/newsfirstlive-kannada/media/media_files/2026/01/04/ramalingeshwar-temple-3-2026-01-04-18-04-05.jpg)
ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲ್ಲೂಕಿನ ಪುರಾಣ ಪ್ರಸಿದ್ದ ರಾಮಲಿಂಗೇಶ್ವರ ದೇವಾಲಯದಲ್ಲಿ ರಥೋತ್ಸವ ನಡೆದಿದೆ. ತ್ರೇತಾಯುಗದಲ್ಲಿ ಶ್ರೀರಾಮ ವನವಾಸದಲ್ಲಿದ್ದಾಗ ಇಲ್ಲಿನ ಬೆಟ್ಟದ ಮೇಲೆ ನೆಲೆಸಿದ್ದರಂತೆ. ಆ ಸಂದರ್ಬದಲ್ಲಿ ಶಿವಲಿಂಗವನ್ನ ಪ್ರತಿಷ್ಟಾಪಿಸಿದ್ದರಂತೆ. ಅದೇ ಕಾರಣಕ್ಕೆ ಈ ಸ್ಥಳಕ್ಕೆ ರಾಮಲಿಂಗೇಶ್ವರ ಕ್ಷೇತ್ರ ಅಂತಲೇ ಖ್ಯಾತಿಯಾಗಿದೆ.
/filters:format(webp)/newsfirstlive-kannada/media/media_files/2026/01/04/ramalingeshwar-temple-2-2026-01-04-18-04-40.jpg)
ರಾಮಲಿಂಗೇಶ್ವರನ ದರ್ಶನ ಪಡೆಯಲು ಸಾವಿರಾರು ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದ್ರು. ಈ ವೇಳೆ ಸಚಿವ ಡಾ.ಎಂ.ಸಿ. ಸುಧಾಕರ್, ಶಿಡ್ಲಘಟ್ಟ ಶಾಸಕ ಬಿ.ಎನ್. ರವಿಕುಮಾರ್ ಬಾಗಿಯಾಗಿದ್ದರು.
ಇದನ್ನೂ ಓದಿ: ಮೆಕ್ಕೆಜೋಳ ಬೆಳೆಗಾರರಿಗೆ ಗುಡ್​ನ್ಯೂಸ್ ನೀಡಿದ ರಾಜ್ಯ ಸರ್ಕಾರ
/filters:format(webp)/newsfirstlive-kannada/media/media_files/2026/01/04/ramalingeshwar-temple-5-2026-01-04-18-04-52.jpg)
ರಾಮಲಿಂಗೇಶ್ವರ ದೇವಾಲಯದ ಆವರಣದಲ್ಲಿ ಮದ್ಯಾಹ್ನ 1.30 ರ ಸಮಯದಲ್ಲಿ ಧಾರ್ಮಿಕ ವಿಧಿ ವಿಧಾನಗಳನ್ನ ನೆರವೇರಿಸಿ ನಂತರ ರಥದಲ್ಲಿ ಪರಶಿವನ ಪ್ರತಿಮೆಯನ್ನ ಪ್ರತಿಷ್ಟಾಪಿಸಿ, ಬ್ರಹ್ಮ ರಥೋತ್ಸವಕ್ಕೆ ಚಾಲನೆ ನೀಡಿದರು. ಸಾವಿರಾರು ಭಕ್ತರು ಶಿವನಾಮಸ್ಮರಣೆ ಮಾಡುತ್ತಾ ರಥವನ್ನ ಎಳೆದು ತಮ್ಮ ಹರಕೆ ತೀರಿಸಿದ್ರು. ಈ ವೇಳೆ ಹಲವಾರು ಭಕ್ತರು ಹಾಗೂ ಸಮಾಜ ಸೇವಕರು ರಥೋತ್ಸವಕ್ಕೆ ಆಗಮಿಸಿದ್ದ ಭಕ್ತರಿಗೆ ಪ್ರಸಾದ ಹಾಗೂ ಊಟದ ವ್ಯವಸ್ಥೆಯನ್ನ ಮಾಡಿದ್ರು.
ಇದನ್ನೂ ಓದಿ: ಬೆಂಗಳೂರಿಗರ ಮನಸೂರೆಗೊಳಿಸಿದ ಚಿತ್ರ ಸಂತೆ.. ಕುಂಚದಲ್ಲಿ ಅರಳಿದ ಕಲಾ ಜಗತ್ತು..! Photos
/filters:format(webp)/newsfirstlive-kannada/media/media_files/2026/01/04/ramalingeshwar-temple-4-2026-01-04-18-05-08.jpg)
ಒಟ್ಟಾರೆ ಪುರಾಣ ಪ್ರಸಿದ್ದ ರಾಮಲಿಂಗೇಶ್ವರ ಸನ್ನಿಧಿಯಲ್ಲಿ ಅದ್ದೂರಿಯಾಗಿ ಬ್ರಹ್ಮ ರಥೋತ್ಸವ ನೆರವೇರಿದ್ದು, ರಥೊತ್ಸವನ್ನ ಕಣ್ತುಂಬಿಕೊಳ್ಳಲು ರಾಜ್ಯ ಹಾಗೂ ನೆರೆ ರಾಜ್ಯಗಳ ವಿವಿಧ ಮೂಲೆಗಳಿಂದ ಸಾವಿರಾರು ಭಕ್ತರು ಆಗಮಿಸಿದ್ದರು.
ವಿಶೇಷ ವರದಿ: ಸುರೇಶ್ ಗುಡಿಬಂಡೆ, ನ್ಯೂಸ್​ಫಸ್ಟ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us