/newsfirstlive-kannada/media/media_files/2025/09/06/delhi_police_1-2025-09-06-11-49-02.jpg)
ನವದೆಹಲಿ: ಗುಂಡಿನ ದಾಳಿಗೆ ಇಬ್ಬರು ವ್ಯಕ್ತಿಗಳು ಜೀವ ಕಳೆದುಕೊಂಡಿರುವ ಘಟನೆ ಈಶಾನ್ಯ ದೆಹಲಿಯ ಪ್ರತಾಪ್ ನಗರದ ಸಿ-ಬ್ಲಾಕ್ ಏರಿಯಾದಲ್ಲಿ ನಡೆದಿದೆ.
ಸುಧೀರ್ ಅಲಿಯಾಸ್ ಬಂಟಿ (35) ಹಾಗೂ ರಾಧೆ ಪ್ರಜಾಪತಿ (30) ಗುಂಡಿನ ದಾಳಿಯಲ್ಲಿ ಬಲಿಯಾದವರು. ನಿನ್ನೆ ಸುಮಾರು 6 ರಿಂದ 7 ಗಂಟೆ ಸುಮಾರಿಗೆ ಸಿ-ಬ್ಲಾಕ್ ಏರಿಯಾದಲ್ಲಿ ಫೈರಿಂಗ್ ಮಾಡಿರುವ ಶಬ್ಧ ಕೇಳಿ ಬಂದಿದೆ. ಇದರಿಂದ ಸ್ಥಳೀಯರು ಓಡೋಡಿ ಬಂದು ನೋಡಿದರೆ ಸ್ಥಳದಲ್ಲಿ ಇಬ್ಬರು ರಕ್ತದ ಮಡುವಿನಲ್ಲಿ ಬಿದ್ದಿದ್ದರು.
ಇದನ್ನೂ ಓದಿ: 4 ಅಂತಸ್ತಿನ ಕಟ್ಟಡ ಕುಸಿದು ಬಿದ್ದು ತಂದೆ, ಮಗಳು ಬಲಿ.. 7 ಮಂದಿ ಗಂಭೀರ
ತಕ್ಷಣ ಅವರ ಕುಟುಂಬಸ್ಥರು ಗಾಯಾಳುಗಳನ್ನ ದೆಹಲಿಯ ಜಿಬಿಟಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆದರೆ ಚಿಕಿತ್ಸೆ ಪಡೆಯುವಾಗಲೇ ಇಬ್ಬರು ಕೊನೆಯುಸಿರೆಳೆದಿದ್ದಾರೆ. ಈ ಸಂಬಂಧ ಸೆಕ್ಷನ್ 103(1), ಮತ್ತು 3(5) ಭಾರತೀಯ ನ್ಯಾಯಾ ಸಂಹಿತಾ (ಬಿಎನ್ಎಸ್) ಅಡಿ ಪ್ರಕರಣ ದಾಖಲು ಮಾಡಲಾಗಿದೆ. ಗುಂಡಿನ ದಾಳಿ ಮಾಡಿದವರು ಯಾರೆಂದು ತಿಳಿದು ಬಂದಿಲ್ಲ. ಹೀಗಾಗಿ ಫಾರೆನ್ಸಿಕ್ ಸಿಬ್ಬಂದಿ ಸ್ಥಳವನ್ನು ಸೂಕ್ಷ್ಮವಾಗಿ ಪರಿಶೀಲನ ನಡೆಸಿದ್ದಾರೆ.
ಯಾವ ಉದ್ದೇಶಕ್ಕೆ ದುಷ್ಕರ್ಮಿಗಳು ಈ ಕೃತ್ಯ ನಡೆಸಿದ್ದಾರೆ ಎನ್ನುವುದು ಸ್ಪಷ್ಟವಾಗಿಲ್ಲ. ಮೇಲ್ನೋಟಕ್ಕೆ ಇದು ಹಳೆಯ ದ್ವೇಷ ಎಂದು ಹೇಳಲಾಗುತ್ತಿದೆ. ಇನ್ನೊಂದು ಅರ್ಥದಲ್ಲಿ ಗ್ಯಾಂಗ್ವಾರ್ಗಳ ಮಧ್ಯೆದ ಪೈಪೋಟಿ ಎನ್ನಲಾಗುತ್ತಿದೆ. ಹೀಗಾಗಿ ವಿವಿಧ ಆಯಾಮಗಳಲ್ಲಿ ಪೊಲೀಸರು ತನಿಖೆ ಮಾಡುತ್ತಿದ್ದು ಆರೋಪಿಗಳನ್ನು ಪತ್ತೆ ಹಚ್ಚಲು ತಂಡಗಳನ್ನು ರಚನೆ ಮಾಡಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ