Advertisment

ಟ್ರಾಫಿಕ್ ಜಾಮ್.. ಮಾಜಿ ಕ್ರಿಕೆಟರ್ ಸುನಿಲ್ ಜೋಶಿ ಆಕ್ರೋಶ..! ಏನಂದ್ರು..?

ಸಿಲಿಕಾನ್ ಸಿಟಿ ಬೆಂಗಳೂರಿಗೆ ಕಾರ್ಮೋಡ ಆವರಿಸಿದೆ.. ಪದೇ ಪದೇ ಟ್ರಾಫಿಕ್, ರಸ್ತೆ ಗುಂಡಿ, ಗಾರ್ಬೇಜ್ ಸಮಸ್ಯೆಗಳು ರಾಷ್ಟ್ರ ಮಟ್ಟದಲ್ಲಿ ಗಮನ ಸೆಳೆದಿದೆ. ಇದೀಗ ಟ್ರಾಫಿಕ್ ಸಮಸ್ಯೆ ಬಗ್ಗೆ ಮಾಜಿ ಕ್ರಿಕೆಟರ್ ತಮ್ಮ ಟ್ವೀಟ್ ಮೂಲಕ ಆಕ್ರೋಶ ಹೊರಹಾಕಿದ್ದಾರೆ.

author-image
Ganesh Kerekuli
sj tweet 1
Advertisment

ಸಿಲಿಕಾನ್ ಸಿಟಿ ಬೆಂಗಳೂರಿಗೆ ಕಾರ್ಮೋಡ ಆವರಿಸಿದೆ.. ಪದೇ ಪದೇ ಟ್ರಾಫಿಕ್, ರಸ್ತೆ ಗುಂಡಿ, ಗಾರ್ಬೇಜ್ ಸಮಸ್ಯೆಗಳು ರಾಷ್ಟ್ರ ಮಟ್ಟದಲ್ಲಿ ಗಮನ ಸೆಳೆದಿದೆ. ಇದೀಗ ಟ್ರಾಫಿಕ್ ಸಮಸ್ಯೆ ಬಗ್ಗೆ ಮಾಜಿ ಕ್ರಿಕೆಟರ್ ತಮ್ಮ ಟ್ವೀಟ್ ಮೂಲಕ ಆಕ್ರೋಶ ಹೊರಹಾಕಿದ್ದಾರೆ.

Advertisment

ಮಾಜಿ ಕ್ರಿಕೆಟರ್​ ಸುನಿಲ್ ಜೋಷಿ ಕೆಂಪೇಗೌಡ ಅಂತಾರಾಷ್ಟ್ರೀಯ ಏರ್​​ಪೋರ್ಟ್ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಕುರಿತಂತೆ ತಮ್ಮ ಟ್ವೀಟ್​ನಲ್ಲಿ ಆಕ್ರೋಶ ಹೊರಹಾಕಿದ್ದಾರೆ. ಏರ್​ಪೋರ್ಟ್​ ರಸ್ತೆಯಲ್ಲಿ ಗೂಡ್ಸ್ ವಾಹನಕ್ಕೆ ಅನುಮತಿ ಬಗ್ಗೆ ಪ್ರಶ್ನೆಮಾಡಿದ ಅವರು, ಗೂಡ್ಸ್ ವಾಹನಗಳಿಗೆ ಬೆಳಗ್ಗೆ ಹೇಗೆ ಈ ರಸ್ತೆಯಲ್ಲಿ ಅನುಮತಿಸಲಾಗುತ್ತಿದೆ..? ರಾತ್ರಿ 10 ರಿಂದ ಬೆಳಗ್ಗೆ 6 ಗಂಟೆವರೆಗಷ್ಟೇ ಅನುಮತಿ ಅಲ್ವೇ? ಇದನ್ನ ಹೊರತುಪಡಿಸಿ 6 ಗಂಟೆ ಬಳಿಕವೂ ಅನುಮತಿ ಯಾಕೆ..? ಎಂದು ಪ್ರಶ್ನಿಸಿದ್ದಾರೆ. ಈ ಕರಿತು ಟ್ವೀಟ್​ನಲ್ಲಿ ಸಿಎಂ ಹಾಗು ಡಿಸಿಎಂರನ್ನ ಟ್ಯಾಗ್​ ಮಾಡಿದ್ದಾರೆ. 

sj tweet

ದಯವಿಟ್ಟು ಕ್ರಮ ಕೈಗೊಳ್ಳಿ..

ಇನ್ನೂ ಟ್ವೀಟ್ ಮೂಲಕ ಆಕ್ರೋಶ ಹೊರಹಾಕಿರುವ ಸುನಿಲ್ ಜೋಷಿ, ಗೂಡ್ಸ್​ ಹಾಗು ಭಾರೀ ವಾಹನಗಳ ಸಂಚಾರದಿಂದಾಗಿ ಫಾಸ್ಟ್​ಲೈನ್​ಗಳನ್ನು ಬಂದ್ ಮಾಡ್ತಿವೆ. ಸಾಮಾನ್ಯ ಜನರು ಪ್ರಯಾಣಿಸಲು ಕಷ್ಟ ಪಡುತ್ತಿದ್ದಾರೆ. ದಯವಿಟ್ಟು ಕ್ರಮ ಕೈಗೊಳ್ಳಿ ಎಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ. 
ದಿನೇ ದಿನೇ ಮೂಲ ಸೌಕರ್ಯಗಳ ಕೊರತಿಯಿಂದಾಗಿ ರಾಜ್ಯ ರಾಜಧಾನಿ ಅಪಖ್ಯಾತಿಗೆ ಒಳಗಾಗುತ್ತಿದೆ. ಸಮಸ್ಯೆಗಳ ಸರಮಾಲೆಯನ್ನೇ ಹೊಂದಿರುವ ಈ ನರರಕ್ಕೆ ತುರ್ತು ಕಾಮಗಾರಿಗಳಿಗೆ ಚಾಲನೆ ನೀಡುವ ಮೂಲಕ ಸಮಸ್ಯೆಗಳಿಗೆ ಇತೀಶ್ರೀ ಹಾಡಬೇಕಿದೆ.

ಇದನ್ನೂ ಓದಿ:RSS ಕಾರ್ಯಕ್ರಮದಲ್ಲಿ ಪಾಲ್ಗೊಂಡ ನೌಕರರನ್ನ ಸಸ್ಪೆಂಡ್​​ ಮಾಡ್ತೀನಿ -ಪ್ರಿಯಾಂಕ್ ಖರ್ಗೆ

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

sunil joshi bengaluru traffic DK Shivakumar CM SIDDARAMAIAH
Advertisment
Advertisment
Advertisment