ನಿನ್ನೆ ಬೆಳಗ್ಗೆ ರೆಕಾರ್ಡ್ ರೂಂ ಕೀ ಕೇಳಿ ಓಡಾಡುತ್ತಿದ್ದ ಸಿಬ್ಬಂದಿ
ನೇಮಕಾತಿ ವಿಭಾಗದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಸಿಬ್ಬಂದಿ ಸಾವು
BMTC ಕಚೇರಿಯ ಮೂರನೇ ಮಹಡಿಯಲ್ಲಿ ಮೃತದೇಹ ಪತ್ತೆ
ಬೆಂಗಳೂರು: ಶಾಂತಿನಗರ BMTC ಕಚೇರಿಯಲ್ಲಿರುವ ಮೂರನೇ ಮಹಡಿಯಲ್ಲಿ ಸಿಬ್ಬಂದಿ ಆತ್ಮಹತ್ಯೆ ಮಾಡಿಕೊಂಡಿರೋ ಘಟನೆ ಬೆಳಕಿಗೆ ಬಂದಿದೆ. ನಿನ್ನೆ ಬೆಳಗ್ಗೆ ರೆಕಾರ್ಡ್ ರೂಂ ಕೀ ಕೇಳಿದ್ದ ಸಿಬ್ಬಂದಿ ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಸಾವನ್ನಪ್ಪಿರುವ ಸಿಬ್ಬಂದಿಯನ್ನು ಮಹೇಶ್ ಎಂದು ಗುರುತಿಸಲಾಗಿದೆ.
ಬಿಎಂಟಿಸಿ ಸಿಬ್ಬಂದಿ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ವಿಲ್ಸನ್ ಗಾರ್ಡನ್ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಿನ್ನೆ ಸಂಜೆಯೇ ಮಹೇಶ್ ಸಾವನ್ನಪ್ಪಿದ್ದು, ನೇಣು ಬಿಗಿದುಕೊಂಡಿರುವ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ.
ಇದನ್ನೂ ಓದಿ: ಬದುಕು ಸುಟ್ಟ ಬೆಂಕಿ.. ಅಪ್ಪ-ಅಮ್ಮನ ಕಳೆದುಕೊಂಡು ಅನಾಥರಾದ ರಮಾನಂದ ಶೆಟ್ಟಿ ಮಕ್ಕಳು..
42 ವರ್ಷದ ಮಹೇಶ ಅಥಣಿ ಮೂಲದವರು. ಇವರು ಡಿ12 ರಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಉದ್ಯೋಗದಲ್ಲಿ ಮುಂಬಡ್ತಿ ಬಂದು ನೇಮಕಾತಿ ವಿಭಾಗದಲ್ಲಿ ಕೆಲಸ ನಿರ್ವಹಿಸುತ್ತಿದ್ದ. ಮಹೇಶ್, ನಿನ್ನೆ ಸೆಕ್ಯೂರಿಟಿ ಗಾರ್ಡ್ ಬಳಿ ರೆಕಾರ್ಡ್ ಸೆಕ್ಷನ್ ಕೀ ಪಡೆದಿದ್ದಾನೆ. ನಿನ್ನೆ ಬೆಳಗ್ಗೆಯಿಂದ ರೆಕಾರ್ಡ್ ರೂಮ್ನಲ್ಲೇ ಓಡಾಟ ನಡೆಸುತ್ತಿದ್ದ. ನಿನ್ನೆ ಸಂಜೆ ಯಾರು ಇಲ್ಲದ ವೇಳೆ ವೈರ್ ಬಳಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಫ್ಯಾನ್ಗೆ ವೈರ್ ಹಾಕಿಕೊಂಡು ನೇಣು ಬಿಗಿದುಕೊಂಡಿದ್ದಾರೆ.
ಇದನ್ನೂ ಓದಿ: ಫಿಲ್ಮಿ ರೇಂಜ್ನಲ್ಲಿ ಶೆಡ್ಗೆ ಬೆಂಕಿಯಿಟ್ಟು ಸಾಯಿಸಿದ್ರು.. ಮೃತ ಸಭಾನಾಳ PSI ಕನಸು ಸುಟ್ಟು ಹೋಯ್ತು..
ಸಾವಿಗೆ ಕಾರಣವೇನು?
ಇತ್ತೀಚೆಗೆ ಮಹೇಶ್ ಅವರ ತಾಯಿ ಕ್ಯಾನ್ಸರ್ನಿಂದ ಸಾವನ್ನಪ್ಪಿದ್ದರು. ತಾಯಿ ಕಳೆದುಕೊಂಡ ಬಳಿಕ ಮಹೇಶ್ ಮಾನಸಿಕ ಖಿನ್ನತೆಗೆ ಒಳಗಾಗಿದ್ದ. ಕುಡಿತದ ದಾಸನವಾಗಿದ್ದ ಮಹೇಶ್ನಿಗೆ ಕುಟುಂಬಸ್ಥರು ಬುದ್ಧಿ ಹೇಳಿದ್ದರು. ಕುಡಿತ ಬಿಡಿಸಿದ್ದ ಕುಟುಂಬಸ್ಥರು ಸಾವಿನ ಸುದ್ದಿ ಕಂಗಾಲಾಗಿದ್ದಾರೆ. ಮಹೇಶ್ ಸಾವಿಗೆ ಬಿಎಂಟಿಸಿ ಸಿಬ್ಬಂದಿಗಳು ಸಂತಾಪ ಸೂಚಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿನ್ನೆ ಬೆಳಗ್ಗೆ ರೆಕಾರ್ಡ್ ರೂಂ ಕೀ ಕೇಳಿ ಓಡಾಡುತ್ತಿದ್ದ ಸಿಬ್ಬಂದಿ
ನೇಮಕಾತಿ ವಿಭಾಗದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಸಿಬ್ಬಂದಿ ಸಾವು
BMTC ಕಚೇರಿಯ ಮೂರನೇ ಮಹಡಿಯಲ್ಲಿ ಮೃತದೇಹ ಪತ್ತೆ
ಬೆಂಗಳೂರು: ಶಾಂತಿನಗರ BMTC ಕಚೇರಿಯಲ್ಲಿರುವ ಮೂರನೇ ಮಹಡಿಯಲ್ಲಿ ಸಿಬ್ಬಂದಿ ಆತ್ಮಹತ್ಯೆ ಮಾಡಿಕೊಂಡಿರೋ ಘಟನೆ ಬೆಳಕಿಗೆ ಬಂದಿದೆ. ನಿನ್ನೆ ಬೆಳಗ್ಗೆ ರೆಕಾರ್ಡ್ ರೂಂ ಕೀ ಕೇಳಿದ್ದ ಸಿಬ್ಬಂದಿ ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಸಾವನ್ನಪ್ಪಿರುವ ಸಿಬ್ಬಂದಿಯನ್ನು ಮಹೇಶ್ ಎಂದು ಗುರುತಿಸಲಾಗಿದೆ.
ಬಿಎಂಟಿಸಿ ಸಿಬ್ಬಂದಿ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ವಿಲ್ಸನ್ ಗಾರ್ಡನ್ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಿನ್ನೆ ಸಂಜೆಯೇ ಮಹೇಶ್ ಸಾವನ್ನಪ್ಪಿದ್ದು, ನೇಣು ಬಿಗಿದುಕೊಂಡಿರುವ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ.
ಇದನ್ನೂ ಓದಿ: ಬದುಕು ಸುಟ್ಟ ಬೆಂಕಿ.. ಅಪ್ಪ-ಅಮ್ಮನ ಕಳೆದುಕೊಂಡು ಅನಾಥರಾದ ರಮಾನಂದ ಶೆಟ್ಟಿ ಮಕ್ಕಳು..
42 ವರ್ಷದ ಮಹೇಶ ಅಥಣಿ ಮೂಲದವರು. ಇವರು ಡಿ12 ರಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಉದ್ಯೋಗದಲ್ಲಿ ಮುಂಬಡ್ತಿ ಬಂದು ನೇಮಕಾತಿ ವಿಭಾಗದಲ್ಲಿ ಕೆಲಸ ನಿರ್ವಹಿಸುತ್ತಿದ್ದ. ಮಹೇಶ್, ನಿನ್ನೆ ಸೆಕ್ಯೂರಿಟಿ ಗಾರ್ಡ್ ಬಳಿ ರೆಕಾರ್ಡ್ ಸೆಕ್ಷನ್ ಕೀ ಪಡೆದಿದ್ದಾನೆ. ನಿನ್ನೆ ಬೆಳಗ್ಗೆಯಿಂದ ರೆಕಾರ್ಡ್ ರೂಮ್ನಲ್ಲೇ ಓಡಾಟ ನಡೆಸುತ್ತಿದ್ದ. ನಿನ್ನೆ ಸಂಜೆ ಯಾರು ಇಲ್ಲದ ವೇಳೆ ವೈರ್ ಬಳಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಫ್ಯಾನ್ಗೆ ವೈರ್ ಹಾಕಿಕೊಂಡು ನೇಣು ಬಿಗಿದುಕೊಂಡಿದ್ದಾರೆ.
ಇದನ್ನೂ ಓದಿ: ಫಿಲ್ಮಿ ರೇಂಜ್ನಲ್ಲಿ ಶೆಡ್ಗೆ ಬೆಂಕಿಯಿಟ್ಟು ಸಾಯಿಸಿದ್ರು.. ಮೃತ ಸಭಾನಾಳ PSI ಕನಸು ಸುಟ್ಟು ಹೋಯ್ತು..
ಸಾವಿಗೆ ಕಾರಣವೇನು?
ಇತ್ತೀಚೆಗೆ ಮಹೇಶ್ ಅವರ ತಾಯಿ ಕ್ಯಾನ್ಸರ್ನಿಂದ ಸಾವನ್ನಪ್ಪಿದ್ದರು. ತಾಯಿ ಕಳೆದುಕೊಂಡ ಬಳಿಕ ಮಹೇಶ್ ಮಾನಸಿಕ ಖಿನ್ನತೆಗೆ ಒಳಗಾಗಿದ್ದ. ಕುಡಿತದ ದಾಸನವಾಗಿದ್ದ ಮಹೇಶ್ನಿಗೆ ಕುಟುಂಬಸ್ಥರು ಬುದ್ಧಿ ಹೇಳಿದ್ದರು. ಕುಡಿತ ಬಿಡಿಸಿದ್ದ ಕುಟುಂಬಸ್ಥರು ಸಾವಿನ ಸುದ್ದಿ ಕಂಗಾಲಾಗಿದ್ದಾರೆ. ಮಹೇಶ್ ಸಾವಿಗೆ ಬಿಎಂಟಿಸಿ ಸಿಬ್ಬಂದಿಗಳು ಸಂತಾಪ ಸೂಚಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ