/newsfirstlive-kannada/media/media_files/2025/08/23/sujatha_bhat-1-2025-08-23-08-29-55.jpg)
ಯೂಟ್ಯೂಬ್ ಸಂದರ್ಶನದಲ್ಲಿ ಅನನ್ಯ ಭಟ್ ಕಾಲ್ಪನಿಕ ಪಾತ್ರ ಎಂದಿದ್ದ ಸುಜಾತ ಭಟ್ ಮತ್ತೆ ಉಲ್ಟಾ ಹೊಡೆದಿದ್ದಾರೆ. ನನ್ನನ್ನು ಕಾರಿನಲ್ಲಿ ಕರೆದೊಯ್ದು ಬಲವಂತದಿಂದ ಆ ರೀತಿ ಹೇಳಿಕೆ ಕೊಡಿಸಿದ್ದಾರೆ. ಎಲ್ಲ ಸತ್ಯವನ್ನು ಎಸ್ಐಟಿ ಮುಂದೆ ಹೇಳ್ತೀನಿ ಎಂದು ಹೈಡ್ರಾಮಾ ಸೃಷ್ಟಿಸಿದ್ದಾರೆ.
ಊಸರವಳ್ಳಿ ಕ್ಷಣಕ್ಕೊಂದು, ಹೇಗೆ ನಂಬ್ಲಿ ನಾನು ನಿನ್ನ ಅನ್ನೋ ಮಾತಿದೆ. ಆದ್ರೀಗ ಸುಜಾತ ಭಟ್ ಮಾತುಗಳನ್ನು ಕೇಳ್ತಿದ್ರೆ, ಈ ಮಾತು ನೆನಪಾಗುತ್ತೆ. ಊರಸವಳ್ಳಿ ಬಣ್ಣ ಬದಲಿಸಿದಂತೆ. ಸುಜಾತ ಭಟ್ ಕೂಡ ಗಂಟೆಗೊಂದು ಹೇಳಿಕೆಗಳನ್ನು ನೀಡುವ ಮೂಲಕ ಗೊಂದಲದ ಜೊತೆ ಹೈಡ್ರಾಮಾವನ್ನೇ ಸೃಷ್ಟಿಸ್ತಿದ್ದಾಳೆ.
ಬಲವಂತದಿಂದ ನನ್ನ ಬಳಿ ಹೇಳಿಕೆ.. ಉಲ್ಟಾ ಹೊಡೆದ ಸುಜಾತ ಭಟ್
ಅನನ್ಯಾ ಭಟ್ ಕೇವಲ ಕಾಲ್ಪನಿಕ ಪಾತ್ರ. ಮಗಳೇ ಇಲ್ಲ. ಜಮೀನಿಗೋಸ್ಕರ ಕೆಲವು ಈ ರೀತಿ ಹೇಳಿಸಿದ್ರು ಅಂತ ಯೂಟ್ಯೂಬ್ ಚಾನಲ್ಗೆ ನೀಡಿದ ಸಂದರ್ಶನದಲ್ಲಿ ಸ್ಫೋಟಕ ಹೇಳಿಕೆ ನೀಡಿದ್ದರು. ಈ ಸಂದರ್ಶನ ಮಾಧ್ಯಮಗಳ ಪ್ರಸಾರವಾಗ್ತಿದ್ದಂತೆ, ಬಣ್ಣವನ್ನೇ ಬದಲಿಸಿದ್ದು, ಮಾಧ್ಯಮಗಳ ಮುಂದೆ ಮತ್ತೆ ಹೈಡ್ರಾಮಾ ಮಾಡಿದ್ದಾರೆ. ಖಾಸಗಿ ಚಾನೆಲ್ನವರು ಕಾರಿನಲ್ಲಿ ಕೂರಿಸಿಕೊಂಡು ಬಲವಂತಾಗಿ ಹೇಳಿಸಿದ್ದಾರೆಂದು ಉಲ್ಟಾ ಹೊಡೆದಿದ್ದಾರೆ.
ಖಾಸಗಿ ಚಾನೆಲ್ ಅವರು ಬಂದು ನನ್ನ ಹೆದರಿಸಿ ಬಿಟ್ಟು ಕಾರು ಒಳಗೆ ಕೂರಿಸಿ ಈ ರೀತಿ ಮಾಡಿದ್ದಾರೆ. ನಾನಾಗೇ ಅವರ ಮುಂದೆ ಏನು ಹೇಳಿಲ್ಲ.
ಸುಜಾತ ಭಟ್, ದೂರುದಾರೆ
ಯೂಟ್ಯೂಬ್ ಚಾನೆಲ್ಗೆ ಸಂದರ್ಶ ನೀಡುವಾಗ, ಗಿರೀಶ್ ಮಟ್ಟಣ್ಣ, ಜಯಂತ್ ಎಂಬುವರು ನನ್ನಿಂದ ಅನನ್ಯ ಭಟ್ ಕಾಲ್ಪನಿಕ ಪಾತ್ರದ ಬಗ್ಗೆ ಹೇಳಿಸಿದ್ರು ಎಂದು ಬಾಂಬ್ ನೀಡಿದರು. ಈ ಬಗ್ಗೆ ನ್ಯೂಸ್ಫಸ್ಟ್ ಪ್ರಶ್ನೆಗೆ ಉತ್ತರಿಸುವಾಗ ತಮ್ಮ ಹೇಳಿಕೆಯನ್ನೇ ಬದಲಿಸಿದ್ದಾರೆ.
ಇನ್ನು ಅನನ್ಯ ಭಟ್ ಇಲ್ಲ, ಫೋಟೋಗಳೆಲ್ಲ ಫೇಕ್ ಎಂದು ಯೂಟ್ಯೂಬ್ ಚಾನೆಲ್ಗೆ ಮಾಹಿತಿ ನೀಡಿದ್ರು. ಆದ್ರೆ, ನ್ಯೂಸ್ಫಸ್ಟ್ ಬಳಿ ಅನನ್ಯ ಭಟ್ ಇದ್ದಳು, ಸತ್ತು ಹೋಗಿದ್ದಾಳೆ ಎಲ್ಲವನ್ನೂ ಎಸ್ಐಟಿ ಮುಂದೆ ಹೇಳ್ತೇವೆ ಅಂತ ಮತ್ತೆ ವರಸೆ ಬದಲಿಸಿದ್ದಾರೆ.
ನಾನು ಎಸ್ಐಟಿ ಬಳಿಗೆ ಹೋಗುತ್ತೇನೆ. ಅಲ್ಲಿ ಹೋಗು ಏನು ಮಾಡಬೇಕು ಅದನ್ನು ಮಾಡುತ್ತೇನೆ. ದಯವಿಟ್ಟು ಇದು ಇಲ್ಲಿಗೆ ಸ್ಟಾಪ್ ಮಾಡಿ. ದಯವಿಟ್ಟು ನನ್ನ ಕ್ಷಮೆ ಇರಲಿ. ಅನನ್ಯ ಭಟ್ ಜೀವಂತವಾಗಿಲ್ಲ. ಇದು ಸತ್ಯ. ಫೋಟೋ ಅನನ್ಯದ್ದು.
ಸುಜಾತ ಭಟ್, ದೂರುದಾರೆ
ಇದನ್ನೂ ಓದಿ: ಸ್ಯಾಂಡಲ್ವುಡ್ ಆ್ಯಂಕರ್ ಅನುಶ್ರೀ ಮದುವೆ.. ಬೆಂಗಳೂರಿನ ಯಾವ ಸ್ಥಳದಲ್ಲಿ ವಿವಾಹ ಸಂಭ್ರಮ?
ಇಂದು ಎಸ್ಐಟಿ ವಿಚಾರಣೆಗೆ ಸುಜಾತ ಹಾಜರು ಡೌಟ್
ರಾಜ್ಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿ, ದಿನದಿಂದ ದಿನ್ಕೂ ಸ್ಫೋಟಕ ತಿರುವ ಪಡೀತಿದ್ದ, ಅನನ್ಯ ಭಟ್ ಕೇಸ್ ಅನ್ನು ಎಸ್ಐಟಿಗೆ ವರ್ಗಾಹಿಸಲಾಗಿದ್ದು, ತನಿಖೆ ಚುರುಕುಗೊಂಡಿದೆ. ಈ ಬಗ್ಗೆ ಇವತ್ತು ಸುಜಾತ ಭಟ್ಗೆ ವಿಚಾರಣೆಗೆ ಹಾಜರಾಗಲು ಎಸ್ಐಟಿ ನೋಟಿಸ್ ನೀಡಿತ್ತು. ಆದ್ರೀಗ ಅನಾರೋಗ್ಯದ ನೆಪವೊಡ್ಡಿ ಆಗಸ್ಟ್ 29ಕ್ಕೆ ವಿಚಾರಣೆಗೆ ಹಾಜರಾಗುವುದಾಗಿ ತನಿಖಾಧಿಕಾರಿಗೆ ಸುಜಾತ ಭಟ್ ಪತ್ರ ಬರೆದು, ಪ್ಲಾನ್ ಬದಲಾವಣೆ ಮಾಡಿರೋದು ಮತ್ತಷ್ಟು ಅನುಮಾನಕ್ಕೆ ನಾಂದಿಯಾಡಿದೆ.
ಅದೇನೆ ಇರಲಿ, ಅನನ್ಯ ಭಟ್ ಇದ್ದಳೋ ಇಲ್ವೋ, ಬದುಕಿದ್ದಾಳೋ ಸತ್ತಿದ್ದಾಳೋ, ಕಾಲ್ಪನಿಕ ಪಾತ್ರವೋ, ಅಸಲಿಯೋ ಅನ್ನೋದನ್ನು ಎಸ್ಐಟಿ ಸೂಕ್ತ ತನಿಖೆ ಮೂಲಕ, ಅನನ್ಯ ಕೇಸ್ನ ಅಸಲಿಯತ್ತನ್ನು ಬಹಿರಂಗ ಪಡಿಸಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ