ಬಿಗ್​ಬಾಸ್​ ಖ್ಯಾತಿಯ ಲಾಯರ್ ಜಗದೀಶ್​ಗೆ ಜಾಮೀನು ಮಂಜೂರು

ಜಾತಿ ನಿಂದನೆ ಆರೋಪದಡಿ ಲಾಯರ್ ಜಗದೀಶ್​ರನ್ನ ಕೊಡಿಗೆಹಳ್ಳಿ ಪೊಲೀಸರು ನಿನ್ನೆ ಬಂಧಿಸಿದ್ರು. ಮಂಜುನಾಥ್ ಎಂಬುವವರು ನೀಡಿದ್ದ ದೂರಿನ ಅನ್ವಯ ಲಾಯರ್ ಜಗದೀಶ್​ ವಿರುದ್ಧ ಎಫ್ಐಆರ್ ದಾಖಲಾಗಿತ್ತು.

author-image
Veenashree Gangani
lawyer jagadish(2)
Advertisment

ಬೆಂಗಳೂರು: ಜಾತಿ ನಿಂದನೆ ಆರೋಪದಡಿ ಲಾಯರ್ ಜಗದೀಶ್​ರನ್ನ ಕೊಡಿಗೆಹಳ್ಳಿ ಪೊಲೀಸರು ನಿನ್ನೆ ಬಂಧಿಸಿದ್ರು. ಮಂಜುನಾಥ್ ಎಂಬುವವರು ನೀಡಿದ್ದ ದೂರಿನ ಅನ್ವಯ ಲಾಯರ್ ಜಗದೀಶ್​ ವಿರುದ್ಧ ಎಫ್ಐಆರ್ ದಾಖಲಾಗಿತ್ತು.

ಇದನ್ನೂ ಓದಿ: ಅಪ್ಪು, ಯಶ್​, ತೆಲುಗು ಡೈಲಾಗ್​ಗೆ ಲಿಪ್ ಸಿಂಕ್.. ಸ್ವೀಡನ್ ದೇಶದ ದಂಪತಿ ಈಗ ವರ್ಲ್ಡ್ ಫೇಮಸ್; ಯಾರಿವರು..?

ಇಂದು ವಕೀಲ ಜಗದೀಶ್​​ಗೆ 7ನೇ ಎಸಿಜೆಎಂ ಕೋರ್ಟ್ ಜಾಮೀನು ಮಂಜೂರು ಮಾಡಿದೆ. ಅಲ್ಲದೇ 8,000 ರೂಪಾಯಿ ಶ್ಯೂರಿಟಿ ಬಾಂಡ್ ನೀಡಲು ಸಹ ಕೋರ್ಟ್​ ಸೂಚಿಸಿದೆ. ಈ ಬೆನ್ನಲ್ಲೇ ಲಾಯರ್​ ಜಗದೀಶ್​ ವಿರುದ್ಧ ಮತ್ತೊಂದು ಕೇಸ್​ ಸಹ ದಾಖಲಾಗಿದೆ.

Lawyer Jagadish

ಜಗದೀಶ್ ಮಾಡಿದ್ದ ಮಾರ್ವಾಡಿ ಗೋ ಬ್ಯಾಕ್ ಎಂದು ಬರೆದ ಪೋಸ್ಟ್ ವೈರಲ್ ಆಗಿತ್ತು. ತೆಲಂಗಾಣದಲ್ಲಿ ಮಾರ್ವಾಡಿ ಗೋ ಬ್ಯಾಕ್ ಅಭಿಯಾನಕ್ಕೆ ಬೆಂಬಲ ವ್ಯಕ್ತಪಡಿಸಿ ಕರ್ನಾಟಕದ ಪ್ರತಿ ಹಳ್ಳಿಯಲ್ಲಿ ಅಭಿಯಾನ ನಡೆಸುವಂತೆ ಪೋಸ್ಟ್ ಮಾಡಿದ್ದರು. ಈ ಹಿನ್ನೆಲೆ ಶಾಂತಿ ಕದಡುವ ಮತ್ತು ಕೋಮು ಗಲಭೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಜಗದೀಶ್ ಸೇರಿದಂತೆ ಇತರರ ವಿರುದ್ಧ ಕೇಸ್ ದಾಖಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Lawyer Jagadish, bigg boss fame
Advertisment