/newsfirstlive-kannada/media/media_files/2025/10/16/doctor-photo3-2025-10-16-10-22-40.jpg)
ರಾಜ್ಯಾದ್ಯಂತ ಬೆಚ್ಚಿ ಬೀಳಿಸಿದ್ದ ವೈದ್ಯೆ ಕೃತಿಕಾ ರೆಡ್ಡಿ ಕೊಲೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಆರೋಪಿ ಪತಿ ಮಹೇಂದ್ರಗೆ ಅಕ್ರಮ ಸಂಬಂಧ ಇತ್ತಾ ಎಂಬ ಶಂಕೆ ಪೊಲೀಸ್ ತನಿಖೆಯಲ್ಲಿ ವ್ಯಕ್ತವಾಗಿದೆ. ಹೀಗಾಗಿ ಆರೋಪಿ ಡಾ.ಮಹೆಂದ್ರನ ಎರಡೂ ಮೊಬೈಲ್​ಗಳನ್ನು ವಶಕ್ಕೆ ಪಡೆಯಲಾಗಿದೆ.
ಆರೋಪಿ ಮಹೇಂದ್ರ ಮೊಬೈಲ್​ಗಳು ವಶಕ್ಕೆ
ತನಿಖೆಯನ್ನು ತೀವ್ರಗೊಳಿಸಿರುವ ಪೊಲೀಸರು ಕೊಲೆ ಆರೋಪಿ ಡಾ.ಮಹೇಂದ್ರ ಅವರ ಎರಡೂ ಮೊಬೈಲ್​ಗಳನ್ನು ವಶಪಡಿಸಿಕೊಂಡಿದ್ದಾರೆ. ರಿಲೇಶನ್​​ಶಿಪ್​ನಲ್ಲಿದ್ದವಳ ಜೊತೆ ಮಾತನಾಡಲು ಆರೋಪಿ ಬೇರೆ ಮೊಬೈಲ್ ಬಳಸುತ್ತಿರುವುದು ಬೆಳಕಿಗೆ ಬಂದಿದೆ ಎನ್ನಲಾಗಿದೆ. ಈ ಹಿನ್ನೆಲೆ ಆರೋಪಿಯ ಎರಡೂ ಮೊಬೈಲ್​ಗಳನ್ನು ಪೊಲೀಸರು ವಶಕ್ಕೆ ಪಡೆದು.. ಕೊಲೆ ಪ್ಲ್ಯಾನ್​ನಲ್ಲಿ ಆಕೆಯ ಕೈವಾಡ ಇದ್ಯಾ? ಆಕೆ ಮತ್ತು ಮಹೇಂದ್ರ ಇಬ್ಬರು ಸೇರಿ ಕೊಲೆ ಸ್ಕೆಚ್ ಹಾಕಿದ್ರಾ? ಎಂಬುವುದರ ಕುರಿತು ತನಿಖೆ ನಡೆಯಲಿದೆ. ಆರೋಪಿ ಮೊಬೈಲ್​ನನ್ನು FSLಗೆ ಕಳುಹಿಸಲು ಪೊಲೀಸರು ಸಜ್ಜಾಗಿದ್ದಾರೆ. ಒಂದು ವೇಳೆ ಆಕೆಯ ಕೈವಾಡವಿದ್ದರೆ..ಅವಳಿಗೂ ಬಂಧನದ ಬಿಸಿ ತಟ್ಟಲಿದೆ.
ವಿವಿಧ ಆಯಾಮಗಳಲ್ಲಿ ತನಿಖೆ..ಏನಿದು..?
ಮಾರತ್​ಹಳ್ಳಿ ಪೊಲೀಸರು ಪ್ರಕರಣವನ್ನು ಮೂರು ಆಯಾಮಗಳಲ್ಲಿ ತನಿಖೆ ಮಾಡಲು ನಿರ್ಧರಿಸಿದ್ದಾರೆ. ಮೊದಲನೇಯದಾಗಿ ಆರೋಪಿಗೆ ಅಕ್ರಮ ಸಂಬಂಧವಿರೋ ಬಗ್ಗೆ ಸಂಶಯದ ಆಧಾರಿತ ತನಿಖೆ? ಎರಡನೇಯದಾಗಿ ಹಣಕಾಸಿನ ವಿಚಾರದ ಆಯಾಮದಲ್ಲಿ ತನಿಖೆ? ಹಾಗು ಮೂರನೆಯದಾಗಿ ಅನಸ್ತೇಷಿಯಾ ಬಳಕೆಗೆ ಡ್ರಗ್ಸ್​ ಎಲ್ಲಿಂದ ತಂದಿದ್ದರು ಅನ್ನೋ ಆಯಾಮಾದಲ್ಲಿ ತನಿಖೆ ನಡೆಸಲಿದ್ದಾರೆ. ಜೊತೆಗೆ ಆರೋಪಿಯ ಆರು ತಿಂಗಳ ಪೋನ್ ಕಾಲ್​ಗಳನ್ನು ಸಿಡಿಆರ್​ಗೆ ಹಾಕಿದ್ದಾರೆ.