/newsfirstlive-kannada/media/media_files/2025/09/20/cm_siddaramaiah-8-2025-09-20-08-07-58.jpg)
ಜಾತಿಗಳ ಹೆಸರಿನ ವಿವಾದದಿಂದ ಕರ್ನಾಟಕ ಸರ್ಕಾರದ ಸಮೀಕ್ಷೆಯ ಭವಿಷ್ಯಕ್ಕೆ ಆವರಿಸಿದ್ದ ಅನಿಶ್ಚಿತತೆ ಕಾರ್ಮೋಡ ಕರಗಿದೆ. ಸಣ್ಣಪುಟ್ಟ ದೋಷಗಳನ್ನು ಸರಿಪಡಿಸಿ ನಿಗದಿಯಂತೆ ಸೋಮವಾರಿಂದ ಜಾತಿಗಣತಿ ನಡೆಸಲು ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.
ಸೆಪ್ಟೆಂಬರ್​​​ 22 ರಿಂದ ಅಕ್ಟೋಬರ್​​ 7ರವರೆಗೆ ನಡೆಯಲಿದೆ ಸರ್ವೆ
ಜಾತಿಗಳ ಹೆಸರಿನ ವಿವಾದದಿಂದ ಕರ್ನಾಟಕ ಸರ್ಕಾರದ ಸಮೀಕ್ಷೆಯ ಭವಿಷ್ಯಕ್ಕೆ ಆವರಿಸಿದ್ದ ಅನಿಶ್ಚಿತತೆ ಕಾರ್ಮೋಡ ಕರಗಿದೆ. ಬೀಸೋ ದೊಣ್ಣೆಯಿಂದ ತಪ್ಪಿಸಿಕೊಳ್ಳಲು ಜಾತಿ ಜೊತೆ ಕ್ರಿಶ್ಚಿಯನ್​​​ ಪದ ಕೈಬಿಡಲು ಸೂಚನೆ ನೀಡಿದ್ದಾರೆ. ಇದರ ಬೆನ್ನಲ್ಲೇ ಈ ಹಿಂದೆ ಘೋಷಿಸಿದಂತೆ ಸೆಪ್ಟೆಂಬರ್​ 22ರಿಂದ ಅಕ್ಟೋಬರ್​7ವರೆಗೆ ಸಮೀಕ್ಷೆ ನಡೆಯಲಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಆದೇಶ ಹೊರಡಿಸಿದೆ.
ಸಚಿವರೇ ತೀವ್ರ ವಿರೋಧ ವ್ಯಕ್ತಪಡಿಸಿದ್ದರೂ ಸಮೀಕ್ಷೆಯನ್ನು ಮುಂದುವರೆಸಲು ಸರ್ಕಾರ ನಿರ್ಧರಿಸಿದ್ದೇಕೆ..?
ಸಮೀಕ್ಷೆ ಮುಂದುವರಿಕೆಗೆ ಕಾರಣ ಏನು?
- ಸಮೀಕ್ಷೆಯಿಂದ ಹಿಂದೆ ಸರಿಯದಂತೆ ಹೈಕಮಾಂಡ್​​ ಆದೇಶ
- ಜಾತಿ ಗಣತಿ ಮುಂದೂಡಿಕೆ ಮಾಡಿದ್ರೆ ವಿಪಕ್ಷ ಲಾಭ ಆಗಲಿದೆ
- ಮುಂದೂಡಿಕೆ ಮಾಡಿದರೆ ಸರ್ಕಾರಕ್ಕೆ ಮುಜುಗರ ಆಗಲಿದೆ
- ಒಂದ್ವೇಳೆ ಮುಂದೂಡಿಕೆ ಮಾಡಿದರೆ ಇನ್ನಷ್ಟು ಗೊಂದಲ
- ಗೊಂದಲದಿಂದ ಇತರೆ ಸಮುದಾಯಗಳಿಗೆ ಬೇರೆ ಸಂದೇಶ
- ಕರ್ನಾಟಕದ ಜಾತಿ ಗಣತಿ ಮೇಲೆ ಬೇರೆ ರಾಜ್ಯಗಳ ಕಣ್ಣು
- ದಸರಾ ನಂತರ ಸರ್ವೇಗೆ ಮುಂದಾದಲ್ಲಿ ಸಿಬ್ಬಂದಿ ಕೊರತೆ
- ದಿನದೂಡಿಕೆ ಮಾಡಿದರೆ ಸರ್ಕಾರಕ್ಕೆ ತಾಂತ್ರಿಕವಾಗಿ ತಲೆಬಿಸಿ
- ಜಾತಿ ಗಣತಿ ವಿಚಾರದಲ್ಲಿ ಸರ್ಕಾರದ ಮುಂದಿಲ್ಲ ಅನ್ಯ ದಾರಿ
ಇದನ್ನೂ ಓದಿ:ಅಯ್ಯೋ ನಾನು ರೋಹಿತ್ ಶರ್ಮಾ ಆಗಿಬಿಟ್ಟೇ.. ಪ್ಲೇಯರ್​ ಹೆಸರು ನೆನಪಿಗೆ ಬರದೇ ಸೂರ್ಯಕುಮಾರ್..
ಜಾತಿ ಜೊತೆ ಕ್ರಿಶ್ಚಿಯನ್​​​ ಪದ ಕೈಬಿಡಲು ಸಿಎಂ ಸೂಚನೆ
ಹಿಂದುಳಿದ ವರ್ಗಗಳ ಆಯೋಗದಿಂದ ಸಿದ್ಧಪಡಿಸಲಾದ ಜಾತಿ ಪಟ್ಟಿಯಲ್ಲಿ ಹಿಂದೂ ಜಾತಿಗಳನ್ನು ಕ್ರಿಶ್ಚಿಯನ್ ಧರ್ಮಕ್ಕೆ ಜೋಡಿಸಿ ಸಮೀಕ್ಷೆಯಲ್ಲಿ ಸೇರಿಸಲಾಗಿತ್ತು. ಈ ಪಟ್ಟಿಗೆ ಭಾರೀ ವಿರೋಧ ವ್ಯಕ್ತವಾಗಿತ್ತು. ವಿಪಕ್ಷಗಳು, ಹಿಂದೂ ಸಮುದಾಯ ಮಾತ್ರವಲ್ಲದೇ.. ಸಂಪುಟ ಸಭೆಯಲ್ಲಿ ಸಚಿವರೇ ಭಾರೀ ವಿರೋಧ ವ್ಯಕ್ತಪಡಿಸಿದ್ರು. ಕೆಲವರು ಸಮೀಕ್ಷೆ ಮುಂದೂಡುವಂತೆ ಬಿಗಿಪಟ್ಟು ಹಿಡಿದಿದ್ದರು. ಈ ಎಲ್ಲ ಒತ್ತಡಗಳಿಗೆ ಮಣಿದ ಸಿಎಂ ಸಿದ್ದರಾಮಯ್ಯನವರು, ಜಾತಿ ಜೊತೆಗೆ ಕ್ರಿಶ್ಚಿಯನ್ ಧರ್ಮವನ್ನು ಸೇರಿಸಿರುವ ಕಲಂಗಳನ್ನು ತೆಗೆಯುವಂತೆ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಿಗೆ ಸೂಚನೆ ನೀಡಿದ್ದಾರೆ.
ಅದೇನೆ ಇರಲಿ.. ಹೈಕಮಾಂಡ್​ ಒತ್ತಡಕ್ಕೋ, ಇಲ್ಲ ಬೇರೆ ಕಾರಣಕ್ಕೋ ತೀವ್ರ ವಿರೋಧದ ನಡುವೆಯೂ ಸರ್ಕಾರ ಜಾತಿ ಸಮೀಕ್ಷೆಗೆ ಕೈ ಹಾಕಿದ್ದು, ಸೋಮವಾರದಿಂದ ಸಮೀಕ್ಷೆ ನಡೆಯಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ