಪ್ರಾರ್ಥನೆ ಮಾಡಿ
ಮಕರ
- ಈ ರಾಶಿಯವರಿಗೆ ಕೋಪ ಹೆಚ್ಚಿರುವ ಸಾಧ್ಯತೆ
- ಮಕ್ಕಳಿಗಾಗಿ ಹೆಚ್ಚು ಹಣ ಖರ್ಚು ಮಾಡುವ ಸಂದರ್ಭ
- ತಮ್ಮ ಕೋಪವನ್ನು ಸ್ನೇಹಿತರ ಮನೆಯವರ ಮೇಲೆ ತೀರಿಸಬಾರದು
- ಕಾಲಿನ ಭಾಗದಲ್ಲಿ ನೋವು ಕಾಣಿಸುವ ಸಾಧ್ಯತೆ
- ಸಂಗಾತಿಯೊಂದಿಗೆ ಉತ್ತಮ ನಡುವಳಿಕೆಯೊಂದಿಗೆ ಇರಬೇಕು
- ಮೃತ್ಯುಂಜಯನನ್ನು ಪ್ರಾರ್ಥಿಸುವುದು ಒಳ್ಳೆಯದು
ಕುಂಭ
- ಸರ್ಕಾರಿ ಕೆಲಸಗಳಲ್ಲಿ ಅಡಚಣೆ ಆಗಬಹುದು
- ಹವಾಮಾನ ಬದಲಾವಣೆಯಿಂದ ತಲೆನೋವು ಆಲಸ್ಯ
- ಅಧ್ಯಯನ-ಧ್ಯಾನಕ್ಕೆ ಶರೀರ ಅನುಮತಿ ಕೊಡುವುದಿಲ್ಲ
- ಪ್ರೇಮಿಗಳು ಉತ್ಸುಕರಾಗಿರುವ ದಿನ
- ವಿದ್ಯಾರ್ಥಿಗಳು ಬಲವಂತವಾಗಿ ಅಭ್ಯಾಸ ಮಾಡಬೇಕಾದ ದಿನ
- ಸರಸ್ವತಿಯ ಪ್ರಾರ್ಥನೆ ಮಾಡಬೇಕು
ಮೀನ
- ಸ್ವಂತ ಕೆಲಸಗಳಿದ್ದರೆ ಅದನ್ನು ಮಾಡಿಕೊಳ್ಳಬಹುದು
- ಇಂದು ಮನೆಗೆ ದಿಢೀರಂತ ಅತಿಥಿಗಳ ಆಗಮನ ಸಾಧ್ಯತೆ
- ಮೇಲಾಧಿಕಾರಿಗಳಿಂದ ಉದ್ಯೋಗಿಗಳಿಗೆ ಒತ್ತಡ ಇರುವುದಿಲ್ಲ
- ಇಂದು ನಿಮ್ಮ ಜವಾಬ್ದಾರಿಗಳಿಗೆ ಬದ್ಧರಾಗಿರಬೇಕು
- ಹಿರಿಯರ ಆಶೀರ್ವಾದ ಮಾರ್ಗದರ್ಶನ ಪಡೆಯುತ್ತೀರಿ
- ಟುಂಬದ ಸದಸ್ಯರೊಂದಿಗೆ ಸಂತೋಷದ ಸಮಯ
- ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ಇದನ್ನೂ ಓದಿ:ತೆಲಂಗಾಣದಲ್ಲಿ ಸರ್ಕಾರಿ ಇಂಜಿನಿಯರ್ ಗಳಿಗೆ ತಿಂಗಳಿಗೆ 7 ಲಕ್ಷ ರೂ. ಸಂಬಳ, ಸ್ವಿಪರ್ ಗಳಿಗೆ ತಿಂಗಳಿಗೆ 2 ಲಕ್ಷ ಸಂಬಳ!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us