/newsfirstlive-kannada/media/media_files/2025/08/23/mask_man_new-2025-08-23-11-40-49.jpg)
ಮಂಗಳೂರು: ತಲೆಬುರುಡೆ ತಂದ ಕೇಸ್ನಲ್ಲಿ ಮಾಸ್ಕ್ಮ್ಯಾನ್ ಸಿ.ಎನ್ ಚಿನ್ನಯ್ಯ ಅಲಿಯಾಸ್ ಚೆನ್ನ ಅರೆಸ್ಟ್ ಆಗಿದ್ದಾನೆ. ಆದರೆ ಎಸ್ಐಟಿ ವಿಚಾರಣೆ ವೇಳೆ ಬುರುಡೆ ಯಾರೋ ತಂದು ಕೊಟ್ಟಿದ್ದಾಗಿ ಗೊಂದಲವಾದ ಹೇಳಿಕೆ ನೀಡುತ್ತಿದ್ದಾನೆ.
ಮಾಸ್ಕ್ಮ್ಯಾನ್ ಚಿನ್ನಯ್ಯನನ್ನು ಅರೆಸ್ಟ್ ಮಾಡಿದ್ದ ಎಸ್ಐಟಿ ಅಧಿಕಾರಿಗಳು ಕೋರ್ಟ್ಗೆ ಹಾಜರು ಪಡಿಸಿದ್ದರು. ಈ ವೇಳೆ ಚಿನ್ನಯ್ಯನನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆದರೆ ಎಸ್ಐಟಿ ವಿಚಾರಣೆಯಲ್ಲಿ ಯಾರೋ ತಲೆ ಬುರುಡೆ ತಂದು ಕೊಟ್ಟಿದ್ದಾರೆ ಎಂದು ಚಿನ್ನಯ್ಯ ಹೇಳುತ್ತಿದ್ದಾನೆ. ಜುಲೈ 11 ರಂದು ಕೋರ್ಟ್ನಲ್ಲಿ ತಾನೇ ಭೂಮಿ ಅಗೆದು ತಂದಿದ್ದಾಗಿ 164ರ ಪ್ರಕಾರ ಹೇಳಿಕೆ ಕೊಟ್ಟಿದ್ದನು.
ಇದನ್ನೂ ಓದಿ:ಧರ್ಮಸ್ಥಳದ ಬಗ್ಗೆ ಜನರಲ್ಲಿದ್ದ ಭಕ್ತಿ ಭಾವನೆ ಎಲ್ಲ ಹಾಳು ಮಾಡಿದರು- ವಿಪಕ್ಷ ನಾಯಕ R ಅಶೋಕ್
ಇದೇ ಆಧಾರದ ಮೇಲೆ ಆ ಬುರುಡೆಯನ್ನ ಫಾರೆನ್ಸಿಕ್ ಕಳುಹಿಸಿ ಸ್ಥಳ ಪರಿಶೋಧನೆಯನ್ನು ಆರಂಭಿಸಲಾಗಿತ್ತು. ಆದರೆ ನಿರಂತರ ತನಿಖೆಯಿಂದಾಗಿ ಬುರುಡೆ ಬಗ್ಗೆ ಗೊಂದಲಕಾರಿ ಹೇಳಿಕೆ ನೀಡುತ್ತಿದ್ದಾನೆ. ಅದನ್ನು ಎಲ್ಲಿಂದ ತಂದ್ದಿದ್ದು ಎನ್ನುವ ಬಗ್ಗೆ ಹೇಳಿಕೆ ನೀಡುತ್ತಿಲ್ಲ. ಹೀಗಾಗಿ ಡಿಜಿಪಿ ಮೊಹಾಂತಿ ಅವರ ನಿರ್ದೇಶನದಂತೆ ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ.
ವಿಚಾರಣೆಯಲ್ಲಿ ಬುರುಡೆ ನಾನು ಅಗೆದು ತಂದಿಲ್ಲ ಅದನ್ನು ತಂದು ಕೊಟ್ಟ ಗ್ಯಾಂಗ್ ತಂದು ಕೊಟ್ಟಿತ್ತು. ಇದರ ಆಧಾರದಲ್ಲಿ ಸುಳ್ಳು ಸಾಕ್ಷ್ಯ ಹಾಗೂ ಸುಳ್ಳು ಹೇಳಿಕೆ ಆಧಾರದಲ್ಲಿ ವಶಕ್ಕೆ ಪಡೆದಿದ್ದರು. ವಶಕ್ಕೆ ಪಡೆದು ನ್ಯಾಯಾಲಯದ ಎದುರು ಹಾಜರು ಪಡಿಸಲಾಗಿತ್ತು. ಕೋರ್ಟ್ನಲ್ಲಿ ಬುರುಡೆ ಗ್ಯಾಂಗ್ ಬಗ್ಗೆ ಮಾಹಿತಿ ನೀಡಿದ್ದನು. ಸದ್ಯ ಹೆಚ್ಚಿನ ತನಿಖೆಗಾಗಿ ರಿವರ್ಸ್ ತನಿಖೆ ಹಿನ್ನೆಲೆಯಲ್ಲಿ ಚಿನ್ನಯ್ಯನನ್ನ ಎಸ್ಐಟಿ ವಶಕ್ಕೆ ಪಡೆದುಕೊಂಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ