ನವವಿವಾಹಿತೆ ಗಾನವಿ ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ಪತ್ನಿ ಬೆನ್ನಲ್ಲೇ ಸೂರಜ್ ಆತ್ಮಹತ್ಯೆ

ಬೆಂಗಳೂರಿನಲ್ಲಿ ನವವಿವಾಹಿತೆ ಗಾನವಿ ಸುಸೈಡ್ ಪ್ರಕರಣಕ್ಕೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ನವವಿವಾಹಿತೆ ಗಾನವಿ ಆತ್ಮಹತ್ಯೆ ಬಳಿಕ ಗಾನವಿ ಪತಿ ಸೂರಜ್, ತಾಯಿ ಜಯಂತಿ ಮತ್ತು ಸೂರಜ್ ಸೋದರ ಸಂಜಯ್ ನಾಗಪುರಕ್ಕೆ ತೆರಳಿದ್ರು.

author-image
Ganesh Kerekuli
bengaluru Ganavi case
Advertisment
  • ಪತ್ನಿ ಗಾನವಿ ಬೆನ್ನಲ್ಲೇ ಪತಿ ಸೂರಜ್​ ಆತ್ಮಹತ್ಯೆಗೆ ಶರಣು
  • ಮೊನ್ನೆ ಆತ್ಮಹತ್ಯೆ ಮಾಡಿಕೊಂಡಿದ್ದ ನವವಿವಾಹಿತೆ ಗಾನವಿ
  • ಇದೀಗ ಮೃತ ಗಾನವಿ ಪತಿ ಸೂರಜ್ ಆತ್ಮಹತ್ಯೆಗೆ ಶರಣು

ಬೆಂಗಳೂರಿನಲ್ಲಿ ನವವಿವಾಹಿತೆ ಗಾನವಿ ಸುಸೈಡ್ ಪ್ರಕರಣಕ್ಕೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ನವವಿವಾಹಿತೆ ಗಾನವಿ ಆತ್ಮಹತ್ಯೆ ಬಳಿಕ ಗಾನವಿ ಪತಿ ಸೂರಜ್, ತಾಯಿ ಜಯಂತಿ ಮತ್ತು ಸೂರಜ್ ಸೋದರ ಸಂಜಯ್ ನಾಗಪುರಕ್ಕೆ ತೆರಳಿದ್ರು.

ಅಲ್ಲಿ ಸೂರಜ್  ಆತ್ಮಹತ್ಯೆಗೆ ಶರಣಾಗಿದ್ದಾನೆ. ಇನ್ನು, ತಾಯಿ ಜಯಂತಿ ಕೂಡ ಆತ್ಮಹತ್ಯೆಗೆ ಯತ್ನಿಸಿ  ನಾಗಪುರದ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸ್ತಿದ್ದಾರೆ. ಸಂಬಂಧಿಕರ ಅವಮಾನ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಮಗಳು ಆತ್ಮಹತ್ಯೆ ಬೆನ್ನಲ್ಲೆ ‘ಸೂರಜ್​ಗೆ ಗಂಡಸೇ ಅಲ್ಲ’ ಎಂದು ಗಾನವಿ ಕುಟುಂಬ ಆರೋಪಿಸಿತ್ತು. ಜೊತೆಗೆ ವರದಕ್ಷಿಣೆ ಕಿರುಕುಳ ಕೇಸ್ ದಾಖಲು ಮಾಡಿತ್ತು. ಈ ಅವಮಾನ ತಾಳಲಾರದೇ ಆತ್ಮಹತ್ಯೆ ಮಾಡಿಕೊಂಡಿರುವ ಅನುಮಾನ ಇದೆ. 

ಇದನ್ನೂ ಓದಿ: ಬೆಂಗಳೂರಲ್ಲಿ ರಾತ್ರಿ ಮೂವರು ಪುಂಡರಿಂದ ಯುವತಿಗೆ ಕಿರುಕುಳ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. 

Bengaluru couple Bengaluru case
Advertisment