Advertisment

ಧರ್ಮಸ್ಥಳ ಬುರುಡೆ ಪ್ರಕರಣಕ್ಕೆ ಬಿಗ್ ​ಟ್ವಿಸ್ಟ್​..! ನಾಲ್ವರಿಗೆ SIT ನೋಟಿಸ್

ಧರ್ಮಸ್ಥಳ ಬುರುಡೆ ಪ್ರಕರಣದಲ್ಲಿ ಮತ್ತೊಂದು ಮಹತ್ವದ ಬೆಳವಣಿಗೆಯಾಗಿದೆ. ಬಂಗ್ಲೆಗುಡ್ಡ ಬುರುಡೆ ಷಡ್ಯಂತ್ರದ ವಿಚಾರಣೆಗಾಗಿ ಎಸ್​ಐಟಿ ನಾಲ್ವರಿಗೆ ನೋಟಿಸ್ ನೀಡಿದ್ದು, ಸೋಮವಾರ ಬೆಳಗ್ಗೆ 10:30ಕ್ಕೆ ಬೆಳ್ತಂಗಡಿಯ ಎಸ್​ಐಟಿ ಕಚೇರಿಗೆ ಹಾಜರಾಗಲು ಸೂಚನೆ ನೀಡಿದೆ.

author-image
Bhimappa
MAHESH TIMARODI
Advertisment

ಮಂಗಳೂರು: ಧರ್ಮಸ್ಥಳ ಬುರುಡೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಬುರುಡೆ ಷಡ್ಯಂತ್ರದಲ್ಲಿ ಮುಖ್ಯ ಪಾತ್ರದಾರಿಗಳು ಎನ್ನಲಾಗಿರುವ ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣನವರ್, ಜಯಂತ್ ಟಿ. ಹಾಗೂ ವಿಠಲ ಗೌಡಗೆ ಎಸ್​ಐಟಿ ತನಿಖಾಧಿಕಾರಿ‌ ಜಿತೇಂದ್ರ ದಯಾಮಾ ನೋಟಿಸ್ ನೀಡಿದ್ದಾರೆ. ಒಂದು ವೇಳೆ ವಿಚಾರಣೆಗೆ ಹಾಜರಾಗದಿದ್ದಲ್ಲಿ ಬಂಧನ ಮಾಡುವ ಎಚ್ಚರಿಕೆಯನ್ನೂ ಸಹ ನೀಡಿದ್ದಾರೆ.

Advertisment

ಬಿಎನ್​ಎಸ್​ಎಸ್ 35(3) ರ ಅಡಿಯಲ್ಲಿ ಅಧಿಕಾರ ಬಳಸಿಕೊಂಡು ನೀಡಿರುವ ನೋಟಿಸ್​ನಲ್ಲಿ ಹಲವು ಅಂಶಗಳನ್ನು ಎಸ್​ಐಟಿ ತನಿಖಾಧಿಕಾರಿ ಜಿತೇಂದ್ರ ದಯಾಮ ಉಲ್ಲೇಖಿಸಿದ್ದಾರೆ. ತನಿಖೆಯಲ್ಲಿ ಕಂಡುಕೊಂಡಂತೆ ಪ್ರಕರಣದ ಕುರಿತಂತೆ ಸಂಗತಿಗಳನ್ನು ಹಾಗೂ ಸಂದರ್ಭಗಳನ್ನು ತಮ್ಮಿಂದ ಖಚಿತಪಡಿಸಿಕೊಳ್ಳುವ ಬಗ್ಗೆ ನಿಮ್ಮನ್ನು ವಿಚಾರಿಸುವುದು ಅಗತ್ಯವಾಗಿದೆ ಎಂದು ನೋಟಿಸ್​ನಲ್ಲಿ  ಉಲ್ಲೇಖ ಮಾಡಲಾಗಿದೆ. 

ಇದನ್ನೂ ಓದಿ:ಹುಟ್ಟು ಹಬ್ಬದ ದಿನದಂದೇ ಜೀವ ಬಿಟ್ಟ ಕಿರುತೆರೆ ನಟ ಆರ್ಯನ್

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Mahesh Thimaroddi BJP JDS on Dharmasthala DHARAMASTHALA FSL REPORT REVEALS TRUTH Chenna Dharmasthala Dharmasthala case dharmasthala
Advertisment
Advertisment
Advertisment