/newsfirstlive-kannada/media/post_attachments/wp-content/uploads/2024/10/RCB_VIRAT.jpg)
ಬಹುನಿರೀಕ್ಷಿತ 2025ರ ಇಂಡಿಯನ್​ ಪ್ರೀಮಿಯರ್​ ಲೀಗ್​ ಮೆಗಾ ಹರಾಜಿಗೆ ಎಲ್ಲಾ ಫ್ರಾಂಚೈಸಿಗಳು ಲೆಕ್ಕಾಚಾರ ಶುರುಮಾಡಿವೆ. ಯಾರನ್ನು ರಿಟೈನ್ ಮಾಡಿಕೊಳ್ಳಬೇಕು? ಯಾರನ್ನೆಲ್ಲಾ ಹರಾಜಿನಲ್ಲಿ ಖರೀದಿ ಮಾಡಬೇಕು? ಅನ್ನೋ ಚಿಂತನೆ ನಡೆಸಿವೆ. ಅದರಲ್ಲಿ ಆರ್​ಸಿಬಿ ಕೂಡ ಹೊರತಾಗಿಲ್ಲ.
ಇತ್ತೀಚೆಗೆ ಭಾರತ ತಂಡವು ಬಾಂಗ್ಲಾದೇಶದ ವಿರುದ್ಧ ಟೆಸ್ಟ್​ ಸರಣಿ ಆಡಿತ್ತು. ವಿಶೇಷ ಅಂದರೆ ಈ ಸರಣಿಗೆ ಆರ್​ಸಿಬಿಯ ನಾಲ್ವರು ಆಟಗಾರರು ತಂಡದಲ್ಲಿದ್ದರು. ಮೂವರು ಪ್ಲೇಯಿಂಗ್-11ನಲ್ಲಿ ಸ್ಥಾನ ಪಡೆದುಕೊಂಡಿದ್ರು. ಅದರಲ್ಲೂ, ಯಂಗ್ ಬೌಲರ್​ ಆಕಾಶ್ ದೀಪ್ ತುಂಬಾನೇ ಇಂಪ್ರೆಸೀವ್ ಆಗಿದ್ದಾರೆ.
/newsfirstlive-kannada/media/post_attachments/wp-content/uploads/2024/09/Akash-deep.jpg)
ದುಲೀಪ್ ಟ್ರೋಫಿಯಲ್ಲಿ ಭರ್ಜರಿ ಪ್ರದರ್ಶನ ನೀಡಿ, ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದಿರುವ ಆಕಾಶ್ ದೀಪ್ ಮೊದಲ ಇನ್ನಿಂಗ್ಸ್​ನಲ್ಲಿ 17 ರನ್​ಗಳಿಸಿ 2 ವಿಕೆಟ್ ಪಡೆದು ಮಿಂಚಿದ್ರು. ಆಕಾಶ್​ ದೀಪ್ ಶೈನ್ ಆಗ್ತಿರುವ ಹಿನ್ನೆಲೆಯಲ್ಲಿ ಆರ್​ಸಿಬಿ ಹರಾಜಿನಲ್ಲಿ ಖರೀದಿಸುವ ಲೆಕ್ಕಾಚಾರದಲ್ಲಿದೆ. ಪ್ರತಿ ಬಾರಿ ಕೂಡ ಆರ್​ಸಿಬಿ ಬೌಲಿಂಗ್​ ಸೆಲೆಕ್ಷನ್​​ನಲ್ಲಿ ಫೇಲ್ ಆಗಿದ್ದೇ ಹೆಚ್ಚು. ಈ ಬಾರಿ ತಪ್ಪು ಮಾಡಬಾರದು ಅನ್ಕೊಂಡಿರುವ ಬೆಂಗಳೂರು ತಂಡ, ಟೀಂ ಇಂಡಿಯಾದ ಸ್ಟಾರ್ ಬೌಲರ್​​ಗಳನ್ನೇ ಹುಡುಕಿ ತರುವ ಲೆಕ್ಕಾಚಾರದಲ್ಲಿದೆ. ಅವರಲ್ಲಿ ಆಕಾಶ್ ದೀಪ್ ಕೂಡ ಒಬ್ಬರು ಎಂದು ಹೇಳಲಾಗಿದೆ.
ಆಕಾಶ್​ ದೀಪ್​ಗೆ ಮಣೆ
ಇನ್ನು, ಆಕಾಶ್ ದೀಪ್ ಅವರ ಮಿಂಚಿಂಗು ಆರ್​ಸಿಬಿಯ ಹಿರಿಯ ಆಟಗಾರ, ಟೀಂ ಇಂಡಿಯಾದ ವೇಗಿ ಸಿರಾಜ್​ ಅವರ ತಲೆನೋವಿಗೂ ಕಾರಣವಾಗಿದೆ. ಸಿರಾಜ್​​ಗೆ ಆಕಾಶ್ ದೀಪ್ ಟಫ್ ಕಾಂಪಿಟೇಟರ್ ಆಗೋದ್ರಲ್ಲಿ ಯಾವುದೇ ಡೌಟ್ ಇಲ್ಲ. ಆರ್​ಸಿಬಿಯಲ್ಲಿ ಸಿರಾಜ್​ಗೆ ಇರುವ ಸ್ಥಾನವನ್ನು ಆಕಾಶ್ ದೀಪ್ ಅಲಂಕರಿಸಿದರೂ ಅಚ್ಚರಿ ಇಲ್ಲ. ಕೆಲವು ಮಾಹಿತಿಗಳ ಪ್ರಕಾರ, ಸಿರಾಜ್ ಬದಲಿಗೆ ಆಕಾಶ್ ದೀಪ್ ಅವರನ್ನೇ ಆರ್​ಸಿಬಿ ರಿಟೈನ್ ಮಾಡಿಕೊಳ್ಳಲಿದೆ ಎನ್ನಲಾಗುತ್ತಿದೆ.
ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us