Advertisment

ಬೆಳಗಾವಿಯಲ್ಲಿ ಘೋರ ದುರಂತ.. ರಾತ್ರಿ ಮಲಗಿದ್ದಲ್ಲೇ ಕಣ್ಮುಚ್ಚಿದ ಮೂವರು ಯುವಕರು

ಬೆಳಗಾವಿ ಜಿಲ್ಲೆಯ ಅಮನ್ ನಗರದಲ್ಲಿ ದಾರುಣ ಘಟನೆ ನಡೆದಿದೆ. ಮನೆಯಲ್ಲಿ ಬುಟ್ಟಿಯೊಂದರಲ್ಲಿ ಬೆಂಕಿ ಹಾಕಿ, ಹೊಗೆ ಬರುವಂತೆ ಮಾಡಿಕೊಂಡು ಮಲಗಿದ್ದ ನಾಲ್ವರಲ್ಲಿ ಮೂವರು ಯುವಕರು ದಾರುಣವಾಗಿ ಮೃತಪಟ್ಟಿದ್ದಾರೆ.

author-image
Ganesh Kerekuli
belagavi three youths
Advertisment

ಬೆಳಗಾವಿ ಜಿಲ್ಲೆಯ ಅಮನ್ ನಗರದಲ್ಲಿ ದಾರುಣ ಘಟನೆ ನಡೆದಿದೆ. ಮನೆಯಲ್ಲಿ ಬುಟ್ಟಿಯೊಂದರಲ್ಲಿ ಬೆಂಕಿ ಹಾಕಿ, ಹೊಗೆ ಬರುವಂತೆ ಮಾಡಿಕೊಂಡು ಮಲಗಿದ್ದ ನಾಲ್ವರಲ್ಲಿ ಮೂವರು ಯುವಕರು ದಾರುಣವಾಗಿ ಮೃತಪಟ್ಟಿದ್ದಾರೆ. 

Advertisment

ರಿಹಾನ್ ಮತ್ತಿ (22), ಸರ್ಪರಾಜ್ ಹರಪ್ಪನಹಳ್ಳಿ (22), ಮೋಯಿನ್ ನಾಲಬಂದ್ (22) ಮೃತ ದುರ್ದೈವಿಗಳು. ಮತ್ತೋರ್ವ ಶಾನ್ವಾಜ್ ಎಂಬಾತನ ಸ್ಥಿತಿ ಗಂಭೀರವಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.

ಮನೆಗೆ ಕಿಟಕಿಗಳಿಲ್ಲದೇ ವೆಂಟಿಲೇಶನ್ ಆಗದೇ ಹೊಗೆಯಿಂದ ಉಸಿರುಗಟ್ಟಿ ಮೃತಪಟ್ಟಿದ್ದಾರೆ. ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತರ ಮರಣೋತ್ತರ ಪರೀಕ್ಷೆ ಮುಕ್ತಾಯವಾಗಿದ್ದು, ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗಿದೆ. 

ಇದನ್ನೂ ಓದಿ: ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್‌ಗೆ ಜೈಲಿನಲ್ಲಿ ಚಳಿಯ ಸವಾಲು: ಚಳಿಯಿಂದ ರಾತ್ರಿ ವೇಳೆ ಮಲಗುತ್ತಿಲ್ಲ, ಕಂಬಳಿ ಕೊಡಿಸಿ ಪ್ಲೀಸ್ ಎಂದ ನಟ ದರ್ಶನ್‌

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Belagavi news
Advertisment
Advertisment
Advertisment