/newsfirstlive-kannada/media/media_files/2025/10/28/kpl-1-2025-10-28-16-19-04.jpg)
ಬಳ್ಳಾರಿ: ಅಸುಂಡಿ ಗ್ರಾಮದಲ್ಲಿ ನಡೆದ ಅನುಮಾನಸ್ಪದ ರಸ್ತೆ ಅಪಘಾತ ಪ್ರಕರಣಕ್ಕೆ ಬಿಗ್ ಟ್ವಿಸ್ಟ್​ ಸಿಕ್ಕಿದೆ. ಅಕ್ಪೋಬರ್ 23 ರಂದು ರಾತ್ರಿ ರಸ್ತೆ ಅಪಘಾತದ ಹೆಸರಲ್ಲಿ ಪ್ರಿ ಪ್ಲಾನ್​ ಮಾಡಿ ರವಿ (30)ಯನ್ನು ಕೊ* ಮಾಡಿರೋದು ತನಿಖೆಯಿಂದ ತಿಳಿದುಬಂದಿದೆ.
/filters:format(webp)/newsfirstlive-kannada/media/media_files/2025/10/28/kpl-2025-10-28-16-20-05.jpg)
ಘಟನೆಯ ಹಿನ್ನಲೆ ಏನು..?
ವಾರದ ಹಿಂದೆ ಅಸುಂಡಿ ಗ್ರಾಮದಲ್ಲಿ ಮಹಿಳೆಯ ಮೇಲೆ ಅತ್ಯಾ*ರವಾಗಿತ್ತು. ಸದ್ಯ ರವಿಯನ್ನು ಕೊ* ಮಾಡಿದ ಆರೋಪಿ ಹೊನ್ನೂರಸ್ವಾಮಿಯ ಸಹೋದರ ಈ ಕೃತ್ಯವನ್ನೆಸಗಿದ್ದ. ಅ*ಚಾರವಾದ ಸಂತ್ರಸ್ತೆ ಪರ ರವಿ ಮುಂದೆ ನಿಂತು ಕೇಸ್ ದಾಖಲಿಸಿ ಆರೋಪಿಗಳಿಗೆ ಜೈಲಿಗೆ ಹೋಗುವಂತೆ ಮಾಡಿದ್ದ. ಇದರ ಪರಿಣಾಮ ಅತ್ಯಾ*ರಿ ಕುಟುಂಬಸ್ಥರು ರವಿ ಮೇಲೆ ಕೆಂಡಕಾರುತ್ತಿದ್ದರು.
ಇದೇ ಸೇಡಿನ ಹಿನ್ನಲೆ ಕಳೆದ ವಾರ ಬೈಕ್​ನಲ್ಲಿ ಬರುತ್ತಿದ್ದ ರವಿಯನ್ನು A1 ಆರೋಪಿ ಹೊನ್ನೂರಸ್ವಾಮಿ, 10 ಆರೋಪಿಗಳೊಂದಿಗೆ ಪ್ರೀಪ್ಲ್ಯಾನ್ ಮಾಡಿ ಸುತ್ತಿಗೆಯಿಂದ ತೆಲೆಗೆ ಹಾಗು ಮುಖಕ್ಕೆ ಹೊಡೆದು ಕೊ*ಗೈದಿದ್ದಾರೆ. ಪಿಡಿಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅರೋಪಿಗಳಾದ ಹೊನ್ನೂರಸ್ವಾಮಿ, ಶೇಖರ್, ಸಣ್ಣ ಹೊನ್ನೂರಪ್ಪ, ದೊಡ್ಡ ಯೆರೆಪ್ಪ, ನಾಗರಾಜ, ಆಟೋ ಎರೀಸ್ವಾಮಿ, ಪ್ರಕಾಶ, ಸುರೇಂದ್ರ, ಹೊನ್ನೂರಸ್ವಾಮಿ, ಪ್ರಸಾದರನ್ನು ಬಂಧಿಸಿದ್ದಾರೆ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us