3 ವರ್ಷದ ಮಗು ಬಿಟ್ಟು ಖಾಸಗಿ ಬ್ಯಾಂಕ್ ಉದ್ಯೋಗಿಯ ಹೆಂಡತಿ ನೇಣಿಗೆ ಶರಣು.. ಕಾರಣ?

ಕಳೆದ ಮೂರು ವರ್ಷಗಳಿಂದ ಪತ್ನಿ ಜೊತೆ ಗಲಾಟೆ ಮಾಡಲು ಶುರು ಮಾಡಿದ್ದನು. ರವೀಶ್ ಜೊತೆಯೇ ವಾಸವಿದ್ದ ಸಹೋದರ ಲೋಕೇಶ್ ಕೂಡ ರಕ್ಷಿತಾ ಜೊತೆ ಗಲಾಟೆ ಮಾಡುತ್ತಿದ್ದನು. ನಿನ್ನೆ ರಾತ್ರಿ ಕೂಡ ಈ ಇಬ್ಬರೂ ಮೊದಲಿನಿಂತೆ ಗಲಾಟೆ ಮಾಡಿದ್ದಾರೆ.

author-image
Bhimappa
BNG_WIFE
Advertisment

ಬೆಂಗಳೂರು: ಕೌಟುಂಬಿಕ ಕಲಹದಲ್ಲಿ ಗೃಹಿಣಿಯೊಬ್ಬರು ನೇಣು ಬಿಗಿದುಕೊಂಡು ಪ್ರಾಣ ಬಿಟ್ಟಿರುವ ಘಟನೆ ಸಿಲಿಕಾನ್ ಸಿಟಿಯ ಲಗ್ಗೆರೆಯ ಮುನೇಶ್ವರ ಬ್ಲಾಕ್ ಬಳಿ ನಡೆದಿದೆ. 

ಲಗ್ಗೆರೆಯ ಮುನೇಶ್ವರ ಬ್ಲಾಕ್ ನಿವಾಸಿ ರಕ್ಷಿತಾ (26) ಜೀವ ಕಳೆದುಕೊಂಡವರು. ಈ ಮಹಿಳೆ 4 ವರ್ಷಗಳ ಹಿಂದೆ ಖಾಸಗಿ ಬ್ಯಾಂಕ್ ಉದ್ಯೋಗಿ ರವೀಶ್​ ಎನ್ನುವನನ್ನ ಮದುವೆಯಾಗಿದ್ದರು. ಆದರೆ ಕಳೆದ ಮೂರು ವರ್ಷಗಳಿಂದ ಪತ್ನಿ ಜೊತೆ ಗಲಾಟೆ ಮಾಡಲು ಶುರು ಮಾಡಿದ್ದನು. ರವೀಶ್ ಜೊತೆಯೇ ವಾಸವಿದ್ದ ಸಹೋದರ ಲೋಕೇಶ್ ಕೂಡ ರಕ್ಷಿತಾ ಜೊತೆ ಗಲಾಟೆ ಮಾಡುತ್ತಿದ್ದನು. ನಿನ್ನೆ ರಾತ್ರಿ ಕೂಡ ಈ ಇಬ್ಬರೂ ಮೊದಲಿನಿಂತೆ ಗಲಾಟೆ ಮಾಡಿದ್ದಾರೆ. 

ಇದನ್ನೂ ಓದಿ: ಅಗ್ನಿ ಪರೀಕ್ಷೆಯಲ್ಲಿ ಶುಭ್​ಮನ್​ ಗಿಲ್.. ‘ಯುವರಾಜ’ನ ಮುಂದಿವೆ 5 ಬಿಗ್ ಚಾಲೆಂಜ್..!

BNG_WIFE_1

ನಿತ್ಯ ಜಗಳದಿಂದ ಮನನೊಂದಿದ್ದ ಮಹಿಳೆ, ಇಂದು ಬೆಳಗ್ಗೆ ನೇಣು ಬಿಗಿದುಕೊಂಡು ಪ್ರಾಣ ಬಿಟ್ಟಿದ್ದಾರೆ. ಈಕೆಯ ಗಂಡ ರವೀಶ್ ಖಾಸಗಿ ಬ್ಯಾಂಕ್​ನಲ್ಲಿ ಮ್ಯಾನೇಜರ್​ ಆಗಿ ಕೆಲಸ ಮಾಡುತ್ತಿದ್ದಾನೆ. ಈತನೇ ಹೆಂಡತಿಯ ಜೀವ ತೆಗೆದಿದ್ದಾನೆ ಎಂದು ಮಹಿಳೆಯ ಕುಟುಂಬಸ್ಥರು ಆರೋಪ ಮಾಡಿದ್ದಾರೆ. ಪತ್ನಿ ಜೊತೆ ಮೂರು ವರ್ಷದ ಹೆಣ್ಣು ಮಗುವಿನ ಮೇಲೆಯೂ ಹಲ್ಲೆ ಮಾಡುತ್ತಿದ್ದನು ಎಂದು ಕುಟುಂಬಸ್ಥರು ಗಂಭೀರವಾದ ಆರೋಪ ಮಾಡಿದ್ದಾರೆ. 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Kannada News Bangalore News First Live News First Web
Advertisment