ಧರ್ಮಸ್ಥಳ ಪ್ರಕರಣ; ಚಿನ್ನಯ್ಯನ ಕಸ್ಟಡಿ ಇಂದಿಗೆ ಅಂತ್ಯ.. ಮತ್ತೆ ವಶಕ್ಕೆ ಪಡೆಯುತ್ತಾ SIT..?

ಆರೋಪಿ ಚಿನ್ನಯ್ಯ ಹೇಳಿಕೆ ನೀಡಿರುವ ವ್ಯಕ್ತಿಗಳಿಂದ ವಿಚಾರಣೆ ನಡೆಸಬೇಕಿದೆ. ಅದರಲ್ಲೂ ಕೆಲವರನ್ನ ಮುಖಾಮುಖಿ ವಿಚಾರಣೆ ಬಾಕಿ ಇದೆ ಅಂತ ಕೋರ್ಟ್​​ಗೆ ಎಸ್​ಐಟಿ ಮನವರಿಕೆ ಮಾಡಿಕೊಡಲಿದೆ. ಇನ್ನು, ಆರೋಪಿ ನೀಡಿರುವ ಸ್ಥಳಗಳಲ್ಲಿ ಲಿಖಿತ ದಾಖಲೆ, ಸಿಸಿಟಿವಿ ದಾಖಲಾತಿ ಸೀಜ್ ಮಾಡಲಾಗಿದೆ.

author-image
Bhimappa
CHINNAYYA
Advertisment

ಒಂದೊಂದಲ್ಲ ಇವರ ಕಥೆಗಳು, 10 ದಿನಗಳಿಂದ ಬಾಯ್ಬಿಟ್ಟ ರೀಲ್​​ಗಳು ಬಯಲಾಗುತ್ತಿವೆ. ಕಟ್ಟಿದ ಹುಟ್ಟಿದ ಕಥೆಗಳು, ರಾಜ್ಯದ ಮುಂದೆ ಸತ್ಯ ದರ್ಶನ ಆಗುತ್ತಿವೆ. ಈ ಮಧ್ಯೆ ಧರ್ಮಸ್ಥಳ ಕೇಸ್​​ನ ಮುಖ್ಯ ಪಾತ್ರಧಾರಿ ಬುರುಡಯ್ಯನ ಕಸ್ಟಡಿ ಇವತ್ತು ಅಂತ್ಯವಾಗುತ್ತಿದೆ. ಹೀಗಾಗಿ ಕೋರ್ಟ್​​ಗೆ ಹಾಜರು ಪಡಿಸುವ ಎಸ್​​ಐಟಿ, ಇನ್ನಷ್ಟು ದಿನ ವಶಕ್ಕೆ ಕೇಳುವ ಸಾಧ್ಯತೆ ಇದೆ.

ಧರ್ಮಸ್ಥಳ ವಿರುದ್ಧ ಷಡ್ಯಂತ್ರ.. ಇದೆಲ್ಲ ಬುರುಡೆ ಪುರಾಣ!

ಮಂಗಳೂರು- ಉಡುಪಿ ಅಂತ ರೌಂಡ್​​​ ಹೊಡೆಯುತ್ತಿದ್ದ ಎಸ್​​ಐಟಿ ವೇಹಿಕಲ್​​ಗಳು, ಮೊನ್ನೆ ಬೆಂಗಳೂರಿಗೆ ತಿರುಗಿದ್ದವು. ರಾಜಧಾನಿಗೆ ಚಿನ್ನಯ್ಯನನ್ನ ಕರೆತಂದು 18 ಗಂಟೆಗಳ ಕಾಲ ತಲಾಶ್ ನಡೆಸಿದೆ. 6 ಬ್ಯಾಗ್​ಗಳೊಂದಿಗೆ ಬೆಳ್ತಂಗಡಿ ಕಚೇರಿಗೆ ವಾಪಸ್ ಆಗಿದ್ದು ಕುತೂಹಲವನ್ನ ಇಮ್ಮಡಿಸಿದೆ. ಈ ಮಧ್ಯೆ ಬುರುಡಯ್ಯನ ಕಸ್ಟಡಿ ಇವತ್ತು ಅಂತ್ಯ ಆಗಲಿದ್ದು, ಕೋರ್ಟ್​​ಗೆ ಹಾಜರು ಪಡಿಸಬೇಕಿದೆ.

dharmasthala case(11)

ಇವತ್ತು ಕೋರ್ಟ್​​ಗೆ ಚೆನ್ನನ ಹಾಜರಿ! 

  • ಆಗಸ್ಟ್ 23ಕ್ಕೆ ದುರುದಾರ ಚಿನ್ನಯ್ಯನನ್ನು ತಮ್ಮ ಕಸ್ಟಡಿಗೆ ಪಡೆದಿದ್ದ SIT
  • ತನಿಖೆಯ ದೃಷ್ಟಿಯಿಂದ 10 ದಿನಗಳ ಕಾಲ ಕಸ್ಟಡಿ ಪಡೆದು ವಿಚಾರಣೆ
  • ವಿಚಾರಣೆಯ ವೇಳೆ ಮಹತ್ವದ ವಿಚಾರ ಬಾಯಿ ಬಿಟ್ಟಿರುವ ಚೆನ್ನಯ್ಯ
  • ಇವತ್ತು ಬೆಳ್ತಂಗಡಿ ಕೋರ್ಟ್​​ಗೆ ಚೆನ್ನನನ್ನು ಹಾಜರು ಪಡಿಸುವ SIT
  • ಅದಕ್ಕೂ ಮೊದಲು ನಡೆಯುವ ಚಿನ್ನಯ್ಯನಿಗೆ ವೈದ್ಯಕೀಯ ಪರೀಕ್ಷೆ
  • ಕೋರ್ಟ್​ ಹಾಜರು ಪಡಿಸಿ ಮತ್ತೆ ಚೆನ್ನನನ್ನ ವಶಕ್ಕೆ ಕೇಳುವ ಎಸ್​ಐಟಿ
  • ಮತ್ತೆ ವಶಕ್ಕೆ ಪಡೆಯಲು ರಿಮ್ಯಾಂಡ್ ಅರ್ಜಿ ಸಿದ್ದಪಡಿಸಿರೋ SIT 

ಮುಖ್ಯವಾಗಿ ಮಂಡ್ಯ, ತಮಿಳುನಾಡು, ಡೆಲ್ಲಿಯಲ್ಲಿ ಸ್ಥಳ ಮಹಜರ್ ಬಾಕಿ ಇದೆ. ಆರೋಪಿ ಹೇಳಿಕೆ ನೀಡಿರುವ ವ್ಯಕ್ತಿಗಳಿಂದ ವಿಚಾರಣೆ ನಡೆಸಬೇಕಿದೆ. ಅದರಲ್ಲೂ ಕೆಲವರನ್ನ ಮುಖಾಮುಖಿ ವಿಚಾರಣೆ ಬಾಕಿ ಇದೆ ಅಂತ ಕೋರ್ಟ್​​ಗೆ ಎಸ್​ಐಟಿ ಮನವರಿಕೆ ಮಾಡಿಕೊಡಲಿದೆ. ಇನ್ನು, ಆರೋಪಿ ನೀಡಿರುವ ಸ್ಥಳಗಳಲ್ಲಿ ಲಿಖಿತ ದಾಖಲೆ, ಸಿಸಿಟಿವಿ ದಾಖಲಾತಿ ಸೀಜ್ ಮಾಡಲಾಗಿದ್ದು, ಪ್ರಕರಣ ಸಂಬಂಧ ಸಿಡಿಆರ್ ಸೇರಿ ತಾಂತ್ರಿಕ ಸಾಕ್ಷ್ಯ ವಿಚಾರಣೆ ಅಗತ್ಯ ಇದೆ ಅಂತ ರಿಮ್ಯಾಂಡ್​​​ ಅರ್ಜಿಯಲ್ಲಿ ತಿಳಿಸುವ ಸಾಧ್ಯತೆ ಇದೆ. 

ಇದನ್ನೂ ಓದಿ:ಒಂಟೆ ಹಾಲನ್ನು ಬಿಳಿ ಚಿನ್ನ ಅನ್ನೋದೇಕೆ..? ಇದರ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ..!

dharmasthala case(10)

ಷಡ್ಯಂತ್ರ ರೂವಾರಿಗಳಿಗೆ ನೋಟಿಸ್​​​ ನೀಡಲು ಸಿದ್ಧವಾಗ್ತಿದೆ SIT

ತನಿಖೆಯ ಭಾಗವಾಗಿ ಮುಂದಿನ ದಿನಗಳಲ್ಲಿ ಮಹೇಶ್ ತಿಮ್ಮರೋಡಿ, ಗಿರೀಶ್ ಮಟ್ಟಣ್ಣನವರ್, ಜಯಂತ್​, ಸುಜಾತ ಭಟ್ ಎಲ್ಲರಿಗೂ ನೋಟಿಸ್ ನೀಡಲಿಕ್ಕೆ ಎಸ್​​ಐಟಿ ಸಿದ್ಧತೆ ನಡೆಸಿದೆ. ಈಗಾಗಲೇ ಕೇಸ್​​ನಲ್ಲಿ ಈ ನಾಲ್ವರ ಪಾತ್ರದ ಬಗ್ಗೆ ಎಸ್​ಐಟಿ ಮುಂದೆ ಚಿನ್ನಯ್ಯ ಬಾಯ್ಬಿಟ್ಟಿದ್ದಾನೆ. 

ಚಿನ್ನಯ್ಯನ ಹೇಳಿಕೆ ದಾಖಲಿಸಿಕೊಂಡಿದ್ದು, ಈಗ ಪೂರಕ ಸಾಕ್ಷ್ಯಗಳನ್ನ ಕಲೆಹಾಕಲು ಎಸ್​​ಐಟಿ ಮುಂದಾಗಿದೆ. ತನಿಖೆಯ ಭಾಗವಾಗಿ ನೋಟಿಸ್ ಕೊಟ್ಟು ಎಲ್ಲರನ್ನ ವಿಚಾರಣೆಗೆ ಕರೆಯಲು ತಯಾರಿ ನಡೆಸಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಪ್ರಕರಣ ಮತ್ತಷ್ಟು ತಿರುವುಗಳನ್ನ ಪಡೆಯಲಿದೆ. 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Chenna Dharmasthala Dharmasthala case dharmasthala
Advertisment