ಧರ್ಮಸ್ಥಳ ಕೇಸ್; ಸಮೀರ್​ ಆದಾಯದ ಮೂಲ ಕೆದಕಿದ ಪೊಲೀಸರು.. ಇಂದು ಕೂಡ ವಿಚಾರಣೆ

ಧರ್ಮಸ್ಥಳದ ಬಗ್ಗೆ ಅಪಪ್ರಚಾರಕ್ಕೆ ದೊಡ್ಡ ಮಟ್ಟದಲ್ಲೇ ಷಡ್ಯಂತ್ರ ನಡೆದಿದ್ದು, ಇದಕ್ಕೆ ವಿದೇಶದಿಂದ ಫಂಡಿಂಗ್​ ಆಗಿರಬಹುದು. ಹೀಗಾಗಿ ಈ ಕುರಿತ ತನಿಖೆಯನ್ನು ಎನ್​​​ಐಎಗೆ ಒಪ್ಪಿಸಬೇಕು ಎಂದು ಆಗ್ರಹಿಸಲಾಗಿದೆ.

author-image
Bhimappa
SAMEER_MD (1)
Advertisment

ವಿವಾದಿತ ಯೂಟ್ಯೂಬರ್ ಸಮೀರ್​ಗೆ 2ನೇ ದಿನವು ಪೊಲೀಸರು ತೀವ್ರ ವಿಚಾರಣೆ ನಡೆಸಿದ್ದಾರೆ. ಮೂರು ಪ್ರಕರಣಗಳಿಗೆ ಸಂಬಂಧಿಸಿದಂತೆ 9 ಗಂಟೆಗಳ ಕಾಲ ಡ್ರಿಲ್​ ಮಾಡಿ, ಆದಾಯದ ಮೂಲವನ್ನು ಕೆದಕಿದ್ದಾರೆ.

ದೂತ ಹೆಸರಿನ ಯೂಟ್ಯೂಬ್​ ಚಾನಲ್​ ಇಟ್ಟುಕೊಂಡು, ಈ ಧೂರ್ತ ಸಮೀರ್ ಆಡಿದ ನವರಂಗಿ ಆಟಗಳು ಒಂದೊಂದಲ್ಲ. ಸಾಕ್ಷಿ ತಾನೇ ಕೇಳ್ತಾ ಇದ್ರಿ, ಸಾಕ್ಷಿ ತಾನೇ ಬೇಕಿತ್ತು ನಿಮ್ಗೆಲ್ಲ, ಈಗ ಜೀವಂತ ಮುಂದೆ ಇದೆ ಎಂದು ಬುರುಡೆ ದಾಸಯ್ಯ ಅಲ್ಲ ಚಿನ್ನಯ್ಯ ಎಂಬಾತ ರಂಗ ಪ್ರವೇಶ ಮಾಡಿಸಿದ್ದ. ಈತನ ಸ್ಕ್ರಿಪ್ಟು, ಡೈಲಾಗ್​ಗೆ ಪತ್ತೆದಾರಿ ಕಾದಂಬರಿಕಾರರೂ ಕೂಡ ನಾಚಬೇಕು. ಆ ರೀತಿ ಶ್ರೀಕ್ಷೇತ್ರ ಧರ್ಮಸ್ಥಳದ ವಿರುದ್ಧ ಬ್ಯಾಕ್ ಟು ಬ್ಯಾಕ್ ವಿಡಿಯೋ ಹಾಕಿ ಶೇಕ್ ಮಾಡಿದ್ದ ಧೂರ್ತ ಸಮೀರನಿಗೆ ತಾನು ಮಾಡಿದ ಎಐ ವಿಡಿಯೋಗಳೇ ಬೇತಾಳಗಳಂತೆ ಬೆನ್ನತ್ತಿವೆ.

dharmasthala case(10)

ವಾಯ್ಸ್ ಸ್ಯಾಂಪಲ್, ಆದಾಯ ಮೂಲ, ಬ್ಯಾಂಕ್ ಖಾತೆ ಮಾಹಿತಿ ಸಂಗ್ರಹ

ವಿವಾದಿತ ಯೂಟ್ಯೂಬರ್​ ಸಮೀರ್​ನನ್ನು ಬೆಳ್ತಂಗಡಿ ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಧರ್ಮಸ್ಥಳ ಬಗೆಗಿನ ಎಐ ವಿಡಿಯೋ ಪ್ರಕರಣ, ಬೆನಕ ಆಸ್ಪತ್ರೆ ಬಳಿ ಗಲಾಟೆ ಮತ್ತು ವರದಿಗಾರನ ಮೇಲೆ ಹಲ್ಲೆ.. ಹೀಗೆ ಮೂರು ಪ್ರಕರಣಗಳಲ್ಲಿ 2ನೇ ದಿನ ಬರೋಬ್ಬರಿ 9 ಗಂಟೆಗಳ ಕಾಲ ಸಮೀರ್​ನನ್ನು ಇನ್​​ಸ್ಪೆಕ್ಟರ್​ ಸುಬ್ಬಾಪುರ್​ ಮಠ್ ವಿಚಾರಣೆ  ನಡೆಸಿದ್ದಾರೆ. ಈ ವೇಳೆ ಎಐ ವಿಡಿಯೋ ಎಡಿಟಿಂಗ್, ಸಾಫ್ಟ್‌ವೇರ್ ಬಳಕೆ ಬಗ್ಗೆ ಸಾಲು ಸಾಲು ಪ್ರಶ್ನೆಗಳನ್ನು ಕೇಳಿ ನೀರಿಳಿಸಿದ್ದಾರೆ. 

ಇಂದು ಲ್ಯಾಪ್​ಟಾಪ್​ ಜೊತೆ ವಿಚಾರಣೆಗೆ ಹಾಜರಾಗಲು ಸೂಚನೆ

2ನೇ ದಿನ ಸುಮಾರು 9 ಗಂಟೆಗಳ ಕಾಲ ಸಮೀರ್​ನ ವಿಚಾರಣೆ ನಡೆಸಲಾಗಿದ್ದು, ವಾಯ್ಸ್ ಸ್ಯಾಂಪಲ್, ಆದಾಯದ ಮೂಲ, ಬ್ಯಾಂಕ್ ಅಕೌಂಟ್​ಗಳ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ. ಇವತ್ತೂ ಕೂಡ ಮತ್ತೆ ವಿಚಾರಣೆಗೆ ಬರುವಂತೆ ಅಧಿಕಾರಿಗಳು ಸೂಚನೆ ನೀಡಿದ್ದು, ಲ್ಯಾಪ್‌ಟಾಪ್ ಜೊತೆ ಹಾಜರಾಗಲು ತಿಳಿಸಿದ್ದಾರೆ.

ಧರ್ಮಸ್ಥಳದ ಬೆಂಬಲಕ್ಕೆ ನಿಂತವರಿಗೆ ಧರ್ಮಾಧಿಕಾರಿ ಧನ್ಯವಾದ

ಧರ್ಮಸ್ಥಳ ಕ್ಷೇತ್ರದ ಬಗ್ಗೆ ಇತ್ತೀಚಿನ ಬೆಳವಣಿಗಳಿಗೆ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಬೇಸರ ವ್ಯಕ್ತಪಡಿಸಿದ್ದು, ಸಮಯ ಬಂದಾಗ ಮಾತನಾಡ್ತೀನಿ ಎಂದಿದ್ದಾರೆ. ಬುರುಡೆ ಗ್ಯಾಂಗ್​ನ ಮುಖವಾಡ ಬಯಲಾದ ಬಳಿಕ ಕ್ಷೇತ್ರದ ಮೇಲೆ ಭಕ್ತರಿಗಿರುವ ಗೌರವ ಜಾಸ್ತಿಯಾಗಿದೆ. ಮಂಜುನಾಥ ಸ್ವಾಮಿಯೂ ನಿಮಗೆ ಆಶೀರ್ವಾದ ಮಾಡಲಿ ಎಂದು ಧರ್ಮಸ್ಥಳದ ಪರ ನಿಂತ ಎಲ್ಲರಿಗೂ ಧನ್ಯವಾದ ಅರ್ಪಿಸಿದ್ದಾರೆ.

ಇದನ್ನೂ ಓದಿ:ಧರ್ಮಸ್ಥಳ; ಮಾಸ್ಕ್​ಮ್ಯಾನ್ ಚಿನ್ನಯ್ಯನ 2ನೇ ಹೆಂಡತಿ ಮಲ್ಲಿಕಾ ಶಾಕಿಂಗ್ ಹೇಳಿಕೆ

ಧರ್ಮಸ್ಥಳ ಕೇಸ್​ ಬಿಗ್​​ ಅಪ್​ಡೇಟ್ಸ್​.. ಬುರುಡೆ ರಹಸ್ಯಕ್ಕಾಗಿ ದೂರುದಾರನ ಜೊತೆ ಕಾಡಿಗೆ ಎಂಟ್ರಿ..! ​

ಇನ್ನು ಧರ್ಮಸ್ಥಳದ ಬಗ್ಗೆ ಅಪಪ್ರಚಾರಕ್ಕೆ ದೊಡ್ಡ ಷಡ್ಯಂತ್ರ ನಡೆದಿದ್ದು, ಇದಕ್ಕೆ ವಿದೇಶದಿಂದ ಫಂಡಿಂಗ್​ ಆಗಿದೆ. ಈ ಬಗ್ಗೆ ಎನ್​​​ಐಎ ತನಿಖೆ ಆಗ್ಬೇಕೆಂದು ಬಿಜೆಪಿ ಆಗ್ರಹಿಸಿದೆ. ಗೃಹಸಚಿವರು ಎನ್​ಐಎ ತನಿಖೆಯ ಆಗತ್ಯತೆ ಇಲ್ಲ ಅಂದ್ರೆ, ಸಚಿವ ಸತೀಶ್​ ಜಾರಕಿಹೊಳಿ, ಈ ಕೇಸನ್ನು ಎನ್‌ಐಎಗೆ ವಹಿಸಿದ್ರೆ ತಪ್ಪಲ್ಲ ಎಂಬ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಯೂಟ್ಯೂಬರ್ ಮಹಮ್ಮದ್ ಸಮೀರ್​​​​​ಗೆ ಪೊಲೀಸರು ಫುಲ್ ಡ್ರಿಲ್ ಮಾಡಿದ್ದಾರೆ. ಆದಾಯ ಮೂಲವನ್ನು ಕೆದಕಿರುವ ಎಸ್​ಐಟಿ, ಇವತ್ತು ಕೂಡ ಸಮೀರ್​ನನ್ನು ವಿಚಾರಣೆಗೆ ಒಳಪಡಿಸಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

dharmasthala case, sameer md Sameer MD
Advertisment