/newsfirstlive-kannada/media/media_files/2025/08/09/bng_rowdysheeter-2025-08-09-11-31-40.jpg)
ಬೆಂಗಳೂರು: ಆಗ ತಾನೆ ಪರಿಚಯವಾಗಿ ಹೋಗೋ, ಬಾರೋ ಎಂದು ಮಾತನಾಡಿಸಿದ್ದಕ್ಕೆ ರೌಡಿಶೀಟರೊಬ್ಬನ ಜೀವ ತೆಗೆದಿರುವ ಘಟನೆ ಸೋಲದೇವನಹಳ್ಳಿ ಠಾಣೆ ವ್ಯಾಪ್ತಿಯ ಚಿಕ್ಕಬಾಣಾವರದ ಮಾರುತಿನಗರ ಬಳಿ ನಡೆದಿದೆ.
ಚಿಕ್ಕಬಾಣಾವರದ ನಿವಾಸಿ ಪ್ರತಾಪ್ ಜೀವ ಕಳೆದುಕೊಂಡವರು. ಈ ಸಂಬಂಧ ಕೆಬ್ಬೆಪಾಳ್ಯದ ನಿವಾಸಿಗಳಾದ ಅಕ್ಷಯ್ ಅಲಿಯಾಸ್ ಕುಮಾರಿ, ತೇಜಸ್ ಹಾಗೂ ಲಿಖಿತ್ ಎನ್ನುವವರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಚಿಕ್ಕಬಾಣಾವರದ ಮಾರುತಿನಗರ ಬಳಿ ತಡರಾತ್ರಿ 12 ಗಂಟೆಗೆ ಸುಮಾರಿಗೆ ಪ್ರತಾಪ್ಗೆ ಡ್ರ್ಯಾಗರ್ನಿಂದ ಇರಿದು ಜೀವ ತೆಗೆಯಲಾಗಿದೆ.
ಇದನ್ನೂ ಓದಿ:6, 6, 6, 6, 6, 6, 6, 6, 6; ಸಿಡಿಲಬ್ಬರದ ಸೆಂಚುರಿ ಸಿಡಿಸಿದ ಪ್ರಿಯಾಂಶ್ ಆರ್ಯ.. DPLನಲ್ಲಿ ಮಹತ್ವದ ದಾಖಲೆ
ರೌಡಿಶೀಟರ್ ಪ್ರತಾಪ್ ಹಾಗೂ ಈ ಮೂವರು ನಡುವೆ ನಿನ್ನೆ ಗುರುಕೃಪಾ ಬಾರ್ ಬಳಿ ಪರಿಚಯವಾಗಿದೆ. ಬಾರ್ ಮುಚ್ಚಿದ್ದರಿಂದ ಹೋಗ್ರೋ, ಬಾರೋ ಎಂದು ಕ್ಲೋಸ್ ಆಗಿಯೇ ಮಾತನಾಡಿದ್ದಾರೆ. ಈ ವೇಳೆ ಮಾತಿಗೆ ಮಾತು ಬೆಳೆದು ಜಗಳವಾಗಿ, ಅಲ್ಲಿಂದ ಎಲ್ಲರೂ ಹೋಗಿದ್ದರು. ಆದರೆ ಮನೆಗೆ ಹೋಗಿದ್ದ ಆರೋಪಿಗಳು ಡ್ರ್ಯಾಗರ್ ತಂದಿದ್ದರು.
ಪ್ರತಾಪ್ ನಡೆದುಕೊಂಡು ಹೋಗುವಾಗ ಬೈಕ್ನಲ್ಲಿ ಬಂದ ಆರೋಪಿಗಳು ಡ್ರ್ಯಾಗರ್ ನಿಂದ ಇರಿದಿದ್ದಾರೆ. ಚಾಲನೆಯಲ್ಲಿದ್ದ ಬೈಕ್ನಿಂದಲೇ ಪ್ರತಾಪ್ಗೆ ಇರಿದಿದ್ದರು. ಬೈಕ್ ವೇಗ ಇದ್ದಿದ್ದರಿಂದ ಡ್ರ್ಯಾಗರ್ ಹೊಟ್ಟೆ ಸೀಳಿತ್ತು. ಇದರಿಂದ ರಕ್ತದ ಮಡುವಿನಲ್ಲೇ ಪ್ರತಾಪ್ ಉಸಿರು ಚೆಲ್ಲಿದ್ದಾನೆ. ಇನ್ನು ಈ ಘಟನೆ ಸಂಬಂಧ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದ್ದು ಮೂವರು ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ