ಪ್ರವಾಸಿಗರಿಗೆ ಗುಡ್​​ನ್ಯೂಸ್​ -ಬೆಂಗಳೂರಿಗೆ ಮತ್ತೊಂದು ವಂದೇ ಭಾರತ್ ಎಕ್ಸ್‌ಪ್ರೆಸ್..!

ಸಿಲಿಕಾನ್ ಸಿಟಿ ಬೆಂಗಳೂರು ಮತ್ತು ಕಡಲ ನಗರಿ ಗೋವಾ ನಡುವಿನ ಪ್ರಯಾಣ ಇನ್ನು ಮತ್ತಷ್ಟು ಸುಲಭ ಮತ್ತು ಆರಾಮದಾಯಕವಾಗಲಿದೆ. ಉಭಯ ನಗರಗಳ ನಡುವೆ ಬಹುನಿರೀಕ್ಷಿತ ‘ವಂದೇ ಭಾರತ್ ಎಕ್ಸ್‌ಪ್ರೆಸ್’ ರೈಲು ಓಡಿಸಲು ಸಿದ್ಧತೆ ನಡೆದಿದ್ದು, ನೈಋತ್ಯ ರೈಲ್ವೆ ವಲಯ ಈ ಕುರಿತ ಪ್ರಸ್ತಾವನೆಯನ್ನು ರೈಲ್ವೆ ಮಂಡಳಿಗೆ ಸಲ್ಲಿಸಿದೆ.

author-image
Ganesh Kerekuli
VANDE BHARAT TRAINS
Advertisment

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು ಮತ್ತು ಕಡಲ ನಗರಿ ಗೋವಾ ನಡುವಿನ ಪ್ರಯಾಣ ಇನ್ನು ಮತ್ತಷ್ಟು ಸುಲಭ ಮತ್ತು ಆರಾಮದಾಯಕವಾಗಲಿದೆ. ಉಭಯ ನಗರಗಳ ನಡುವೆ ಬಹುನಿರೀಕ್ಷಿತ ‘ವಂದೇ ಭಾರತ್ ಎಕ್ಸ್‌ಪ್ರೆಸ್’ (Vande Bharat Express) ರೈಲು ಓಡಿಸಲು ಸಿದ್ಧತೆ ನಡೆದಿದ್ದು, ನೈಋತ್ಯ ರೈಲ್ವೆ ವಲಯ (SWR) ಈ ಕುರಿತ ಪ್ರಸ್ತಾವನೆಯನ್ನು ರೈಲ್ವೆ ಮಂಡಳಿಗೆ ಸಲ್ಲಿಸಿದೆ.

ಪ್ರಯಾಣದ ಅವಧಿ ಎಷ್ಟು?

ಮೂಲಗಳ ಪ್ರಕಾರ, ಈ ಸೆಮಿ-ಹೈಸ್ಪೀಡ್ ರೈಲು ಬೆಂಗಳೂರಿನ ಯಶವಂತಪುರದಿಂದ ಗೋವಾದ ಮಡಗಾಂವ್ ತಲುಪಲು ಸುಮಾರು 13 ಗಂಟೆಗಳನ್ನು ತೆಗೆದುಕೊಳ್ಳಲಿದೆ. ರೈಲ್ವೆ ಮಂಡಳಿಯಿಂದ ಅನುಮೋದನೆ ಸಿಕ್ಕ ತಕ್ಷಣ ಅಧಿಕೃತ ವೇಳಾಪಟ್ಟಿ ಪ್ರಕಟವಾಗಲಿದೆ.

ಸಮಯ ಮತ್ತು ವೇಳಾಪಟ್ಟಿ 

ಸಲ್ಲಿಸಲಾಗಿರುವ ಪ್ರಸ್ತಾವನೆ ಪ್ರಕಾರ, ವಂದೇ ಭಾರತ್ ರೈಲಿನ ಸಂಚಾರದ ಸಮಯ ಹೀಗಿರಲಿದೆ:

ಹೋಗುವಾಗ: ಬೆಂಗಳೂರಿನ ಯಶವಂತಪುರ ನಿಲ್ದಾಣದಿಂದ ಬೆಳಿಗ್ಗೆ 6:05 ಕ್ಕೆ ಹೊರಡುವ ರೈಲು, ಅದೇ ದಿನ ಸಂಜೆ 7:15 ಕ್ಕೆ ಗೋವಾದ ಮಡಗಾಂವ್ ತಲುಪಲಿದೆ.
ಬರುವಾಗ: ಮಡಗಾಂವ್ ನಿಲ್ದಾಣದಿಂದ ಬೆಳಿಗ್ಗೆ 5:30 ಕ್ಕೆ (ತಾತ್ಕಾಲಿಕ) ಹೊರಡುವ ರೈಲು, ಸಂಜೆ 6:40 ಕ್ಕೆ ಯಶವಂತಪುರ ತಲುಪಲಿದೆ.
ಮಂಗಳೂರು ಸ್ಟೇಷನ್‌ಗೆ ಹೋಗಲ್ಲ!

ಇದನ್ನೂ ಓದಿ:EV ಮಾರಾಟದಲ್ಲಿ ಕರ್ನಾಟಕಕ್ಕೆ 3ನೇ ಸ್ಥಾನ; GDPಗೆ ಆಟೋಮೊಬೈಲ್ ಕೊಡುಗೆ ಶೇ.7 : ಕೆ.ಎನ್. ರಾಧಾಕೃಷ್ಣನ್

ಈ ರೈಲು ಕರಾವಳಿ ಮಾರ್ಗವಾಗಿ ಸಂಚರಿಸಲಿದ್ದರೂ, ಮಂಗಳೂರು ಜಂಕ್ಷನ್ ಅಥವಾ ಮಂಗಳೂರು ಸೆಂಟ್ರಲ್ ನಿಲ್ದಾಣಗಳನ್ನು ಪ್ರವೇಶಿಸುವುದಿಲ್ಲ. ಬದಲಾಗಿ, 'ಪಡೀಲ್ ಬೈಪಾಸ್' (Padil Bypass) ಮೂಲಕ ನೇರವಾಗಿ ಸಂಚರಿಸಲಿದೆ ಎಂದು ಎಸ್‌ಡಬ್ಲ್ಯುಆರ್ ಪ್ರಸ್ತಾವನೆಯಲ್ಲಿ ತಿಳಿಸಿದೆ.

ವೇಗ ಹೆಚ್ಚಳಕ್ಕೆ ಪ್ರಸ್ತಾವನೆ:

ವಂದೇ ಭಾರತ್ ರೈಲಿನ ವೇಗವನ್ನು ಕಾಯ್ದುಕೊಳ್ಳಲು ಮೂಲಸೌಕರ್ಯಗಳ ವೇಗಮಿತಿಯನ್ನು ಹೆಚ್ಚಿಸಲು ರೈಲ್ವೆ ಇಲಾಖೆ ಮುಂದಾಗಿದೆ.
ಚಿಕ್ಕಬಾಣಾವರದಿಂದ ಹಾಸನ ನಡುವಿನ ವೇಗವನ್ನು ಗಂಟೆಗೆ 110 ಕಿ.ಮೀ ನಿಂದ 130 ಕಿ.ಮೀಗೆ ಹೆಚ್ಚಿಸಲು ಪ್ರಸ್ತಾಪಿಸಲಾಗಿದೆ. ಸಕಲೇಶಪುರ-ಸುಬ್ರಹ್ಮಣ್ಯ ರೋಡ್ ಘಾಟ್ ವಿಭಾಗದಲ್ಲಿ ವೇಗವನ್ನು 30 ಕಿ.ಮೀ ನಿಂದ 40 ಕಿ.ಮೀಗೆ ಹೆಚ್ಚಿಸಲು ಸೂಚಿಸಲಾಗಿದೆ.

ಎರಡು ರೇಕ್ ಬೇಕು:

ಈ ಮಾರ್ಗದಲ್ಲಿ ವಂದೇ ಭಾರತ್ ಸೇವೆ ಆರಂಭಿಸಲು ಎರಡು ಟ್ರೈನ್ ಸೆಟ್‌ಗಳ (Rakes) ಅಗತ್ಯವಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಅವರು ಇತ್ತೀಚೆಗೆ ಈ ಯೋಜನೆಯ ಬಗ್ಗೆ ಸುಳಿವು ನೀಡಿದ್ದರು. ಸದ್ಯ ಪ್ರಸ್ತಾವನೆ ರೈಲ್ವೆ ಬೋರ್ಡ್ ಮುಂದಿದ್ದು, ಅನುಮೋದನೆ ಸಿಕ್ಕ ಬಳಿಕ ಟ್ರಯಲ್ ರನ್ (Trial Run) ನಡೆಯಲಿದೆ. ಹಾಸನ-ತೋಕೂರು (ಮಂಗಳೂರು) ವಿಭಾಗದಲ್ಲಿ ವಿದ್ಯುದೀಕರಣ ಕಾಮಗಾರಿ ಪೂರ್ಣಗೊಂಡಿದ್ದು, ಪ್ರಮಾಣೀಕರಣದ ನಂತರವಷ್ಟೇ ಪ್ರಾಯೋಗಿಕ ಸಂಚಾರ ಸಾಧ್ಯವಾಗಲಿದೆ.

ಇದನ್ನೂ ಓದಿ: ಪಾಂಡ್ಯ ಹೊಡೆತಕ್ಕೆ ಮೈದಾನದಲ್ಲೇ ಕುಸಿದುಬಿದ್ದ ಟೀಂ ಇಂಡಿಯಾ ಸ್ಟಾರ್​ ಬೌಲರ್​..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Bengaluru Goa Vande Bharat Vande Bharat Express
Advertisment