ದಾವಣಗೆರೆ ಡ್ರಗ್ಸ್ ಕೇಸ್​ನಲ್ಲಿ ಸಚಿವರ ಆಪ್ತ ಸೇರಿ ನಾಲ್ವರು ಅರೆಸ್ಟ್..!

ದಾವಣಗೆರೆಯಲ್ಲಿ ಡ್ರಗ್ಸ್ ದಂಧೆ ಕೇಸ್‌ನಲ್ಲಿ ಮತ್ತೆ ನಾಲ್ವರ ಬಂಧನವಾಗಿದೆ. ಅವರಲ್ಲಿ ಓರ್ವ ಸಚಿವರ ಆಪ್ತನಾಗಿದ್ದು, ಭಾರೀ ಚರ್ಚೆಗೆ ಕಾರಣವಾಗಿದೆ. ಸಚಿವರ ಆಪ್ತ ಅನ್ವರ್ ಬಾಷಾ, ಪಾರಸ್, ಕೃಷ್ಣಮೂರ್ತಿ, ಮಂಜುನಾಥ ಧೋನಿ ಬಂಧಿತ ಆರೋಪಿಗಳು.

author-image
Ganesh Kerekuli
Davanagere
Advertisment

ದಾವಣಗೆರೆಯಲ್ಲಿ ಡ್ರಗ್ಸ್ ದಂಧೆ ಕೇಸ್‌ನಲ್ಲಿ ಮತ್ತೆ ನಾಲ್ವರ ಬಂಧನವಾಗಿದೆ. ಅವರಲ್ಲಿ ಓರ್ವ ಸಚಿವರ ಆಪ್ತನಾಗಿದ್ದು, ಭಾರೀ ಚರ್ಚೆಗೆ ಕಾರಣವಾಗಿದೆ. 

ಸಚಿವರ ಆಪ್ತ ಅನ್ವರ್ ಬಾಷಾ, ಪಾರಸ್, ಕೃಷ್ಣಮೂರ್ತಿ, ಮಂಜುನಾಥ ಧೋನಿ ಬಂಧಿತ ಆರೋಪಿಗಳು. ಡಿಸೆಂಬರ್ 22ರಂದು ಪ್ರಕರಣ ಸಂಬಂಧ 4 ಆರೋಪಿಗಳನ್ನ ಪೊಲೀಸರು ಬಂಧಿಸಿದ್ದರು. ಬಂಧಿತರಿಂದ 10 ಲಕ್ಷ ಮೌಲ್ಯದ ಎಂಡಿಎಂಎ, ಒಪಿಯಂ ಮಾದಕ ವಸ್ತು ಜಪ್ತಿ ಮಾಡಲಾಗಿತ್ತು. 

ಇದೀಗ ಬಂಧಿತರ ತೀವ್ರ ವಿಚಾರಣೆ ವೇಳೆ ಕೆಲವು ಮಾಹಿತಿಗಳು ಹೊರಬಂದಿದ್ದವು. ಅದರ ಆಧಾರದ ಮೇಲೆ ಮತ್ತೆ ನಾಲ್ವರನ್ನು ಅರೆಸ್ಟ್ ಮಾಡಿದ್ದಾರೆ. ಆ ಮೂಲಕ ಬಂಧಿತರ ಸಂಖ್ಯೆ 8ಕ್ಕೆ ಏರಿಕೆ ಆಗಿದೆ. ವಿದ್ಯಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಇದನ್ನೂ ಓದಿ: SUPER SIX: ಕರ್ನಾಟಕಕ್ಕೆ 4 ವಿಕೆಟ್​ಗಳ ಭರ್ಜರಿ ಜಯ.. ಸ್ಮೃತಿ ಮಂದಾನ ಹೊಸ ದಾಖಲೆ!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

Davanagere news
Advertisment