/newsfirstlive-kannada/media/media_files/2025/11/21/davanagere-accident-2025-11-21-13-47-55.jpg)
ದಾವಣಗೆರೆ: ಮಿಟ್ಲಕಟ್ಟೆ ಬಳಿ ಬೈಕ್ ಅಪಘಾತ ಸಂಭವಿಸಿ ದಾವಣಗೆರೆ ಮೂಲದ ಯುವತಿ ಪ್ರಿಯಾ (22) ಮೃತಪಟ್ಟಿದ್ದಾಳೆ. ಹಮ್ಸ್​ನಿಂದಾಗಿ ಬ್ಯಾಲೆನ್ಸ್ ತಪ್ಪಿ ಮರಕ್ಕೆ ಡಿಕ್ಕಿಯಾಗಿ ದುರಂತ ಸಂಭವಿಸಿದೆ.
ಮೃತ ಪ್ರಿಯಾ ಸ್ನೇಹಿತ ಯೋಗೆಶ್ ಜೊತೆ ಪಾರ್ಟಿಗೆ ತೆರಳಿದ್ದಳು. ಜರಕಟ್ಟೆಯಲ್ಲಿರುವ ಆಧ್ಯಾ ಹೋಟೆಲ್​ಗೆ ಹೋದಾಗ ಸ್ನೇಹಿತ ಯೋಗೆಶ್ ಮತ್ತು ಪ್ರಿಯಾ ಮಧ್ಯೆ ವಾಗ್ವಾದ ನಡೆದಿದೆ. ನಂತರ ಪ್ರಿಯಾಳ ಮನವೊಲಿಸಿ ಬೈಕ್​​ನಲ್ಲಿ ಕರೆದುಕೊಂಡು ಬಂದಿದ್ದ ಎನ್ನಲಾಗಿದೆ.
ಈ ವೇಳೆ ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ಮಿಟ್ಲಕಟ್ಟೆ ಬಳಿ ಅಪಘಾತ ಸಂಭವಿಸಿದೆ. ಅಪಘಾತದ ಸ್ಥಳದಲ್ಲಿ ಯುವತಿ ಮೃತಪಟ್ಟರೆ ಯೋಗೆಶ್ ಗಂಭೀರ ಗಾಯಗೊಂಡಿದ್ದಾರೆ. ಮೃತ ಪ್ರಿಯಾ ಮತ್ತು ಯೋಗೆಶ್​ ವಾಗ್ವಾದದ ಕೊನೆ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಪಾರ್ಟಿಯಲ್ಲಿ ನಿಜಕ್ಕೂ ಇಬ್ಬರ ಮಧ್ಯೆ ಆಗಿರುವ ಗಲಾಟೆ ಏನು ಅನ್ನೋದು ತನಿಖೆಯಿಂದ ತಿಳಿದುಬರಬೇಕಿದೆ.
ಇದನ್ನೂ ಓದಿ: ಡಿಕೆಶಿಗೆ ಸಿಎಂ ಸ್ಥಾನ ನೀಡಲಿ ಎಂದು ಬಹಿರಂಗವಾಗಿ ಧ್ವನಿ ಎತ್ತಿದ ಶಾಸಕ ಕದಲೂರು ಉದಯ್! ಡಿಕೆಗೆ ಪ್ರತಿಫಲ ಸಿಗಬೇಕು ಎಂದ ಉದಯ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us