ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಶ್ರೀಗಳ ಭೇಟಿ
ಮನೆಯ ಆಧಾರ ಸ್ತಂಭವಾಗಿದ್ದ ತಂದೆಯೇ ತಾಯಿಯ ಕೊಲೆಯಾಗಿದೆ
ಶ್ರೀ ಮಠದಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವು ನೀಡುವ ಭರವಸೆ
ಚಿತ್ರದುರ್ಗ: ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಶ್ರೀಗಳು ಇತ್ತೀಚೆಗೆ ದಾವಣಗೆರೆ ರಸ್ತೆಯಲ್ಲಿನ ಭೋವಿ ಕಾಲೋನಿಯಲ್ಲಿ ನಿಧನರಾದ ಜನಾಂಗದವರ ಮನೆಗೆ ಭೇಟಿ ನೀಡಿದ್ದರು. ಈ ವೇಳೆ ಮನೆಯವರಿಗೆ ಸಾಂತ್ವನ ಹೇಳಿ ಧೈರ್ಯವನ್ನು ತೆಗೆದುಕೊಳ್ಳುವಂತೆ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಗಳು, ಈ ಘಟನೆ ಆಗಬಾರದಿತ್ತು ಆಗಿದೆ. ಈಗ ಮನೆಯಲ್ಲಿ ಸೂತಕದ ವಾತಾವರಣ ಇದೆ. ಮನೆಯ ಆಧಾರ ಸ್ತಂಭವಾಗಿದ್ದ ತಂದೆಯೇ ತಾಯಿಯನ್ನು ಕೊಲೆ ಮಾಡಿದ್ದಾನೆ ಇದರಿಂದ ಮಕ್ಕಳು ಅನಾಥರಾಗಿದ್ದಾರೆ.
ಇದನ್ನೂ ಓದಿ: ವಂದೇ ಭಾರತ್ ರೈಲಿನಲ್ಲಿ ಸರ್ವಿಸ್ ಸ್ಟಾಫ್ಗೆ ಬಿತ್ತು ಗೂಸಾ: ಪ್ರಯಾಣಿಕನ ಸಿಟ್ಟಿಗೆ ಕಾರಣ ಕೇಳಿದ್ರೆ ಶಾಕ್ ಆಗ್ತೀರಾ!
ಅನಾಥರಾದ ಮಕ್ಕಳನ್ನು ಸಾಕುವುದು ಕಷ್ಟವಾಗುತ್ತದೆ. ಇವರ ವಿದ್ಯಾಭ್ಯಾಸವೂ ಸಹ ಕುಂಟಿತವಾಗುತ್ತದೆ. ಈ ಹಿನ್ನೆಲೆಯಲ್ಲಿ ಶ್ರೀ ಮಠವೂ ಈ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವನ್ನು ನೀಡಲಿದೆ. ಅಲ್ಲದೆ ಚಿಕ್ಕ ಮಗುವಿನ ಪೂರ್ಣ ಪ್ರಮಾಣದ ಜವಾಬ್ದಾರಿಯನ್ನು ಶ್ರೀ ಮಠವೂ ವಹಿಸಿಕೊಳ್ಳಲಿದೆ. ಈಗಾಗಲೇ ಒಂದು ಮಗ ನಮ್ಮ ಶಾಲೆಯಲ್ಲಿ ಓದುತ್ತಿರುವುದರಿಂದ ಅದರ ಪೂರ್ಣ ಜವಾಬ್ದಾರಿಯನ್ನು ಸಹ ಮಠ ನೋಡಿಕೊಳ್ಳಲಿದೆ ಎಂದು ಶ್ರೀಗಳು ತಿಳಿಸಿದರು.
ಇಂದಿನ ದಿನದಲ್ಲಿ ಶಿಕ್ಷಣವನ್ನು ಕಲಿತರೆ ಮಾತ್ರ ಸಮಾಜದಲ್ಲಿ ಗೌರವ ಸಿಗಲು ಸಾಧ್ಯವಿದೆ. ಯಾವುದೇ ಕಾರಣಕ್ಕೂ ಕಲಿಕೆಯನ್ನು ಬಿಡಬೇಡಿ. ನಿಮ್ಮ ಕಲಿಕೆಗೆ ಶ್ರೀಮಠ ಪೂರ್ಣ ಪ್ರಮಾಣದಲ್ಲಿ ಸಹಾಯ ಮತ್ತು ಸಹಕಾರವನ್ನು ನೀಡಲಿದೆ. ಚಿಕ್ಕ ವಯಸ್ಸಿನಲ್ಲಿಯೇ ತಾಯಿಯನ್ನು ಕಳೆದುಕೊಂಡ ನೋವು ನಮ್ಮಗೆ ಅರ್ಥವಾಗುತ್ತದೆ. ಆದರೆ ಏನು ಮಾಡಲು ಆಗುವುದಿಲ್ಲ. ಈಗಾಗಲೇ ಘಟನೆ ನಡೆದು ಹೋಗಿದೆ. ಇದನ್ನು ನಾವುಗಳು ಸಹಿಸಿಕೊಳ್ಳಲೇ ಬೇಕಿದೆ ಧೈರ್ಯವನ್ನು ತಂದು ಕೊಳ್ಳಬೇಕಿದೆ ಎಂದರು.
ಇದನ್ನೂ ಓದಿ: ಮಹಾರಾಷ್ಟ್ರದ ಕಾಡಿನಲ್ಲಿ ಅಮೆರಿಕ ಮಹಿಳೆಯ ಚೀರಾಟ.. ಆರ್ತನಾದ ಕೇಳಿ ಬೆಚ್ಚಿ ಬಿದ್ದ ಜನ; ಆಗಿದ್ದೇನು?
ಇಂದಿನ ದಿನಮಾನದಲ್ಲಿ ಕುಡಿತ ಹೆಚ್ಚಾಗಿದೆ ಜನತೆ ತಮ್ಮ ದುಡಿಮೆಯಲ್ಲಿನ ಬಹು ಭಾಗವನ್ನು ಕುಡಿತಕ್ಕಾಗಿ ವ್ಯಯ ಮಾಡುತ್ತಿದ್ದಾರೆ. ಇದರಿಂದ ಹಲವಾರು ದುಷ್ಟಪರಿಣಾಮಗಳು ಸಂಭವಿಸುತ್ತವೆ. ಕುಡಿತದಿಂದ ಕುಡಿಯುವವರ ಆರೋಗ್ಯ ಹಾಳಾಗುವುದಲ್ಲದೆ ಕುಟುಂಬದ ನೆಮ್ಮದಿಯೂ ಸಹ ಹಾಳಾಗಲಿದೆ. ಇದರ ಬಗ್ಗೆ ಜಾಗೃತಿಯನ್ನು ಮೂಡಿಸುವ ಕಾರ್ಯವನ್ನು ಕೈಗ್ಗೊಳ್ಳುವಂತೆ ಸಮಾಜದ ಮುಖಂಡರಿಗೆ ಸೂಚನೆಯನ್ನು ನೀಡಿದ ಶ್ರೀಗಳು, ಮುಂಬರುವ ಶ್ರಾವಣದಲ್ಲಿ ಈ ಭಾಗದಲ್ಲಿ ಜನ ಜಾಗೃತಿಯ ಕಾರ್ಯಕ್ರಮವನ್ನು ಹಾಕಿಕೊಳ್ಳುವುದರ ಮೂಲಕ ಕುಡಿತದಿಂದ ಆಗುವ ದುಷ್ಪರಿಣಾಮದ ಬಗ್ಗೆ ಜಾಗೃತಿಯನ್ನು ಮೂಡಿಸುವ ಕಾರ್ಯವಾಗಬೇಕಿದೆ ಎಂದು ತಿಳಿಸಿದರು.
ಶ್ರೀಗಳ ಭೇಟಿ ಸಂದರ್ಭದಲ್ಲಿ ಭೋವಿ ಸಮಾಜದ ಅಧ್ಯಕ್ಷರಾದ ತಿಪ್ಪೇಸ್ವಾಮಿ, ನಗರಸಭೆಯ ಮಾಜಿ ಸದಸ್ಯರಾದ ವೆಂಕಟೇಶ್, ಮಂಜುನಾಥ್, ತಿಮ್ಮಣ್ಣ ಮಠದ ಸಿಇಓ ಗೋವಿಂದಪ್ಪ ಸೇರಿದಂತೆ ಇತರರು ಭಾಗವಹಿಸಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಶ್ರೀಗಳ ಭೇಟಿ
ಮನೆಯ ಆಧಾರ ಸ್ತಂಭವಾಗಿದ್ದ ತಂದೆಯೇ ತಾಯಿಯ ಕೊಲೆಯಾಗಿದೆ
ಶ್ರೀ ಮಠದಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವು ನೀಡುವ ಭರವಸೆ
ಚಿತ್ರದುರ್ಗ: ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಶ್ರೀಗಳು ಇತ್ತೀಚೆಗೆ ದಾವಣಗೆರೆ ರಸ್ತೆಯಲ್ಲಿನ ಭೋವಿ ಕಾಲೋನಿಯಲ್ಲಿ ನಿಧನರಾದ ಜನಾಂಗದವರ ಮನೆಗೆ ಭೇಟಿ ನೀಡಿದ್ದರು. ಈ ವೇಳೆ ಮನೆಯವರಿಗೆ ಸಾಂತ್ವನ ಹೇಳಿ ಧೈರ್ಯವನ್ನು ತೆಗೆದುಕೊಳ್ಳುವಂತೆ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಗಳು, ಈ ಘಟನೆ ಆಗಬಾರದಿತ್ತು ಆಗಿದೆ. ಈಗ ಮನೆಯಲ್ಲಿ ಸೂತಕದ ವಾತಾವರಣ ಇದೆ. ಮನೆಯ ಆಧಾರ ಸ್ತಂಭವಾಗಿದ್ದ ತಂದೆಯೇ ತಾಯಿಯನ್ನು ಕೊಲೆ ಮಾಡಿದ್ದಾನೆ ಇದರಿಂದ ಮಕ್ಕಳು ಅನಾಥರಾಗಿದ್ದಾರೆ.
ಇದನ್ನೂ ಓದಿ: ವಂದೇ ಭಾರತ್ ರೈಲಿನಲ್ಲಿ ಸರ್ವಿಸ್ ಸ್ಟಾಫ್ಗೆ ಬಿತ್ತು ಗೂಸಾ: ಪ್ರಯಾಣಿಕನ ಸಿಟ್ಟಿಗೆ ಕಾರಣ ಕೇಳಿದ್ರೆ ಶಾಕ್ ಆಗ್ತೀರಾ!
ಅನಾಥರಾದ ಮಕ್ಕಳನ್ನು ಸಾಕುವುದು ಕಷ್ಟವಾಗುತ್ತದೆ. ಇವರ ವಿದ್ಯಾಭ್ಯಾಸವೂ ಸಹ ಕುಂಟಿತವಾಗುತ್ತದೆ. ಈ ಹಿನ್ನೆಲೆಯಲ್ಲಿ ಶ್ರೀ ಮಠವೂ ಈ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವನ್ನು ನೀಡಲಿದೆ. ಅಲ್ಲದೆ ಚಿಕ್ಕ ಮಗುವಿನ ಪೂರ್ಣ ಪ್ರಮಾಣದ ಜವಾಬ್ದಾರಿಯನ್ನು ಶ್ರೀ ಮಠವೂ ವಹಿಸಿಕೊಳ್ಳಲಿದೆ. ಈಗಾಗಲೇ ಒಂದು ಮಗ ನಮ್ಮ ಶಾಲೆಯಲ್ಲಿ ಓದುತ್ತಿರುವುದರಿಂದ ಅದರ ಪೂರ್ಣ ಜವಾಬ್ದಾರಿಯನ್ನು ಸಹ ಮಠ ನೋಡಿಕೊಳ್ಳಲಿದೆ ಎಂದು ಶ್ರೀಗಳು ತಿಳಿಸಿದರು.
ಇಂದಿನ ದಿನದಲ್ಲಿ ಶಿಕ್ಷಣವನ್ನು ಕಲಿತರೆ ಮಾತ್ರ ಸಮಾಜದಲ್ಲಿ ಗೌರವ ಸಿಗಲು ಸಾಧ್ಯವಿದೆ. ಯಾವುದೇ ಕಾರಣಕ್ಕೂ ಕಲಿಕೆಯನ್ನು ಬಿಡಬೇಡಿ. ನಿಮ್ಮ ಕಲಿಕೆಗೆ ಶ್ರೀಮಠ ಪೂರ್ಣ ಪ್ರಮಾಣದಲ್ಲಿ ಸಹಾಯ ಮತ್ತು ಸಹಕಾರವನ್ನು ನೀಡಲಿದೆ. ಚಿಕ್ಕ ವಯಸ್ಸಿನಲ್ಲಿಯೇ ತಾಯಿಯನ್ನು ಕಳೆದುಕೊಂಡ ನೋವು ನಮ್ಮಗೆ ಅರ್ಥವಾಗುತ್ತದೆ. ಆದರೆ ಏನು ಮಾಡಲು ಆಗುವುದಿಲ್ಲ. ಈಗಾಗಲೇ ಘಟನೆ ನಡೆದು ಹೋಗಿದೆ. ಇದನ್ನು ನಾವುಗಳು ಸಹಿಸಿಕೊಳ್ಳಲೇ ಬೇಕಿದೆ ಧೈರ್ಯವನ್ನು ತಂದು ಕೊಳ್ಳಬೇಕಿದೆ ಎಂದರು.
ಇದನ್ನೂ ಓದಿ: ಮಹಾರಾಷ್ಟ್ರದ ಕಾಡಿನಲ್ಲಿ ಅಮೆರಿಕ ಮಹಿಳೆಯ ಚೀರಾಟ.. ಆರ್ತನಾದ ಕೇಳಿ ಬೆಚ್ಚಿ ಬಿದ್ದ ಜನ; ಆಗಿದ್ದೇನು?
ಇಂದಿನ ದಿನಮಾನದಲ್ಲಿ ಕುಡಿತ ಹೆಚ್ಚಾಗಿದೆ ಜನತೆ ತಮ್ಮ ದುಡಿಮೆಯಲ್ಲಿನ ಬಹು ಭಾಗವನ್ನು ಕುಡಿತಕ್ಕಾಗಿ ವ್ಯಯ ಮಾಡುತ್ತಿದ್ದಾರೆ. ಇದರಿಂದ ಹಲವಾರು ದುಷ್ಟಪರಿಣಾಮಗಳು ಸಂಭವಿಸುತ್ತವೆ. ಕುಡಿತದಿಂದ ಕುಡಿಯುವವರ ಆರೋಗ್ಯ ಹಾಳಾಗುವುದಲ್ಲದೆ ಕುಟುಂಬದ ನೆಮ್ಮದಿಯೂ ಸಹ ಹಾಳಾಗಲಿದೆ. ಇದರ ಬಗ್ಗೆ ಜಾಗೃತಿಯನ್ನು ಮೂಡಿಸುವ ಕಾರ್ಯವನ್ನು ಕೈಗ್ಗೊಳ್ಳುವಂತೆ ಸಮಾಜದ ಮುಖಂಡರಿಗೆ ಸೂಚನೆಯನ್ನು ನೀಡಿದ ಶ್ರೀಗಳು, ಮುಂಬರುವ ಶ್ರಾವಣದಲ್ಲಿ ಈ ಭಾಗದಲ್ಲಿ ಜನ ಜಾಗೃತಿಯ ಕಾರ್ಯಕ್ರಮವನ್ನು ಹಾಕಿಕೊಳ್ಳುವುದರ ಮೂಲಕ ಕುಡಿತದಿಂದ ಆಗುವ ದುಷ್ಪರಿಣಾಮದ ಬಗ್ಗೆ ಜಾಗೃತಿಯನ್ನು ಮೂಡಿಸುವ ಕಾರ್ಯವಾಗಬೇಕಿದೆ ಎಂದು ತಿಳಿಸಿದರು.
ಶ್ರೀಗಳ ಭೇಟಿ ಸಂದರ್ಭದಲ್ಲಿ ಭೋವಿ ಸಮಾಜದ ಅಧ್ಯಕ್ಷರಾದ ತಿಪ್ಪೇಸ್ವಾಮಿ, ನಗರಸಭೆಯ ಮಾಜಿ ಸದಸ್ಯರಾದ ವೆಂಕಟೇಶ್, ಮಂಜುನಾಥ್, ತಿಮ್ಮಣ್ಣ ಮಠದ ಸಿಇಓ ಗೋವಿಂದಪ್ಪ ಸೇರಿದಂತೆ ಇತರರು ಭಾಗವಹಿಸಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ