/newsfirstlive-kannada/media/media_files/2025/08/29/sujatha2-2025-08-29-07-52-58.jpg)
ಅನನ್ಯಾ ಭಟ್​ ಮಿಸ್ಸಿಂಗ್​ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಕೂಡ ದೂರುದಾರೆ ಸುಜಾತ ಭಟ್​​ ವಿಚಾರಣೆ ನಡೆಯಲಿದೆ. ತನಿಖಾಧಿಕಾರಿ ಗುಣಪಾಲ ಜೆ ಅವರು ಸುಜಾತ ಭಟ್​​ರನ್ನ ವಿಚಾರಣೆ ನಡೆಸಲಿದ್ದಾರೆ.
ಇದನ್ನೂ ಓದಿ:ಕೈಕೊಟ್ಟ ಬುರುಡೆ ಗ್ಯಾಂಗ್​.. ಏಕಾಂಗಿಯಾದ ಸುಜಾತಾ ಭಟ್!
ಈಗಾಗಲೇ ಮೂರು ದಿನಗಳ ಕಾಲ ಸುದೀರ್ಘ ವಿಚಾರಣೆಗೆ ಒಳಪಟ್ಟಿರುವ ಸುಜಾತಾ ಭಟ್​​​ ಅಧಿಕಾರಿಗಳ ಮುಂದೆ ಸ್ಪೋಟಕ ಮಾಹಿತಿಗಳನ್ನ ಬಾಯ್ಬಿಟ್ಟಿದ್ದಾರೆ. ಇಂದು ಸುಜಾತ ಭಟ್​​ ವಿಚಾರಣೆ ಪೂರ್ಣಗೊಳ್ಳುವ ಸಾಧ್ಯತೆ ಇದ್ದು, ಬಂಧನದ ಬಗ್ಗೆ ಎಸ್​ಐಟಿ ಅಧಿಕಾರಿಗಳು ಮುಂದಿನ ನಿರ್ಧಾರ ಕೈಗೊಳ್ಳಲಿದ್ದಾರೆ.
/filters:format(webp)/newsfirstlive-kannada/media/media_files/2025/08/26/dharmasthala-sujata-bhat-2025-08-26-16-07-38.jpg)
ಆರಂಭದಲ್ಲಿ ನನ್ನ ಮಗಳು ನಾಪತ್ತೆಯಾಗಿದ್ದಾಳೆ. ಆಕೆಯ ಅಸ್ತಿಯನ್ನ ಹುಡುಕಿಕೊಡಿ ಅಂತ ಸುಜಾತ ಭಟ್​ ಕಾರಿನಲ್ಲಿ ಬಂದು ದೂರು ಕೊಟ್ಟಿದ್ದರು. ನಂತರ ಸುಳ್ಳು ಫೋಟೋ ತೋರಿಸಿ ಸುಜಾತ ಭಟ್​​ಸಿಕ್ಕಿಹಾಕಿಕೊಂಡಿದ್ದರು. ಮಾಧ್ಯಮ ಹಾಗೂ ಬುರುಡೆ ಗ್ಯಾಂಗ್​ ಮುಂದೆ ದಿನಕ್ಕೊಂದು ಹೇಳಿಕೆ ನೀಡುತ್ತಿದ್ದರು. ಹೀಗಾಗಿ ಸುಜಾತ ಭಟ್​​ರನ್ನ ಬುರುಡೆ ಗ್ಯಾಂಗ್​ ದೂರ ಮಾಡಿದೆ ಅಂತ ಹೇಳಲಾಗ್ತಿದ್ದು, ಹೀಗಾಗಿ ನಿನ್ನೆ ಆಟೋದಲ್ಲಿ ಏಕಾಂಕಿಯಾಗಿ ಬಂದು ವಿಚಾರಣೆಗೆ ಹಾಜರಾಗಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us