/newsfirstlive-kannada/media/media_files/2025/07/31/rashi_bhavisha-2025-07-31-22-55-03.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ವಿಶ್ವಾವಸುನಾಮ ಸಂವತ್ಸರ, ದಕ್ಷಿಣಾಯಣ, ವರುಷ ಋತು. ಶ್ರಾವಣ ಮಾಸ, ಶುಕ್ಲಪಕ್ಷ, ತ್ರಯೋದಶಿ ತಿಥಿ, ಪೂರ್ವಾಷಾಡ ನಕ್ಷತ್ರ. ರಾಹುಕಾಲ ಗುರುವಾರ ಮಧ್ಯಾಹ್ನ 1.30 ರಿಂದ 3.00 ರವರೆಗೆ
ಮೇಷ
- ನಿಮ್ಮ ಜೀವನ ಶೈಲಿಯಿಂದ ಬೇರೆಯವರಿಗೆ ಬೇಸರ ಉಂಟಾಗಬಹುದು
- ತಂತ್ರಜ್ಞಾನದ ವಿಚಾರದಲ್ಲಿ ಕೊರತೆ ಉಂಟಾಗಲಿದೆ
- ಸ್ನೇಹಿತರ ಮನೆಯಲ್ಲಿ ಶುಭ ಸಮಾರಂಭಕ್ಕೆ ಭಾಗವಹಿಸುತ್ತಾರೆ
- ಈ ದಿನ ಅಧಿಕ ಕೋಪ ಒಳ್ಳೆಯದಲ್ಲ
- ತಾಯಿಯವರಿಗೆ ಆರೋಗ್ಯದಲ್ಲಿ ದೊಡ್ಡ ಸಮಸ್ಯೆ ಕಾಡಬಹುದು ಎಚ್ಚರಿಕೆ
- ನಿಮ್ಮ ಕೆಲಸ ಕಾರ್ಯಗಳನ್ನು ಗೌರವಿಸುತ್ತಾರೆ
- ಅಮೃತ ಮೃತ್ಯುಂಜಯ ಜಪ ಮಾಡಿ
ವೃಷಭ
- ಸಹೋದರರಲ್ಲಿ ಕಲಹ, ವಾದ-ವಿವಾದಗಳು ಏರ್ಪಡಲಿದೆ
- ಆರ್ಥಿಕ ಸಮಸ್ಯೆ ಉಂಟಾಗಬಹುದು
- ನಿಜವಾದ ಸ್ನೇಹಿತರ ಅಸಹಕಾರ
- ಕೆಲಸ ಮುಂದೂಡಿಕೆ ಆಗುವುದರಿಂದ ಬೇಸರ ಅಗಲಿದೆ
- ಆರೋಗ್ಯದಲ್ಲಿ ವ್ಯತ್ಯಯ ಆಗಲಿದೆ
- ಪ್ರಮುಖ ನಿರ್ಧಾರಕ್ಕೆ ಅಡ್ಡಿ ಉಂಟಾಗಬಹುದು
- ಕುಬೇರನನ್ನು ಪ್ರಾರ್ಥಿಸಿ
ಮಿಥುನ
- ಸ್ನೇಹಿತರ ಮಧ್ಯೆ ಭಿನ್ನಾಭಿಪ್ರಾಯ ಇರಲಿದೆ
- ಮನೆಯಲ್ಲಿ ಅಸಮಾಧಾನ ಉಂಟಾಗಲಿದೆ
- ತಾಳ್ಮೆಯಿರಲಿ, ನಕಾರಾತ್ಮಕ ಆಲೋಚನೆಗಳು ಬೇಡ
- ನಿಮ್ಮ ಕಷ್ಟಕ್ಕೆ ಬೇರೆಯವರು ಸಹಕರಿಸುವುದಿಲ್ಲ
- ಇಂದು ಆತುರದ ನಿರ್ಧಾರ ಒಳಿತಲ್ಲ
- ನಿದ್ದೆ ಇಲ್ಲದೆ ಆಯಾಸದಿಂದ ಅನಾರೋಗ್ಯ ಕಾಡಲಿದೆ
- ಸುಬ್ರಹ್ಮಣ್ಯ ಸ್ವಾಮಿಯನ್ನು ಪ್ರಾರ್ಥಿಸಿ
ಕಟಕ
- ಇಂದು ಭವಿಷ್ಯದ ಯೋಜನೆಗಳನ್ನು ಚರ್ಚಿಸಬಹುದು
- ಪ್ರಯಾಣ ಮಾಡುವುದರಿಂದ ಆಯಾಸ ಆಗಲಿದೆ
- ದೊಡ್ಡವರ ಮಾತನ್ನ ನಿರ್ಲಕ್ಷ ಮಾಡಬೇಡಿ
- ಮನೆ ಹಾಗೂ ವೃತ್ತಿಯಲ್ಲಿ ಅನಾನುಕೂಲ
- ಮದುವೆ ವಿಚಾರ ಚರ್ಚೆ ಮಾಡುತ್ತೀರಿ
- ಇಂದು ಪ್ರೇಮಿಗಳಿಗೆ ಶುಭದಿನ
- ಆಸ್ತಿ ವಿಚಾರಕ್ಕಾಗಿ ಮಾತುಕತೆ ನಡೆಯಬಹುದು
- ಭೂವರಾಹನನ್ನು ಪ್ರಾರ್ಥಿಸಿ
ಸಿಂಹ
- ಮಾನಸಿಕ ಖಿನ್ನತೆ ಕಾಡಬಹುದು
- ವಿವಾಹ ವಿಚಾರ ಪ್ರಸ್ತಾಪ ಆಗುವುದರಿಂದ ಕುಟುಂಬದಲ್ಲಿ ನೆಮ್ಮದಿ
- ಅನಾರೋಗ್ಯ ಪೀಡಿತರು ಚೇತರಿಕೆ ಕಾಣುತ್ತಾರೆ
- ಇಂದು ನಿಮಗೆ ಒತ್ತಡದ ದಿನ
- ಮಕ್ಕಳಿಂದ ಅಸಮಾಧಾನ ಇದೆ
- ಹಳೆಯ ನೆನಪುಗಳು ಕಣ್ಣೀರು ತರಿಸಬಹುದು
- ಸ್ವಯಂವರ ಪಾರ್ವತಿ ಪ್ರಾರ್ಥನೆ ಮಾಡಿ
ಕನ್ಯಾ
- ಕುಟುಂಬದಲ್ಲಿ ಮಂಗಳಕಾರ್ಯದ ಚರ್ಚೆ ಆಗಲಿದೆ
- ಮಕ್ಕಳಲ್ಲಿ ಪ್ರಗತಿ, ಸಂತೋಷವಿದೆ
- ಇಂದು ಪ್ರೇಮಿಗಳಿಗೆ ಶುಭವಿದೆ
- ಅನಗತ್ಯ ಮಾತಿನಿಂದ ಅಪಮಾನ ಆಗಬಹುದು
- ಜವಾಬ್ದಾರಿ ಹೆಚ್ಚಾಗಿ ಆತಂಕ ಸೃಷ್ಠಿಯಾಗಲಿದೆ
- ಇಂದು ವಿದ್ಯಾರ್ಥಿಗಳಿಗೆ ಶುಭದಿನ
- ಹಳೆಯ ಕೇಸ್ ಗಳು ಕೋರ್ಟ್ ನಲ್ಲಿ ಇತ್ಯರ್ಥ ಆಗಲಿದೆ
- ಪಿತ್ರಾರ್ಜಿತ ಆಸ್ತಿಯ ವಿಚಾರದಲ್ಲಿ ಗೊಂದಲ ಆಗಬಹುದು
- ಲಲಿತಾ ಸಹಸ್ರನಾಮ ಪಠಿಸಿ
ತುಲಾ
- ಸ್ತ್ರೀಯರಿಗೆ ಆರೋಗ್ಯ ಸಮಸ್ಯೆ ಕಾಡಬಹುದು
- ಬೆನ್ನು ನೋವಿನಿಂದ ನರಳುತ್ತೀರಿ ಎಚ್ಚರಿಕೆ ಇರಲಿ
- ಶರೀರದಲ್ಲಿ ಸಮಸ್ಯೆ, ನೋವು ಉಂಟಾಗಬಹುದು
- ಇಂದು ನೀವು ಭಾವನಾತ್ಮಕವಾಗಿ ದುರ್ಬಲರಾಗುತ್ತೀರಿ
- ಮಕ್ಕಳಿಂದ ತೊಂದರೆಯಾಗುವುದರಿಂದ ದೂರ ಆಗುತ್ತೀರಿ
- ಹಣದ ಅಡಚಣೆ ಆಗಬಹುದು
- ಐಶ್ವರ್ಯ ಲಕ್ಷ್ಮಿಯನ್ನು ಪ್ರಾರ್ಥಿಸಿ
ವೃಶ್ಚಿಕ
ವೃತ್ತಿಯಲ್ಲಿ , ಕೆಲಸದಲ್ಲಿ ಕಿರುಕುಳ ಆಗಬಹುದು
- ಇಂದು ಯಾವುದೇ ಆತುರದ ನಿರ್ಧಾರವನ್ನು ಮಾಡಬೇಡಿ
- ದಾಂಪತ್ಯದಲ್ಲಿ ಕಲಹ ಉಂಟಾಗಬಹುದು
- ಆತ್ಮವಿಶ್ವಾಸದ ಕೊರತೆ ಆಗಲಿದೆ
- ಅತಿಯಾದ ಕೋಪ ನಿಷ್ಠೂರಕ್ಕೆ ಕಾರಣ
- ಮಾನಸಿಕ ಬೇಸರದಿಂದ ಜಿಗುಪ್ಸೆ ಉಂಟಾಗಲಿದೆ
- ಲಕ್ಷ್ಮಿನಾರಾಯಣ ಉಪಾಸನೆ ಮಾಡಿ
ಧನುಸ್
- ಹಿರಿಯರ ಆಸ್ತಿ ವಿಚಾರದಲ್ಲಿ ಕಲಹ
- ಕರ್ತವ್ಯ ನಿರ್ವಹಣೆ ನಿಯಮ ಬದ್ದವಾಗಿರಲಿ
- ಮನೆಯಲ್ಲಿ ಆಶಾಂತಿಯ ವಾತಾವರಣ
- ಈ ದಿನ ನಿಮಗೆ ದೊಡ್ಡ ಆಲೋಚನೆಗಳಿರುತ್ತವೆ
- ಕಷ್ಟಪಟ್ಟು ಮಾಡಿದ ಕೆಲಸ ಫಲ ಕೊಡುವುದಿಲ್ಲ
- ನೆರೆಹೊರೆಯವರಿಂದ ಅವಮಾನ ಆಗಬಹುದು
- ಈಶ್ವರಾರಾಧನೆ ಮಾಡಿ
ಮಕರ
- ಮನೆಯ ವಾತಾವರಣ ಚೆನ್ನಾಗಿರುತ್ತದೆ
- ಹಣ ಖರ್ಚಾಗುವುದರಿಂದ ಬೇಸರ ಆಗಲಿದೆ
- ಉದೋಗ್ಯದಲ್ಲಿ ಸಣ್ಣ ಬದಲಾವಣೆಯಾಗಬಹುದು
- ಇಂದು ಶತ್ರುಗಳಿಗೆ ಅಧೈರ್ಯ
- ಮಕ್ಕಳ ವಿಚಾರದಲ್ಲಿ ತುಂಬಾ ಅನುಕೂಲವಿದೆ
- ಅಣ್ಣ ತಮ್ಮಂದಿರಲ್ಲಿ ಕಲಹವಿರುತ್ತದೆ
- ವಿಷ್ಣು ಸಹಸ್ರನಾಮ ಪಠಿಸಿ
ಕುಂಭ
- ಇಂದು ಮನೆಯಲ್ಲಿ ಸಮಾಧಾನವಿರುವುದಿಲ್ಲ
- ನೌಕರಿಯ ಸ್ಥಳದಲ್ಲಿ ಹಲವಾರು ಚರ್ಚೆ ಆಗಲಿದೆ
- ಈ ದಿನ ಮಕ್ಕಳಿಗೆ ಪ್ರಗತಿಯಿದೆ
- ಇಂದು ವಿದ್ಯಾರ್ಥಿಗಳಿಗೆ ಅನೂಕುಲವಿದೆ
- ದಾಂತ್ಯದಿಂದ ವೈಮನಸ್ಸು ದೂರವಾಗುತ್ತದೆ
- ಈ ದಿನ ನೀವು ನಿಂದನೆಗೆ ಒಳಗಾಗುತ್ತೀರಿ
- ಮನೆದೇವರಿಗೆ ತುಪ್ಪದ ದೀಪ ಹಚ್ಚಿ
ಮೀನ
- ವಿದೇಶದಿಂದ ಶುಭ ವಾರ್ತೆ ಕೇಳುತ್ತೀರಿ
- ಷೇರು ಮಾರುಕಟ್ಟೆಯಲ್ಲಿ ಲಾಭ ಸಿಗಲಿದೆ
- ಕೆಲಸದ ಒತ್ತಡ ಹೆಚ್ಚಾಗುವುದರಿಂದ ಆಯಾಸ
- ವ್ಯಾಪಾರದಲ್ಲಿ ಹೊಸ ಒಪ್ಪಂದ ಮಾಡಬಹುದು
- ವ್ಯಾವಹಾರಿಕ ವಿಚಾರಗಳನ್ನು ಮನೆಯಲ್ಲಿ ವಿನಿಮಯ ಮಾಡಿಕೊಳ್ಳಿ
- ಆರೋಗ್ಯದ ಬಗ್ಗೆ ಗಮನವಿರಲಿ
- ಇಷ್ಟ ದೇವರ ಪ್ರಾರ್ಥನೆ ಮಾಡಿ.
ಇದನ್ನೂ ಓದಿ: ರಣಭೀಕರ ಮೇಘಸ್ಫೋಟಕ್ಕೆ ತತ್ತರಿಸಿದ ಉತ್ತರಾಖಂಡ್..
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ