/newsfirstlive-kannada/media/media_files/2025/12/27/chikkodi-sunila-2025-12-27-09-22-05.jpg)
ಚಿಕ್ಕೋಡಿ: ಕಾಲು ಜಾರಿ ಆಕಸ್ಮಿಕವಾಗಿ ಬಾವಿಗೆ ಬಿದ್ದು ಯುವಕ ಮೃತಪಟ್ಟಿರುವ ದಾರುಣ ಘಟನೆ ನಿಪ್ಪಾಣಿ ತಾಲೂಕಿನ ಗಳತಗಾ ಗ್ರಾಮದಲ್ಲಿ ನಡೆದಿದೆ.
ಗಳತಗಾ ಗ್ರಾಪಂ ವ್ಯಾಪ್ತಿಯ ಭೀಮಾಪುರವಾಡಿ ಗ್ರಾಮದ 21 ವರ್ಷದ ಯುವಕ ಸುನೀಲ ಬಾಳಾಸಾಹೇಬ ತಳಕರ ಮೃತ ಯುವಕ. ಉಪಹಾರಕ್ಕಾಗಿ ಕುಡಿಯುವ ನೀರಿನ ವ್ಯವಸ್ಥೆ ಮಾಡುವ ಆತುರದಲ್ಲಿ ದುರ್ಘಟನೆ ನಡೆದಿದೆ. ನೀರು ತರಲು ಹೋದಾಗ ಆಕಸ್ಮಿಕವಾಗಿ ಬಾವಿಗೆ ಬಿದ್ದು ಮೃತಪಟ್ಟಿದ್ದಾನೆ.
ಸುನೀಲ, ಕಳೆದ ಎರಡು ವರ್ಷಗಳಿಂದ ಕಬ್ಬು ಕಟಾವು ಮಾಡಲು ಹೋಗುತ್ತಿದ್ದ. ಮುಂಜಾನೆ ರೈತ ಮಹಾವೀರ ಖೋತ ಅವರು ಕಟಾವುದಾರರಿಗೆ ಚಹಾ-ಉಪಹಾರದ ವ್ಯವಸ್ಥೆ ಮಾಡಿದ್ದರು. ತಮ್ಮ ಸಹಚರರಿಗೆ ನೀರು ತರಲು ಹೋದಾಗ ಹೊಲದಲ್ಲಿನ ಬಾವಿಗೆ ಕಾಲುಜಾರಿ ಬಿದ್ದಿದ್ದಾನೆ.
ನೀರು ತರಲು ಹೋದವನು ಇನ್ನೂ ಏಕೆ ಬಂದಿಲ್ಲ ಎಂದು ನೋಡಿದಾಗ ಬಾವಿಯ ಗೋಡೆ ಕುಸಿದು ಬಾವಿಯಲ್ಲಿ ಬಿದ್ದಿರೋದು ಕಂಡುಬಂದಿದೆ. ಅಲ್ಲಿದ್ದ ರೈತರು ಹಾಗೂ ಕಾರ್ಮಿಕರು ಸದಲಗಾ ಪೊಲೀಸ್ ಠಾಣೆಗೆ ನಡೆದ ಘಟಣೆಯ ಕುರಿತು ತಿಳಿಸಿದ್ದಾರೆ.
ಸದಲಗಾ ಪಿಎಸ್ಐ ಶಿವಕುಮಾರ ಬಿರಾದಾರ ಆಗಮಿಸಿ ಘಟಣೆಯ ವಿವರ ಪಡೆದರು. ಅಗ್ನಿಶಾಮಕ ದಳದ ಸಿಬ್ಬಂದಿ ಮೃತದೇಹ ಬಾವಿಯಿಂದ ಹೊರತೆಗೆದಿದ್ದಾರೆ. ಸದಲಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ನವವಿವಾಹಿತೆ ಗಾನವಿ ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ಪತ್ನಿ ಬೆನ್ನಲ್ಲೇ ಸೂರಜ್ ಆತ್ಮಹತ್ಯೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us