ಮತ್ತೆ SIT ಕಸ್ಟಡಿಗೆ ಚೆನ್ನಯ್ಯ.. ಇವತ್ತು ಕೋರ್ಟ್​​ನಲ್ಲಿ ಏನಾಯ್ತು..?

ಧರ್ಮಸ್ಥಳದ ಬುರುಡೆ ಪ್ರಕರಣದಲ್ಲಿ ಚೆನ್ನಯ್ಯಗೆ 12 ದಿನಗಳ ಕಸ್ಟಡಿ ಅಂತ್ಯವಾದ ಹಿನ್ನೆಲೆಯಲ್ಲಿ ಇವತ್ತು ಎಸ್​ಐಟಿ ಅಧಿಕಾರಿಗಳು ಕೋರ್ಟ್​ಗೆ ಹಾಜರುಪಡಿಸಿದ್ದರು. ಕೋರ್ಟ್​ ಮತ್ತೆ ಚಿನ್ನಯ್ಯನನ್ನು ಕಸ್ಟಡಿಗೆ ನೀಡಿ ಆದೇಶ ನೀಡಿದೆ.

author-image
Ganesh Kerekuli
Dharmasthala chennayya
Advertisment

ಧರ್ಮಸ್ಥಳದ ಬುರುಡೆ ಪ್ರಕರಣದಲ್ಲಿ ಚೆನ್ನಯ್ಯಗೆ 12 ದಿನಗಳ ಕಸ್ಟಡಿ ಅಂತ್ಯವಾದ ಹಿನ್ನೆಲೆಯಲ್ಲಿ ಇವತ್ತು ಎಸ್​ಐಟಿ ಅಧಿಕಾರಿಗಳು ಕೋರ್ಟ್​ಗೆ ಹಾಜರುಪಡಿಸಿದ್ದರು. ಕೋರ್ಟ್​ ಮತ್ತೆ ಚಿನ್ನಯ್ಯನನ್ನು ಕಸ್ಟಡಿಗೆ ನೀಡಿ ಆದೇಶ ನೀಡಿದೆ. 

SIT ಕಸ್ಟಡಿಗೆ ನೀಡಿ ಕೋರ್ಟ್ ಆದೇಶ

ಧರ್ಮಸ್ಥಳದಲ್ಲಿ ನೂರಾರು ಶ*ವಗಳನ್ನು ಹೂತಿದ್ದೇನೆ ಎಂದಿದ್ದ  ಮಾಸ್ಕ್​ಮ್ಯಾನ್​ಗೆ ಮತ್ತೆ ಕೋರ್ಟ್ ಎಸ್​ಐಟಿ ಕಸ್ಟಡಿಗೆ ವಹಿಸಿದೆ. ಕಳೆದ ಜುಲೈ 23ರಂದು ಕೋರ್ಟ್​ಗೆ ಹಾಜರುಪಡಿಸಿ 12 ದಿನಗಳ ಕಾಲ ಪಡೆದಿದ್ದ ಕಸ್ಟಡಿ ಅವಧಿ ಇವತ್ತು ಅಂತ್ಯವಾದ ಕಾರಣ ಎಸ್​ಐಟಿ ಅಧಿಕಾರಿಗಳು ಇಂದು ಚೆನ್ನಯ್ಯನನ್ನು ಕೋರ್ಟ್​​ಗೆ ಹಾಜರುಪಡಿಸಿದ್ದರು. ವಿಚಾರಣೆ ಮುಂದುವರಿಸಲು ಕಸ್ಟಡಿಗೆ ನೀಡುವಂತೆ ಎಸ್​ಐಟಿ ಮನವಿ ಪುರಸ್ಕರಿಸಿದ ನ್ಯಾಯಾಲಯ ಮತ್ತೆ ಕಸ್ಟಡಿಗೆ ನೀಡಿ ಆದೇಶ ನೀಡಿದೆ. 

ಇದನ್ನೂ ಓದಿ:ರಾಧಿಕಾ ಕುಮಾರಸ್ವಾಮಿ ವಿಚಾರಣೆ ಹಿಂದಿನ ಸಿಕ್ರೇಟ್ ಹೇಳಿದ ಜಮೀರ್​..!

SIT ಕಚೇರಿಗೆ ಪ್ರಣವ್ ಮೊಹಾಂತಿ ಭೇಟಿ

ಬುರುಡೆ ಕೇಸ್ ತನಿಖೆ ಪ್ರಗತಿ ಬಗ್ಗೆ ತಿಳಿಯಲು ಇವತ್ತು ಎಸ್ಐಟಿ ಮುಖ್ಯಸ್ಥ ಪ್ರಣವ್ ಮೊಹಾಂತಿ ಎಸ್​ಐಟಿ ಕಚೇರಿಗೆ ಭೇಟಿ ನೀಡಿದ್ದರು. ಅಧಿಕಾರಿಗಳ ಜೊತೆ ಸಭೆ ನಡೆಸಿ ತನಿಖೆಯಲ್ಲಿ ಪತ್ತೆಯಾದ ಅಂಶಗಳ ಕುರಿತು ಮಾಹಿತಿ ಪಡೆದ್ರು. ಚೆನ್ನಯ್ಯನ ಹೇಳಿಕೆ ಆದಾರದಲ್ಲಿ ಸ್ಥಳ ಪರಿಶೋಧನೆ ನಡೆಸಿದ್ದು, ಬುರುಡೆ ಚೆನ್ನಯ್ಯ ಬಹಿರಂಗ ಪಡಿಸಿರುವ ಕೆಲವರಿಗೆ ಸಂಕಷ್ಟ ಎದುರಾಗಿದೆ. ಮಹೇಶ್ ತಿಮರೋಡಿ, ಗಿರೀಶ್ ಮಟ್ಟಣ್ಣಬರ್ ಹಾಗೂ ಜಯಂತ್​ಗೆ ಸಂಕಷ್ಟ ಎದುರಾಗಿದೆ. ಜಯಂತ್ ಟಿ ಹಾಗೂ ಗಿರೀಶ್ ಮಟ್ಟಣ್ಣವರ್​ಗೆ ನೋಟಿಸ್ ನೀಡಲು ಎಸ್​ಐಟಿ ಮುಂದಾಗಿದೆ.

ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಸ್ತಿರೋ ಎಸ್​ಐಟಿ ಅಧಿಕಾರಿಗಳು ಪ್ರಕರಣದ ಜೊತೆ ನಂಟು ಹೊಂದಿರುವ ಎಲ್ಲರನ್ನೂ ವಿಚಾರಣೆ ನಡೆಸ್ತಿದ್ದು ಬುರುಡೆ ಪ್ರಕರಣದ ಷಡ್ಯಂತ್ರಗಳು ಯಾರು ಅನ್ನೋದು ಬಯಲಾಗಬೇಕಿದೆ.

ಇದನ್ನೂ ಓದಿ:‘ನಾವು ರವಿ ಬೆಳಗೆರೆ ಕಡೆಯವರು ಸ್ವಾಮಿ..’ ದರ್ಶನ್ ಕೇಸ್ ವಿಚಾರಣೆ ವೇಳೆ ಕೋರ್ಟ್​ನಲ್ಲಿ ಅನಾಮಿಕ ಟ್ವಿಸ್ಟ್..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

dharmasthala case, sameer md Dharmasthala case dharmasthala
Advertisment