ಮೊಹಮ್ಮದ್ ಸಿರಾಜ್​ಗೆ ಸ್ಪೆಷಲ್ ಮೆಸೇಜ್ ಕಳುಹಿಸಿದ ಕಿಂಗ್ ಕೊಹ್ಲಿ.. ಭಾರತದ ಗೆಲುವಿಗೆ ವಿರಾಟ್​ ಏನಂದ್ರು?

2ನೇ ಇನ್ನಿಂಗ್ಸ್​ನಲ್ಲಿ ಒಟ್ಟು 30.1 ಓವರ್​ ಬೌಲಿಂಗ್​ ಮಾಡಿದ್ದ ಮೊಹಮ್ಮದ್ ಸಿರಾಜ್ ಅವರು 6 ಓವರ್​ ಮೆಡಿನ್ ಮಾಡಿದ್ದರು. ಇದರ ಜೊತೆಗೆ 104 ರನ್​ಗಳನ್ನು ಬಿಟ್ಟುಕೊಟ್ಟಿದ್ದರು. ಈ ಎಲ್ಲಕ್ಕಿಂತ ಮಿಗಿಲಾಗಿ ಒಟ್ಟು 5 ವಿಕೆಟ್​ಗಳನ್ನು ಕಬಳಿಸಿದ್ದರು.

author-image
Bhimappa
SIRAJ_KOHLI (2)
Advertisment

ಇಂಗ್ಲೆಂಡ್​ ವಿರುದ್ಧದ 5ನೇ ಟೆಸ್ಟ್​ ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿಯಾಗಿ ಗೆಲುವು ಪಡೆಯುತ್ತಿದ್ದಂತೆ ಸೆಲೆಬ್ರೆಷನ್ ಮುಗಿಲು ಮುಟ್ಟಿತ್ತು. ಈ ಒಂದು ಪಂದ್ಯದ ಗೆಲುವು ಟೆಸ್ಟ್​ ಸರಣಿಯನ್ನ ಸಮಬಲ ಮಾಡಿಕೊಳ್ಳಲು ಭಾರತಕ್ಕೆ ನೆರವಾಯಿತು. ಕೇವಲ 6 ರನ್​ಗಳಿಂದ ವಿಜಯ ಸಾಧಿಸಿದ ಟೀಮ್ ಇಂಡಿಯಾಕ್ಕೆ ಹಾಗೂ ಮೊಹಮ್ಮದ್ ಸಿರಾಜ್​ಗೆ ವಿರಾಟ್​ ಕೊಹ್ಲಿ ಅಭಿನಂದನೆ ತಿಳಿಸಿದ್ದಾರೆ.

ಇಂಗ್ಲೆಂಡ್​ ವಿರುದ್ಧದ ಅಂತಿಮ ಟೆಸ್ಟ್​ ಪಂದ್ಯದಲ್ಲಿ ರೋಚಕ ಜಯ ಸಾಧಿಸಿದ ಟೀಮ್​​ ಇಂಡಿಯಾಗೆ ವಿರಾಟ್​ ಕೊಹ್ಲಿ ಅಭಿನಂದನೆ ತಿಳಿಸಿದ್ದಾರೆ. ಗೆಲುವಿನ ಬಳಿಕ ಟ್ವೀಟ್​ ಮಾಡಿರೋ ಕೊಹ್ಲಿ, ಪ್ರಸಿದ್ಧ್​​ ಕೃಷ್ಣ, ಮೊಹಮ್ಮದ್​ ಸಿರಾಜ್​​ ಹೋರಾಟಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ತಂಡಕ್ಕಾಗಿ ಸದಾ ಕಾಲ ಹೋರಾಡುವ ಮೊಹಮ್ಮದ್​ ಸಿರಾಜ್​ಗೆ ವಿಶೇಷವಾಗಿ ಮೆಚ್ಚುಗೆ ಸೂಚಿಸಿದ್ದಾರೆ. ಈ ಟ್ವೀಟ್​​ನ ರೀ ಟ್ವೀಟ್​ ಮಾಡಿರೋ ಸಿರಾಜ್​, ನನ್ನನ್ನ ನಂಬಿದ್ದಕ್ಕೆ ಧನ್ಯವಾದಗಳು ಭಯ್ಯಾ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಟೀಮ್ ಇಂಡಿಯಾ ಗೆಲ್ಲುತ್ತಿದ್ದಂತೆ ಮೊದಲ ಬಾರಿಗೆ ಕಣ್ಣೀರು ಹಾಕಿದ ಹೆಡ್​ ಕೋಚ್​ ಗಂಭೀರ್​.!

SIRAJ_KOHLI_NEW

ಕೊನೆ ಪಂದ್ಯದ 2ನೇ ಇನ್ನಿಂಗ್ಸ್​ನಲ್ಲಿ ಒಟ್ಟು 30.1 ಓವರ್​ ಬೌಲಿಂಗ್​ ಮಾಡಿದ್ದ ಮೊಹಮ್ಮದ್ ಸಿರಾಜ್ ಅವರು 6 ಓವರ್​ ಮೆಡಿನ್ ಮಾಡಿದ್ದರು. ಇದರ ಜೊತೆಗೆ 104 ರನ್​ಗಳನ್ನು ಬಿಟ್ಟುಕೊಟ್ಟಿದ್ದರು. ಈ ಎಲ್ಲಕ್ಕಿಂತ ಮಿಗಿಲಾಗಿ ಒಟ್ಟು 5 ವಿಕೆಟ್​ಗಳನ್ನು ಕಬಳಿಸಿ ತಂಡಕ್ಕೆ ದೊಡ್ಡ ಕೊಡುಗೆ ನೀಡಿದರು. ಇಂಗ್ಲೆಂಡ್​ ಗೆಲುವಿಗೆ ಕೊನೆಯಲ್ಲಿ ಕೇವಲ 6 ರನ್​ಗಳು ಬೇಕಾಗಿದ್ದವು. ಟೀಮ್ ಇಂಡಿಯಾಕ್ಕೆ ಕೇವಲ 1 ವಿಕೆಟ್​ ಬೇಕಾಗಿತ್ತು. 

ವೋಕ್ಸ್ ಬ್ಯಾಟಿಂಗ್​ಗೆ ಬಂದರೂ, ಇಂಗ್ಲೆಂಡ್​ ಪಾಲಿಗೆ ಕೊನೆಯ ಭರವಸೆಯಾಗಿ ಉಳಿದಿದ್ದು ಗಸ್​​ ಅಟ್ಕಿನ್ಸನ್ ಮಾತ್ರ. 29 ಎಸೆತ ಎದುರಿಸಿ 17 ರನ್​ಗಳಿಸಿ ಭರವಸೆಯಾಗಿದ್ದ ಅಟ್ಕಿನ್ಸನ್​ ಅವರನ್ನು ಮೊಹಮ್ಮದ್ ಸಿರಾಜ್​ ಬೇಟೆಯಾಡಿದರು. ತಂಡದ 85ನೇ ಓವರ್​​​ ಮೊದಲ ಎಸೆತದಲ್ಲೇ ಅಟ್ಕಿನ್ಸನ್​​ನ ಕ್ಲೀನ್​ಬೋಲ್ಡ್​ ಮಾಡಿದ ಸಿರಾಜ್​​, ಟೀಮ್​ ಇಂಡಿಯಾವನ್ನ ಗೆಲುವಿನ ದಡ ಸೇರಿಸಿದರು. ಡ್ರೆಸ್ಸಿಂಗ್​ ರೂಮ್​ನಲ್ಲಿ, ಮೈದಾನದಲ್ಲಿ ಸಂಭ್ರಮಾಚರಣೆಯು ಮುಗಿಲು ಮುಟ್ಟಿತ್ತು.  

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ 

Mohammed Siraj
Advertisment