/newsfirstlive-kannada/media/media_files/2025/09/08/bgk_lunar_1-2025-09-08-13-22-16.jpg)
ಬಾಗಲಕೋಟೆ: ಖಗೋಳ ಕೌತುಕಕ್ಕೆ ನಭೋ ಮಂಡಲ ಸಾಕ್ಷಿ ಆಗಿದ್ದು, ಸದ್ಯ ಸುದೀರ್ಘ ಚಂದ್ರಗ್ರಹಣ ಮುಕ್ತಾಯವಾಗಿದೆ. ಆಕಾಶದಲ್ಲಿ ಬೆಳ್ಳಗೆ ಕಾಣುತ್ತಿದ್ದ ಚಂದ್ರ ನಿನ್ನೆ ಗ್ರಹಣದಿಂದ ಬಂಧಿಯಾಗಿದ್ದು, ಕೆಂಪು ಬಣ್ಣದಲ್ಲಿ ಕಾಣಿಸಿಕೊಂಡಿದ್ದಾನೆ.
ಸೂರ್ಯ ಹಾಗೂ ಚಂದ್ರನ ನಡುವೆ ಭೂಮಿ ಮೆಲ್ಲನೆ ಬಂದಾಗ ಚಂದ್ರಗ್ರಹಣ ಸಂಭವಿಸಿತು. ಈ ಮಹಾ ಅದ್ಭುತವನ್ನು ಬೆಂಗಳೂರು ಸೇರಿದಂತೆ ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಸಾರ್ವಜನಿಕರು ನೋಡಿ ಖುಷಿ ಪಟ್ಟಿದ್ದಾರೆ. ಈ ಚಂದ್ರಗ್ರಹಣ ಹೋಲಿಕೆ ಆಗುವಂತೆ ಎರಡು ತಿಂಗಳ ಹಿಂದೆಯೇ ದರ್ಗಾದ ಅಜ್ಜ ಭವಿಷ್ಯ ನುಡಿದಿದ್ದರು.
ಇದನ್ನೂ ಓದಿ:ರಾತ್ರಿ ಕ್ಷಣ ಕ್ಷಣಕ್ಕೂ ಶಶಿಯ ಬಣ್ಣ ಬದಲಾವಣೆ.. ಅಪರೂಪದ ಚಂದ್ರಗ್ರಹಣ ಚಂದವೋ ಚಂದ!
ಎರಡು ತಿಂಗಳ ಹಿಂದೆಯೇ ಚಂದ್ರಗ್ರಹಣ ಭವಿಷ್ಯ ನುಡಿದ ಅಜ್ಜ
ಬಾಗಲಕೋಟೆಯ ಬಾದಾಮಿ ತಾಲೂಕಿನ ಹೆಬ್ಬಳ್ಳಿಯ ಗುರುದೊಡ್ಡಸಾಬವಲಿ ದರ್ಗಾದ ಅಜ್ಜ ಎರಡು ತಿಂಗಳ ಹಿಂದೆಯೇ ಚಂದ್ರಗ್ರಹಣದ ಭವಿಷ್ಯ ನುಡಿದಿದ್ದರು. ಸದ್ಯ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಶಾಕ್ ಆಗಿದ್ದಾರೆ.
ಹೆಬ್ಬಳ್ಳಿ ಅಜ್ಜ ಮೊಹರಂ ಹಬ್ಬದ ಕೊನೆಯ ದಿನದಂದು, ಚಂದ್ರನನ್ನ ಕೆಂಪು ಮಾಡಬೇಕಂತ ಮಾಡೀನಿ. ಇಷ್ಟು ದಿನ 10-12 ವರ್ಷ ಬೆಳ್ಳಂಗೆ ಚಂದ್ರ ಬೆಳ್ಳಗೆ ಮಾಡಿದ್ದೆ. ಆದರೆ ಇನ್ಮೇಲೆ ಚಂದಪ್ಪನನ್ನ ಕೆಂಪು ರಕ್ತಮಯ ಮಾಡ್ತೀನಿ ಎಂದು ಎರಡು ತಿಂಗಳ ಹಿಂದೆಯೇ ಭವಿಷ್ಯ ನುಡಿದಿದ್ದರು. ಸದ್ಯ ಈ ವಿಡಿಯೋ ವೈರಲ್ ಅಗಿದ್ದು, ಅಚ್ಚರಿಯನ್ನ ಮೂಡಿಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ