/newsfirstlive-kannada/media/media_files/2025/08/23/mask_man_brother_tanase-2025-08-23-14-34-14.jpg)
ಮಂಗಳೂರು: ಧರ್ಮಸ್ಥಳ ವಿಚಾರದಲ್ಲಿ ದೂರುದಾರ ಮಾಸ್ಕ್ಮ್ಯಾನ್ ಚಿನ್ನಯ್ಯನ ಸಹೋದರನನ್ನು ವಿಶೇಷ ತನಿಖಾ ತಂಡ (ಎಸ್ಐಟಿ)ದ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.
ಚಿನ್ನಯ್ಯನನ ಸಹೋದರ ತಾನಾಸೆಯನ್ನ ವಶಕ್ಕೆ ಪಡೆಯಲಾಗಿದೆ. ಮಾಸ್ಕ್ ಮ್ಯಾನ್ ಚಿನ್ನಯ್ಯ ಅಲಿಯಾಸ್ ಚೆನ್ನನನ್ನು 10 ದಿನಗಳ ಕಾಲ ಎಸ್ಐಟಿ ಪೊಲೀಸರ ವಶಕ್ಕೆ ನೀಡಿ ಬೆಳ್ತಂಗಡಿ ಕೋರ್ಟ್ ಆದೇಶ ನೀಡಿತ್ತು. ಇದರ ಬೆನ್ನಲ್ಲೇ ಎಸ್ಐಟಿ ಅಧಿಕಾರಿಗಳು ಚಿನ್ನಯ್ಯನ ಸಹೋದರನಾದ ತಾನಾಸೆಯನ್ನ ವಶಕ್ಕೆ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ: ನನ್ನ ತಂಗಿ ವಾಸಂತಿ ಸಾವಿನಲ್ಲಿ ಸುಜಾತ ಭಟ್ ಕೈವಾಡ; ಸಹೋದರ ವಿಜಯ್ ಸ್ಫೋಟಕ ಆರೋಪ
ತಾನಾಸೆ ಬೆಳಗ್ಗೆ ಕೆಲಸಕ್ಕೆ ಎಂದು ಹೋಗಿದ್ದನು. ಆದರೆ ಅವನು ಕೆಲಸ ಮಾಡುವ ಸ್ಥಳಕ್ಕೆ ಹೋಗಿಯೇ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಸದ್ಯ ಎಸ್ಐಟಿ ಅಧಿಕಾರಿಗಳು ಆತನನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ವಿಚಾರಣೆಯಲ್ಲಿ ಏನೆಲ್ಲಾ ಸತ್ಯಗಳು ಹೊರಬರಲಿವೆ. ಧರ್ಮಸ್ಥಳ ವಿಚಾರದಲ್ಲಿ ಇವರು ಹೇಗೆ ಇನ್ವಾಲ್ ಆದರು, ಯಾರು ಈ ಬಗ್ಗೆ ಕುತುಂತ್ರ ಎಣೆದಿದ್ದಾರೆ ಎನ್ನುವುದು ತಿಳಿದು ಬರಬೇಕಿದೆ.
ಚಿನ್ನಯ್ಯಗೆ 2 ಲಕ್ಷ ರೂಪಾಯಿ ನೀಡಿ ಸುಳ್ಳು ದೂರು ನೀಡಲು ಗ್ಯಾಂಗ್ ಒಂದು ತರಬೇತಿ ನೀಡಿದ್ದಾರಂತೆ. ಇದಾದ ಮೇಲೆಯೇ ಪೊಲೀಸರಿಗೆ ಚಿನ್ನಯ್ಯ ಸುಳ್ಳು ದೂರು ಕೊಟ್ಟಿದ್ದನು. ತಲೆ ಬುರುಡೆಯನ್ನು ಚಿನ್ನಯ್ಯನ ಕೈಗೆ ಗ್ಯಾಂಗ್ ಒಂದು ಕೊಟ್ಟು ಅದನ್ನು ಪೊಲೀಸರು, ಕೋರ್ಟ್ಗೆ ಒಪ್ಪಿಸು ಎಂದು ಹೇಳಿದ್ದಾರಂತೆ. ಆ ಗ್ಯಾಂಗ್ ಹೇಳಿದಂತೆ ಚಿನ್ನಯ್ಯ ಕೇಳಿದ್ದಾನೆ. ಚಿನ್ನಯ್ಯಗೆ ಸುಳ್ಳು ದೂರು ನೀಡಲು ಹೇಳಿರುವ ಗ್ಯಾಂಗ್ ಬಗ್ಗೆಯೇ ಅಧಿಕಾರಿಗಳು ತನಿಖೆ ನಡೆಸಲಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ