/newsfirstlive-kannada/media/media_files/2025/10/18/pothole-protest-1-2025-10-18-12-04-30.jpg)
ಬೆಂಗಳೂರು: ಗುಂಡಿಮಯ, ಕೆಸರುಮಯ ರಸ್ತೆಯಿಂದ ಸಿಲಿಕಾನ್​ ಸಿಟಿ ಜನ ಬೇಸತ್ತು ಹೋಗಿದ್ದಾರೆ. ಬೆಳೆಗರೆ, ವರ್ತೂರು, ಪಣತ್ತೂರು, ಮಾರತಹಳ್ಳಿ ಸುತ್ತಮುತ್ತ ಮಳೆ ಬಂದರೆ ಸಾಕು ಅವಾಂತರಗಳೇ ಸೃಷ್ಟಿ ಆಗುತ್ತಿವೆ. ಹೀಗಾಗಿ ಮಾರತಹಳ್ಳಿ ಸಮೀಪದ ಮುನೆಕೊಲ್ಲಾಲ ಸ್ಕೂಲ್ ಎದುರಿನ ರಸ್ತೆಯಲ್ಲಿ ಪ್ರತಿಭಟನೆ ಮಾಡಲಾಯಿತು.
ಒಂದ್ಕಡೆ ಮಳೆಗೆ ಬೃಹತ್​ ಗುಂಡಿಗಳು ಬಾಯ್ತೆರೆದು ನಿಂತರೆ, ಮತ್ತೊಂದ್ಕಡೆ ಕೆಸರುಮಯ ರಸ್ತೆಯಲ್ಲಿ ಓಡಾಡೋದೇ ಕಷ್ಟವಾಗಿ ಬಿಟ್ಟಿದೆ. ಹೀಗಾಗಿ ಗುಂಡಿಮಯ, ಕೆಸರುಮಯ ರಸ್ತೆಯಲ್ಲಿ ಪೋಷಕರು ಮಕ್ಕಳನ್ನ ಮೂನ್​ವಾಕ್​ ಮಾಡಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಗುಂಡಿಮಯ ರಸ್ತೆಯಲ್ಲಿ ಹೋದ್ರೆ ಹೆಣ್ಮಕ್ಕಳಿಗೆ ಫ್ರೀ ಡೆಲಿವರಿಯಾಗುತ್ತೆ. ನಮ್ಮ ಮಕ್ಕಳು ಸ್ಕೂಲ್​ಗೆ ಹೋದ್ರೆ ಸೇಫ್ ಆಗಿ ವಾಪಸ್ ಮನೆಗೆ ಬರ್ತಾರೆ ಅನ್ನೋ ನಂಬಿಕೆನೇ ಇಲ್ಲ.
ಈ ಜಾಗದಲ್ಲಿ ಮೂನ್ ವೀವ್ ಇದೆ. ಈ ಕೆಸರುಮಯ ರಸ್ತೆಯನ್ನ ಟೂರಿಸ್ಟ್ ಪ್ಲೇಸ್ ಮಾಡಲಿ ಅಂತ ಸರ್ಕಾರದ ವಿರುದ್ಧ ಸ್ಥಳೀಯರು ಪ್ರತಿಭಟನೆ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜೊತೆಗೆ ರಸ್ತೆ ಸರಿ ಮಾಡೋ ತನಕ ತೆರಿಗೆ ಕಟ್ಟಲ್ಲ ಅಂತ ಸ್ಥಳೀಯರು ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದಿದ್ದಾರೆ.
ನಮ್ಮ ಸ್ಕೂಲ್ ಬಸ್ ಸ್ಟಕ್ ಆಗಿತ್ತು :
ಇನ್ನು ಕೆಸರುಮಯ ರಸ್ತೆಯಿಂದ ಸ್ಥಳೀಯರು ಮಾತ್ರವಲ್ಲದೇ ಮಕ್ಕಳು ಕೂಡ ರೋಸಿ ಹೋಗಿದ್ದಾರೆ. ಇತ್ತ ಗುಂಡಿಮಯ ರಸ್ತೆಯಿಂದ ಆಗುವ ಸಮಸ್ಯೆಗಳ ಬಗ್ಗೆ ಪುಟಾಣಿ ಮಕ್ಕಳು ಮಾತನಾಡಿದ್ದಾರೆ. ನಮ್ಮ ಸ್ಕೂಲ್​ ಬಸ್​​ ಕೂಡ ಕೆಸರುಮಯ ರಸ್ತೆಯಲ್ಲಿ ಸ್ಟಕ್​ ಆಗಿತ್ತು. ಒಮ್ಮೆ ಸ್ಕೂಲ್​ ಬಸ್​​ನ ವಿಂಡೋ ಡ್ಯಾಮೇಜ್ ಆಗಿ ಗಾಬರಿ ಬಿದ್ವಿ. ಮನೆಯಿಂದ 5 ಕಿಲೋ ಮೀಟರ್​ ದೂರದಲ್ಲಿ ಶಾಲೆಯಿದೆ. ಆದ್ರೆ ಈ ಕೆಸರುಮಯ ರಸ್ತೆಯಲ್ಲಿ ಸ್ಕೂಲ್​ಗೆ ಹೋಗಲು 1 ಗಂಟೆಗಿಂತ ಹೆಚ್ಚು ಸಮಯ ಬೇಕಾಗುತ್ತದೆ. ಇದ್ರಿಂದಾಗಿ ಸರಿಯಾದ ಸಮಯಕ್ಕೆ ಸ್ಕೂಲ್​ಗೆ ಹೋಗಲು ಆಗ್ತಿಲ್ಲ ಅಂತ ಪುಟಾಣಿ ಮಕ್ಕಳು ಅಳಲು ತೋಡಿಕೊಂಡಿದ್ದಾರೆ.